AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ಶಿವನ ಪಾತ್ರ ಮಾಡೋದನ್ನು ಒಪ್ಪಿಕೊಂಡರಾ ವಿಷ್ಣು ಮಂಚು? ಈ ಟ್ವೀಟ್​ನ ಅರ್ಥವೇನು?

ಪ್ರಭಾಸ್ ಅವರು ‘ಆದಿಪುರುಷ್’ ಚಿತ್ರದಲ್ಲಿ ರಾಮನ ಅವತಾರ ತಾಳಿದ್ದರು. ಆದರೆ, ಈ ಪಾತ್ರಕ್ಕೆ ಮೆಚ್ಚುಗೆಗಿಂತ ತೆಗಳಿಕೆಗಳು ಬಂದಿದ್ದೇ ಹೆಚ್ಚು. ಈಗ ಪ್ರಭಾಸ್​ಗೆ ಶಿವನ ಅವತಾರ ತಾಳಲು ಆಫರ್ ಬಂದಿದೆಯಂತೆ. ಇದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಇದನ್ನು ವಿಷ್ಣು ಮಂಚು ಅವರು ಬಹುತೇಕ ಖಚಿತಪಡಿಸಿದ್ದಾರೆ.

ಪ್ರಭಾಸ್ ಶಿವನ ಪಾತ್ರ ಮಾಡೋದನ್ನು ಒಪ್ಪಿಕೊಂಡರಾ ವಿಷ್ಣು ಮಂಚು? ಈ ಟ್ವೀಟ್​ನ ಅರ್ಥವೇನು?
ವಿಷ್ಣು ಮಂಚು-ಪ್ರಭಾಸ್
ರಾಜೇಶ್ ದುಗ್ಗುಮನೆ
|

Updated on:Sep 11, 2023 | 10:17 AM

Share

ನಟ ಪ್ರಭಾಸ್ (Prabhas) ಅವರು ಸಾಲು ಸಾಲು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ಸಲಾರ್’ ಸಿನಿಮಾದ ರಿಲೀಸ್​ ಡೇಟ್ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ. ‘ಕಲ್ಕಿ 2898 ಎಡಿ’ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಈಗ ಪ್ರಭಾಸ್ ಅವರು ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದನ್ನು ಅವರ ಗೆಳೆಯ, ನಟ ವಿಷ್ಣು ಮಂಚು ಒಪ್ಪಿಕೊಂಡಿದ್ದಾರೆ! ಅವರು ಮಾಡಿರುವ ಟ್ವೀಟ್ ಈ ಅನುಮಾನ ಹುಟ್ಟಲು ಪ್ರಮುಖ ಕಾರಣ.

ಪ್ರಭಾಸ್ ಅವರು ‘ಆದಿಪುರುಷ್’ ಚಿತ್ರದಲ್ಲಿ ರಾಮನ ಅವತಾರ ತಾಳಿದ್ದರು. ಆದರೆ, ಈ ಪಾತ್ರಕ್ಕೆ ಮೆಚ್ಚುಗೆಗಿಂತ ತೆಗಳಿಕೆಗಳು ಬಂದಿದ್ದೇ ಹೆಚ್ಚು. ಈಗ ಪ್ರಭಾಸ್​ಗೆ ಶಿವನ ಅವತಾರ ತಾಳಲು ಆಫರ್ ಬಂದಿದೆಯಂತೆ. ಇದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಇದನ್ನು ವಿಷ್ಣು ಮಂಚು ಅವರು ಬಹುತೇಕ ಖಚಿತಪಡಿಸಿದ್ದಾರೆ.

ತೆಲುಗಿನಲ್ಲಿ ‘ಕಣ್ಣಪ್ಪ’ ಸಿನಿಮಾ ಸಿದ್ಧಗೊಳ್ಳುತ್ತಿದೆ. ನಟ ವಿಷ್ಣು ಮಂಚು ಅವರು ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಭರ್ಜರಿಯಾಗಿ ನೆರವೇರಿದೆ. ಪ್ರಭಾಸ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಒಂದನ್ನು ಮಾಡಿದ್ದರು.

ವಿಷ್ಣುಮಂಚು ಅವರ ಕನಸಿನ ಪ್ರಾಜೆಕ್ಟ್​ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ರಮೇಶ್ ಬಾಲಾ ಟ್ವೀಟ್ ಮಾಡಿದ್ದರು. ಇದನ್ನು ರೀಟ್ವೀಟ್ ಮಾಡಿಕೊಂಡಿರುವ ವಿಷ್ಣು ಮಂಚು, ‘ಹರ ಹರ ಮಹದೇವ’ ಎಂದಿದ್ದಾರೆ. ಜೊತೆಗೆ ಕಣ್ಣಪ್ಪ ಎನ್ನುವ ಹ್ಯಾಶ್​ಟ್ಯಾಗ್ ಹಾಕಿದ್ದಾರೆ. ಈ ಮೂಲಕ ಅವರು ತಾವು ಪ್ರಭಾಸ್ ಜೊತೆ ನಟಿಸುತ್ತಿರುವ ವಿಚಾರ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಭಾಸ್​ಗೆ ಅನುಷ್ಕಾ ಶೆಟ್ಟಿ ಎಸೆದ ಸವಾಲು ರಾಮ್ ಚರಣ್ ವರ್ಗ, ಹಂಚಿಕೊಂಡ ರೆಸಿಪಿ ಯಾವುದು?

ಪ್ರಭಾಸ್ ಅವರು ಹ್ಯಾಟ್ರಿಕ್ ಸೋಲು ಅನುಭವಿಸಿದ್ದಾರೆ. ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ ಸಿನಿಮಾಗಳು ಸೋತಿವೆ. ಈಗ ‘ಸಲಾರ್’ ಸಿನಿಮಾ ಮೂಲಕ ಗೆಲ್ಲುವ ಭರವಸೆಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:03 am, Mon, 11 September 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More