ರಾಜ್ ಬಿ. ಶೆಟ್ಟಿ ಶ್ವಾನ ಪ್ರಿಯ ಆಗಲು ಕಾರಣವಾಯ್ತು ಆ ಘಟನೆ; ಅವರಿಷ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ರಾಜ್ ಬಿ. ಶೆಟ್ಟಿ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಯಾವಾಗಲೂ ಹಿಂಜರಿಕೆ ಮಾಡಿಲ್ಲ. ಅವರು ಟಿವಿ9 ಕನ್ನಡ ಡಿಜಿಟಿಲ್ ಜೊತೆಗೆ ಮಾತನಾಡಿ ತಮ್ಮಿಷ್ಟದ ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ.
ರಾಜ್ ಬಿ. ಶೆಟ್ಟಿ ಅವರು ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನ ಕೂಡ ಇತ್ತು. ಆ ಬಳಿಕ ಹಲವು ರೀತಿಯ ಸಿನಿಮಾಗಳನ್ನು ಅವರು ಮಾಡಿದರು. ಈಗ ರಾಜ್ ಬಿ. ಶೆಟ್ಟಿ ಅವರ ನಟನೆಯ ‘ರೂಪಾಂತರ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಒಂದು ಗಂಭೀರ ವಿಚಾರವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ವೈಯಕ್ತಿಕ ಜೀವನದ ಬಗ್ಗೆ ರಾಜ್ ಬಿ. ಶೆಟ್ಟಿ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ.
ನಿಮ್ಮಿಷ್ಟದ ತಿಂಡಿ?
ನನ್ನಿಷ್ಟದ ತಿಂಡಿ ಚಿತ್ರಾನ್ನ. ಆ ಬಗ್ಗೆ ಯಾವುದೇ ಅನುಮಾನವೇ ಬೇಡ.
ಇಷ್ಟದ ಸಿನಿಮಾ?
ಒಂದು ಸಿನಿಮಾನ ಹೆಸರಿಸೋದು ಕಷ್ಟ. ಬೇರೆ ಬೇರೆ ಸಿನಿಮಾಗಳು ಇವೆ. ಒಂದೇ ಸಿನಿಮಾದ ಹೆಸರು ಹೇಳೋದು ಕಷ್ಟ ಆಗುತ್ತದೆ.
ಇಷ್ಟದ ಜಾಗ
ಕಳಸ, ಮಂಗಳೂರು ನನ್ನಿಷ್ಟದ ಪ್ಲೇಸ್.
ಶ್ವಾನ ಪ್ರಿಯರಾಗಿದ್ದು ಯಾವಾಗ?
ನಾನು ‘ಒಂದು ಮೊಟ್ಟೆಯ ಕಥೆ’ ಸಿನಿಮಾಗೆ ಸ್ಕ್ರಿಪ್ಟ್ ಬರೆಯುತ್ತಿದ್ದೆ. ಆಗ ನನಗೆ ಆಫೀಸ್ ಎಲ್ಲಾ ಇರಲಿಲ್ಲ. ಹೊರಗೆ ಒಂದು ಜಾಗದಲ್ಲಿ ಕುಳಿತು ಬರೆಯುತ್ತಿದ್ದೆ. ಆಗ ಬೀದಿ ನಾಯಿಗಳು ಜೊತೆಗೆ ಇರುತ್ತಿದ್ದವು. ಸಿನಿಮಾದ ಕೆಲಸ ಮುಗಿಯೋ ಒಳಗೆ ಅವರ ಜೊತೆ ಆಪ್ತತೆ ಬೆಳೆಯಿತು. ಆ ಬಳಿಕ ನನಗೆ ಗೊತ್ತಿಲ್ಲದೆ ಶ್ವಾನ ಪ್ರಿಯ ಆದೆ.
ಹ್ಯಾಂಗ್ಔಟ್ ಪ್ಲೇಸ್..
ಅನುಮಾನವೇ ಬೇಡ, ಕಳಸ.
ಬಿಡುವು ಸಿಕ್ಕಾಗ ಏನು ಮಾಡ್ತೀರಾ? ಬಿಡುವು ಸಿಗುತ್ತಲೇ ಇಲ್ಲ. ಬಿಡುವು ಸಿಕ್ಕಾಗ ಅಡುಗೆ ಮಾಡುತ್ತೇನೆ. ಅಡುಗೆ ಮಾಡೋದು ಅಂದ್ರೆ ಸಖತ್ ಇಷ್ಟ.
ಮದುವೆ ಬಗ್ಗೆ ಆಲೋಚನೆ..
ಮದುವೆ ಬಗ್ಗೆ ಸದ್ಯಕ್ಕೆ ಆಲೋಚನೆ ಇಲ್ಲ. ಮುಂದೆ ನೋಡಬೇಕು..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.