AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಭಾರತದ ನಟನಾಗಿ ವಿಜಯ್​ ದೇವರಕೊಂಡ ಲೈಫ್​ನಲ್ಲಿ ಹೊಸ ಮೈಲಿಗಲ್ಲು

Dabboo Ratnani's Calendar 2021: ಡಬ್ಬೂ ರತ್ನಾನಿ ಕ್ಯಾಲೆಂಡರ್​ನಲ್ಲಿ ಇಲ್ಲಿವರೆಗೆ ಕೇವಲ ಬಾಲಿವುಡ್​ ಸ್ಟಾರ್ಸ್​ಗಳಿಗೆ ಮಾತ್ರ ಮನ್ನಣೆ ಸಿಗುತ್ತಿತ್ತು. ಅಭಿಷೇಕ್​ ಬಚ್ಚನ್​, ಕತ್ರಿನಾ ಕೈಫ್​, ವಿಕ್ಕಿ ಕೌಶಲ್​, ಸನ್ನಿ ಲಿಯೋನ್​ ಸೇರಿ ಹಿಂದಿ ಚಿತ್ರರಂಗದ ಸಾಕಷ್ಟು ಕಲಾವಿದರು ಇದರ ಭಾಗವಾಗಿದ್ದಾರೆ.

ದಕ್ಷಿಣ ಭಾರತದ ನಟನಾಗಿ ವಿಜಯ್​ ದೇವರಕೊಂಡ ಲೈಫ್​ನಲ್ಲಿ ಹೊಸ ಮೈಲಿಗಲ್ಲು
ವಿಜಯ್ ದೇವರಕೊಂಡ
ರಾಜೇಶ್ ದುಗ್ಗುಮನೆ
|

Updated on: Jun 14, 2021 | 8:20 PM

Share

ದಕ್ಷಿಣ ಭಾರತ ಚಿತ್ರರಂಗ ಈಗ ಬಾಲಿವುಡ್​ಗೆ ಸರಿಸಾಟಿಯಾಗಿ ನಿಂತಿದೆ. ದೊಡ್ಡ ಬಜೆಟ್​ಗಳ ಸಿನಿಮಾಗಳ ಜತೆಗೆ ಮೇಕಿಂಗ್​ನಲ್ಲೂ ಇಡೀ ಭಾರತದ ಗಮನ ಸೆಳೆಯುವ ಪ್ರಯತ್ನವನ್ನು ಮಾಡುವಲ್ಲಿ ದಕ್ಷಿಣದ ಚಿತ್ರರಂಗ ಯಶಸ್ವಿಯಾಗಿದೆ. ‘ಬಾಹುಬಲಿ’, ‘ಕೆಜಿಎಫ್’ ಸರಣಿಯ ಚಿತ್ರಗಳು ಇದಕ್ಕೆ ಜೀವಂತ ಉದಾಹರಣೆ. ಹೀಗಾಗಿ, ದಕ್ಷಿಣ ಭಾರತದ ನಟರಿಗೆ ಹೆಚ್ಚು ಮನ್ನಣೆ ಸಿಗುತ್ತಿದೆ. ಈಗ ಇದೇ ಮೊದಲ ಬಾರಿಗೆ ಖ್ಯಾತ ಬಾಲಿವುಡ್​ ಫೋಟೋಗ್ರಾಫರ್​ ಡಬ್ಬೂ ರತ್ನಾನಿ ಕ್ಯಾಲೆಂಡರ್​ನ ಭಾಗವಾಗೋಕೆ ದಕ್ಷಿಣ ಭಾರತದ ನಟನಿಗೆ ಅವಕಾಶ ಸಿಕ್ಕಿದೆ.

ಹೌದು, ಡಬ್ಬೂ ರತ್ನಾನಿ ಕ್ಯಾಲೆಂಡರ್​ನಲ್ಲಿ ಇಲ್ಲಿವರೆಗೆ ಕೇವಲ ಬಾಲಿವುಡ್​ ಸ್ಟಾರ್ಸ್​ಗಳಿಗೆ ಮಾತ್ರ ಮನ್ನಣೆ ಸಿಗುತ್ತಿತ್ತು. ಅಭಿಷೇಕ್​ ಬಚ್ಚನ್​, ಕತ್ರಿನಾ ಕೈಫ್​, ವಿಕ್ಕಿ ಕೌಶಲ್​, ಸನ್ನಿ ಲಿಯೋನ್​ ಸೇರಿ ಹಿಂದಿ ಚಿತ್ರರಂಗದ ಸಾಕಷ್ಟು ಕಲಾವಿದರು ಇದರ ಭಾಗವಾಗಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ದಕ್ಷಿಣದ ಸ್ಟಾರ್​ಗೆ ಇದರಲ್ಲಿ ಪಾಲ್ಗೊಳ್ಳೋಕೆ ಅವಕಾಶ ಸಿಕ್ಕಿದೆ. ವಿಜಯ್​ ದೇವರಕೊಂಡ ಈಗ ‘ಡಬ್ಬೂ ರತ್ನಾನಿ 2021’ ಕ್ಯಾಲೆಂಡರ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ದುಬಾರಿ ಬೆಲೆಯ ಟ್ರಂಫ್ ಕಂಪೆನಿಯ​ ಬೈಕ್​ ಮೇಲೆ ವಿಜಯ್ ಕುಳಿತಿದ್ದಾರೆ. ಬ್ಲ್ಯಾಕ್​-ಆ್ಯಂಡ್​ ವೈಟ್​ನಲ್ಲಿ ಈ ಚಿತ್ರ ಮೂಡಿ ಬಂದಿದೆ. ಈ ಫೋಟೋದಲ್ಲಿ ಸಖತ್​ ಹಾಟ್​ ಆಗಿ ಅವರು ಕಾಣಿಸಿಕೊಂಡಿದ್ದಾರೆ. ವಿಜಯ್​ ಅವರ ಕೈನಲ್ಲಿರುವ ಮಸಲ್​ ಕೂಡ ಅದ್ಭುತವಾಗಿ ಕಾಣಿಸಿದೆ.

‘ಲೈಗರ್’​ ಚಿತ್ರದಲ್ಲಿ ವಿಜಯ್​ ನಟಿಸುತ್ತಿದ್ದಾರೆ. ಅನನ್ಯಾ ಪಾಂಡೆ ಚಿತ್ರದ ನಾಯಕಿ. ಪುರಿ ಜಗನ್ನಾಥ್​ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್​ 9ರಂದು ಸಿನಿಮಾ ತೆರೆಗೆ ಬರುತ್ತಿದೆ. ಸಿಂಹ ಹಾಗೂ ಹುಲಿಯಿಂದ ಹುಟ್ಟಿದ ತಳಿಗೆ LIGER ಎಂದು ಕರೆಯಲಾಗುತ್ತದೆ. ಲಾಕ್​ಡೌನ್​ಗೂ ಮೊದಲು ‘ಲೈಗರ್’​ ಚಿತ್ರದ ಶೂಟಿಂಗ್​ಗಾಗಿ ವಿಜಯ್​ ಸಾಕಷ್ಟು ಬಾರಿ ಮುಂಬೈಗೆ ತೆರಳಿದ್ದಾರೆ. ಈ ವೇಳೆ ಅವರು ರಶ್ಮಿಕಾ ಜತೆ ಕಾಣಿಸಿಕೊಂಡಿದ್ದ ಫೋಟೋಗಳು ವೈರಲ್​ ಆಗಿದ್ದವು. ಈಗ ಲಾಕ್​ಡೌನ್​ ಪೂರ್ಣಗೊಂಡಿದ್ದರಿಂದ ವಿಜಯ್​ ಮತ್ತೆ ಮುಂಬೈಗೆ ತೆರಳಿದ್ದಾರೆ.

ಇದನ್ನೂ ಓದಿ: Vijay Devarakonda: ಮನೆಯಲ್ಲೇ ಕುಳಿತು ಓಟಿಟಿಗಾಗಿ ಮಾಸ್ಟರ್​ ಪ್ಲ್ಯಾನ್​ ಮಾಡಿದ್ರಾ ವಿಜಯ್​ ದೇವರಕೊಂಡ?

ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್​ ಮಗು ಯಥರ್ವ್​ ಯಶ್​ ಮುದ್ದಾದ ನಗು; ಇಲ್ಲಿದೆ ವಿಡಿಯೋ

ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ