AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vinod Gobbaragala: ಒಂಬತ್ತನೇ ವಾರಕ್ಕೆ ಆಟ ಮುಗಿಸಿ ಬಿಗ್​ ಬಾಸ್ ಮನೆಯಿಂದ​ ಹೊರ ನಡೆದ ವಿನೋದ್​ ಗೊಬ್ಬರಗಾಲ 

ಒಂಬತ್ತನೇ ವಾರಕ್ಕೆ ಆಟ ಮುಗಿಸಿ ಬಿಗ್​ ಬಾಸ್ ಮನೆಯಿಂದ​ ಈ ವಾರ ವಿನೋದ್​ ಗೊಬ್ಬರಗಾಲ ಅವರು ಹೊರ ನಡೆದಿದ್ದಾರೆ.

Vinod Gobbaragala: ಒಂಬತ್ತನೇ ವಾರಕ್ಕೆ ಆಟ ಮುಗಿಸಿ ಬಿಗ್​ ಬಾಸ್ ಮನೆಯಿಂದ​ ಹೊರ ನಡೆದ ವಿನೋದ್​ ಗೊಬ್ಬರಗಾಲ 
vinod gobbaragala
TV9 Web
| Edited By: |

Updated on:Nov 27, 2022 | 10:32 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (BBK 9) ಒಂಬತ್ತನೇ ವಾರ ಮುಗಿಸಿ ಮುನ್ನುಗ್ಗುತ್ತಿದೆ. ದೊಡ್ಮನೆಲಿ ದಿನದಿಂದ ದಿನಕ್ಕೆ ಟ್ವಿಸ್ಟ್​​ಗಳು ಎದುರಾಗುತ್ತಿವೆ. ಇದು ನೋಡುಗರಲ್ಲಿ ಮತ್ತಷ್ಟು ಕುತೂಹಲ ಉಂಟುಮಾಡುತ್ತಿದೆ. ಬಿಗ್​ ಬಾಸ್​ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಲ್ಲಿ ಕಾಂಪಿಟೇಷನ್ ಕಿಚ್ಚು ಹೆಚ್ಚಾಗುತ್ತಿದೆ. ಈ ವಾರವಂತೂ ಬಿಗ್​ ಬಾಸ್​ ಮನೆಯ ಎಲ್ಲಾ ಸ್ಪರ್ಧಿಗಳು ನಾಮಿನೇಟ್​ ಆಗಿದ್ದರು. ಜೊತೆಗೆ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ದೊಡ್ಮನೆ ಮಂದಿ ಯಾರು ಕೂಡ ಉತ್ತಮ ಆಟ ಪ್ರದರ್ಶಿಸದ ಕಾರಣ ಈ ವಾರ ಮನೆಗೆ ಕ್ಯಾಪ್ಟನ್ ಕೂಡ ಇರಲಿಲ್ಲ. ಹಾಗಾಗಿ ಬಿಗ್​ ಬಾಸ್​ ಮಂದಿ ತಮ್ಮನ್ನು ತಾವು ಸೇಫ್​ ಮಾಡಿಕೊಳ್ಳಲು ಎಲ್ಲ ರೀತಿಯಿಂದಲೂ ಕಸರತ್ತು ಮಾಡಿದ್ದರು.

ಈ ವಾರ ಬಿಗ್​ ಬಾಸ್​ ‘ಅರಣ್ಯಕಾಂಡ’ ಎಂಬ ವಿಶೇಷ ಟಾಸ್ಕ್ ನೀಡಿದ್ದರು. ಇದರ ಅನುಸಾರ ಮನೆಮಂದಿಯಲ್ಲ ವನವಾಸ ಅನುಭವಿಸಬೇಕಿತ್ತು. ಆಟವಾಡಿ ತಮಗೆ ಬೇಕಾದ ಸೌಕರ್ಯಗಳನ್ನು ಪಡೆದುಕೊಂಡು ಬದುಕಬೇಕಿತ್ತು. ಆದರೆ ಕೆಲವು ಸ್ಪರ್ಧಿಗಳು ಆಟದ ನಿಯಮ ಸರಿಯಾಗಿ ತಿಳಿದುಕೊಳ್ಳದೆ ತಪ್ಪಾಗಿ ಆಡಿದ್ದರು. ಇದರಿಂದ ತಮಗೆ ಸಿಗಬೇಕಾದ ಸೌಕರ್ಯವನ್ನು ಕಳೆದುಕೊಂಡಿದ್ದರು. ಈ ಟಾಸ್ಕ್​ನ ವಿಚಾರವಾಗಿ ನಟ ಕಿಚ್ಚ ಸುದೀಪ್​ ಅವರು ಶನಿವಾರ ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್​ನಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಬಿಗ್​ ಬಾಸ್​ ಮನೆಯಲ್ಲಿ ಈ ವಾರ ಪ್ರತಿಯೊಬ್ಬರು ನಾಮಿನೇಟ್ ಆಗಿದ್ದರು. ಸ್ಪರ್ಧಿಗಳಲ್ಲಿ ಕೆಲವರು ಟಾಸ್ಕ್​ನಲ್ಲಿ ಉತ್ತಮ  ಪ್ರದರ್ಶನ ತೋರಿದರೆ, ಮತ್ತೆ ಕೆಲವರು ಸಾಧಾರಣವಾಗಿ ತಮ್ಮ ಆಟವನ್ನು ಪ್ರದರ್ಶಿಸಿದ್ದಾರೆ. ಹಾಗಾಗಿ ಈ ವಾರ ಮನೆಯಿಂದ ಯಾರು ಹೊರ ನಡೆಯುತ್ತಾರೆ ಎಂಬ ಕುತೂಹಲವು ಸಹಜವಾಗಿ ನೋಡುಗರಲ್ಲಿ ಮೂಡಿತ್ತು.

ದೊಡ್ಮನೆಯಿಂದ ಈ ವಾರ ವಿನೋದ್​ ಗೊಬ್ಬರಗಾಲ ಅವರು ಹೊರ ನಡೆದಿದ್ದಾರೆ. ‘ಅರಣ್ಯಕಾಂಡ’ ಟಾಸ್ಕ್​ನಲ್ಲಿ ಆರ್ಯವರ್ಧನ ಗುರೂಜೀ ಮಾಡಿರುವ ತಪ್ಪನ್ನೇ ಇವರು ಮಾಡಿದ್ದರು. ‘ಸಮಯಕ್ಕೆ ಸವಾಲು’ ಟಾಸ್ಕ್​ನಲ್ಲಿಯೂ ಕೂಡ ಅವರು ಸಾಕಷ್ಟು ಬಾರಿ ಫೌಲ್​ ಮಾಡಿದ್ದರು. ಜೊತೆಗೆ ಇಷ್ಟು ವಾರದಲ್ಲಿ ಈ ವಾರವೇ ತುಂಬಾ ಕನ್ಫ್ಯೂಶನ್ ಆಗಿದೆ ಎಂದು ಅವರೆ ಹೇಳಿದ್ದಾರೆ. ಈ ಎಲ್ಲ ವಿಚಾರಗಳು ವಿನೋದ್​ ಗೊಬ್ಬರಗಾಲ ಅವರು ಬಿಗ್​ ಬಾಸ್​ ಕನ್ನಡ ಸೀಸನ್​ 9 ಮನೆಯಿಂದ ಹೊರ ನಡೆಯಲು ಕಾರಣವಾಗಿರಬಹುದಾಗಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:13 pm, Sun, 27 November 22

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!