AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ಇಷ್ಟ ಆಗೋದೆ ಇದಕ್ಕೆ; ಪತ್ರ ಸಿಗದೆ ಅಳುತ್ತಿದ್ದ ಸೂರಜ್ ಮುಖದಲ್ಲಿ ನಗು ತರಿಸಿದ ನಟ

ಗಿಲ್ಲಿ ನಟ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದು ನಂತರ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಈಗ ಅವರು ಬಿಗ್ ಬಾಸ್ ಮನೆಗೆ ಬಂದು ಎಲ್ಲಾ ಸ್ಪರ್ಧಿಗಳನ್ನು ನಗಿಸುತ್ತಿದ್ದಾರೆ. ನವೆಂಬರ್ 5ರ ಎಪಿಸೋಡ್​ನಲ್ಲಿ ಒಂದು ಪ್ರಮುಖ ಘಟನೆ ನಡೆದಿದೆ. ಆ ವಿಷಯ ಸಾಕಷ್ಟು ಗಮನ ಸೆಳೆಯುವ ರೀತಿ ಇತ್ತು.

ಗಿಲ್ಲಿ ಇಷ್ಟ ಆಗೋದೆ ಇದಕ್ಕೆ; ಪತ್ರ ಸಿಗದೆ ಅಳುತ್ತಿದ್ದ ಸೂರಜ್ ಮುಖದಲ್ಲಿ ನಗು ತರಿಸಿದ ನಟ
ಗಿಲ್ಲಿ ನಟ
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 06, 2025 | 2:48 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBk 12) ಗಿಲ್ಲಿ ನಟ ಅವರು ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಇಡೀ ಮನೆಯಲ್ಲಿ ಲವಲವಿಕೆಯಿಂದ ಓಡಾಡುತ್ತಾ, ಎಲ್ಲರನ್ನೂ ನಗಿಸುತ್ತಾ, ಕೌಂಟರ್ ಕೊಡೋ ಜಾಗದಲ್ಲಿ ಕೌಂಟರ್ ಕೊಡುತ್ತಾ ಸಾಗುತ್ತಿದ್ದಾರೆ ಅವರು. ಗಿಲ್ಲಿ ನಟ ಅವರು ಇಷ್ಟ ಆಗಲು ಹಲವು ಕಾರಣಗಳಿವೆ. ನವೆಂಬರ್ 5ರ ಎಪಿಸೋಡ್​ನಲ್ಲಿ ನಡೆದ ಒಂದು ಘಟನೆ ಗಮನ ಸೆಳೆಯಿತು. ಕಣ್ಣೀರು ಹಾಕುತ್ತಿದ್ದ ಸೂರಜ್ ಮುಖದಲ್ಲಿ ಅವರು ನಗು ತರಿಸಿದರು.

ಗಿಲ್ಲಿ ನಟ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದು ನಂತರ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಈಗ ಅವರು ಬಿಗ್ ಬಾಸ್ ಮನೆಗೆ ಬಂದು ಎಲ್ಲಾ ಸ್ಪರ್ಧಿಗಳನ್ನು ನಗಿಸುತ್ತಿದ್ದಾರೆ. ನವೆಂಬರ್ 5ರ ಎಪಿಸೋಡ್​ನಲ್ಲಿ ಒಂದು ಪ್ರಮುಖ ಘಟನೆ ನಡೆದಿದೆ. ಆ ವಿಷಯ ಸಾಕಷ್ಟು ಗಮನ ಸೆಳೆಯುವ ರೀತಿ ಇತ್ತು.

ಸೂರಜ್​ಗೆ ಮನೆಯಿಂದ ಬಂದ ಪತ್ರವನ್ನು ರಿಷಾ ಅವರು ಹರಿದು ಹಾಕಿದರು. ಈ ಮೂಲಕ ತಮ್ಮ ಪತ್ರವನ್ನು ಅವರು ಪಡೆದುಕೊಂಡರು. ಮನೆಯಿಂದ ಬಂದ ಪತ್ರ ಸಿಗದೆ ಅವರು ಸಾಕಷ್ಟು ಒದ್ದಾಡಲು ಆರಂಭಿಸಿದರು. ಅವರಿಗೆ ಒಂದು ಹಂತದಲ್ಲಿ ಕಣ್ಣೀರೇ ಬಂದಿತು ಎಂದರೂ ತಪ್ಪಾಗಲಾರದು. ಆಗ ಚಾರ್ಜ್ ತಗೊಂಡಿದ್ದು ಗಿಲ್ಲಿ ನಟ.

ಇದನ್ನೂ ಓದಿ: ಸುದೀಪ್ ಎದುರೇ ರಿಷಾ ಎಲಿಮಿನೇಷನ್; ಸಾಲುಗಳ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್

ಖಾಲಿ ಪತ್ರವನ್ನು ಹಿಡಿದು ಓದಿದ ಗಿಲ್ಲಿ, ‘ಯಾವುದೋ ಹುಡುಗಿನ ಹೋಗಿ ತಬ್ಬಿಕೊಂಡೆ. ಅದನ್ನು ನಾನು ನೋಡಿದೆ. ಸಾಕಷ್ಟು ಟ್ರೋಲ್ ಆಗ್ತಿದೆ. ಅದು ಬೇಡ. ಆ ಹುಡುಗಿ ಸುಮ್ಮ ಸುಮ್ಮನೆ ಜಗಳಕ್ಕೆ ಬಿದ್ದು ಬಿಡುತ್ತಾಳೆ. ಹಾಗಾಗಿ ಅವಳು ನಮಗೆ ಸೆಟ್ಟಾಗೋಲ್ಲ. ಅದನ್ನು ಇಲ್ಲಿಗೆ ಕಟ್ ಮಾಡಿಬಿಡು. ಇಷ್ಟು ಹೇಳೋಕೆ ಇಷ್ಟಪಡುತ್ತೇನೆ. ನಿನ್ನೆಯಿಂದ ಓಪನ್ ಅಪ್ ಆಗಿದೀಯಾ. ಈ ಲೆಟರ್ ಮಿಷನ್​ಗೆ ಹೋಗಿ ಹರಿದರೂ ತೊಂದರೆ ಇಲ್ಲ. ನೀನು ಕೊಟ್ಟ ಕೌಂಟರ್ ಚೆನ್ನಾಗಿತ್ತು. ಅವಳಿಗೆ ಟೈಮ್ ಬಂದಿದೆ. ನಿನ್ನ ಟೈಮ್ ಬಂದಾಗ ಅವಳಿಗೆ ಕೌಂಟರ್ ಕೊಡು’ ಎಂದು ಗಿಲ್ಲಿ ಲೆಟರ್ ಓದಿದರು. ಇದನ್ನು ಕೇಳಿ ಸೂರಜ್​ಗೆ ತುಂಬಾನೇ ಖುಷಿ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:48 pm, Thu, 6 November 25

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ