AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಕಾಶ ಇಲ್ಲದೇ ಕಾಲ್​ ಸೆಂಟರ್​ ಕೆಲಸಕ್ಕೆ ಸೇರಿಕೊಂಡ ಖ್ಯಾತ ನಟಿ; ಭೇಷ್​ ಎಂದ ಅಭಿಮಾನಿಗಳು

Serial Actress Ekta Sharma: ‘ನಟಿಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ನಾನು ಈಗ ಈ ರೀತಿ ಕೆಲಸ ಮಾಡುವುದು ಸುಲಭ ಆಗಿರಲಿಲ್ಲ’ ಎಂದು ಏಕ್ತಾ ಶರ್ಮಾ ಹೇಳಿದ್ದಾರೆ. ತಮ್ಮ ಕಷ್ಟದ ಬಗ್ಗೆ ಅವರು ಎಳೆಎಳೆಯಾಗಿ ವಿವರಿಸಿದ್ದಾರೆ.

ಅವಕಾಶ ಇಲ್ಲದೇ ಕಾಲ್​ ಸೆಂಟರ್​ ಕೆಲಸಕ್ಕೆ ಸೇರಿಕೊಂಡ ಖ್ಯಾತ ನಟಿ; ಭೇಷ್​ ಎಂದ ಅಭಿಮಾನಿಗಳು
ಏಕ್ತಾ ಶರ್ಮಾ
Follow us
TV9 Web
| Updated By: ಮದನ್​ ಕುಮಾರ್​

Updated on:Sep 21, 2022 | 7:23 AM

ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಕೆಲಸ ಅಲ್ಲ. ಸರಿಯಾಗಿ ಅವಕಾಶ ಸಿಗದೇ ಇದ್ದರೆ ಕಷ್ಟಪಡಬೇಕಾಗುತ್ತದೆ. ಅದರಲ್ಲೂ ಲಾಕ್​ಡೌನ್​ (Lockdown) ಬಳಿಕ ಅನೇಕ ನಟ-ನಟಿಯರಿಗೆ, ತಂತ್ರಜ್ಞರಿಗೆ ತುಂಬ ತೊಂದರೆ ಆಯ್ತು. ಹಲವು ಸೀರಿಯಲ್​ಗಳು ನಿಂತುಹೋದವು. ಅಂಥ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದೇ ಅವರಿಗೆ ತೋಚಲಿಲ್ಲ. ಕೆಲವರು ಆತ್ನಹತ್ಯೆ ಮಾಡಿಕೊಂಡರು. ಇನ್ನೂ ಕೆಲವರು ಕೆಟ್ಟ ಹಾದಿ ತುಳಿದರು. ಆದರೆ ಹಿಂದಿ ಕಿರುತೆರೆಯ ಖ್ಯಾತ ನಟಿ ಏಕ್ತಾ ಶರ್ಮಾ (Ekta Sharma) ತೆಗೆದುಕೊಂಡ ನಿರ್ಧಾರ ಅಂಥದ್ದಲ್ಲ. ಸೀರಿಯಲ್​ನಲ್ಲಿ ಕೆಲಸ ಸಿಗದೇ ಇದ್ದಾಗ ಅವರು ಕಾಲ್​ ಸೆಂಟರ್​ನಲ್ಲಿ (Call Center) ಕೆಲಸ ಆರಂಭಿಸಿದರು. ಈ ಬಗ್ಗೆ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರ ನಿರ್ಧಾರಕ್ಕೆ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ.

ಏಕ್ತಾ ಶರ್ಮಾ ಅವರು ಕಳೆದ 20 ವರ್ಷಗಳಿಂದ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಡ್ಯಾಡಿ ಸಮ್ಜಾ ಕರೋ, ಕುಸುಮ್​, ಕ್ಯೂಂ ಕಿ ಸಾಸ್​ ಬಿ ಕಬಿ ಬಹು ತಿ, ಕಾಮಿನಿ-ಧಾಮಿನಿ, ಬೇಪನಾ ಪ್ಯಾರ್​ ಮುಂತಾದ ಸೀರಿಯಲ್​ಗಳಲ್ಲಿ ಏಕ್ತಾ ಶರ್ಮಾ ನಟಿಸಿದ್ದಾರೆ. ಆದರೆ ಲಾಕ್​ಡೌನ್​ ಆರಂಭ ಆದಾಗ ಅವರು ಕೆಲಸ ಕಳೆದುಕೊಳ್ಳಬೇಕಾಯಿತು.

‘ಕೆಲಸ ಇಲ್ಲದೇ ಇದ್ದಾಗ ನಾನು ಸುಮ್ಮನೆ ಮನೆಯಲ್ಲಿ ಕೂತು ಅಳಲಿಲ್ಲ. ನಾನು ಶಿಕ್ಷಿತ ಮಹಿಳೆ. ಈಗ ಗೌರವಯುತವಾದ ಕೆಲಸ ಮಾಡುತ್ತಿದ್ದೇನೆ. ಅದರಿಂದ ಹೆಮ್ಮೆ ಇದೆ. ಆರಂಭದಲ್ಲಿ ನನ್ನ ಆಭರಣ ಮಾರಿದೆ. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲವೂ ಸರಿಹೋಗಬಹುದು ಎಂದುಕೊಂಡೆ. ಆದರೆ ಹಾಗಾಗಲಿಲ್ಲ. ಒಂದು ವರ್ಷ ಕಳೆದ ಬಳಿಕ ನಾನು ಕಾಲ್​ ಸೆಂಟರ್​ ಕೆಲಸಕ್ಕೆ ಸೇರಿದೆ’ ಎಂದು ಏಕ್ತಾ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ
Image
ಮತ್ತೆ ಕಿರುತೆರೆ ಕದ ತಟ್ಟಿದ ನಟ ಗಣೇಶ್; ‘ಇಸ್ಮಾರ್ಟ್​’ ಜೋಡಿಗಳ ಜತೆ ಬರಲಿದ್ದಾರೆ ‘ಗೋಲ್ಡನ್​ ಸ್ಟಾರ್​’
Image
ಕಿರುತೆರೆ ನಟಿ ಪೂರ್ಣಿಮಾಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ; ಖಾಸಗಿ ಹಾಸ್ಪಿಟಲ್​ ಬೇಡ ಅಂದಿದ್ದಕ್ಕೆ ಕಾರಣ ಏನು?
Image
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
Image
ಲವ್​ ಕಹಾನಿ ಹೇಳುವಂತೆ ಬೇಡಿಕೆ ಇಟ್ಟ ಅಭಿಮಾನಿ; ಕಿರುತೆರೆ ನಟಿ ಕೊಟ್ರು ಖಡಕ್ ಉತ್ತರ

‘ನಟಿಯಾಗಿದ್ದ ನಾನು ಈಗ ಈ ರೀತಿ ಕೆಲಸ ಮಾಡುವುದು ಸುಲಭ ಆಗಿರಲಿಲ್ಲ. ಅಕ್ಕ-ಪಕ್ಕ ಸಹಾಯಕರನ್ನು ಇಟ್ಟುಕೊಂಡು, ಸದಾ ಕಾಲ ಡಯೆಟ್​ ಫುಡ್​ ಸೇವಿಸುತ್ತ ಐಷಾರಾಮಿ ಜೀವನ ನಡೆಸಿದ್ದ ನಾನು ಈಗ ಕೋಪಿಷ್ಟ ಗ್ರಾಹಕರ ಜೊತೆ ಕಾಲ್​ ಸೆಂಟರ್​ನಲ್ಲಿ ಮಾತನಾಡುತ್ತಿದ್ದೇನೆ. ವೀರರಂತೆ ಬದುಕಬೇಕು. ಬಲಿಪಶು ರೀತಿ ಅಲ್ಲ’ ಎಂದು ಏಕ್ತಾ ಶರ್ಮಾ ಹೇಳಿದ್ದಾರೆ.

ಒಂದು ವೇಳೆ ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಆಗ ಎಲ್ಲರೂ ಬಂದು ದೊಡ್ಡ ದೊಡ್ಡ ಸಲಹೆ ನೀಡುತ್ತಾರೆ. ಆದರೆ ಬದುಕಿದ್ದಾಗ ಕಷ್ಟ ಎಂದು ಹೇಳಿಕೊಂಡರೆ ಯಾರೂ ಬರುವುದಿಲ್ಲ ಎಂಬುದು ಏಕ್ತಾ ಶರ್ಮಾ ಅವರ ಅಭಿಪ್ರಾಯ. ಅವರು ನಟಿಸಿದ ಕೊನೆಯ ಸೀರಿಯಲ್​ ‘ಬೇಪನಾ ಪ್ಯಾರ್​’. ಲಾಕ್​ಡೌನ್​ ಆರಂಭ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ಆ ಧಾರಾವಾಹಿ ಅಂತ್ಯವಾಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:23 am, Wed, 21 September 22

ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ