AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kamal Haasan: ‘ಮಹಿಳಾ ಸ್ಪರ್ಧಿ ಪರ ಬಿಗ್​ ಬಾಸ್​ ನಿರೂಪಕ ಕಮಲ್​ ಹಾಸನ್​ ಪಕ್ಷಪಾತ’: ವನಿತಾ ಆರೋಪ

Vanitha Vijayakumar | Bigg Boss Tamil 6: ವನಿತಾ ವಿಜಯ್​ಕುಮಾರ್​ ಅವರು ‘ಬಿಗ್​ ಬಾಸ್​ ತಮಿಳು 6’ ಕಾರ್ಯಕ್ರಮವನ್ನು ಫಾಲೋ ಮಾಡುತ್ತಿದ್ದಾರೆ. ಇತ್ತೀಚಿನ ಸಂಚಿಕೆಯನ್ನು ನೋಡಿದ ಬಳಿಕ ಅವರಿಗೆ ಪಕ್ಷಪಾತದ ಅನುಮಾನ ಮೂಡಿದೆ.

Kamal Haasan: ‘ಮಹಿಳಾ ಸ್ಪರ್ಧಿ ಪರ ಬಿಗ್​ ಬಾಸ್​ ನಿರೂಪಕ ಕಮಲ್​ ಹಾಸನ್​ ಪಕ್ಷಪಾತ’: ವನಿತಾ ಆರೋಪ
ಕಮಲ್​ ಹಾಸನ್​, ವನಿತಾ ವಿಜಯ್​ಕುಮಾರ್​
TV9 Web
| Edited By: |

Updated on:Nov 23, 2022 | 12:58 PM

Share

ಕನ್ನಡ, ಹಿಂದಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಬಿಗ್​ ಬಾಸ್​ ಕಾರ್ಯಕ್ರಮ ಫೇಮಸ್​ ಆಗಿದೆ. ತಮಿಳಿನಲ್ಲಿ (Bigg Boss Tamil 6) ಕಮಲ್​ ಹಾಸನ್​ ಅವರು ಈ ಶೋ ನಡೆಸಿಕೊಡುತ್ತಿದ್ದಾರೆ. ಅವರ ನಿರೂಪಣೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಅವರ ಮೇಲೆ ಈಗೊಂದು ಆರೋಪ ಕೇಳಿಬಂದಿದೆ. ಮಹಿಳಾ ಸ್ಪರ್ಧಿಯೊಬ್ಬರ ಪರವಾಗಿ ಕಮಲ್​ ಹಾಸನ್​ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಮಾಜಿ ಸ್ಪರ್ಧಿ ವನಿತಾ ವಿಜಯ್​ಕುಮಾರ್​ (Vanitha Vijayakumar) ಆರೋಪ ಮಾಡಿದ್ದಾರೆ. ಈ ಕುರಿತು ಹೊಸ ಚರ್ಚೆ ಶುರುವಾಗಿದೆ. ವನಿತಾ ಮಾಡಿರುವ ಈ ಆರೋಪದಿಂದ ಕಮಲ್​ ಹಾಸನ್​ (Kamal Haasan) ಅಭಿಮಾನಿಗಳು ಗರಂ ಆಗಿದ್ದಾರೆ.

ತಮಿಳು ಬಿಗ್​ ಬಾಸ್​ ಕಾರ್ಯಕ್ರಮ ಈವರೆಗೆ 5 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈಗ 6ನೇ ಸೀಸನ್​ ನಡೆಯುತ್ತಿದೆ. ಕಮಲ್​ ಹಾಸನ್​ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇತ್ತೀಚೆಗೆ ಬಿಗ್​ ಬಾಸ್​ ಮನೆಯ ವಿನ್ಯಾಸವನ್ನು ಬದಲಾಯಿಸಲಾಗಿದೆ. ಕೋರ್ಟ್​ ರೀತಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅದಕ್ಕೆ ಅನುಗುಣವಾಗಿ ಟಾಸ್ಕ್​ ನೀಡಲಾಗಿದೆ. ಈ ಶೋನಲ್ಲಿ ಕಮಲ್​ ಹಾಸನ್​ ಅವರು ನಟಿ ರಚಿತಾ ಮಹಾಲಕ್ಷ್ಮಿ ಪರವಾಗಿ ಪಕ್ಷಪಾತ ಮಾಡಿದ್ದಾರೆ ಎಂದು ವನಿತಾ ವಿಜಯ್​ಕುಮಾರ್​ ಹೇಳಿದ್ದಾರೆ.

‘ಬಿಗ್​ ಬಾಸ್​ ತಮಿಳು 3’ರಲ್ಲಿ ವನಿತಾ ವಿಜಯ್​ಕುಮಾರ್ ಅವರು ಸ್ಪರ್ಧಿಸಿದ್ದರು. ‘ಬಿಗ್​ ಬಾಸ್​ ತಮಿಳು 4’ರಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಒಟಿಟಿ ಆವೃತ್ತಿಯಾದ ‘ಬಿಗ್​ ಬಾಸ್​ ಅಲ್ಟಿಮೇಟ್​ 1’ ಶೋನಲ್ಲೂ ಅವರು ಸ್ಪರ್ಧಿಸಿದ್ದರು. ಆದರೆ ಈಗ ಅವರು ಕಮಲ್​ ಹಾಸನ್​ ವಿರುದ್ಧವೇ ಮಾತನಾಡಿದ್ದಾರೆ.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ವನಿತಾ ವಿಜಯ್​ಕುಮಾರ್​ ಅವರು ‘ಬಿಗ್​ ಬಾಸ್​ ತಮಿಳು 6’ ಕಾರ್ಯಕ್ರಮವನ್ನು ಫಾಲೋ ಮಾಡುತ್ತಿದ್ದಾರೆ. ಇತ್ತೀಚಿನ ಸಂಚಿಕೆಯನ್ನು ನೋಡಿದ ಬಳಿಕ ಅವರಿಗೆ ಪಕ್ಷಪಾತದ ಅನುಮಾನ ಮೂಡಿದೆ. ‘ರಾಬರ್ಟ್​ ಮತ್ತು ರಚಿತಾ ನಡುವಿನ ವಿಚಾರಗಳ ಬಗ್ಗೆ ಕಮಲ್​ ಹಾಸನ್​ ಯಾಕೆ ಮಾತನಾಡುತ್ತಿಲ್ಲ? ರಾಬರ್ಟ್​ ಅವರು ಗಂಭೀರ ವಿಷಯಗಳನ್ನು ಕಾಮಿಡಿಯಾಗಿ ಹೇಳುತ್ತಿದ್ದಾರೆ. ರಚಿತಾ ಪರವಾಗಿ ಪಕ್ಷಪಾತ ಮಾಡಲಾಗುತ್ತಿದೆ ಅಂತ ನನಗೆ ಅನಿಸುತ್ತದೆ. ಕಮಲ್​ ಹಾಸನ್​ ಅವರು ಆಕೆಯ ಅಭಿಮಾನಿ ಆಗಿರಬಹುದು. ಆದರೆ ಆ ವಿಷಯ ಬೇರೆ’ ಎಂದು ವನಿತಾ ವಿಜಯ್​ಕುಮಾರ್​ ಹೇಳಿದ್ದಾರೆ.

‘ಅಜೀಮ್​ಗೆ ಅವರದ್ದೇ ಆದ ತಂತ್ರಗಾರಿಕೆ ಇದೆ. ಆದರೆ ಈಗ ಅವರು ಕಮಲ್​ ಹಾಸನ್​ ವಿರುದ್ಧವೇ ನಡೆದುಕೊಳ್ಳುತ್ತಿದ್ದಾರೆ. ಅದರಿಂದ ಅವರಿಗೆ ಒಳ್ಳೆಯದೇ ಆಗಬಹುದು. ಆದರೆ ಜನರ ತೀರ್ಮಾನವನ್ನು ಮೊದಲೇ ಊಹಿಸೋಕೆ ಆಗಲ್ಲ’ ಎಂದು ಕೂಡ ವನಿತಾ ವಿಜಯ್​ಕುಮಾರ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:58 pm, Wed, 23 November 22

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ