AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಕಾಶ ಇಲ್ಲದೇ ಕಾಲ್​ ಸೆಂಟರ್​ ಕೆಲಸಕ್ಕೆ ಸೇರಿಕೊಂಡ ಖ್ಯಾತ ನಟಿ; ಭೇಷ್​ ಎಂದ ಅಭಿಮಾನಿಗಳು

Serial Actress Ekta Sharma: ‘ನಟಿಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ನಾನು ಈಗ ಈ ರೀತಿ ಕೆಲಸ ಮಾಡುವುದು ಸುಲಭ ಆಗಿರಲಿಲ್ಲ’ ಎಂದು ಏಕ್ತಾ ಶರ್ಮಾ ಹೇಳಿದ್ದಾರೆ. ತಮ್ಮ ಕಷ್ಟದ ಬಗ್ಗೆ ಅವರು ಎಳೆಎಳೆಯಾಗಿ ವಿವರಿಸಿದ್ದಾರೆ.

ಅವಕಾಶ ಇಲ್ಲದೇ ಕಾಲ್​ ಸೆಂಟರ್​ ಕೆಲಸಕ್ಕೆ ಸೇರಿಕೊಂಡ ಖ್ಯಾತ ನಟಿ; ಭೇಷ್​ ಎಂದ ಅಭಿಮಾನಿಗಳು
ಏಕ್ತಾ ಶರ್ಮಾ
TV9 Web
| Updated By: ಮದನ್​ ಕುಮಾರ್​|

Updated on:Sep 21, 2022 | 7:23 AM

Share

ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಕೆಲಸ ಅಲ್ಲ. ಸರಿಯಾಗಿ ಅವಕಾಶ ಸಿಗದೇ ಇದ್ದರೆ ಕಷ್ಟಪಡಬೇಕಾಗುತ್ತದೆ. ಅದರಲ್ಲೂ ಲಾಕ್​ಡೌನ್​ (Lockdown) ಬಳಿಕ ಅನೇಕ ನಟ-ನಟಿಯರಿಗೆ, ತಂತ್ರಜ್ಞರಿಗೆ ತುಂಬ ತೊಂದರೆ ಆಯ್ತು. ಹಲವು ಸೀರಿಯಲ್​ಗಳು ನಿಂತುಹೋದವು. ಅಂಥ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದೇ ಅವರಿಗೆ ತೋಚಲಿಲ್ಲ. ಕೆಲವರು ಆತ್ನಹತ್ಯೆ ಮಾಡಿಕೊಂಡರು. ಇನ್ನೂ ಕೆಲವರು ಕೆಟ್ಟ ಹಾದಿ ತುಳಿದರು. ಆದರೆ ಹಿಂದಿ ಕಿರುತೆರೆಯ ಖ್ಯಾತ ನಟಿ ಏಕ್ತಾ ಶರ್ಮಾ (Ekta Sharma) ತೆಗೆದುಕೊಂಡ ನಿರ್ಧಾರ ಅಂಥದ್ದಲ್ಲ. ಸೀರಿಯಲ್​ನಲ್ಲಿ ಕೆಲಸ ಸಿಗದೇ ಇದ್ದಾಗ ಅವರು ಕಾಲ್​ ಸೆಂಟರ್​ನಲ್ಲಿ (Call Center) ಕೆಲಸ ಆರಂಭಿಸಿದರು. ಈ ಬಗ್ಗೆ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರ ನಿರ್ಧಾರಕ್ಕೆ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ.

ಏಕ್ತಾ ಶರ್ಮಾ ಅವರು ಕಳೆದ 20 ವರ್ಷಗಳಿಂದ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಡ್ಯಾಡಿ ಸಮ್ಜಾ ಕರೋ, ಕುಸುಮ್​, ಕ್ಯೂಂ ಕಿ ಸಾಸ್​ ಬಿ ಕಬಿ ಬಹು ತಿ, ಕಾಮಿನಿ-ಧಾಮಿನಿ, ಬೇಪನಾ ಪ್ಯಾರ್​ ಮುಂತಾದ ಸೀರಿಯಲ್​ಗಳಲ್ಲಿ ಏಕ್ತಾ ಶರ್ಮಾ ನಟಿಸಿದ್ದಾರೆ. ಆದರೆ ಲಾಕ್​ಡೌನ್​ ಆರಂಭ ಆದಾಗ ಅವರು ಕೆಲಸ ಕಳೆದುಕೊಳ್ಳಬೇಕಾಯಿತು.

‘ಕೆಲಸ ಇಲ್ಲದೇ ಇದ್ದಾಗ ನಾನು ಸುಮ್ಮನೆ ಮನೆಯಲ್ಲಿ ಕೂತು ಅಳಲಿಲ್ಲ. ನಾನು ಶಿಕ್ಷಿತ ಮಹಿಳೆ. ಈಗ ಗೌರವಯುತವಾದ ಕೆಲಸ ಮಾಡುತ್ತಿದ್ದೇನೆ. ಅದರಿಂದ ಹೆಮ್ಮೆ ಇದೆ. ಆರಂಭದಲ್ಲಿ ನನ್ನ ಆಭರಣ ಮಾರಿದೆ. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲವೂ ಸರಿಹೋಗಬಹುದು ಎಂದುಕೊಂಡೆ. ಆದರೆ ಹಾಗಾಗಲಿಲ್ಲ. ಒಂದು ವರ್ಷ ಕಳೆದ ಬಳಿಕ ನಾನು ಕಾಲ್​ ಸೆಂಟರ್​ ಕೆಲಸಕ್ಕೆ ಸೇರಿದೆ’ ಎಂದು ಏಕ್ತಾ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ
Image
ಮತ್ತೆ ಕಿರುತೆರೆ ಕದ ತಟ್ಟಿದ ನಟ ಗಣೇಶ್; ‘ಇಸ್ಮಾರ್ಟ್​’ ಜೋಡಿಗಳ ಜತೆ ಬರಲಿದ್ದಾರೆ ‘ಗೋಲ್ಡನ್​ ಸ್ಟಾರ್​’
Image
ಕಿರುತೆರೆ ನಟಿ ಪೂರ್ಣಿಮಾಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ; ಖಾಸಗಿ ಹಾಸ್ಪಿಟಲ್​ ಬೇಡ ಅಂದಿದ್ದಕ್ಕೆ ಕಾರಣ ಏನು?
Image
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
Image
ಲವ್​ ಕಹಾನಿ ಹೇಳುವಂತೆ ಬೇಡಿಕೆ ಇಟ್ಟ ಅಭಿಮಾನಿ; ಕಿರುತೆರೆ ನಟಿ ಕೊಟ್ರು ಖಡಕ್ ಉತ್ತರ

‘ನಟಿಯಾಗಿದ್ದ ನಾನು ಈಗ ಈ ರೀತಿ ಕೆಲಸ ಮಾಡುವುದು ಸುಲಭ ಆಗಿರಲಿಲ್ಲ. ಅಕ್ಕ-ಪಕ್ಕ ಸಹಾಯಕರನ್ನು ಇಟ್ಟುಕೊಂಡು, ಸದಾ ಕಾಲ ಡಯೆಟ್​ ಫುಡ್​ ಸೇವಿಸುತ್ತ ಐಷಾರಾಮಿ ಜೀವನ ನಡೆಸಿದ್ದ ನಾನು ಈಗ ಕೋಪಿಷ್ಟ ಗ್ರಾಹಕರ ಜೊತೆ ಕಾಲ್​ ಸೆಂಟರ್​ನಲ್ಲಿ ಮಾತನಾಡುತ್ತಿದ್ದೇನೆ. ವೀರರಂತೆ ಬದುಕಬೇಕು. ಬಲಿಪಶು ರೀತಿ ಅಲ್ಲ’ ಎಂದು ಏಕ್ತಾ ಶರ್ಮಾ ಹೇಳಿದ್ದಾರೆ.

ಒಂದು ವೇಳೆ ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಆಗ ಎಲ್ಲರೂ ಬಂದು ದೊಡ್ಡ ದೊಡ್ಡ ಸಲಹೆ ನೀಡುತ್ತಾರೆ. ಆದರೆ ಬದುಕಿದ್ದಾಗ ಕಷ್ಟ ಎಂದು ಹೇಳಿಕೊಂಡರೆ ಯಾರೂ ಬರುವುದಿಲ್ಲ ಎಂಬುದು ಏಕ್ತಾ ಶರ್ಮಾ ಅವರ ಅಭಿಪ್ರಾಯ. ಅವರು ನಟಿಸಿದ ಕೊನೆಯ ಸೀರಿಯಲ್​ ‘ಬೇಪನಾ ಪ್ಯಾರ್​’. ಲಾಕ್​ಡೌನ್​ ಆರಂಭ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ಆ ಧಾರಾವಾಹಿ ಅಂತ್ಯವಾಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:23 am, Wed, 21 September 22

Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ