AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yashika Aanand: ಭೀಕರ ಅಪಘಾತದ ಇಂಚಿಂಚೂ ವಿವರ; ಹಾಸಿಗೆಯಲ್ಲೇ ನರಕ ನೋಡುತ್ತಿರುವ ನಟಿ ಯಶಿಕಾ ಆನಂದ್​

Yashika Aannand Car Accident: ‘ಜು.24ರ ರಾತ್ರಿ ಊಟಕ್ಕಾಗಿ ನಾವು ನಾಲ್ಕು ಜನ ರೆಸಾರ್ಟ್​ಗೆ ಹೋಗಿದ್ದೆವು. ರಾತ್ರಿ 1 ಗಂಟೆಗೆ ಅಲ್ಲಿಂದ ವಾಪಸ್​ ಹೊರಟೆವು. ನಾನೇ ಡ್ರೈವ್​ ಮಾಡುತ್ತಿದ್ದೆ’ ಎಂದಿರುವ ನಟಿ ಯಶಿಕಾ ಆನಂದ್​ ಅವರು ಅಪಘಾತವಾದ ದಿನ ಏನಾಯಿತು ಎಂಬುದನ್ನು ವಿವರಿಸಿದ್ದಾರೆ.

Yashika Aanand: ಭೀಕರ ಅಪಘಾತದ ಇಂಚಿಂಚೂ ವಿವರ; ಹಾಸಿಗೆಯಲ್ಲೇ ನರಕ ನೋಡುತ್ತಿರುವ ನಟಿ ಯಶಿಕಾ ಆನಂದ್​
ಯಶಿಕಾ ಆನಂದ್​ ಕಾರು ಅಪಘಾತ
TV9 Web
| Updated By: ಮದನ್​ ಕುಮಾರ್​|

Updated on: Aug 04, 2021 | 12:13 PM

Share

ಖ್ಯಾತ ನಟಿ ಯಶಿಕಾ ಆನಂದ್​ (Yashika Aannand) ಅವರು ಚಲಿಸುತ್ತಿದ್ದ ಕಾರು ಜು.24ರ ರಾತ್ರಿ ಅಪಘಾತಕ್ಕೆ ಈಡಾಗಿತ್ತು. ಅಪಘಾತದ (Car Accident) ತೀವ್ರತೆಗೆ ಅವರ ಸ್ನೇಹಿತೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೂಡಲೇ ಯಶಿಕಾರನ್ನು ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಅವರ ಜೀವ ಉಳಿಯಿತು. ಆದರೆ ಅವರು ಇನ್ನೂ ಕೆಲವು ತಿಂಗಳ ಕಾಲ ಹಾಸಿಗೆ ಬಿಟ್ಟು ಮೇಲೇಳದ ಸ್ಥಿತಿಯಲ್ಲಿ ಇದ್ದಾರೆ. ಮಲಗಿದ್ದಲ್ಲೇ ಮಲ-ಮೂತ್ರ ಮಾಡಿಕೊಳ್ಳುವ ನರಕ ಸದೃಶ್ಯ ಪರಿಸ್ಥಿತಿ ಅವರದ್ದಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಕೆಲವು ಗಾಸಿಪ್​ಗಳಿಂದ ಅವರಿಗೆ ನೋವಾಗಿದೆ. ಅಪಘಾತ ನಡೆದಾಗ ನಿಜಕ್ಕೂ ಆಗಿದ್ದು ಏನು ಎಂಬುದನ್ನು ಯಶಿಕಾ (Yashika Aanand) ಈಗ ವಿವರಿಸಿದ್ದಾರೆ. 

ಮದ್ಯಪಾನ ಮಾಡಿ ಕಾರು ಡ್ರೈವ್​ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಅದು ಯಶಿಕಾಗೆ ತೀವ್ರ ನೋವು ಉಂಟು ಮಾಡಿದೆ. ಅದಕ್ಕಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಎಲ್ಲವನ್ನೂ ವಿವರಿಸಿದ್ದಾರೆ.

‘ಜು.24ರ ರಾತ್ರಿ ಊಟಕ್ಕಾಗಿ ನಾವು ನಾಲ್ಕು ಜನ ರೆಸಾರ್ಟ್​ಗೆ ತೆರಳಿದ್ದೆವು. ರಾತ್ರಿ 1 ಗಂಟೆಗೆ ಅಲ್ಲಿಂದ ವಾಪಸ್​ ಹೊರಟೆವು. ನಾನೇ ಡ್ರೈವ್​ ಮಾಡುತ್ತಿದ್ದೆ. ಖಂಡಿತವಾಗಿಯೂ ವೇಗವಾಗಿ ಓಡಿಸುತ್ತಿರಲಿಲ್ಲ. ತುಂಬ ಕತ್ತಲು ಆವರಿಸಿತ್ತು. ದುರಾದೃಷ್ಟವಶಾತ್​ ನಾನು ಡಿವೈಡರ್​ಗೆ ಡಿಕ್ಕಿ ಹೊಡೆಸಿದೆ. ನಮ್ಮ ಕಾರು ಮೂರ ಬಾರಿ ಪಲ್ಟಿ ಆಯಿತು. ನನ್ನ ಪಕ್ಕದಲ್ಲಿ ಪಾವನಿ ಕುಳಿತಿದ್ದಳು. ಆಕೆ ಸೀಟ್​ ಬೆಲ್ಟ್​ ಧರಿಸಿರಲಿಲ್ಲ. ಕಿಟಕಿ ಗಾಜು ತೆರೆದುಕೊಂಡಿದ್ದಳು. ಆಕ್ಸಿಡೆಂಟ್​ ಆದಾಗ ಕಿಟಕಿಯಿಂದ ಆಕೆ ಹೊರಬಿದ್ದಳು. ಅವಳ ತಲೆಗೆ ಪೆಟ್ಟಾಯಿತು’ ಎಂದು ಯಶಿಕಾ ಹೇಳಿದ್ದಾರೆ.

‘ನಾವೆಲ್ಲರೂ ಕಾರಿನ ಒಳಗೆ ಇದ್ದೆವು. ವಿಂಡೋ ಜಾಮ್​ ಆಯಿತು. ಸನ್​ರೂಫ್​ ಒಡೆದುಕೊಂಡು ನಾವು ಹೊರಬರಬೇಕಾಯಿತು. ಒಂದೇ ನಿಮಿಷದೊಳಗೆ ಹೆಚ್ಚು ಜನರು ಅಲ್ಲಿ ಗುಂಪು ಸೇರಿದರು. ನಾನು ನಿಂತುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಇಡೀ ದೇಹ ಕುಸಿದು ಬಿದ್ದಂತೆ ಅನಿಸುತ್ತಿತ್ತು. ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಪ್ರಜ್ಞೆ ಬಂದ ಬಳಿಕವೇ ಪಾವನಿ ಸತ್ತು ಹೋಗಿದ್ದಾಳೆ ಎಂಬುದು ನನಗೆ ತಿಳಿಯಿತು’ ಎಂದು ಯಶಿಕಾ ಹೇಳಿದ್ದಾರೆ.

ಸ್ನೇಹಿತೆಯನ್ನು ಕಳೆದುಕೊಂಡಿದ್ದಕ್ಕೆ ತೀವ್ರ ನೋವು ಅನುಭವಿಸುತ್ತಿರುವ ಯಶಿಕಾ ಆನಂದ್​ ಅವರು ಇತ್ತೀಚೆಗೆ ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕ ನೋವು ತೋಡಿಕೊಂಡಿದ್ದರು. ಆ ಪೋಸ್ಟ್​ ವೈರಲ್​ ಆಗುತ್ತಿದೆ.

ಇದನ್ನೂ ಓದಿ:

Yashika Aannand: ಭೀಕರ ಅಪಘಾತ, ಗೆಳೆತಿಯ ಸಾವು: ನೋವು ತೋಡಿಕೊಂಡ ನಟಿ ಯಶಿಕಾ

ಸಂಚಾರಿ ವಿಜಯ್​ ದಾನ ಮಾಡಿದ ಅಂಗಗಳು ಯಾವುವು? ಉಳಿದ ಜೀವಗಳೆಷ್ಟು? ಇಲ್ಲಿದೆ ಪ್ರಮಾಣ ಪತ್ರ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ