AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಗ್ನಪ್ರೇಮ ಒಂದು ಸಲ ಆದ್ರೆ ಹೇಳಬಹುದು’; ‘ವೀಕೆಂಡ್ ವಿತ್ ರಮೇಶ್​’ನಲ್ಲಿ ಸಿಹಿ-ಕಹಿ ಚಂದ್ರು ಬ್ರೇಕಪ್ ಸ್ಟೋರಿ

ವೀಕೆಂಡ್ ವಿತ್ ರಮೇಶ್ ಎಪಿಸೋಡ್​ನಲ್ಲಿ ಹಳೆಯ ಘಟನೆ ನೆನಪಿಸಿಕೊಳ್ಳಲಾಗುತ್ತದೆ. ಅದೇ ರೀತಿ ಸಿಹಿ-ಕಹಿ ಚಂದ್ರು ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಾಗಿದೆ.

‘ಭಗ್ನಪ್ರೇಮ ಒಂದು ಸಲ ಆದ್ರೆ ಹೇಳಬಹುದು’; ‘ವೀಕೆಂಡ್ ವಿತ್ ರಮೇಶ್​’ನಲ್ಲಿ ಸಿಹಿ-ಕಹಿ ಚಂದ್ರು ಬ್ರೇಕಪ್ ಸ್ಟೋರಿ
ಸಿಹಿ-ಕಹಿ ಚಂದ್ರು
Follow us
ರಾಜೇಶ್ ದುಗ್ಗುಮನೆ
|

Updated on: May 01, 2023 | 12:01 PM

ಸಿಹಿ-ಕಹಿ ಚಂದ್ರು ಅವರು ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರ (Weekend With Ramesh) ಅತಿಥಿಯಾಗಿ ಬಂದಿದ್ದಾರೆ. ಕಳೆದ ವೀಕೆಂಡ್​ನಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ. ಇಡೀ ಎಪಿಸೋಡ್ ಸಖತ್ ಫನ್ ಆಗಿತ್ತು. ಸಿಹಿ-ಕಹಿ ಚಂದ್ರು (Sihi Kahi Chandru) ಅವರು ಸದಾ ಹಸನ್ಮುಖಿ. ತೆರೆಮೇಲೆ ಹಾಗೂ ತೆರೆಹಿಂದೆ ಅವರು ಎಲ್ಲರನ್ನೂ ನಗಿಸುತ್ತಾರೆ. ವಿವಿಧ ತಿನಿಸು ತಿನ್ನೋದು ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅವರು ಕಾಲೇಜು ದಿನಗಳಲ್ಲಿ ಭಗ್ನಪ್ರೇಮಿ ಆಗಿದ್ದರಂತೆ! ಈ ವಿಚಾರವನ್ನು ಅವರ ಗ್ಯಾಂಗ್ ಸದಸ್ಯರು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಸಿಹಿ-ಕಹಿ ಚಂದ್ರು ಮಾತನಾಡಿದ್ದಾರೆ.

ವೀಕೆಂಡ್ ವಿತ್ ರಮೇಶ್ ಎಪಿಸೋಡ್​ನಲ್ಲಿ ಹಳೆಯ ಘಟನೆ ನೆನಪಿಸಿಕೊಳ್ಳಲಾಗುತ್ತದೆ. ಕಾಲೇಜು ದಿನದ ಗೆಳೆಯರು ಬಂದು ಹಳೆ ಸ್ಟೋರಿಯನ್ನು ಹೇಳುತ್ತಾರೆ. ಅದೇ ರೀತಿ ಸಿಹಿ-ಕಹಿ ಚಂದ್ರು ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಾಗಿದೆ. ‘ಕಾಲೇಜು ದಿನಗಳಲ್ಲಿ ಭಗ್ನಪ್ರೇಮಿಯಾಗಿ ಸಕ್ಕರೆ ಬೈಲಿನ ಕಲ್ಲಿನ ಬಂಡೆಮೇಲೆ ಬಿಯರ್ ಬಾಟಲಿ ಖಾಲಿ ಮಾಡಿದ್ದೆ’ ಎಂದು ಸಿಹಿ-ಕಹಿ ಚಂದ್ರು ಬಗ್ಗೆ ಗೆಳೆಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಾಧಕರ ಕುರ್ಚಿಯಲ್ಲಿ ಸಿಹಿ-ಕಹಿ ಚಂದ್ರು, ಎಪಿಸೋಡ್​ ಪೂರಾ ಸಿಹಿಯೇ

ಸಿಹಿ-ಕಹಿ ಚಂದ್ರು ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಅವರು ಈ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದಾರೆ. ‘ಭಗ್ನಪ್ರೇಮಿ ಒಂದು ಸಲ ಆದ್ರೆ ಹೇಳಬಹುದು. ಸಾಕಷ್ಟು ಬಾರಿ ಆಗಿದ್ದೇನೆ. ಪ್ರೇಮ ಮಾಡಿದ್ರೆ ಆಗಲ್ಲ ಅಂದ್ಕೊಂಡೆ. ಪ್ರೇಮ ಭಗ್ನ ಆದ್ರೆ ಕುಡಿಯಬಾರದು ಎಂದು ನಿರ್ಧರಿಸಿದೆ’ ಎಂದರು ಸಿಹಿ-ಕಹಿ ಚಂದ್ರು. ‘ಹಾಗಿದ್ರೆ ಒಂದು ಬಿಯರ್ ಬಾಟಲ್ ಅಲ್ಲ, ಕ್ರೇಟ್ ಖಾಲಿ ಆಗಿರಬೇಕು’ ಎಂದು ಕಾಲೆಳೆದರು ರಮೇಶ್ ಅರವಿಂದ್.

ಇದನ್ನೂ ಓದಿ:ಎಲ್ಲರಿಗೂ ಮನೆ, ಶಂಕರ್​ನಾಗ್ ಇದ್ದಿದ್ದರೆ ಗುಡಿಸಲುಗಳೇ ಇರುತ್ತಿರಲಿಲ್ಲ, ಶಂಕರ್​ನಾಗ್ ಐಡಿಯಾ ಬಿಚ್ಚಿಟ್ಟ ಸಿಹಿ-ಕಹಿ ಚಂದ್ರು 

ದೂರದರ್ಶನದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಿಂದಲೇ ಪ್ರಸಾರವಾದ ಕನ್ನಡದ ಧಾರಾವಾಹಿಯಲ್ಲಿ ಸಿಹಿ-ಕಹಿಯಲ್ಲಿ ಚಂದ್ರು ನಟಿಸಿದರು. ಅಲ್ಲೇ ಗೀತಾ ಅವರ ಪರಿಚಯವಾಗಿ ಅದು ಪ್ರೇಮವಾಗಿ ಮದುವೆಯೂ ಆಯಿತು. ಅದಾದ ಬಳಿಕ ಒಂದರ ಹಿಂದೊಂದು ಸಿನಿಮಾಗಳು ಸಿಗಲು ಆರಂಭವಾದವು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ