Jr NTR: ರಸ್ತೆ ಅಪಘಾತದಲ್ಲಿ ಜ್ಯೂ. ಎನ್​ಟಿಆರ್​ ಅಭಿಮಾನಿ ನಿಧನ; ಸ್ಟಾರ್​ ನಟನ ಪ್ರಾರ್ಥನೆಯೂ ಫಲಿಸಲಿಲ್ಲ

| Updated By: ಮದನ್​ ಕುಮಾರ್​

Updated on: Jul 06, 2022 | 8:13 AM

Jr NTR Fan Death: ಜನಾರ್ಧನ್​ ಅವರ ದುಸ್ಥಿತಿ ಬಗ್ಗೆ ತಿಳಿದ ನಂತರ ಜ್ಯೂ. ಎನ್​ಟಿಆರ್​ ಅವರು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ತಮ್ಮ ಅಭಿಮಾನಿ ಬೇಗ ಗುಣಮುಖನಾಗಲಿ ಎಂದು ಪ್ರಾರ್ಥಿಸಿದ್ದರು.

Jr NTR: ರಸ್ತೆ ಅಪಘಾತದಲ್ಲಿ ಜ್ಯೂ. ಎನ್​ಟಿಆರ್​ ಅಭಿಮಾನಿ ನಿಧನ; ಸ್ಟಾರ್​ ನಟನ ಪ್ರಾರ್ಥನೆಯೂ ಫಲಿಸಲಿಲ್ಲ
ಜನಾರ್ಧನ್​, ಜ್ಯೂ. ಎನ್​ಟಿಆರ್​
Follow us on

ನಟ ಜ್ಯೂ. ಎನ್​ಟಿಆರ್​ (Jr NTR) ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರಿಗಾಗಿ ಪ್ರಾಣ ಕೊಡಲು ಬೇಕಿದ್ದರೂ ಸಿದ್ಧ ಎಂಬಂತಹ ಅಪ್ಪಟ ಫ್ಯಾನ್ಸ್​ ಕೂಡ ಇದ್ದಾರೆ. ಹಾಗಾಗಿ ತಮ್ಮ ಅಭಿಮಾನಿಗಳಿಗೆ ಜ್ಯೂ. ಎನ್​ಟಿಆರ್​ ಅವರು ತುಂಬ ಗೌರವ ನೀಡುತ್ತಾರೆ. ಕೆಲವೇ ದಿನಗಳ ಹಿಂದೆ ಜನಾರ್ಧನ್​ ಎಂಬ ಅಭಿಮಾನಿಗೆ ರಸ್ತೆ ಅಪಘಾತ (Road Accident) ಆಗಿತ್ತು. ಜನಾರ್ಧನ್​ ಕುಟುಂಬದವರ ಜೊತೆ ಜ್ಯೂ. ಎನ್​ಟಿಆರ್​ ಅವರು ಫೋನ್​ ಮೂಲಕ ಮಾತನಾಡಿದ್ದರು. ದುಃಖದ ಸಂಗತಿ ಏನೆಂದರೆ ಆ ಅಭಿಮಾನಿ (Jr NTR Fan) ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರು ಎಳೆದಿದ್ದಾರೆ. ಇದರಿಂದ ಜ್ಯೂ. ಎನ್​ಟಿಆರ್​ ಅಭಿಮಾನಿ ಬಳಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ.

ತಿರುಪತಿಯಲ್ಲಿ ಜನಾರ್ಧನ್​ ಅವರಿಗೆ ರಸ್ತೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕೋಮಾದಲ್ಲಿದ್ದ ಅವರು ಜ್ಯೂ. ಎನ್​ಟಿಆರ್​ ಹೆಸರು ಕೇಳಿದಾಗ ಸ್ವಲ್ಪ ಪ್ರಮಾಣದಲ್ಲಿ ಸ್ಪಂದಿಸುತ್ತಿದ್ದರು ಎಂದು ಅಭಿಮಾನಿಗಳ ಸೋಶಿಯಲ್​ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗಿತ್ತು. ಆದಷ್ಟು ಬೇಗ ಜನಾರ್ಧನ್​ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದರು.

ಇದನ್ನೂ ಓದಿ
ಖ್ಯಾತ ಹಾಸ್ಯ ನಟ ನರಸಿಂಹ ರಾಜು ಹಿರಿಯ ಪುತ್ರಿ ಧರ್ಮವತಿ ಇನ್ನಿಲ್ಲ; ಹೃದಯಾಘಾತದಿಂದ ನಿಧನ
ಯೋಗರಾಜ್ ಭಟ್ ಮಾವ, ಸ್ಯಾಂಡಲ್​ವುಡ್ ಕಲಾವಿದ ಸತ್ಯ ನಾರಾಯಣ್ ಹೃದಯಾಘಾತದಿಂದ ನಿಧನ
KK Death: ಸಾವಿಗಿಂತ ಕೆಲವೇ ನಿಮಿಷಗಳ ಮುನ್ನ ವೇದಿಕೆ ತೊರೆದಿದ್ದ ಗಾಯಕ ಕೆಕೆ; ಇಲ್ಲಿದೆ ವೈರಲ್​ ವಿಡಿಯೋ
Edava Basheer Death: ಹಾಡುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಆರ್ಕೆಸ್ಟ್ರಾ ಗಾಯಕ ಎಡವ ಬಶೀರ್​ ನಿಧನ; ವಿಡಿಯೋ ವೈರಲ್​

ಜನಾರ್ಧನ್​ ಅವರ ದುಸ್ಥಿತಿ ಬಗ್ಗೆ ತಿಳಿದ ನಂತರ ಜ್ಯೂ. ಎನ್​ಟಿಆರ್​ ಅವರು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ನೀವು ಧೈರ್ಯವಾಗಿ ಇರಬೇಕು ಎಂದು ಅಭಿಮಾನಿಯ ತಾಯಿಗೆ ಅವರು ಸಮಾಧಾನದ ಮಾತುಗಳನ್ನು ಆಡಿದ್ದರು. ‘ನಿಮ್ಮ ಮಗನಿಗಾಗಿ ನಾವೆಲ್ಲರೂ ಪ್ರಾರ್ಥಿಸುತ್ತೇವೆ’ ಎಂದು ಅವರು ಹೇಳಿದ್ದರು. ಅಭಿಮಾನಿಯ ಕುಟುಂಬದವರ ಜೊತೆ ಜ್ಯೂ. ಎನ್​ಟಿಆರ್​ ಮಾತನಾಡಿದ್ದ ಫೋನ್​ ಕಾಲ್​ ವಿಡಿಯೋ ವೈರಲ್​ ಆಗಿತ್ತು.

ಜನಾರ್ಧನ್​ ಚಿಕಿತ್ಸೆಗೆ ಜ್ಯೂ. ಎನ್​ಟಿಆರ್​ ಸಹಾಯ ಮಾಡಿದ್ದರು. ಗುಣಮುಖರಾದ ಬಳಿಕ ಖಂಡಿತವಾಗಿಯೂ ಭೇಟಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಜವರಾಯ ಕರುಣೆ ತೋರಿಸಿಲ್ಲ. ಕೊನೆಗೂ ಜನಾರ್ಧನ್​ ಬದುಕುಳಿಯಲಿಲ್ಲ. ಎನ್​ಟಿಆರ್​ ಎಂದು ಕೈ ಮೇಲೆ ಜನಾರ್ಧನ್​ ಟ್ಯಾಟೂ ಹಾಕಿಸಿಕೊಂಡಿದ್ದ ಫೋಟೋ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ರೆಸ್ಟೋರೆಂಟ್ ಆರಂಭಿಸಲಿದ್ದಾರೆ ರಾಮ್​ ಚರಣ್​-ಜ್ಯೂ.ಎನ್​ಟಿಆರ್​? ಕೇಳಿಬಂತು ಹೊಸ ಗುಸುಗುಸು

Alia Bhatt: ‘ದಯವಿಟ್ಟು ನಿಮ್ಮ ಅಭಿಮಾನಿಗಳನ್ನು ನನಗೆ ಕೊಟ್ಟುಬಿಡಿ’; ಜ್ಯೂ ಎನ್​ಟಿಆರ್​ ಬಳಿ ಆಲಿಯಾ ವಿಶೇಷ ಬೇಡಿಕೆ