AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೆ ಬೇಕಾಗಿದ್ದೂ ಇದೇ ಆಗಿತ್ತಲ್ಲವೇ’; ವೀಕೆಂಡ್ ಎಪಿಸೋಡ್​ನಲ್ಲಿ ಸಖತ್ ಕ್ಲಾಸ್

ಎಲ್ಲಾ ಬೆಳವಣಿಗೆಯಿಂದ ಈ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ತುಂಬಾ ಆಕ್ರೋಶಗೊಂಡಿದ್ದಾರೆ. ‘ವೀಕೆಂಡ್ ಕಾ ವಾರ್’ನಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದೆ. ಅಭಿಷೇಕ್‌ಗೆ ಮಾನಸಿಕವಾಗಿ ಹಿಂಸೆ ನೀಡಿದ್ದಕ್ಕೆ ಸಮರ್ಥ್​ಗೆ ಸಲ್ಮಾನ್ ಖಾನ್ ಕ್ಲಾಸ್ ತೆಗೆದುಕೊಂಡಿದ್ದಾರೆ.

‘ನಿಮಗೆ ಬೇಕಾಗಿದ್ದೂ ಇದೇ ಆಗಿತ್ತಲ್ಲವೇ’; ವೀಕೆಂಡ್ ಎಪಿಸೋಡ್​ನಲ್ಲಿ ಸಖತ್ ಕ್ಲಾಸ್
ಬಿಗ್​ ಬಾಸ್​
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 06, 2024 | 1:14 PM

Share

‘ಬಿಗ್ ಬಾಸ್ ಹಿಂದಿ ಸೀಸನ್ 17′ ಸಾಕಷ್ಟು ಚರ್ಚೆಯಲ್ಲಿದೆ. ಪ್ರತಿ ಸೀಸನ್​ನಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ಒಂದಾದರೂ ವಿವಾದ ಆಗುತ್ತದೆ. ಈ ಬಾರಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಮನೆಯಲ್ಲಿ ಫೈಟ್ ಜೋರಾಗಿದೆ. ಈ ವಾರ ಶೋನಲ್ಲಿ ಸಾಕಷ್ಟು ಘಟನೆಗಳು ನಡೆದವು. ಸಮರ್ಥ್​​ಗೆ ಹೊಡೆಯುವ ಮೂಲಕ ಅಭಿಷೇಕ್ (Abhishek) ಅವರು ಬಿಗ್ ಬಾಸ್​ನಿಂದ ಔಟ್ ಆಗಿದ್ದಾರೆ. ಈ ವಿಚಾರವನ್ನು ಸಲ್ಮಾನ್ ಖಾನ್ ಅವರು ವೀಕೆಂಡ್​ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಇಶಾ ಮಾಳವಿಯಾ, ಸಮರ್ಥ್ ಜುರೈಲ್ ಹಾಗೂ ಅಭಿಷೇಕ್ ಕುಮಾರ್ ಜಗಳ ಆಡುತ್ತಿದ್ದರು. ಮೂವರ ನಡುವಿನ ಜಗಳ ಎಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಗಿತ್ತೆಂದರೆ ಅಭಿಷೇಕ್ ಕೋಪದ ಭರದಲ್ಲಿ ಸಮರ್ಥ ಅವರ ಕೆನ್ನೆಗೆ ಹೊಡೆದಿದ್ದಾರೆ. ಅವರು ನಡೆದುಕೊಂಡ ರೀತಿಗೆ ಅನೇಕರು ಅಸಮಾಧಾನ ಹೊರಹಾಕಿದರು. ಕೊನೆಗೆ ಅಭಿಷೇಕ್ ಮನೆಯಿಂದ ಹೊರಹೋಗಬೇಕಾಯಿತು. ಅಭಿಷೇಕ್ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಅಂಕಿತಾ ಲೋಖಂಡೆಯನ್ನು ಕೇಳಿದ್ದರು. ಅಭಿಷೇಕ್ ಅವರನ್ನು ಮನೆಯಿಂದ ಹೊರ ಕಳಿಸುವ ನಿರ್ಧಾರವನ್ನು ಅಂಕಿತಾ ತೆಗೆದುಕೊಂಡರು.

ಎಲ್ಲಾ ಬೆಳವಣಿಗೆಯಿಂದ ಈ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ತುಂಬಾ ಆಕ್ರೋಶಗೊಂಡಿದ್ದಾರೆ. ‘ವೀಕೆಂಡ್ ಕಾ ವಾರ್’ನಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದೆ. ಅಭಿಷೇಕ್‌ಗೆ ಮಾನಸಿಕವಾಗಿ ಹಿಂಸೆ ನೀಡಿದ್ದಕ್ಕೆ ಸಮರ್ಥ್​ಗೆ ಸಲ್ಮಾನ್ ಖಾನ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಶಾ ಮಾಳವಿಯಾ ಬಳಿಯೂ ಸಲ್ಮಾನ್ ಅಭಿಪ್ರಾಯ ಕೇಳಿದ್ದಾರೆ.

‘ಅಭಿಷೇಕ್ ಮಾಡಿದ್ದು ತಪ್ಪು. ನೂರಕ್ಕೆ ನೂರರಷ್ಟು ತಪ್ಪು. ಆದರೆ ಆ ತಪ್ಪನ್ನು ಮಾಡುವಂತೆ ಪ್ರೇರೇಪಿಸುವುದು ತಪ್ಪಲ್ಲವೇ?’ ಎಂದು ಸಲ್ಮಾನ್ ಎಲ್ಲರಿಗೂ ಕೇಳಿದರು. ‘ಬಾಯಿಯಲ್ಲಿ ಟಿಶ್ಯೂ ಪೇಪರ್ ಹಾಕುವುದು. ಬಾಪ್ ಕಾ ಮೆಂಟಲ್ ಬೇಟಾ ಅನ್ನೋದು. ಎಲ್ಲರೂ ಇದನ್ನು ನಿಂತು ನೋಡುತ್ತಿದ್ದಿರಿ. ಆದರೆ ಯಾರೂ ಸಮರ್ಥನನ್ನು ತಡೆಯಲು ಪ್ರಯತ್ನಿಸಿಲ್ಲ. ನೀನು ಹುಚ್ಚನಾ? ನೀನು ಏನು ಮಾಡುತ್ತಿರುವೆ? ಇದನ್ನೆಲ್ಲಾ ಮಾಡಬೇಡಿ ಎಂದು ಯಾರೂ ಸಮರ್ಥ್​ಗೆ ಹೇಳಲಿಲ್ಲ’ ಎಂದು ಸಲ್ಮಾನ್ ಖಾನ್ ಹೇಳಿದರು.

‘ನೀವು ಅಭಿಷೇಕ್ ಸ್ಥಾನದಲ್ಲಿ ಇದ್ದರೆ ನೀವು ಏನು ಮಾಡುತ್ತಿದ್ದಿರಿ’ ಎಂದು ಇಶಾಗೆ ಸಲ್ಮಾನ್ ಕೇಳಿದ್ದಾರೆ. ಆಗ ಅವರು, ‘ನಾನು ಹೊಡೆದಿರುತ್ತಿದ್ದೆ’ ಎಂದಿದ್ದಾರೆ.

ಸಮರ್ಥ್ ಅವರಿಗೂ ಸಲ್ಲು ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ‘ಅವರು (ಅಭಿಷೇಕ್) ನಿಮ್ಮ ಮೇಲೆ ಕೈ ಎತ್ತಲಿ ಎಂದು ನೀವು ಬಯಸಿದ್ದಿರಾ? ಇದು ನಿಮ್ಮ ಪ್ಲ್ಯಾನ್ ಆಗಿತ್ತೇ’ ಎಂದು ಕೇಳಿದ್ದಾರೆ ಸಲ್ಮಾನ್. ಆಗ ಸಮರ್ಥ್ ವಿವರಿಸಿದ್ದಾರೆ. ‘ಇದು ಅವನ ಟ್ರಿಗರ್ ಪಾಯಿಂಟ್ ಎಂದು ನನಗೆ ತಿಳಿದಿತ್ತು. ಅವರು ಮಾನಸಿಕವಾಗಿ ಅಷ್ಟೊಂದು ಗಟ್ಟಿಯಾಗಿಲ್ಲ’ ಎಂದರು ಸಮರ್ಥ್. ‘ಇದು ನೀವು ಬಯಸಿದ ಫೈನಲ್. ನೀವು ಅದರಲ್ಲಿ ಯಶಸ್ವಿಯಾಗಿದ್ದೀರಿ’ ಎಂದಿದ್ದಾರೆ ಸಲ್ಮಾನ್.

ಇದನ್ನೂ ಓದಿ: ನಟ ಸಲ್ಮಾನ್ ಖಾನ್ ಅವರು ಇನ್ನೂ ಮದುವೆ ಆಗದಿರಲು ಕಾರಣವೇನು?

ಕೆಲವು ದಿನಗಳ ಹಿಂದೆ ಇಶಾ ಮಾಳವಿಯಾ, ಸಮರ್ಥ್ ಜುರೈಲ್ ಮತ್ತು ಅಭಿಷೇಕ್ ಕುಮಾರ್ ನಡುವೆ ದೊಡ್ಡ ವಾಗ್ವಾದ ನಡೆದಿತ್ತು. ಆ ಸಮಯದಲ್ಲಿ ಇಶಾ ಮತ್ತು ಸಮರ್ಥ ಅವರು ಅಭಿಷೇಕ್‌ಗೆ ತುಂಬಾ ಚುಚ್ಚುಮಾತುಗಳನ್ನು ಆಡಿದ್ದರು. ಇಶಾ ಮತ್ತು ಸಮರ್ಥ್ ಇಬ್ಬರೂ ಅಭಿಷೇಕ್ ಅವರ ಮಾನಸಿಕ ಸಮಸ್ಯೆಯನ್ನು ಗೇಲಿ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಅಭಿಷೇಕ್ ಅವರು ಸಮರ್ಥ್ ಕೆನ್ನೆಗೆ ಹೊಡೆದಿದ್ದರು. ಆ ಬಳಿಕ ಅವರನ್ನು ಮನೆಯಿಂದ ಹೊರ ಹಾಕಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:07 pm, Sat, 6 January 24

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ