ಪ್ರೇಮ್​ರ ಚಿತ್ರರಂಗದ ಗೆಳೆಯರು ಯಾರು? ಪಂಚ ಪಾರ್ಟಿ ಗ್ಯಾಂಗ್​ ಎಂದರೇನು?

Weekend With Ramesh: ವೀಕೆಂಡ್ ವಿತ್ ರಮೇಶ್ ಗೆ ಅತಿಥಿಯಾಗಿ ಆಗಮಿಸಿದ್ದ ನಟ ಪ್ರೇಮ್ ಚಿತ್ರರಂಗದಲ್ಲಿ ಬಹಳ ಫೇಮಸ್ ಆಗಿರುವ ಪಂಚ ಪಾರ್ಟಿ ಗ್ಯಾಂಗ್ ಮಾತನಾಡಿದರು. ಆ ಗ್ಯಾಂಗ್​ನ ಸದಸ್ಯರ ಪರಿಚಯ ಮಾಡಿಕೊಟ್ಟರು.

ಪ್ರೇಮ್​ರ ಚಿತ್ರರಂಗದ ಗೆಳೆಯರು ಯಾರು? ಪಂಚ ಪಾರ್ಟಿ ಗ್ಯಾಂಗ್​ ಎಂದರೇನು?
ಪ್ರೇಮ್
Follow us
|

Updated on: May 07, 2023 | 10:53 PM

ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದ ಈ ವಾರದ ಅತಿಥಿಯಾಗಿ ಆಗಮಿಸಿದ ನಟ ಪ್ರೇಮ್ (Prem), ಜೀವನದಲ್ಲಿ ತಾವು ಅನುಭವಿಸಿದ ಸಾಲು-ಸಾಲು ಕಷ್ಟಗಳು, ಆಯಾ ಸಂದರ್ಭಕ್ಕೆ ತಾವು ವರ್ತಿಸಿದ ರೀತಿ, ಗೆಳೆಯರು, ಪತ್ನಿ ಮಾಡಿದ ಸಹಾಯವನ್ನು ಭಾವುಕರಾಗಿ ಶನಿವಾರದ ಎಪಿಸೋಡ್​ನಲ್ಲಿ ವಿವರಿಸಿದರು. ಇನ್ನು ಭಾನುವಾರದ ಎಪಿಸೋಡ್​ನಲ್ಲಿ ಪ್ರೇಮ್ ಮೊದಲ ಸಿನಿಮಾದಲ್ಲಿ ನಾಯಕರಾದ ಬಳಿಕ ಏನೇನಾಯ್ತು ಎಂಬ ಬಗ್ಗೆ ಮಾತನಾಡಿದರು. ಮಾತಿನ ನಡುವೆ ಚಿತ್ರರಂಗದಲ್ಲಿರುವ ತಮ್ಮ ನಾಲ್ಕು ಮಂದಿ ಗೆಳೆಯರ ಬಗ್ಗೆ ಹೇಳಿದರು. ಆ ಗೆಳೆಯರ ಗುಂಪಿಗೆ ಪಂಚ ಪಾರ್ಟಿ ಗ್ಯಾಂಗ್ ಎಂದು ಹೆಸರಂತೆ. ಈ ಗ್ಯಾಂಗ್ ಕನ್ನಡ ಚಿತ್ರೋದ್ಯಮದಲ್ಲಿ ಬಹಳ ಫೇಮಸ್ ಸಹ!

ಈ ಪಂಚ ಪಾರ್ಟಿ ಗ್ಯಾಂಗ್​ನಲ್ಲಿರುವ ಸದಸ್ಯರು, ನಟ ಪ್ರೇಮ್, ನಿರ್ದೇಶಕ ತರುಣ್ ಸುಧೀರ್, ನಟ ಶರಣ್, ಕ್ಯಾಮೆರಾಮ್ಯಾನ್ ಸುಧಾಕರ್ ಹಾಗೂ ಉದ್ಯಮಿ ಕಿರಣ್. ಈ ಐದೂ ಜನ ಬಹಳ ವರ್ಷಗಳಿಂದಲೂ ಪರಸ್ಪರ ಆತ್ಮೀಯರು. ಪ್ರಾಣಾ ಸಿನಿಮಾದಲ್ಲಿ ನಟಿಸಿದ್ದ ಪ್ರೇಮ್, ಆ ಬಳಿಕ ಡ್ಯಾನ್ಸ್ ಕಲಿಯಲು ಇನ್​ಸ್ಟಿಟ್ಯೂಟ್ ಒಂದನ್ನು ಸೇರಿಕೊಂಡರಂತೆ ಆ ಸಂಸ್ಥೆಯಲ್ಲಿ ತರುಣ್ ನೃತ್ಯ ಕಲಿಸುತ್ತಿದ್ದರಂತೆ. ಅದೇ ಸಂಸ್ಥೆಯಲ್ಲಿ ನಟ ಗಣೇಶ್ ಸಹ ಇರುತ್ತಿದ್ದರು. ಆರಂಭದಲ್ಲಿ ತರುಣ್ ಹಾಗೂ ಪ್ರೇಮ್ ಅವರುಗಳಿಗೆ ಸರಿಬರಲಿಲ್ಲವಂತೆ. ಇಬ್ಬರಿಗೂ ಕೋಲ್ಡ್ ವಾರ್ ಶುರುವಾಗಿಬಿಟ್ಟಿತ್ತಂತೆ, ಎಷ್ಟರ ಮಟ್ಟಿಗೆ ಎಂದರೆ ಒಬ್ಬರೇ ಸಿಕ್ಕರೆ ಹೊಡೆದು ಹಾಕಿಬಿಡುವಷ್ಟು ಆದರೆ ಆ ಬಳಿಕ ಇಬ್ಬರೂ ಗೆಳೆಯರಾಗಿದ್ದಾರೆ.

ಕುಡಿತಕ್ಕೊ ಮತ್ತೊಂದಕ್ಕೊ ಈ ಐವರೂ ಒಟ್ಟಿಗೆ ಸೇರುವುದಿಲ್ಲವಂತೆ ಬದಲಿಗೆ ಒಳ್ಳೆಯ ಊಟಕ್ಕೆ ಮಾತಿಗೆ ವಿಶೇಷವಾಗಿ ಹಾಡು ಹಾಡಲು ಈ ಐವರೂ ಗೆಳೆಯರು ಒಟ್ಟಿಗೆ ಸೇರುತ್ತಾರೆ. ಶೋಗೆ ಆಗಮಿಸಿದ್ದ ಶರಣ್, ತರುಣ್ ಅವರುಗಳು ಪ್ರೇಮ್​ರ ಒಳ್ಳೆಯತನವನ್ನು ಬಹುವಾಗಿ ಹೊಗಳಿದರು. ತರುಣ್ ಅಂತೂ, ನನ್ನ ಮೊಬೈಲ್​ನಲ್ಲಿ ಸುಮಾರು 2000 ಕ್ಕೂ ಹೆಚ್ಚು ನಂಬರ್​ಗಳಿವೆ ಆದರೆ ಸ್ಪೀಡ್ ಡಯಲ್​ನಲ್ಲಿರುವ ನಂಬರ್​ಗಳಲ್ಲಿ ಮೊದಲ ಸಂಖ್ಯೆ ಪ್ರೇಮ್​ನದ್ದು, ಯಾವುದೇ ಕಷ್ಟದ ಸಂದರ್ಭ ಬರಲಿ ಪ್ರೇಮ್​ಗೆ ಕರೆ ಮಾಡಬಹುದು ಎಂದರು. ನಟ ಶರಣ್ ಸಹ ಇದೇ ರೀತಿಯ ಮಾತುಗಳನ್ನಾಡಿದರು.

ಪ್ರೇಮ್ ಬಹಳ ದೊಡ್ಡ ಸಂಖ್ಯೆಯ ಗೆಳೆಯರ ಬಳಗವನ್ನು ಹೊಂದಿರುವವರು. ಪ್ರೇಮ್ ಅವರ ಜೀವನದಲ್ಲಿ ಅವರ ಗೆಳೆಯರು ಅವರಿಗೆ ಮಾಡಿರುವ ಸಹಾಯ, ಸ್ವತಃ ಪ್ರೇಮ್ ಅವರ ಗೆಳೆಯರಿಗೆ ಮಾಡಿದ ಸಹಾಯಗಳು ಹೆಚ್ಚಿಗಿವೆ. ಮನೆಯವರ ವಿರೋಧದ ನಡುವೆ ಮದುವೆ ಆದಾಗ ಸಹಾಯ ಮಾಡಿದ್ದು ಗೆಳೆಯರು. ಉದ್ಯಮ ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದಾಗ ನಟನೆಯ ಮೊದಲ ಅವಕಾಶ ಕೊಡಸಿದ್ದು ಗೆಳೆಯರು. ಏನೂ ಇಲ್ಲದ ವ್ಯಕ್ತಿಯ ಫೋಟೊಶೂಟ್ ಮಾಡಿಸಿ ಪ್ರಾಣ ಸಿನಿಮಾಕ್ಕೆ ಆಯ್ಕೆ ಆಗಲು ಸಹಾಯ ಮಾಡಿದ್ದು ಗೆಳೆಯರು. ಹೀಗೆ ಜೀವನದ ಹಲವು ಹಂತಗಳಲ್ಲಿ ಪ್ರೇಮ್​ಗೆ ಅವರ ಗೆಳೆಯರು ಸಹಾಯ ಮಾಡಿದ್ದಾರೆ.

ಇನ್ನು ಪ್ರೇಮ್​ ಸಹ ಗೆಳೆತನಕ್ಕೆ ಅತಿಯಾಗಿ ಬೆಲೆ ಕೊಡುವ ವ್ಯಕ್ತಿಯಂತೆ. ಅವರೇ ಹೇಳಿಕೊಂಡಂತೆ, ನಾನು ಹಣ ಹೋದರೆ ಆಸ್ತಿ ಹೋದರೆ ಹೆಚ್ಚು ಯೋಚಿಸುವುದಿಲ್ಲ ಗೆಳೆಯರು ಹೋಗಿಬಿಟ್ಟರೆ ಬಹಳ ನೋವು ಅನುಭವಿಸುತ್ತೇನೆ ಎಂದರು. ಹತ್ತು ವರ್ಷಗಳ ಕಾಲ ಜೊತೆಗೆ ಇದ್ದ ಗೆಳೆಯರೊಬ್ಬರು ಇತ್ತೀಚೆಗೆ ಹೃದಯಾಘಾತದಿಂದ ತೀರಿಕೊಂಡ ವಿಷಯ ಹೇಳಿಕೊಂಡು ಕಣ್ಣೀರು ಹಾಕಿದರು ನಟ ಪ್ರೇಮ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ