ಸೈಫ್ ಅಲಿ ಖಾನ್ ಒಡೆತನದ ಪಟೌಡಿ ಪ್ಯಾಲೇಸ್​ಗೆ ಬಣ್ಣ ಬಳಿಯೋದೆ ಇಲ್ಲ: ಕಾರಣ ಏನು?

Saif Ali Khan: ಸೈಫ್ ಅಲಿ ಖಾನ್ ಒಡೆತನದ ಪಟೌಡಿ ಪ್ಯಾಲೆಸ್, ಭಾರತದ ಸುಂದರ ಮತ್ತು ಐಶಾರಾಮಿ ಅರಮನೆಗಳಲ್ಲಿ ಒಂದು. ಈ ಪಟೌಡಿ ಪ್ಯಾಲೆಸ್ ಗೆ ಬಣ್ಣ ಬಳಿಯುವುದೇ ಇಲ್ಲವಂತೆ ಇದಕ್ಕೆ ಕಾರಣ ಇದೆ.

ಸೈಫ್ ಅಲಿ ಖಾನ್ ಒಡೆತನದ ಪಟೌಡಿ ಪ್ಯಾಲೇಸ್​ಗೆ ಬಣ್ಣ ಬಳಿಯೋದೆ ಇಲ್ಲ: ಕಾರಣ ಏನು?
ಪಟೌಡಿ ಪ್ಯಾಲೆಸ್
Follow us
| Updated By: ಮಂಜುನಾಥ ಸಿ.

Updated on: Sep 19, 2024 | 3:44 PM

ಸೈಫ್ ಅಲಿ ಖಾನ್ ಅವರದ್ದು ಪಟೌಡಿ ಕುಟುಂಬ. ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಭಾರತದ ಮಾಜಿ ಕ್ರಿಕೆಟಿಗ ಆಗಿದ್ದರು. ಅವರು ಸಾಕಷ್ಟು ಐಷಾರಾಮಿ ಜೀವನ ನಡೆಸಿದ್ದರು. ಈಗ ಇವರ ಹೆಸರಲ್ಲಿ ಇದ್ದ ಪಟೌಡಿ ಪ್ಯಾಲೇಸ್ ಸೈಫ್ ಅಲಿ ಖಾನ್ ಪಾಲಾಗಿದೆ. ಇದು ದೆಹಲಿ ಸಮೀಪದ ಗುರುಗ್ರಾಮದಲ್ಲಿ ಇದೆ. ಹಾಗಾದರೆ, ಈ ಪಟೌಡಿ ಪ್ಯಾಲೇಸ್​ನ ವಿಶೇಷತೆಗಳು ಏನು? ಆ ಬಗ್ಗೆ ಇಲ್ಲಿದೆ ವಿವರ.

ಪಟೌಡಿ ಪ್ಯಾಲೇಸ್ ನಿರ್ಮಾಣ ಆಗಿದ್ದು 90 ವರ್ಷಗಳ ಹಿಂದೆ. ಅಂದರೆ 1935ರಲ್ಲಿ ಇದರ ನಿರ್ಮಾಣ ಆಯಿತು. ಈ ಮನೆ ತಲತಲಾಂತರಗಳಿಂದ ಆ ಕುಟುಂಬದ ಬೇರೆ ಬೇರೆ ಸದಸ್ಯರ ಕೈ ಸೇರುತ್ತಿದೆ. ಈಗ ಸೈಫ್ ಅವರ ಕೈಯಲ್ಲಿ ಈ ನಿವಾಸ ಇದೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸೇರಿ ಅನೇಕ ಚಿತ್ರಗಳು ಇಲ್ಲಿ ಶೂಟ್ ಆಗಿವೆ.

ಪಟೌಡಿ ಬಿಳಿ ಬಣ್ಣದಲ್ಲೇ ಇದೆ. ಇದಕ್ಕೆ ಕಾರಣ ಏನು? ಈ ಬಗ್ಗೆ ನಟಿ ಹಾಗೂ ಸೈಫ್ ಸಹೋದರಿ ಸೋಹಾ ಖಾನ್ ಅವರು ಮಾತನಾಡಿದ್ದಾರೆ. ಯಾರೂ ಈ ಕಟ್ಟಡಕ್ಕೆ ಪೇಂಟ್ ಮಾಡುವ ಸಾಹಸಕ್ಕೆ ಮುಂದಾಗಿಲ್ಲ. ಬದಲಿಗೆ ಇಡೀ ಕಟ್ಟಡಕ್ಕೆ ಸುಣ್ಣವನ್ನೇ ಬಳಿಯಲಾಗಿದೆ. ಕಡಿಮೆ ಖರ್ಚಲ್ಲಿ ಆಗುತ್ತದೆ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗಿದೆ. ಸದ್ಯ ಶರ್ಮಿಳಾ ಟಾಗೋರ್ ಅವರು ಇಡೀ ಕಟ್ಟಡವನ್ನು ನೋಡಿಕೊಳ್ಳುತ್ತಿದ್ದಾರೆ. ‘ನನ್ನ ತಾಯಿಗೆ ಪಟೌಡಿಯ ಪ್ರತಿ ತಿಂಗಳ ಖರ್ಚು-ವೆಚ್ಛಗಳು ಗೊತ್ತು. ಇದಕ್ಕೆ ಪೇಂಟಿಂಗ್ ಮಾಡಲೇ ಇಲ್ಲ. ಏಕೆಂದರೆ ಅದು ತುಂಬಾನೇ ದುಬಾರಿ ಆಗಲಿದೆ. ಇಲ್ಲಿ ಹೊಸ ವಸ್ತುಗಳನ್ನು ತರದೇ ಸಾಕಷ್ಟು ಸಮಯ ಹಿಡಿದಿದೆ’ ಎಂದಿದ್ದಾರೆ ಸೋಹಾ.

ಇದನ್ನೂ ಓದಿ:ಸೈಫ್ ಅಲಿ ಖಾನ್ ಟೀಸರ್: ‘ದೇವರ’ನಿಗೂ ಭೀಕರ ಈ ಭೈರ

‘ನಾನು ಜನಿಸೋವಾಗ ರಾಯಲ್ ಟೈಟಲ್ ಇರಲಿಲ್ಲ. ನನ್ನ ಸಹೋದರ (ಸೈಫ್ ಅಲಿ ಖಾನ್) ಹುಟ್ಟುವಾಗ ಅವರು ಯುವ ರಾಜಕುಮಾರ ಆಗಿದ್ದರು. ಏಕೆಂದರೆ ಅವರು ಜನಿಸಿದ್ದು 70ರ ದಶಕದಲ್ಲಿ. ಆಗಿನ್ನೂ ರಾಯಲ್ ಟೈಟಲ್ ತೆಗೆದಿರಲಿಲ್ಲ. ನನ್ನ ಅಜ್ಜಿ ಭೋಪಾಲ್​ನ ಬೇಗಂ ಆಗಿದ್ದರು. ನನ್ನ ತಾತ ಪಟೌಡಿಯ ನವಾಬ್ ಆಗಿದ್ದರು. ನಮ್ಮ ಅಜ್ಜ ಹಾಗೂ ಅಜ್ಜಿ ಹಲವು ವರ್ಷ ಪ್ರಿತಿಸಿದ್ದರು. ಆದರೆ, ಈ ಪ್ರೀತಿಗೆ ಒಪ್ಪಿಗೆ ಸಿಗಲಿಲ್ಲ. ಮಾವನನ್ನು ಇಂಪ್ರೆಸ್ ಮಾಡಲು ನಮ್ಮ ತಾತ ಇದನ್ನು ಕಟ್ಟಿದ್ದರು’ ಎಂದಿದ್ದಾರೆ ಅವರು. 10 ಎಕರೆಯಲ್ಲಿ ಪಟೌಡಿ ಪ್ಯಾಲೆಸ್ ಇದೆ. ಇದರಲ್ಲಿ 150ಕ್ಕೂ ಅಧಿಕ ರೂಂಗಳು ಇವೆ. ಇದನ್ನು ನೋಡಬೇಕು ಎನ್ನುವ ಆಸೆ ಅನೇಕರಿಗೆ ಇದೆ. ಕೆಲವು ಸಿನಿಮಾಗಳಲ್ಲಿ ಇದರ ಬಳಕೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ