AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಯಂತ್ರಣ ಕಳೆದುಕೊಂಡ ವಿನಯ್ ಬಾಯಿಂದ ಬೀಪ್ ಶಬ್ದ; ಫಿನಾಲೆ ಸಮೀಪದಲ್ಲಿ ಎಡವಿದ್ರು..

ವಿನಯ್ ಅವರು ಸೈಲೆಂಟ್ ಆಗಿ ಎಲ್ಲದಕ್ಕೂ ಉತ್ತರ ನೀಡುತ್ತಿದ್ದುದು ಇಷ್ಟ ಆಗುತ್ತಿತ್ತು. ಆದರೆ, ಮತ್ತೆ ಅವರು ಮೊದಲಿನ ರೀತಿಯೇ ಆಗಿದ್ದಾರೆ. ನಿಯಂತ್ರಣ ಕಳೆದುಕೊಂಡು ಕೆಟ್ಟ ಶಬ್ದ ಬಳಕೆ ಮಾಡಿದ್ದಾರೆ.

ನಿಯಂತ್ರಣ ಕಳೆದುಕೊಂಡ ವಿನಯ್ ಬಾಯಿಂದ ಬೀಪ್ ಶಬ್ದ; ಫಿನಾಲೆ ಸಮೀಪದಲ್ಲಿ ಎಡವಿದ್ರು..
ಪ್ರತಾಪ್-ವಿನಯ್
ರಾಜೇಶ್ ದುಗ್ಗುಮನೆ
|

Updated on: Jan 09, 2024 | 7:36 AM

Share

ವಿನಯ್ ಗೌಡ (Vinay Gowda) ಅವರು ಕಳೆದ ಮೂರು ವಾರಗಳಿಂದ ಕೂಲ್ ಆಗಿದ್ದರು. ‘ಈ ವಿನಯ್ ಇಷ್ಟ ಆಗುತ್ತಿದ್ದಾರೆ’ ಎಂದು ಅನೇಕರು ಹೇಳಿದ್ದರು. ವಿನಯ್ ಮೇಲೆ ಮೊದಲಿದ್ದ ಅಭಿಪ್ರಾಯ ಬದಲಾಗುವುದರಲ್ಲಿತ್ತು. ಆದರೆ, ಅವರು ಮೊದಲಿನ ರೀತಿಯೇ ಆಗಿದ್ದಾರೆ. ಅವರ ಬಾಯಿಯಿಂದ ಕೆಟ್ಟ ಶಬ್ದ ಬಂದಿದೆ. ಫಿನಾಲೆ ಹತ್ತಿರ ಬಂದಾಗ ಅವರು ಎಡವಿದರೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಜನವರಿ 8ರಂದು ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಂಡಿದೆ.

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಆರಂಭದಲ್ಲಿ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಅವರು ಬದಲಾಗಿದ್ದರು. ಯಾರ ಜೊತೆಯೂ ನಾನು ಸಿಟ್ಟಿನಿಂದ ಮಾತನಾಡಲ್ಲ ಎಂದು ಹೇಳಿದ್ದರು. ಅವರು ಸೈಲೆಂಟ್ ಆಗಿ ಎಲ್ಲದಕ್ಕೂ ಉತ್ತರ ನೀಡುತ್ತಿದ್ದುದು ಇಷ್ಟ ಆಗುತ್ತಿತ್ತು. ಆದರೆ, ಮತ್ತೆ ಅವರು ಮೊದಲಿನ ರೀತಿಯೇ ಆಗಿದ್ದಾರೆ. ನಿಯಂತ್ರಣ ಕಳೆದುಕೊಂಡು ಕೆಟ್ಟ ಶಬ್ದ ಬಳಕೆ ಮಾಡಿದ್ದಾರೆ.

‘ವಿನಯ್​ ಒಬ್ಬರನ್ನು ತುಳಿದು ಮೇಲೆ ಬಂದಿದ್ದಾರೆ’ ಎಂದು ಸ್ಟೇಟ್​ಮೆಂಟ್ ಕೊಟ್ಟಿದ್ದರು ಪ್ರತಾಪ್. ಇದು ವಿನಯ್ ಕೋಪಕ್ಕೆ ಕಾರಣ ಆಗಿತ್ತು. ಸೋಮವಾರದ ಎಪಿಸೋಡ್​ನಲ್ಲಿ ವಿನಯ್ ಅವರು ಮಾತನಾಡುವಾಗ ಪ್ರತಾಪ್​ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದರು. ಆ ಬಳಿಕ ಪ್ರತಾಪ್​ಗೆ ಏಕವಚನ ಬಳಕೆ ಮಾಡಿದರು. ಇದರಿಂದ ಸಿಟ್ಟಾದ ಪ್ರತಾಪ್ ಎಚ್ಚರಿಕೆ ನೀಡಿದರು. ನಂತರ ವಿನಯ್ ಅವರು ನಿಯಂತ್ರಣ ಕಳೆದುಕೊಂಡರು. ಈ ವೇಳೆ ಪ್ರತಾಪ್ ಹೇಳಿದ ‘ಪರಿಣಾಮ ನೆಟ್ಟಗೆ ಇರಲ್ಲ’ ಎಂಬ ಮಾತು ವಿನಯ್ ಅವರನ್ನು ಮತ್ತಷ್ಟು ಪ್ರವೋಕ್ ಮಾಡಿತು.

ಇದನ್ನೂ ಓದಿ: ‘ಪರಿಣಾಮ ನೆಟ್ಟಗಿರಲ್ಲ’; ಕಾಲ್ಕೆರೆದು ಜಗಳಕ್ಕೆ ಬಂದ ವಿನಯ್​ಗೆ ಪ್ರತಾಪ್ ಖಡಕ್ ಎಚ್ಚರಿಕೆ

‘ತಿ* ಮುಚ್ಕೊಂಡು ಇರು..’, ‘ಏನು ಅಲ್ಲಾಡ್ಸಕ್ಕೆ ಆಗಲ್ಲ. ನನಗೆ ಏನು ಮಾತನಾಡಬೇಕು ಅಂತ ಗೊತ್ತು. ನೀನು ಹೆದರಿಲ್ಲ ಅಂದ್ರೆ ** ಹೋಯ್ತು’ ಎಂದೆಲ್ಲ ವಿನಯ್ ಮಾತನಾಡಿದ್ದಾರೆ. ಅವರು ಈ ರೀತಿ ಮಾತನಾಡಿದ್ದನ್ನು ಇಡೀ ಮನೆ ವಿರೋಧಿಸಿದೆ. ‘ವಾದ ಮಾಡಿ. ಆದರೆ, ಕೆಟ್ಟ ಶಬ್ದ ಬಳಕೆ ಮಾಡಬೇಡಿ’ ಎಂದು ವಿನಯ್​ಗೆ ಎಲ್ಲರೂ ತಿದ್ದಲು ಪ್ರಯತ್ನಿಸಿದರು. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್