Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾನಿಶ್ ಸೇಠ್ ಮಾತಿಗೆ ಸಿಟ್ಟಾಗಿ ಎದ್ದೇ ಹೋದ ವಿರಾಟ್ ಕೊಹ್ಲಿ

ದಾನಿಶ್ ಸೇಠ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಅವರು ಸಿಟ್ಟಾಗಿ ಎದ್ದೇ ಹೋದ ಘಟನೆ ಚರ್ಚೆಯಾಗಿದೆ. ಸಂದರ್ಶನದಲ್ಲಿ ಆಧ್ಯಾತ್ಮಿಕತೆ ಕುರಿತು ಚರ್ಚೆ ನಡೆದಿದ್ದು, ಕೊಹ್ಲಿ ಅವರು ಧ್ಯಾನದ ಸಲಹೆಗಳನ್ನು ನೀಡಿದ್ದಾರೆ. ದಾನಿಶ್ ಅವರು ಕೊಹ್ಲಿಯನ್ನು ತಬ್ಬಿಕೊಳ್ಳಲು ಯತ್ನಿಸಿದಾಗ ಅವರಿಗೆ ಸಿಟ್ಟು ಬಂದಿದೆ.

ದಾನಿಶ್ ಸೇಠ್ ಮಾತಿಗೆ ಸಿಟ್ಟಾಗಿ ಎದ್ದೇ ಹೋದ ವಿರಾಟ್ ಕೊಹ್ಲಿ
ವಿರಾಟ್, ದಾನಿಶ್
Follow us
ರಾಜೇಶ್ ದುಗ್ಗುಮನೆ
|

Updated on: Apr 15, 2025 | 1:07 PM

ನಟ ದಾನಿಶ್ ಸೇಠ್ (Danish Sait) ಅವರು ಐಪಿಎಲ್ ಸಂದರ್ಭದಲ್ಲಿ ಆರ್​ಸಿಬಿ ಇನ್​ಸೈಡರ್ ಆಗಿ ಗಮನ ಸೆಳೆಯುತ್ತಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರ ಜೊತೆ ಸಂದರ್ಶನಗಳನ್ನು ಮಾಡಿ ಹಂಚಿಕೊಳ್ಳುತ್ತಾರೆ. ಪ್ರತಿ ಸೀಸನ್​ನಲ್ಲಿ ವಿರಾಟ್ ಕೊಹ್ಲಿ ಸಂದರ್ಶನ  ಮಾಡುತ್ತಾರೆ. ಈ ಬಾರಿ ಆ ಸಂದರ್ಶನ ಇನ್ನೂ ಬಂದಿರಲಿಲ್ಲ. ಈಗ ದಾನಿಶ್ ಸೇಠ್ ಅವರು ವಿರಾಟ್​ನ ಸಂದರ್ಶಿಸಿದ್ದಾರೆ. ಈ ವೇಳೆ ವಿರಾಟ್ ಸಿಟ್ಟಾಗಿ ಎದ್ದೇ ಹೋಗಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಆ ಬಗ್ಗೆ ಇಲ್ಲಿದೆ ವಿವರ.

ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಆಧ್ಯಾತ್ಮದ ಕಡೆ ವಾಲಿದ್ದಾರೆ. ಪ್ರೇಮಾನಂದ ಗೋವಿಂದ ಶರಣ್ ಮಹಾರಾಜ್ ಹಾಗೂ ಬಾಬಾ ನೀಮ್ ಕರೋಲಿ ಮಂದಿರಕ್ಕೆ ಪತ್ನಿ ಜೊತೆ ತೆರಳಿ ಧ್ಯಾನ ಮಾಡಿದ್ದೂ ಇದೆ. ಈ ಕಾರಣಕ್ಕೆ ಇದೇ ಥೀಮ್​ನಲ್ಲಿ ಸಂದರ್ಶನವನ್ನು ಆಯೋಜನೆ ಮಾಡಲಾಗಿತ್ತು ಅನ್ನೋದು ವಿಶೇಷ. ಸಂದರ್ಶನ ಉದ್ದಕ್ಕೂ ಆಧ್ಯತ್ಮದ ಬಗ್ಗೆ  ಚರ್ಚೆಗಳು ನಡೆದಿವೆ. ಈ ವೇಳೆ ವಿರಾಟ್ ಕೆಲವು ಟಿಪ್ಸ್ ಕೊಟ್ಟಿದ್ದಾರೆ.

‘ನಿಮಗೆ ಕಂಫರ್ಟ್ ಆಗುವ ಆಸನದಲ್ಲಿ ಕುಳಿತುಕೊಳ್ಳಿ. ದೀರ್ಘವಾಗಿ ಮೂಗಿನ ಮೂಲಕ ಉಸಿರು ತೆಗೆದುಕೊಳ್ಳಿ, ಬಾಯಿ ಮೂಲಕ ಉಸಿರನ್ನು ಬಿಡಿ. ಸಮುದ್ರದ ಸೌಂಡ್​ನ ಊಹಿಸಿಕೊಳ್ಳಿ’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ರೀತಿಯ ಅನೇಕ ಟಿಪ್ಸ್​ಗಳನ್ನು ಅವರು ನೀಡಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿಯನ್ನು ದಾನಿಶ್ ತಬ್ಬಿಕೊಂಡಿದ್ದಾರೆ. ಇದರಿಂದ ಕೊಹ್ಲಿ ಸಿಟ್ಟಾಗಿದ್ದಾರೆ.

ಇದನ್ನೂ ಓದಿ
Image
ಮಗನನ್ನು ಫ್ಯಾಷನ್ ಶೋಗೆ ಕರೆದುಕೊಂಡು ಹೋಗಿ ಟ್ರೋಲ್ ಆದ ನತಾಶಾ
Image
‘ಮುದ್ದು ಸೊಸೆ’ ಧಾರಾವಾಹಿ: ತ್ರಿವಿಕ್ರಂ-ಪ್ರತಿಮಾ ವಯಸ್ಸಿನ ಅಂತರ ಇಷ್ಟೊಂದಾ?
Image
ಸೋಲು ಮರೆತು ವರ್ಕೌಟ್ ಶುರು ಮಾಡಿದ ಸಲ್ಮಾನ್ ಖಾನ್; ಈ ವಯಸ್ಸಲ್ಲೂ ಎಂಥಾ ಬಾಡಿ
Image
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ವೈಷ್ಣವಿ ಗೌಡ; ಹುಡುಗ ಯಾರು?

‘ನೀವೇ ತಾನೇ ಪ್ರೀತಿ ಪಾತ್ರರಿಗೆ ಪ್ರೀತಿ ಕೊಡಿ ಎಂದು ಹೇಳಿದ್ದು’ ಎಂದು ದಾನಿಶ್ ಅವರು ಕೊಹ್ಲಿಗೆ ಕೇಳಿದ್ದಾರೆ. ‘ಸ್ನಾನ ಆದ ಬಳಿಕ ಬಂದು ನೀವು ಹಗ್ ಕೊಡಬೇಕು. ಸ್ನಾನ ಮಾಡದೆ ಬಂದಿದ್ದಕ್ಕೆ ನನ್ನ ಶಾಂತಿಯೆಲ್ಲ ಹಾಳಾಯಿತು. ನಾನು ಹೊಗಬೇಕು, ಸ್ನಾನ ಮಾಡಬೇಕು’ ಎಂದು ಕೊಹ್ಲಿ ಹೊರಟರು. ‘ಶಾಂತಿ ಕಾಪಾಡಿಕೊಳ್ಳಿ’ ಎಂದು ದಾನಿಶ್ ಕೋರಿದರು. ಆದರೆ ಕೊಹ್ಲಿ ಕೂಗಾಡುತ್ತಾ ಹೊರಟೇಬಿಟ್ಟರು.

ಇದನ್ನೂ ಓದಿ:  ದ್ರಾವಿಡ್ ಊರುಗೋಲಿನ ಸಹಾಯದಿಂದ ಮೈದಾನಕ್ಕೆ ಬಂದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ

ಅಂದಹಾಗೆ, ಇದು ಸಂಪೂರ್ಣವಾಗಿ ಸ್ಕ್ರಿಪ್ಟೆಡ್ ಕಾರ್ಯಕ್ರಮ. ವಿರಾಟ್ ಕೊಹ್ಲಿ ಸಿಟ್ಟು ಮಾಡಿಕೊಂಡಿದ್ದು ಕೂಡ ಸ್ಕ್ರಿಪ್ಟ್​ನ ಒಂದು ಭಾಗ ಅಷ್ಟೇ. ಈ ಮೊದಲು ಕೂಡ ಕೊಹ್ಲಿ ಅವರು ದಾನಿಶ್ ಬಗ್ಗೆ ಸಿಟ್ಟಾದಂತೆ ನಟಿಸಿದ ಸಾಕಷ್ಟು ಉದಾಹರಣೆಗಳು ಇವೆ. ಆದರೆ, ಎಲ್ಲವೂ ಸ್ಕ್ರಿಪ್ಟ್​ನ ಭಾಗ ಅಷ್ಟೇ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್