Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇರೆಯವರ ಜೊತೆ ನಮ್ರತಾ ಗೌಡ ಮದುವೆ ಫಿಕ್ಸ್​ ಆದರೆ ಸ್ನೇಹಿತ್​ ಹೀಗೆಲ್ಲ ಮಾಡ್ತಾರಾ?

ಬಿಗ್​ ಬಾಸ್​ ಮನೆಯಲ್ಲಿ ಪ್ರೀತಿ ಬೆಳೆಯುವುದು ಸಹಜ. ಆದರೆ ಕೆಲವರ ಪ್ರೀತಿ ಕೇವಲ ಒನ್​ ಸೈಡ್​ ಆಗಿರುತ್ತದೆ. ಸದ್ಯಕ್ಕೆ ನಮ್ರತಾ ಗೌಡ ಅವರ ವಿಚಾರದಲ್ಲಿ ಸ್ನೇಹಿತ್​ ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. ಒಂದು ವೇಳೆ ನಮ್ರತಾಗೆ ಬೇರೆ ಯಾರದ್ದೋ ಜೊತೆ ಮದುವೆ ನಿಶ್ಚಯವಾದರೆ ಸ್ನೇಹಿತ್​ ಹೇಗೆ ವರ್ತಿಸುತ್ತಾರೆ ಎಂಬುದನ್ನು ಸ್ವತಃ ನಮ್ರತಾ ನಟಿಸಿ ತೋರಿಸಿದ್ದಾರೆ.

ಬೇರೆಯವರ ಜೊತೆ ನಮ್ರತಾ ಗೌಡ ಮದುವೆ ಫಿಕ್ಸ್​ ಆದರೆ ಸ್ನೇಹಿತ್​ ಹೀಗೆಲ್ಲ ಮಾಡ್ತಾರಾ?
ಸ್ನೇಹಿತ್​ ಗೌಡ, ನಮ್ರತಾ ಗೌಡ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Dec 05, 2023 | 8:34 AM

ಬಿಗ್​ ಬಾಸ್​ ಕನ್ನಡ (Bigg Boss Kannada) ಶೋನಲ್ಲಿ ನಮ್ರತಾ ಗೌಡ ಮತ್ತು ಸ್ನೇಹಿತ್​ ನಡುವೆ ಸ್ನೇಹ ಇದೆ. ಹೇಗಾದರೂ ಮಾಡಿ ನಮ್ರತಾ (Namratha Gowda) ಅವರ ಪ್ರೀತಿ ಪಡೆಯಬೇಕು ಎಂಬುದು ಸ್ನೇಹಿತ್​ ಉದ್ದೇಶ. ಅದಕ್ಕಾಗಿ ಅವರು ಎಲ್ಲಿಲ್ಲದ ಕಸರತ್ತು ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿನ ಎಪಿಸೋಡ್​ನಲ್ಲಿ ಅವರು ನೇರವಾಗಿ ತಮ್ಮ ಫೀಲಿಂಗ್ಸ್​ ಹೇಳಿಕೊಂಡಿದ್ದರು. ಈಗ ಅದೇ ವಿಚಾರವನ್ನು ಇಟ್ಟುಕೊಂಡು ಬಿಗ್​ ಬಾಸ್​ ಒಂದು ಟಾಸ್ಕ್​ ನೀಡಿದ್ದಾರೆ. ಒಂದು ವೇಳೆ ನಮ್ರತಾ ಅವರಿಗೆ ಬೇರೆಯವರ ಜೊತೆ ಮದುವೆ ಫಿಕ್ಸ್​ ಆದರೆ ಸ್ನೇಹಿತ್​ ಗೌಡ (Snehith Gowda) ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಸ್ವತಃ ನಮ್ರತಾ ಅವರೇ ನಟಿಸಿ ತೋರಿಸಬೇಕು ಎಂದು ಟಾಸ್ಕ್​ ನೀಡಲಾಯಿತು. ಆ ಸನ್ನಿವೇಶ ಸಖತ್​ ಫನ್ನಿ ಆಗಿತ್ತು.

ನಮ್ರತಾ ಮತ್ತು ಸ್ನೇಹಿತ್​ ಅವರು ತಮ್ಮ ಪಾತ್ರಗಳನ್ನು ಅದಲು ಬದಲು ಮಾಡಿಕೊಂಡರು. ತಮಗೆ ಮದುವೆ ನಿಶ್ಚಯ ಆಗಿದೆ ಎಂಬುದನ್ನು ನಮ್ರತಾ ಬಂದು ಹೇಳಿದಾಗ ಸ್ನೇಹಿತ್​ ಅವರು ಬಿಕ್ಕಿ ಬಿಕ್ಕಿ ಅಳುತ್ತಾರೆ ಎಂದು ನಮ್ರತಾ ನಟಿಸಿ ತೋರಿಸಿದರು. ‘ಕಮಾನ್​ ನಮ್ರತಾ… ಆರ್​ ಯೂ ಸೀರಿಯಸ್?​ ಜೋಕ್​ ಮಾಡುತ್ತಿಲ್ಲ ತಾನೆ’ ಎಂದು ಟೆನ್ಷನ್​ ಮಾಡಿಕೊಂಡರು. ಅಷ್ಟೇ ಅಲ್ಲದೇ, ಅವರು ಗಳಗಳನೆ ಅತ್ತರು. ‘ನಿಮ್ಮನ್ನು ನಾನು ಅವರಿಗಿಂತಲೂ ಜಾಸ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂದು ಗೋಗರೆದರು.

ಇದನ್ನೂ ಓದಿ: ‘ವಿನಯ್​ಗೆ ಕ್ಯಾಪ್ಟನ್​ ಆಗುವ ಅರ್ಹತೆ ಇಲ್ಲ’; ನಮ್ರತಾ ಮಾತಿನಿಂದ ನೊಂದುಕೊಂಡ ವಿನಯ್​ ಗೌಡ

ಬಿಗ್​ ಮಾಸ್​ ಮನೆಯ ಸದಸ್ಯರು ವಾರಕ್ಕೆ ಬೇಕಾಗುವಷ್ಟು ದಿನಸಿ ಪಡೆಯಲು ಈ ಮನರಂಜನೆಯ ಟಾಸ್ಕ್​ ನೀಡಲಾಯಿತು. ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​ ಅವರು ಕಾರ್ತಿಕ್​ ಹಾಗೂ ಸಂಗೀತಾ ರೀತಿ ನಟಿಸಿ ತೋರಿಸಿದರು. ವಿನಯ್ ಗೌಡ ಅವರು ಸಿಂಹದಂತೆ, ಅವಿನಾಶ್​ ಕುದುರೆಯಂತೆ, ಸಂಗೀತಾ ನಾಯಿಮರಿಯಂತೆ, ತುಕಾಲಿ ಸಂತೋಷ್​ ಚಿಂಪಾಂಜಿ ರೀತಿಯಲ್ಲಿ ನಟಿಸಿದರು. ಈ ಎಲ್ಲ ಕಾರಣಗಳಿಂದಾಗಿ ಈ ಸಂಚಿಕೆ ತಮಾಷೆಯಾಗಿ ಮೂಡಿಬಂತು.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ

ನಮ್ರತಾ ಅವರ ಬಗ್ಗೆ ಸ್ನೇಹಿತ್​ಗೆ ಯಾವ ರೀತಿಯ ಫೀಲಿಂಗ್​ ಇದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಕೆಲವೇ ದಿನಗಳ ಹಿಂದೆ ವಿನಯ್​ ಬಳಿ ಹೋಗಿ ಸ್ನೇಹಿತ್​ ಅವರು ಈ ಕುರಿತು ಮಾತನಾಡಿದ್ದರು. ‘ನನಗೆ ಹುಡುಗಿಯರು ಇಷ್ಟ ಆಗಿದ್ದು ತುಂಬಾ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅದು ವರ್ಕ್​ ಆಗಲಿಲ್ಲ. ಅದಾದ ಬಳಿಕ ಈಗಲೇ ಇಷ್ಟ ಆಗಿರುವುದು. ಬಿಗ್​ ಬಾಸ್​ ಮನೆಯೊಳಗೆ ಬಂದಾಗ ಒಬ್ಬರು ಈ ರೀತಿ ಇಷ್ಟ ಆಗುತ್ತಾರೆ ಅಂತ ನನಗೂ ನಂಬಿಕೆ ಇರಲಿಲ್ಲ. ಇದನ್ನು ನಂಬೋಕೆ ಆಗುತ್ತಿಲ್ಲ. ಇವರ ಜತೆ ನಾನು ಫ್ರೆಂಡ್​ಗಿಂತಲೂ ಒಂಚೂರು ಹೆಚ್ಚು ಅಟ್ಯಾಚ್​ ಆಗಿದ್ದೀನಿ ಎಂಬುದು ನಾನು ಜೈಲಿಗೆ ಹೋದಾಗ ತಿಳಿಯಿತು’ ಎಂದು ಸ್ನೇಹಿತ್​ ಗೌಡ ಅವರು ಹೇಳಿಕೊಂಡಿದ್ದರು.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:43 pm, Mon, 4 December 23

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !