AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ವಾರದಲ್ಲಿ ಎರಡು ದೊಡ್ಡ ಹೊಡೆತ ತಿಂದ ರಾಶಿಕಾ; ಕಣ್ಣೀರು ಹಾಕಿದ ನಟಿ

ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಒಂದೇ ವಾರದಲ್ಲಿ ಎರಡು ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಕ್ಯಾಪ್ಟನ್ಸಿ ರೇಸ್​ನಲ್ಲಿ ಅವರು ಸ್ಥಾನ ಕಳೆದುಕೊಂಡಿದ್ದಲ್ಲದೆ, ಮನೆಯಿಂದ ಬಂದ ಪತ್ರವನ್ನೂ ಪಡೆಯಲು ಸಾಧ್ಯವಾಗಲಿಲ್ಲ. ಸ್ಪರ್ಧಿಗಳ ಒಮ್ಮತದ ಕೊರತೆಯಿಂದ ಈ ಎರಡೂ ಅವಕಾಶಗಳು ಕೈ ತಪ್ಪಿದ್ದು, ರಾಶಿಕಾ ಕಣ್ಣೀರು ಹಾಕಿದ್ದಾರೆ.

ಒಂದೇ ವಾರದಲ್ಲಿ ಎರಡು ದೊಡ್ಡ ಹೊಡೆತ ತಿಂದ ರಾಶಿಕಾ; ಕಣ್ಣೀರು ಹಾಕಿದ ನಟಿ
ರಾಶಿಕಾ
ರಾಜೇಶ್ ದುಗ್ಗುಮನೆ
|

Updated on: Nov 07, 2025 | 7:34 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ರಾಶಿಕಾ ಶೆಟ್ಟಿ ಅವರು ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ. ಇತ್ತೀಚೆಗೆ ಅವರು ಅಶ್ವಿನಿ ಗೌಡ ಹಾಗೂ ರಿಷಾ ಗೌಡ ಜೊತೆ ಹೆಚ್ಚು ಬೆರೆಯುತ್ತಿದ್ದಾರೆ. ಮೊದಲು ಸೂರಜ್ ಜೊತೆ ಆಪ್ತವಾಗಿದ್ದ ಅವರು, ಈಗ ಅವರಿಂದ ಆದಷ್ಟು ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಮಧ್ಯೆ ರಾಶಿಕಾ ಅವರು ಏಳು ದಿನಗಳ ಅಂತರದಲ್ಲಿ ಎರಡೆರಡು ಬಾರಿ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.

ಕಳೆದ ವಾರ ರಾಶಿಕಾ ಅವರು ಬ್ಲ್ಯೂ ಟೀಂನ ಪ್ರತಿನಿಧಿಸಿದ್ದರು. ಈ ತಂಡ ಗೆದ್ದಿದ್ದರಿಂದ ಒಬ್ಬರನ್ನು ಕ್ಯಾಪ್ಟನ್ಸಿ ರೇಸ್​ಗೆ ಆಯ್ಕೆ ಮಾಡಬೇಕಿತ್ತು. ಒಮ್ಮತದ ನಿರ್ಧಾರ ಬರಬೇಕು ಎಂದು ಬಿಗ್ ಬಾಸ್ ಸೂಚಿಸಿದ್ದರು. ಎಲ್ಲರೂ ರಾಶಿಕಾ ಹೆಸರನ್ನು ತೆಗೆದುಕೊಂಡರು. ಆದರೆ, ಗಿಲ್ಲಿ ನಟ ಮಾತ್ರ ಇದಕ್ಕೆ ಒಪ್ಪಲೇ ಇಲ್ಲ. ಹೀಗಾಗಿ ಈ ಆಯ್ಕೆಯನ್ನು ಬಿಗ್ ಬಾಸ್ ಹಿಂದಕ್ಕೆ ಪಡೆದರು. ಇದರಿಂದ ರಾಶಿಕಾ ಕ್ಯಾಪ್ಟನ್ ಆಗಬೇಕು ಎಂಬ ಕನಸು ಭಗ್ನವಾಯಿತು.

ಈ ವಾರವೂ ರಾಶಿಕಾಗೆ ಇದೇ ರೀತಿಯ ಪರಿಸ್ಥಿತಿ ಬಂದೊದಗಿತು. ರಾಶಿಕಾ ಹಾಗೂ ರಕ್ಷಿತಾ ಶೆಟ್ಟಿಗೆ ಮನೆಯಿಂದ ಲೆಟರ್ ಕಳುಹಿಸಲಾಗಿತ್ತು. ಎಲ್ಲರ ಒಮ್ಮತದಿಂದ ಒಬ್ಬರಿಗೆ ಲೆಟರ್ ಕೊಡಿಸೋ ನಿರ್ಧಾರಕ್ಕೆ ಬರಬೇಕು ಎಂದು ಬಿಗ್ ಬಾಸ್ ಸೂಚಿಸಿದರು. ಗಿಲ್ಲಿ, ಕಾವ್ಯಾ, ಸ್ಪಂದನಾ ಮೊದಲಾದವರು ರಕ್ಷಿತಾಗೆ ಲೆಟರ್ ಕೊಡಬೇಕು ಎಂದರು. ಅಶ್ವಿನಿ, ರಿಷಾ ಮೊದಲಾದವರು ರಾಶಿಕಾಗೆ ಪತ್ರ ಸಿಗಬೇಕು ಎಂದು ವಾದಿಸಿದರು. ಆದರೆ, ಅಂತಿಮವಾಗಿ ಯಾವುದೇ ಒಮ್ಮತ ಬಂದಿಲ್ಲ. ಹೀಗಾಗಿ, ಇಬ್ಬರಿಗೂ ಪತ್ರ ಕೈ ತಪ್ಪಿದೆ.

ಇದನ್ನೂ ಓದಿ: ಕಾವ್ಯಾಗೋಸ್ಕರ ದೊಡ್ಡ ತ್ಯಾಗ ಮಾಡಿದ ಗಿಲ್ಲಿ; ಸಿಕ್ತು ಪ್ರೀತಿಯ ಅಪ್ಪುಗೆ

ಯಾವಾಗ ಒಮ್ಮತದ ನಿರ್ಧಾರ ಬರಬೇಕು ಎಂದು ಬಿಗ್ ಬಾಸ್ ಸೂಚಿಸಿದರೋ ಆಗಲೇ ರಾಶಿಕಾಗೆ ಪತ್ರ ಕೈ ತಪ್ಪುತ್ತದೆ ಎಂಬುದು ಸ್ಪಷ್ಟವಾಗಿತ್ತು. ಮನೆಯ ಪತ್ರ ಕೈ ತಪ್ಪಿದ್ದರಿಂದ ಅವರು ಕಣ್ಣೀರು ಹಾಕಿದರು. ನನಗೆ ಏಕೆ ಹೀಗೆಲ್ಲ ಆಗುತ್ತದೆ ಎಂದು ಬಿಕ್ಕಿ ಬಿಕ್ಕಿ ಅತ್ತರು. ಪತ್ರ ಕಳೆದುಕೊಂಡಿದ್ದಕ್ಕೆ ರಕ್ಷಿತಾ ಅವರು ಹೆಚ್ಚು ಡ್ರಾಮಾ ಕ್ರಿಯೇಟ್ ಮಾಡಲಿಲ್ಲ. ಇದನ್ನು ಪ್ರಬುದ್ಧವಾಗಿ ಹ್ಯಾಂಡಲ್ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ