AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಮೆರಾ ಇಟ್ಟುಕೊಂಡು ಪುನೀತ್​ಗೆ ಪ್ರ್ಯಾಂಕ್ ಮಾಡಿದ್ದ ಟಿವಿ9 ಕನ್ನಡ; ಇಲ್ಲಿದೆ ಫನ್ನಿ ವಿಡಿಯೋ

Puneeth Rajkumar Death Anniversary: ಪುನೀತ್ ರಾಜ್ ಕುಮಾರ್ ಅವರು ಇಲ್ಲದೆ ಮೂರು ವರ್ಷ ಆಗಿದೆ. ಈ ಮೊದಲು ಟಿವಿ9 ಕನ್ನಡದಿಂದ ಮಾಡಲಾದ ಒಂದು ಮೋಜಿನ ಪ್ರಾಂಕ್ ಅನ್ನು ಇಲ್ಲಿ ನೆನಪಿಸಿಕೊಳ್ಳೋಣ. ಅವರ ಗೆಳೆತನದ ಸ್ವಭಾವ ಮತ್ತು ನಗು ಎಲ್ಲರ ಮನಸ್ಸಿನಲ್ಲಿ ಉಳಿದಿದೆ. ಪುನೀತ್ ರಾಜ್ ಕುಮಾರ್ ಅವರ ನೆನಪು ಯಾವಾಗಲೂ ನಮ್ಮೊಂದಿಗೆ ಇರುತ್ತದೆ.

ಕ್ಯಾಮೆರಾ ಇಟ್ಟುಕೊಂಡು ಪುನೀತ್​ಗೆ ಪ್ರ್ಯಾಂಕ್ ಮಾಡಿದ್ದ ಟಿವಿ9 ಕನ್ನಡ; ಇಲ್ಲಿದೆ ಫನ್ನಿ ವಿಡಿಯೋ
ಪುನೀತ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Oct 29, 2024 | 9:21 AM

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದಿ ಇಂದಿಗೆ (ಅಕ್ಟೋಬರ್ 29) ಮೂರು ವರ್ಷಗಳು ತುಂಬಿವೆ. ಅವರು ಇಲ್ಲ ಎಂಬ ನೋವು ಎಲ್ಲರನ್ನೂ ಅತಿಯಾಗಿ ಕಾಡುತ್ತಿದೆ. ಅದು ಯಾವಾಗಲೂ ಮರೆ ಆಗುವಂತದ್ದು ಅಲ್ಲವೇ ಅಲ್ಲ. ಪುನೀತ್ ರಾಜ್​ಕುಮಾರ್ ಅವರಿಗೆ ಟಿವಿ9 ಕನ್ನಡದವರು ಒಮ್ಮೆ ಪ್ರ್ಯಾಂಕ್ ಮಾಡಿದ್ದರು. ಈ ವಿಡಿಯೋನ ಈಗ ನಿಮ್ಮ ಮುಂದೆ ಇಡಲಾಗುತ್ತಿದೆ ನೋಡಿ.

ಪುನೀತ್ ರಾಜ್​ಕುಮಾರ್ ಅವರು ಮಾಧ್ಯಮಗಳ ಜೊತೆ ತುಂಬಾನೇ ಫ್ರೆಂಡ್ಲಿ ಆಗಿ ಇರುತ್ತಿದ್ದರು. ಅವರು ಏನೇ ಇದ್ದರೂ ಫನ್ ಆಗಿ ತೆಗೆದುಕೊಳ್ಳುತ್ತಿದ್ದರು. ಪುನೀತ್ ಅವರ ಈ ಗೆಳೆತನದ ಸ್ವಭಾವ ಎಲ್ಲರಿಗೂ ಇಷ್ಟ ಆಗುತ್ತಿತ್ತು. ಪುನೀತ್ ಅವರನ್ನು ಒಮ್ಮೆ ಸಂದರ್ಶನ ಮಾಡಲಾಗುತ್ತಿತ್ತು. ಆಗ ಅವರನ್ನು ಬಕ್ರಾ ಮಾಡಲಾಗಿತ್ತು.

ಪುನೀತ್ ಅವರು ಟಿವಿ9 ಜೊತೆ ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಒಬ್ಬರು ಬಂದರು. ‘ಗೋಡಾ (ಗನ್) ತಂದಿದೀನಿ ಭಾಯ್. ಈಗ ಫೋನ್ ಮಾಡಿದ್ರಲ್ಲ. ಮಾಲು ಬೇಕು ಅಂತ. ಮಾಲು ತೆಗೆದುಕೊಂಡು ಬಂದಿದ್ದೇನೆ’ ಎಂದರು ಆ ವ್ಯಕ್ತಿ. ‘ಯಾವ ಮಾಲು? ಸಂದರ್ಶನ ನಡೆಯುತ್ತಿದೆ’ ಎಂದು ಹೇಳುತ್ತಾ ತುಂಬಾನೇ ಶಾಕ್ ಆದರು ಪುನೀತ್. ‘ಇಲ್ಲಿಯೇ ಮಾತನಾಡುತ್ತೇನೆ’ ಎಂದು ಆ ವ್ಯಕ್ತಿ ಎಂದರು. ಆ ಬಳಿಕ ಅವರನ್ನು ಹೊರಕ್ಕೆ ಕರೆದುಕೊಂಡು ಹೋಗಲಾಯಿತು. ನಂತರ ಮೈಕ್​ ಹಿಡಿದ ಆ್ಯಂಕರ್ ‘ಏಪ್ರಿಲ್ ಫೂಲ್’ ಮಾಡಿದ್ದಾಗಿ ಹೇಳಿದರು. ಆ ಬಳಿಕ ಅವರನ್ನು ಕರೆತರಲಾಯಿತು. ‘ನೀವು ಕರಿದೇ ಇದ್ದರೆ ಹೊಡೆದು ಬಿಡ್ತಿದ್ದೆ’ ಎಂದರು ಪುನೀತ್ ಸಹಾಯಕ..

ಪುನೀತ್ ರಾಜ್​ಕುಮಾರ್ ಅವರು ಅಂದು ನಕ್ಕಿದ್ದರು. ಅವರ ನಗುವನ್ನು ಎಲ್ಲರೂ ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಅವರು ನಗು ಈಗಲೂ ಅನೇಕರಿಗೆ ಕಾಡುತ್ತದೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಹೆಸರಿನ ನಗು ಕಳೆದು ಮೂರು ವರ್ಷ; ಅಂದು ನಡೆದಿದ್ದೇನು?

ಅಕ್ಟೋಬರ್ 29ರಂದು ಪುನೀತ್ ನಿಧನ ಹೊಂದಿದರು. ಅವರಿಗೆ ಹೃದಯಾಘಾತ ಆಯಿತು. ಅವರು ಇಲ್ಲ ಎಂಬುದನ್ನು ಈಗಲೂ ಫ್ಯಾನ್ಸ್ ಬಳಿ ನಂಬೋಕೆ ಆಗುತ್ತಿಲ್ಲ. ಪುನೀತ್ ನಿಧನದ ನಂತರ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಈಗಲೂ ಫ್ಯಾನ್ಸ್ ಬೇಸರ ಹೊರಹಾಕುತ್ತಿದ್ದಾರೆ. ಅವರ ಹೆಸರಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತಿವೆ. ‘ಜೇಮ್ಸ್’ ಅವರು ಹೀರೋ ಆಗಿ ನಟನೆಯ ಕೊನೆಯ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:11 am, Tue, 29 October 24

ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್