AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜ ಮುಖ ತೋರಿಸಿದ ವರ್ತೂರು ಸಂತೋಷ್​; ತಮ್ಮ ವಿರುದ್ಧವೇ ಮಾತನಾಡಿದರೂ ಖುಷಿಪಟ್ಟ ತನಿಷಾ

ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಈ ಫ್ರೆಂಡ್​ಶಿಪ್ ಹಾಳಾಗುವ ಸೂಚನೆ ಸಿಕ್ಕಿತ್ತು. ಆದರೆ, ತನಿಷಾ ಅವರು ಇದನ್ನು ಲೈಟ್ ಆಗಿ ತೆಗೆದುಕೊಂಡಿದ್ದಾರೆ.

ನಿಜ ಮುಖ ತೋರಿಸಿದ ವರ್ತೂರು ಸಂತೋಷ್​; ತಮ್ಮ ವಿರುದ್ಧವೇ ಮಾತನಾಡಿದರೂ ಖುಷಿಪಟ್ಟ ತನಿಷಾ
ವರ್ತೂರು ಸಂತೋಷ್-ತನಿಷಾ
ರಾಜೇಶ್ ದುಗ್ಗುಮನೆ
|

Updated on: Dec 05, 2023 | 8:11 AM

Share

ತನಿಷಾ ಕುಪ್ಪಂಡ (Tanisha Kuppanda) ಹಾಗೂ ವರ್ತೂರು ಸಂತೋಷ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಆದರೆ, ಆಟದ  ಮಧ್ಯೆ ಅವರು ಫ್ರೆಂಡ್​​ಶಿಪ್​ ತರುತ್ತಿಲ್ಲ. ‘ನಿನಗಾಗಿ ನಾನು ತ್ಯಾಗ ಮಾಡುತ್ತೇನೆ. ನನಗೆ ಫ್ರೆಂಡ್​ಶಿಪ್​ ಮುಖ್ಯ’ ಎಂದು ಅವರು ಹೇಳಿಲ್ಲ. ಬದಲಿಗೆ ತಾವು ಸೇವ್ ಆಗಬೇಕು ಎಂಬುದು ಅವರ ತಲೆಗೆ ಬಂದಿದೆ. ಈ ವಾರ ಅವರು ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಸಂತೋಷ್ ಅವರು ಆಡಿದ ಮಾತನ್ನು ಕೇಳಿ ತನಿಷಾ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ಈ ಬಾರಿ ಕ್ಯಾಪ್ಟನ್ ಸ್ನೇಹಿತ್​ಗೆ ವಿಶೇಷ ಅಧಿಕಾರ ಇತ್ತು. ಇದರ ಪ್ರಕಾರ ಇಬ್ಬರು ಸ್ನೇಹಿತ್ ಎದುರು ಬಂದು ನಿಲ್ಲಬೇಕು. ಅವರಲ್ಲಿ ಒಬ್ಬರನ್ನು ಸ್ನೇಹಿತ್ ಸೇವ್ ಮಾಡಬೇಕು. ಈ ಪ್ರಕ್ರಿಯೆ ನಡೆಯಿತು. ಕೊನೆಯಲ್ಲಿ ಉಳಿದಿದ್ದು ವರ್ತೂರು ಸಂತೋಷ್, ತನಿಷಾ ಹಾಗೂ ಕಾರ್ತಿಕ್. ಈ ಪೈಕಿ ಒಬ್ಬರನ್ನು ಸೇವ್ ಮಾಡಬೇಕಿತ್ತು. ಎಲ್ಲರೂ ತಮ್ಮ ವಾದ ಮುಂದಿಟ್ಟರು.

ಸ್ನೇಹಿತ್ ಅವರ ಎದುರು ಕಾರ್ತಿಕ್ ಒಂದು ಬೇಡಿಕೆ ಇಟ್ಟರು. ‘ತನಿಷಾ ಕಾಲಿಗೆ ಗಾಯ ಆಗಿದೆ. ಅವಳನ್ನು ಸೇವ್ ಮಾಡಿ’ ಎಂದರು. ಇದು ಸಂತೋಷ್ ಕೋಪಕ್ಕೆ ಕಾರಣ ಆಯಿತು. ‘ತನಿಷಾ ಕಾಲಿಗೆ ಗಾಯ ಆಗಿದ್ದು ನನ್ನಿಂದ. ಹಾಗಂತ ನಾನು ಬೇಕು ಅಂತ ಇದನ್ನು ಮಾಡಿಲ್ಲ. ನನ್ನ ಬದಲು ಅವಳನ್ನು ಸೇವ್ ಮಾಡಿ ಎಂದು ಹೇಳಲ್ಲ. ನಾನು ಗೇಮ್ ಆಡೋಕೆ ಬಂದಿದ್ದು. ವಾರದ ಹಿಂದೆ ಟೀಂ ಕಚ್ಚಾಟ ನೋಡಲು ಸಾಧ್ಯವಾಗದೇ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹಿಂದೆ ಸರಿದೆ. ಇದೇ ಕಾರಣ ನೀಡಿ ಕಳಪೆ ಕೊಟ್ಟರು. ಈಗ ಆಟ ಬಿಟ್ಟುಕೊಡುವ ಮಾತೇ ಇಲ್ಲ’ ಎಂದು ನೇರವಾಗಿ ಹೇಳಿದರು.

ಇದನ್ನೂ ಓದಿ:Bigg Boss Kannada: ತನಿಷಾ ವಿಚಾರದಲ್ಲೂ ಮುಲಾಜು ನೋಡಿಲ್ಲ ವರ್ತೂರು ಸಂತೋಷ್​; ಆಟ ಅಂದ್ರೆ ಆಟ ಅಷ್ಟೇ 

ಬಂದಾಗಿನಿಂದಲೂ ವರ್ತೂರು ಸಂತೋಷ್ ನೇರವಾಗಿ ಮಾತನಾಡಿಲ್ಲ. ಅವರು ಸೈಲೆಂಟ್ ಆಗಿದ್ದೇ ಹೆಚ್ಚು. ಆದರೆ, ಈಗ ಎಲ್ಲವನ್ನೂ ಮರೆತು ಮಾತನಾಡಿದ್ದಾರೆ. ತಮ್ಮ ನಿಜ ಮುಖ ತೋರಿಸಿದ್ದಾರೆ. ಇದು ಅನೇಕರಿಗೆ ಅಚ್ಚರಿ ತಂದಿದೆ. ತಮ್ಮ ವಿರುದ್ಧವೇ ಮಾತನಾಡಿದ ಹೊರತಾಗಿಯೂ ತನಿಷಾ ಅವರು ವರ್ತೂರು ಸಂತೋಷ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್