AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಗ್ನಪ್ರೇಮ ಒಂದು ಸಲ ಆದ್ರೆ ಹೇಳಬಹುದು’; ‘ವೀಕೆಂಡ್ ವಿತ್ ರಮೇಶ್​’ನಲ್ಲಿ ಸಿಹಿ-ಕಹಿ ಚಂದ್ರು ಬ್ರೇಕಪ್ ಸ್ಟೋರಿ

ವೀಕೆಂಡ್ ವಿತ್ ರಮೇಶ್ ಎಪಿಸೋಡ್​ನಲ್ಲಿ ಹಳೆಯ ಘಟನೆ ನೆನಪಿಸಿಕೊಳ್ಳಲಾಗುತ್ತದೆ. ಅದೇ ರೀತಿ ಸಿಹಿ-ಕಹಿ ಚಂದ್ರು ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಾಗಿದೆ.

‘ಭಗ್ನಪ್ರೇಮ ಒಂದು ಸಲ ಆದ್ರೆ ಹೇಳಬಹುದು’; ‘ವೀಕೆಂಡ್ ವಿತ್ ರಮೇಶ್​’ನಲ್ಲಿ ಸಿಹಿ-ಕಹಿ ಚಂದ್ರು ಬ್ರೇಕಪ್ ಸ್ಟೋರಿ
ಸಿಹಿ-ಕಹಿ ಚಂದ್ರು
ರಾಜೇಶ್ ದುಗ್ಗುಮನೆ
|

Updated on: May 01, 2023 | 12:01 PM

Share

ಸಿಹಿ-ಕಹಿ ಚಂದ್ರು ಅವರು ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರ (Weekend With Ramesh) ಅತಿಥಿಯಾಗಿ ಬಂದಿದ್ದಾರೆ. ಕಳೆದ ವೀಕೆಂಡ್​ನಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ. ಇಡೀ ಎಪಿಸೋಡ್ ಸಖತ್ ಫನ್ ಆಗಿತ್ತು. ಸಿಹಿ-ಕಹಿ ಚಂದ್ರು (Sihi Kahi Chandru) ಅವರು ಸದಾ ಹಸನ್ಮುಖಿ. ತೆರೆಮೇಲೆ ಹಾಗೂ ತೆರೆಹಿಂದೆ ಅವರು ಎಲ್ಲರನ್ನೂ ನಗಿಸುತ್ತಾರೆ. ವಿವಿಧ ತಿನಿಸು ತಿನ್ನೋದು ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅವರು ಕಾಲೇಜು ದಿನಗಳಲ್ಲಿ ಭಗ್ನಪ್ರೇಮಿ ಆಗಿದ್ದರಂತೆ! ಈ ವಿಚಾರವನ್ನು ಅವರ ಗ್ಯಾಂಗ್ ಸದಸ್ಯರು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಸಿಹಿ-ಕಹಿ ಚಂದ್ರು ಮಾತನಾಡಿದ್ದಾರೆ.

ವೀಕೆಂಡ್ ವಿತ್ ರಮೇಶ್ ಎಪಿಸೋಡ್​ನಲ್ಲಿ ಹಳೆಯ ಘಟನೆ ನೆನಪಿಸಿಕೊಳ್ಳಲಾಗುತ್ತದೆ. ಕಾಲೇಜು ದಿನದ ಗೆಳೆಯರು ಬಂದು ಹಳೆ ಸ್ಟೋರಿಯನ್ನು ಹೇಳುತ್ತಾರೆ. ಅದೇ ರೀತಿ ಸಿಹಿ-ಕಹಿ ಚಂದ್ರು ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಾಗಿದೆ. ‘ಕಾಲೇಜು ದಿನಗಳಲ್ಲಿ ಭಗ್ನಪ್ರೇಮಿಯಾಗಿ ಸಕ್ಕರೆ ಬೈಲಿನ ಕಲ್ಲಿನ ಬಂಡೆಮೇಲೆ ಬಿಯರ್ ಬಾಟಲಿ ಖಾಲಿ ಮಾಡಿದ್ದೆ’ ಎಂದು ಸಿಹಿ-ಕಹಿ ಚಂದ್ರು ಬಗ್ಗೆ ಗೆಳೆಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಾಧಕರ ಕುರ್ಚಿಯಲ್ಲಿ ಸಿಹಿ-ಕಹಿ ಚಂದ್ರು, ಎಪಿಸೋಡ್​ ಪೂರಾ ಸಿಹಿಯೇ

ಸಿಹಿ-ಕಹಿ ಚಂದ್ರು ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಅವರು ಈ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದಾರೆ. ‘ಭಗ್ನಪ್ರೇಮಿ ಒಂದು ಸಲ ಆದ್ರೆ ಹೇಳಬಹುದು. ಸಾಕಷ್ಟು ಬಾರಿ ಆಗಿದ್ದೇನೆ. ಪ್ರೇಮ ಮಾಡಿದ್ರೆ ಆಗಲ್ಲ ಅಂದ್ಕೊಂಡೆ. ಪ್ರೇಮ ಭಗ್ನ ಆದ್ರೆ ಕುಡಿಯಬಾರದು ಎಂದು ನಿರ್ಧರಿಸಿದೆ’ ಎಂದರು ಸಿಹಿ-ಕಹಿ ಚಂದ್ರು. ‘ಹಾಗಿದ್ರೆ ಒಂದು ಬಿಯರ್ ಬಾಟಲ್ ಅಲ್ಲ, ಕ್ರೇಟ್ ಖಾಲಿ ಆಗಿರಬೇಕು’ ಎಂದು ಕಾಲೆಳೆದರು ರಮೇಶ್ ಅರವಿಂದ್.

ಇದನ್ನೂ ಓದಿ:ಎಲ್ಲರಿಗೂ ಮನೆ, ಶಂಕರ್​ನಾಗ್ ಇದ್ದಿದ್ದರೆ ಗುಡಿಸಲುಗಳೇ ಇರುತ್ತಿರಲಿಲ್ಲ, ಶಂಕರ್​ನಾಗ್ ಐಡಿಯಾ ಬಿಚ್ಚಿಟ್ಟ ಸಿಹಿ-ಕಹಿ ಚಂದ್ರು 

ದೂರದರ್ಶನದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಿಂದಲೇ ಪ್ರಸಾರವಾದ ಕನ್ನಡದ ಧಾರಾವಾಹಿಯಲ್ಲಿ ಸಿಹಿ-ಕಹಿಯಲ್ಲಿ ಚಂದ್ರು ನಟಿಸಿದರು. ಅಲ್ಲೇ ಗೀತಾ ಅವರ ಪರಿಚಯವಾಗಿ ಅದು ಪ್ರೇಮವಾಗಿ ಮದುವೆಯೂ ಆಯಿತು. ಅದಾದ ಬಳಿಕ ಒಂದರ ಹಿಂದೊಂದು ಸಿನಿಮಾಗಳು ಸಿಗಲು ಆರಂಭವಾದವು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!