Yashika Aanand: ಭೀಕರ ಅಪಘಾತದ ಇಂಚಿಂಚೂ ವಿವರ; ಹಾಸಿಗೆಯಲ್ಲೇ ನರಕ ನೋಡುತ್ತಿರುವ ನಟಿ ಯಶಿಕಾ ಆನಂದ್​

Yashika Aannand Car Accident: ‘ಜು.24ರ ರಾತ್ರಿ ಊಟಕ್ಕಾಗಿ ನಾವು ನಾಲ್ಕು ಜನ ರೆಸಾರ್ಟ್​ಗೆ ಹೋಗಿದ್ದೆವು. ರಾತ್ರಿ 1 ಗಂಟೆಗೆ ಅಲ್ಲಿಂದ ವಾಪಸ್​ ಹೊರಟೆವು. ನಾನೇ ಡ್ರೈವ್​ ಮಾಡುತ್ತಿದ್ದೆ’ ಎಂದಿರುವ ನಟಿ ಯಶಿಕಾ ಆನಂದ್​ ಅವರು ಅಪಘಾತವಾದ ದಿನ ಏನಾಯಿತು ಎಂಬುದನ್ನು ವಿವರಿಸಿದ್ದಾರೆ.

Yashika Aanand: ಭೀಕರ ಅಪಘಾತದ ಇಂಚಿಂಚೂ ವಿವರ; ಹಾಸಿಗೆಯಲ್ಲೇ ನರಕ ನೋಡುತ್ತಿರುವ ನಟಿ ಯಶಿಕಾ ಆನಂದ್​
ಯಶಿಕಾ ಆನಂದ್​ ಕಾರು ಅಪಘಾತ
Follow us
| Updated By: ಮದನ್​ ಕುಮಾರ್​

Updated on: Aug 04, 2021 | 12:13 PM

ಖ್ಯಾತ ನಟಿ ಯಶಿಕಾ ಆನಂದ್​ (Yashika Aannand) ಅವರು ಚಲಿಸುತ್ತಿದ್ದ ಕಾರು ಜು.24ರ ರಾತ್ರಿ ಅಪಘಾತಕ್ಕೆ ಈಡಾಗಿತ್ತು. ಅಪಘಾತದ (Car Accident) ತೀವ್ರತೆಗೆ ಅವರ ಸ್ನೇಹಿತೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೂಡಲೇ ಯಶಿಕಾರನ್ನು ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಅವರ ಜೀವ ಉಳಿಯಿತು. ಆದರೆ ಅವರು ಇನ್ನೂ ಕೆಲವು ತಿಂಗಳ ಕಾಲ ಹಾಸಿಗೆ ಬಿಟ್ಟು ಮೇಲೇಳದ ಸ್ಥಿತಿಯಲ್ಲಿ ಇದ್ದಾರೆ. ಮಲಗಿದ್ದಲ್ಲೇ ಮಲ-ಮೂತ್ರ ಮಾಡಿಕೊಳ್ಳುವ ನರಕ ಸದೃಶ್ಯ ಪರಿಸ್ಥಿತಿ ಅವರದ್ದಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಕೆಲವು ಗಾಸಿಪ್​ಗಳಿಂದ ಅವರಿಗೆ ನೋವಾಗಿದೆ. ಅಪಘಾತ ನಡೆದಾಗ ನಿಜಕ್ಕೂ ಆಗಿದ್ದು ಏನು ಎಂಬುದನ್ನು ಯಶಿಕಾ (Yashika Aanand) ಈಗ ವಿವರಿಸಿದ್ದಾರೆ. 

ಮದ್ಯಪಾನ ಮಾಡಿ ಕಾರು ಡ್ರೈವ್​ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಅದು ಯಶಿಕಾಗೆ ತೀವ್ರ ನೋವು ಉಂಟು ಮಾಡಿದೆ. ಅದಕ್ಕಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಎಲ್ಲವನ್ನೂ ವಿವರಿಸಿದ್ದಾರೆ.

‘ಜು.24ರ ರಾತ್ರಿ ಊಟಕ್ಕಾಗಿ ನಾವು ನಾಲ್ಕು ಜನ ರೆಸಾರ್ಟ್​ಗೆ ತೆರಳಿದ್ದೆವು. ರಾತ್ರಿ 1 ಗಂಟೆಗೆ ಅಲ್ಲಿಂದ ವಾಪಸ್​ ಹೊರಟೆವು. ನಾನೇ ಡ್ರೈವ್​ ಮಾಡುತ್ತಿದ್ದೆ. ಖಂಡಿತವಾಗಿಯೂ ವೇಗವಾಗಿ ಓಡಿಸುತ್ತಿರಲಿಲ್ಲ. ತುಂಬ ಕತ್ತಲು ಆವರಿಸಿತ್ತು. ದುರಾದೃಷ್ಟವಶಾತ್​ ನಾನು ಡಿವೈಡರ್​ಗೆ ಡಿಕ್ಕಿ ಹೊಡೆಸಿದೆ. ನಮ್ಮ ಕಾರು ಮೂರ ಬಾರಿ ಪಲ್ಟಿ ಆಯಿತು. ನನ್ನ ಪಕ್ಕದಲ್ಲಿ ಪಾವನಿ ಕುಳಿತಿದ್ದಳು. ಆಕೆ ಸೀಟ್​ ಬೆಲ್ಟ್​ ಧರಿಸಿರಲಿಲ್ಲ. ಕಿಟಕಿ ಗಾಜು ತೆರೆದುಕೊಂಡಿದ್ದಳು. ಆಕ್ಸಿಡೆಂಟ್​ ಆದಾಗ ಕಿಟಕಿಯಿಂದ ಆಕೆ ಹೊರಬಿದ್ದಳು. ಅವಳ ತಲೆಗೆ ಪೆಟ್ಟಾಯಿತು’ ಎಂದು ಯಶಿಕಾ ಹೇಳಿದ್ದಾರೆ.

‘ನಾವೆಲ್ಲರೂ ಕಾರಿನ ಒಳಗೆ ಇದ್ದೆವು. ವಿಂಡೋ ಜಾಮ್​ ಆಯಿತು. ಸನ್​ರೂಫ್​ ಒಡೆದುಕೊಂಡು ನಾವು ಹೊರಬರಬೇಕಾಯಿತು. ಒಂದೇ ನಿಮಿಷದೊಳಗೆ ಹೆಚ್ಚು ಜನರು ಅಲ್ಲಿ ಗುಂಪು ಸೇರಿದರು. ನಾನು ನಿಂತುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಇಡೀ ದೇಹ ಕುಸಿದು ಬಿದ್ದಂತೆ ಅನಿಸುತ್ತಿತ್ತು. ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಪ್ರಜ್ಞೆ ಬಂದ ಬಳಿಕವೇ ಪಾವನಿ ಸತ್ತು ಹೋಗಿದ್ದಾಳೆ ಎಂಬುದು ನನಗೆ ತಿಳಿಯಿತು’ ಎಂದು ಯಶಿಕಾ ಹೇಳಿದ್ದಾರೆ.

ಸ್ನೇಹಿತೆಯನ್ನು ಕಳೆದುಕೊಂಡಿದ್ದಕ್ಕೆ ತೀವ್ರ ನೋವು ಅನುಭವಿಸುತ್ತಿರುವ ಯಶಿಕಾ ಆನಂದ್​ ಅವರು ಇತ್ತೀಚೆಗೆ ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕ ನೋವು ತೋಡಿಕೊಂಡಿದ್ದರು. ಆ ಪೋಸ್ಟ್​ ವೈರಲ್​ ಆಗುತ್ತಿದೆ.

ಇದನ್ನೂ ಓದಿ:

Yashika Aannand: ಭೀಕರ ಅಪಘಾತ, ಗೆಳೆತಿಯ ಸಾವು: ನೋವು ತೋಡಿಕೊಂಡ ನಟಿ ಯಶಿಕಾ

ಸಂಚಾರಿ ವಿಜಯ್​ ದಾನ ಮಾಡಿದ ಅಂಗಗಳು ಯಾವುವು? ಉಳಿದ ಜೀವಗಳೆಷ್ಟು? ಇಲ್ಲಿದೆ ಪ್ರಮಾಣ ಪತ್ರ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ