Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜ ಮುಖ ತೋರಿಸಿದ ವರ್ತೂರು ಸಂತೋಷ್​; ತಮ್ಮ ವಿರುದ್ಧವೇ ಮಾತನಾಡಿದರೂ ಖುಷಿಪಟ್ಟ ತನಿಷಾ

ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಈ ಫ್ರೆಂಡ್​ಶಿಪ್ ಹಾಳಾಗುವ ಸೂಚನೆ ಸಿಕ್ಕಿತ್ತು. ಆದರೆ, ತನಿಷಾ ಅವರು ಇದನ್ನು ಲೈಟ್ ಆಗಿ ತೆಗೆದುಕೊಂಡಿದ್ದಾರೆ.

ನಿಜ ಮುಖ ತೋರಿಸಿದ ವರ್ತೂರು ಸಂತೋಷ್​; ತಮ್ಮ ವಿರುದ್ಧವೇ ಮಾತನಾಡಿದರೂ ಖುಷಿಪಟ್ಟ ತನಿಷಾ
ವರ್ತೂರು ಸಂತೋಷ್-ತನಿಷಾ
Follow us
ರಾಜೇಶ್ ದುಗ್ಗುಮನೆ
|

Updated on: Dec 05, 2023 | 8:11 AM

ತನಿಷಾ ಕುಪ್ಪಂಡ (Tanisha Kuppanda) ಹಾಗೂ ವರ್ತೂರು ಸಂತೋಷ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಆದರೆ, ಆಟದ  ಮಧ್ಯೆ ಅವರು ಫ್ರೆಂಡ್​​ಶಿಪ್​ ತರುತ್ತಿಲ್ಲ. ‘ನಿನಗಾಗಿ ನಾನು ತ್ಯಾಗ ಮಾಡುತ್ತೇನೆ. ನನಗೆ ಫ್ರೆಂಡ್​ಶಿಪ್​ ಮುಖ್ಯ’ ಎಂದು ಅವರು ಹೇಳಿಲ್ಲ. ಬದಲಿಗೆ ತಾವು ಸೇವ್ ಆಗಬೇಕು ಎಂಬುದು ಅವರ ತಲೆಗೆ ಬಂದಿದೆ. ಈ ವಾರ ಅವರು ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಸಂತೋಷ್ ಅವರು ಆಡಿದ ಮಾತನ್ನು ಕೇಳಿ ತನಿಷಾ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ಈ ಬಾರಿ ಕ್ಯಾಪ್ಟನ್ ಸ್ನೇಹಿತ್​ಗೆ ವಿಶೇಷ ಅಧಿಕಾರ ಇತ್ತು. ಇದರ ಪ್ರಕಾರ ಇಬ್ಬರು ಸ್ನೇಹಿತ್ ಎದುರು ಬಂದು ನಿಲ್ಲಬೇಕು. ಅವರಲ್ಲಿ ಒಬ್ಬರನ್ನು ಸ್ನೇಹಿತ್ ಸೇವ್ ಮಾಡಬೇಕು. ಈ ಪ್ರಕ್ರಿಯೆ ನಡೆಯಿತು. ಕೊನೆಯಲ್ಲಿ ಉಳಿದಿದ್ದು ವರ್ತೂರು ಸಂತೋಷ್, ತನಿಷಾ ಹಾಗೂ ಕಾರ್ತಿಕ್. ಈ ಪೈಕಿ ಒಬ್ಬರನ್ನು ಸೇವ್ ಮಾಡಬೇಕಿತ್ತು. ಎಲ್ಲರೂ ತಮ್ಮ ವಾದ ಮುಂದಿಟ್ಟರು.

ಸ್ನೇಹಿತ್ ಅವರ ಎದುರು ಕಾರ್ತಿಕ್ ಒಂದು ಬೇಡಿಕೆ ಇಟ್ಟರು. ‘ತನಿಷಾ ಕಾಲಿಗೆ ಗಾಯ ಆಗಿದೆ. ಅವಳನ್ನು ಸೇವ್ ಮಾಡಿ’ ಎಂದರು. ಇದು ಸಂತೋಷ್ ಕೋಪಕ್ಕೆ ಕಾರಣ ಆಯಿತು. ‘ತನಿಷಾ ಕಾಲಿಗೆ ಗಾಯ ಆಗಿದ್ದು ನನ್ನಿಂದ. ಹಾಗಂತ ನಾನು ಬೇಕು ಅಂತ ಇದನ್ನು ಮಾಡಿಲ್ಲ. ನನ್ನ ಬದಲು ಅವಳನ್ನು ಸೇವ್ ಮಾಡಿ ಎಂದು ಹೇಳಲ್ಲ. ನಾನು ಗೇಮ್ ಆಡೋಕೆ ಬಂದಿದ್ದು. ವಾರದ ಹಿಂದೆ ಟೀಂ ಕಚ್ಚಾಟ ನೋಡಲು ಸಾಧ್ಯವಾಗದೇ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹಿಂದೆ ಸರಿದೆ. ಇದೇ ಕಾರಣ ನೀಡಿ ಕಳಪೆ ಕೊಟ್ಟರು. ಈಗ ಆಟ ಬಿಟ್ಟುಕೊಡುವ ಮಾತೇ ಇಲ್ಲ’ ಎಂದು ನೇರವಾಗಿ ಹೇಳಿದರು.

ಇದನ್ನೂ ಓದಿ:Bigg Boss Kannada: ತನಿಷಾ ವಿಚಾರದಲ್ಲೂ ಮುಲಾಜು ನೋಡಿಲ್ಲ ವರ್ತೂರು ಸಂತೋಷ್​; ಆಟ ಅಂದ್ರೆ ಆಟ ಅಷ್ಟೇ 

ಬಂದಾಗಿನಿಂದಲೂ ವರ್ತೂರು ಸಂತೋಷ್ ನೇರವಾಗಿ ಮಾತನಾಡಿಲ್ಲ. ಅವರು ಸೈಲೆಂಟ್ ಆಗಿದ್ದೇ ಹೆಚ್ಚು. ಆದರೆ, ಈಗ ಎಲ್ಲವನ್ನೂ ಮರೆತು ಮಾತನಾಡಿದ್ದಾರೆ. ತಮ್ಮ ನಿಜ ಮುಖ ತೋರಿಸಿದ್ದಾರೆ. ಇದು ಅನೇಕರಿಗೆ ಅಚ್ಚರಿ ತಂದಿದೆ. ತಮ್ಮ ವಿರುದ್ಧವೇ ಮಾತನಾಡಿದ ಹೊರತಾಗಿಯೂ ತನಿಷಾ ಅವರು ವರ್ತೂರು ಸಂತೋಷ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!