Thalapathy Vijay: ದಳಪತಿ ವಿಜಯ್​ ಕುಟುಂಬದಲ್ಲಿ ಕಲಹ? ‘ವಾರಿಸು’ ರಿಲೀಸ್​ ಸಮಯದಲ್ಲಿ ಹಬ್ಬಿದೆ ಡಿವೋರ್ಸ್​ ಸುದ್ದಿ

Thalapathy Vijay Divorce: ಹಿಂದೂ ಮತ್ತು ಕ್ರಿಶ್ಚಿಯನ್​ ಸಂಪ್ರದಾಯದ ಪ್ರಕಾರ ದಳಪತಿ ವಿಜಯ್-ಸಂಗೀತಾ ಮದುವೆ ನೆರವೇರಿತ್ತು. ಈ ಜೋಡಿಗೆ ಒಬ್ಬರು ಮಕ್ಕಳು ಇದ್ದಾರೆ. ಡಿವೋರ್ಸ್​ ವದಂತಿ ಹಬ್ಬಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Thalapathy Vijay: ದಳಪತಿ ವಿಜಯ್​ ಕುಟುಂಬದಲ್ಲಿ ಕಲಹ? ‘ವಾರಿಸು’ ರಿಲೀಸ್​ ಸಮಯದಲ್ಲಿ ಹಬ್ಬಿದೆ ಡಿವೋರ್ಸ್​ ಸುದ್ದಿ
ದಳಪತಿ ವಿಜಯ್, ಸಂಗೀತಾ
Follow us
| Updated By: ಮದನ್​ ಕುಮಾರ್​

Updated on:Jan 06, 2023 | 2:36 PM

ಖ್ಯಾತ ನಟ ದಳಪತಿ ವಿಜಯ್​ ಅವರು ‘ವಾರಿಸು’ ಸಿನಿಮಾದ (Varisu Movie) ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರದ ಗೆಲುವು ಅವರ ಪಾಲಿಗೆ ತುಂಬ ಮುಖ್ಯ ಆಗಲಿದೆ. ಜನವರಿ 12ರಂದು ಈ ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ. ಅದರ ನಡುವೆ ಒಂದು ಬ್ಯಾಡ್​ ನ್ಯೂ​ಸ್​ ಹಬ್ಬಿದೆ. ದಳಪತಿ ವಿಜಯ್​ (Thalapathy Vijay) ಅವರ ಸಂಸಾರದಲ್ಲಿ ಕಲಹ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಪತ್ನಿ ಸಂಗೀತಾ ಜೊತೆಗಿನ 22 ವರ್ಷಗಳ ದಾಂಪತ್ಯ ಜೀವನಕ್ಕೆ ದಳಪತಿ ವಿಜಯ್​ ಅಂತ್ಯ ಹಾಡಲಿದ್ದಾರೆ ಎಂದೆಲ್ಲ ಸುದ್ದಿ ಹಬ್ಬಿದೆ. ಈ ರೀತಿ ಗುಸುಗುಸು ಹರಡಲು ಒಂದೆರಡು ಕಾರಣಗಳಿವೆ. ಡಿವೋರ್ಸ್​ ವದಂತಿ (Thalapathy Vijay Divorce) ಎಂದರೆ ಕೊಂಚ ಗಂಭೀರವಾದ ವಿಚಾರವೇ ಸರಿ. ಈ ಬಗ್ಗೆ ವಿಜಯ್ ಮತ್ತು ಸಂಗೀತಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ.

ದಳಪತಿ ವಿಜಯ್​ ಡಿವೋರ್ಸ್​ ವದಂತಿಗೆ ಕಾರಣ ಏನು?

ವಿಜಯ್​ ಅವರು ತಮ್ಮ ಪತ್ನಿ ಸಂಗೀತಾ ಅವರಿಂದ ದೂರ ಇದ್ದಾರಾ ಎಂಬಂತಹ ಅನುಮಾನ ಹಲವರಿಗೆ ಮೂಡಿದೆ. ಅದಕ್ಕೆ ಕಾರಣ ಇಷ್ಟೇ.. ಇತ್ತೀಚಿನ ದಿನಗಳಲ್ಲಿ ಈ ಜೋಡಿ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ನಿರ್ದೇಶಕ ಅಟ್ಲಿ ಅವರ ಪತ್ನಿಯ ಸೀಮಂತ ಕಾರ್ಯಕ್ರಮದಲ್ಲಿ ವಿಜಯ್​ ಪತ್ನಿ ಸಂಗೀತಾ ಕಾಣಿಸಿಕೊಳ್ಳಲಿಲ್ಲ. ಅಲ್ಲದೇ ‘ವಾರಿಸು’ ಚಿತ್ರದ ಟ್ರೇಲರ್​ ಬಿಡುಗಡೆ ಸಂದರ್ಭದಲ್ಲೂ ಅವರು ಗೈರಾಗಿದ್ದರು. ಹಾಗಾಗಿ ಡಿವೋರ್ಸ್​ ವದಂತಿ ಹಬ್ಬಿದೆ.

ಇದನ್ನೂ ಓದಿ: Thalapathy Vijay: ‘ವಾರಿಸು’ ಟ್ರೇಲರ್‌ಗೆ ಸಖತ್ ಪ್ರತಿಕ್ರಿಯೆ; ಗೆಲುವಿನ ನಿರೀಕ್ಷೆಯಲ್ಲಿ ದಳಪತಿ ವಿಜಯ್

ಇದನ್ನೂ ಓದಿ
Image
Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​
Image
Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

ಇಷ್ಟೆಲ್ಲ ಅಂತೆ-ಕಂತೆಗಳು ಹಬ್ಬಿದ್ದರೂ ಕೂಡ ಅಸಲಿ ವಿಷಯ ಬೇರೆಯೇ ಇದೆ ಎನ್ನುತ್ತಿವೆ ಕೆಲವು ಮೂಲಗಳು. ಪ್ರಸ್ತುತ ಸಂಗೀತಾ ಅವರು ಮಕ್ಕಳ ಜೊತೆ ಫಾರಿನ್​ ಟ್ರಿಪ್​ ತೆರಳಿದ್ದಾರೆ. ಆ ಕಾರಣದಿಂದ ಅವರು ಭಾರತದಲ್ಲಿ ಕೆಲವು ಸಮಾರಂಭಗಳಿಗೆ ಹಾಜರಿ ಹಾಕಲು ಸಾಧ್ಯವಾಗಿಲ್ಲ. ಅದನ್ನೇ ಕಾರಣವಾಗಿ ಇಟ್ಟುಕೊಂಡು ಕೆಲವರು ಗಾಸಿಪ್​ ಹಬ್ಬಿಸಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ.

ಇದನ್ನೂ ಓದಿ: Varisu Trailer: ಧೂಳೆಬ್ಬಿಸುತ್ತಿದೆ ‘ವಾರಿಸು’ ಸಿನಿಮಾ ಟ್ರೇಲರ್​; ಫ್ಯಾಮಿಲಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟ ದಳಪತಿ ವಿಜಯ್​

ಸಂಗೀತಾ ಮತ್ತು ದಳಪತಿ ವಿಜಯ್​ ಮದುವೆ ಆಗಿದ್ದು 1999ರ ಆಗಸ್ಟ್​ 25ರಂದು. ಇವರದ್ದು ಲವ್​ ಮ್ಯಾರೇಜ್​. ವಿಜಯ್​ ಅವರ ನಟನೆಗೆ ಸಂಗೀತಾ ಫ್ಯಾನ್​ ಆಗಿದ್ದರು. ಸಿನಿಮಾವೊಂದರ ಶೂಟಿಂಗ್​ ವೇಳೆ ವಿಜಯ್ ಅವರನ್ನು ಸಂಗೀತಾ ಭೇಟಿಯಾಗಿ ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಆ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಪ್ರೀತಿ ಹುಟ್ಟಿತು. ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಮದುವೆ ನೆರವೇರಿತ್ತು.

ಹಿಂದೂ ಮತ್ತು ಕ್ರಿಶ್ಚಿಯನ್​ ಸಂಪ್ರದಾಯದ ಪ್ರಕಾರ ವಿಜಯ್​ ಮತ್ತು ಸಂಗೀತಾ ಮದುವೆ ನೆರವೇರಿತ್ತು. ಈ ಜೋಡಿಗೆ ಒಬ್ಬರು ಮಕ್ಕಳು ಇದ್ದಾರೆ. ಡಿವೋರ್ಸ್​ ವದಂತಿ ಹಬ್ಬಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:36 pm, Fri, 6 January 23

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ