AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sepsisನಂತರ ಅಪಾಯಕಾರಿ ಸೋಂಕುಗಳಿಗೆ ಆಯುರ್ವೇದಲ್ಲಿ ಚಿಕಿತ್ಸೆ ಸಾಧ್ಯ: ಪತಂಜಲಿ ಸಂಶೋಧನೆ ಬೆಳಕು

Patanjali Research on possible ayurvedic treatment for Sepsis infection: ಸೆಪ್ಸಿಸ್ ಎಂಬುದು ಜೀವಕ್ಕೆ ಅಪಾಯಕಾರಿ ಸೋಂಕು. ಇದು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ. ಆದರೆ, ಆಯುರ್ವೇದದಲ್ಲಿರುವ ಫೈಟೊಕಾನ್ಸ್ಟಿಟ್ಯೂಯೆಂಟ್‌ಗಳು ಈ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ ಎಂದು ಪತಂಜಲಿ ಸಂಶೋಧನೆ ತೋರಿಸಿದೆ. ಕ್ವೆರ್ಸೆಟಿನ್, ಕರ್ಕ್ಯುಮಿನ್ ಮುಂತಾದ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ಫೈಟೊಕಾನ್ಸ್ಟಿಟ್ಯೂಯೆಂಟ್‌ಗಳು ಮೂತ್ರಪಿಂಡದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಸಂಶೋಧನೆಯು ಸೆಪ್ಸಿಸ್ ನಿರ್ವಹಣೆಗೆ ಹೊಸ ದಾರಿಯನ್ನು ತೋರಿಸುತ್ತದೆ.

Sepsisನಂತರ ಅಪಾಯಕಾರಿ ಸೋಂಕುಗಳಿಗೆ ಆಯುರ್ವೇದಲ್ಲಿ ಚಿಕಿತ್ಸೆ ಸಾಧ್ಯ: ಪತಂಜಲಿ ಸಂಶೋಧನೆ ಬೆಳಕು
ಪತಂಜಲಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 27, 2025 | 6:02 PM

ಸೆಪ್ಸಿಸ್ (Sepsis) ಒಂದು ಅಪಾಯಕಾರಿ ಸೋಂಕಾಗಿದ್ದು, ಇದರಲ್ಲಿ ದೇಹದ ರೋಗನಿರೋಧಕ ಶಕ್ತಿಯು ಸೋಂಕಿಗೆ ಅತಿಯಾಗಿ ಪ್ರತಿಕ್ರಿಯಿಸಿ, ಇದರಿಂದಾಗಿ ದೇಹದ ವಿವಿಧ ಅಂಗಗಳು ಮತ್ತು ಅಂಗಾಂಶಗಳಿಗೆ ಹಾನಿಯಾಗುತ್ತದೆ. ಸೆಪ್ಸಿಸ್ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ (ಫಂಗಲ್) ಸೋಂಕಿನಿಂದ ಉಂಟಾಗುತ್ತದೆ. ಈ ರೋಗವು ಅಂಗಗಳಿಗೆ ಹಾನಿಯನ್ನುಂಟುಮಾಡಬಹುದು. ಇದು ಮೂತ್ರಪಿಂಡಗಳ (ಕಿಡ್ನಿ) ಮೇಲೂ ಪರಿಣಾಮ ಬೀರುತ್ತದೆ. ತೀವ್ರವಾದ ಮೂತ್ರಪಿಂಡದ ಗಾಯ ಉಂಟುಮಾಡಬಹುದಾದ ಈ ರೋಗವನ್ನು ನಿಯಂತ್ರಿಸುವುದು ಕಷ್ಟಕರವಾಗಿಸುತ್ತದೆ. ಆದರೆ ಆಯುರ್ವೇದ ವಿಧಾನಗಳಲ್ಲಿ, ಇದನ್ನು ಫೈಟೊಕಾಂಟಿಟ್ಯೂಯೆಂಟ್‌ಗಳ (Phytoconstituents) ಸಹಾಯದಿಂದ ನಿಯಂತ್ರಿಸಬಹುದು. ಪತಂಜಲಿ ಸಂಶೋಧನಾ ಸಂಸ್ಥೆ (Patanjali research) ಈ ಬಗ್ಗೆ ಸಂಶೋಧನೆ ಮಾಡಿದ್ದು, ಇದು ಬಯೋಮೆಡಿಸಿನ್ ಮತ್ತು ಫಾರ್ಮಾಕೋಥೆರಪಿ ಅಕಾಡೆಮಿಕ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಸೆಪ್ಸಿಸ್ ಸಮಯದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವು ಮೂತ್ರಪಿಂಡದ ಜೀವಕೋಶಗಳಿಗೆ ಹಾನಿ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಇದರಿಂದಾಗಿ, ರಕ್ತದ ಹರಿವು ಕಡಿಮೆಯಾಗುತ್ತದೆ. ಹೀಗಾಗಿ, ಮೂತ್ರಪಿಂಡದ ಆಮ್ಲಜನಕೀಕರಣ ಮತ್ತು ಪೋಷಣೆಯ ಮೇಲೆ ಪರಿಣಾಮ ಬೀರುತ್ತದೆ. ಸಸ್ಯಗಳಿಂದ ಪಡೆದ ಸಂಯುಕ್ತಗಳಂತಹ ಫೈಟೊಕಾನ್ಸ್ಟಿಟ್ಯೂಂಟ್‌ಗಳು ಸೆಪ್ಸಿಸ್‌ನಿಂದ ಉಂಟಾಗುವ ಮೂತ್ರಪಿಂಡದ ಕಾಯಿಲೆಯನ್ನು ತಡೆಯಲು ಸಹಾಯ ಮಾಡಬಹುದು.

ಫೈಟೊಕಾಂಟಿಟ್ಯೂಂಟ್‌ಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಫೈಟೊಕಾನ್ಸ್ಟಿಟ್ಯೂಂಟ್‌ಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಈ ಸಂಶೋಧನೆಯಲ್ಲಿ, ಸೆಪ್ಸಿಸ್‌ನ ಪ್ಯಾಥೊಫಿಸಿಯಾಲಜಿ, ಬಯೋಮಾರ್ಕರ್‌ಗಳು ಮತ್ತು ಫೈಟೊಕಾನ್ಸ್‌ಟಿಟ್ಯೂಯೆಂಟ್‌ಗಳ ಪಾತ್ರದ ಕುರಿತು ವಿವರವಾದ ಸಂಶೋಧನೆ ಮಾಡಲಾಗಿದೆ.

ಇದನ್ನೂ ಓದಿ
Image
ಈ ಸಸ್ಯದಲ್ಲಿದೆ ಉರಿಯೂತ ತಗ್ಗಿಸುವ ಗುಣ: ಪತಂಜಲಿ
Image
ಪತಂಜಲಿ ಯಜ್ಞ ಚಿಕಿತ್ಸೆಯಿಂದ ಅಚ್ಚರಿಯ ಫಲಿತಾಂಶ
Image
ಸನ್​ಬರ್ನ್​​ಗೆ ಆಯುರ್ವೇದದಲ್ಲಿ ಪರಿಹಾರ: ಪತಂಜಲಿ
Image
ಸೋರಿಯಾಸಿಸ್ ಕಾಯಿಲೆಗೆ ಪತಂಜಲಿ ಔಷಧಿ

ಇದನ್ನೂ ಓದಿ: ಉರಿಯೂತ ತಗ್ಗಿಸಲು ಈ ಸಸ್ಯ ಪ್ರಯೋಜನಕಾರಿ: ಪತಂಜಲಿ ಸಂಶೋಧನೆ

ಆಯುರ್ವೇದದಿಂದ ಸೆಪ್ಸಿಸ್ ನಿಯಂತ್ರಣ

ಹಲವು ರೀತಿಯ ಆಯುರ್ವೇದ ಔಷಧಿಗಳು ಮತ್ತು ಗಿಡಮೂಲಿಕೆಗಳಿಂದ ಸೆಪ್ಸಿಸ್ ಅನ್ನು ನಿಯಂತ್ರಿಸಬಹುದು ಎಂದು ಸಂಶೋಧನೆ ತೋರಿಸಿದೆ. ಶುಂಠಿ ಮತ್ತು ಕ್ವೆರ್ಸೆಟಿನ್ (Quercetin) ನಂತಹ ಶಕ್ತಿಶಾಲಿ ಉರಿಯೂತ ನಿವಾರಕ (Anti-inflammatory) ಮತ್ತು ಉತ್ಕರ್ಷಣ ನಿರೋಧಕಗಳೆಂದು (Anti- Oxidative) ಸಂಶೋಧನೆಯು ಉಲ್ಲೇಖಿಸಿದೆ. ಇವುಗಳನ್ನು ಸೆಪ್ಸಿಸ್ ಚಿಕಿತ್ಸೆಗೆ ಬಳಸಿಕೊಳ್ಳಬಹುದು.

ಪತಂಜಲಿ ಸಂಶೋಧನೆಯ ಪ್ರಕಾರ, ಕರ್ಕ್ಯುಮಿನ್, ರೆಸ್ವೆರಾಟ್ರೊಲ್, ಬೈಕಲೀನ್, ಕ್ವೆರ್ಸೆಟಿನ್ ಮತ್ತು ಪಾಲಿಡಾಟಿನ್​​ನಂತಹ ಫೈಟೊಕಾನ್ಸ್ಟಿಟ್ಯೂಯೆಂಟ್‌ಗಳು ಮೂತ್ರಪಿಂಡದ ಸಂಬಂಧಿತ ಸೋಂಕುಗಳು ಮತ್ತು ಸೆಪ್ಸಿಸ್‌ನಿಂದ ಉಂಟಾಗುವ ರೋಗಗಳನ್ನು ತಡೆಯಬಹುದು. ಇದು ಸೆಪ್ಸಿಸ್​​ನಿಂದ ಉಂಟಾಗುವ ತೀವ್ರ ಮೂತ್ರಪಿಂಡದ ಗಾಯವನ್ನು ತಡೆಯಬಹುದು.

ನಿಮ್ಮ ಮೂತ್ರಪಿಂಡಗಳನ್ನು ಉಳಿಸಲು ಕೆಲವು ಮಾರ್ಗಗಳು

ಮೂತ್ರಪಿಂಡಗಳನ್ನು ಸೆಪ್ಸಿಸ್‌ನಿಂದ ರಕ್ಷಿಸಲು ಕೆಲವು ಮಾರ್ಗಗಳನ್ನು ಸಂಶೋಧನೆಯು ಸೂಚಿಸುತ್ತದೆ. ಈ ರೋಗದ ಸಮಯದಲ್ಲಿ ನೆಫ್ರಾಟಾಕ್ಸಿಕ್ ಔಷಧಿಗಳನ್ನು ಎಚ್ಚರಿಕೆಯಿಂದ ಬಳಸಬೇಕು. ತೀರಾ ಅಗತ್ಯವಿದ್ದಾಗ ಮಾತ್ರ ಈ ಔಷಧದ ಬಳಕೆ ಆಗಬೇಕು. ಸಂಶೋಧನೆಯ ಪ್ರಕಾರ, ಪ್ರೋಟೋಕಾಲೈಸ್ಡ್ ಫ್ಲ್ಯೂಡ್ ರೆಸುಸಿಟೇಶನ್ (protocolized fluid resuscitation) ಸೆಪ್ಸಿಸ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಸೆಪ್ಸಿಸ್ ಚಿಕಿತ್ಸೆಗಾಗಿ ವಾಸೊಪ್ರೆಸರ್‌ಗಳನ್ನು (vasopressors) ಬಳಸಲಾಗುತ್ತದೆ, ಆದರೆ ಕೆಲವೊಮ್ಮೆ ಅವು ಮೂತ್ರಪಿಂಡದ ಗಾಯವನ್ನು ಉಲ್ಬಣಗೊಳಿಸುವ ಸಾಧ್ಯತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಎಚ್ಚರಿಕೆಯಿಂದ ಬಳಸಬೇಕು.

ಇದನ್ನೂ ಓದಿ: ಯಜ್ಞದಿಂದ ರೋಗ ನಿವಾರಣೆ ಸಾಧ್ಯವಾ? ಹೌದೆನ್ನುತ್ತಿದೆ ಪತಂಜಲಿ ಸಂಶೋಧನೆ

ಸೆಪ್ಸಿಸ್ ಚಿಕಿತ್ಸೆ, ಭವಿಷ್ಯದ ದಿಕ್ಕು ಏನು?

ಸೆಪ್ಸಿಸ್​​ನಿಂದ ಉಂಟಾಗುವ ಮೂತ್ರಪಿಂಡದ ಗಾಯವನ್ನು ತಡೆಗಟ್ಟಲು ಮತ್ತು ಔಷಧ ಅಭಿವೃದ್ಧಿಗಾಗಿ ಫೈಟೊಕಾನ್ಸ್ಟಿಟ್ಯೂಂಟ್‌ಗಳನ್ನು ಬಳಸಬಹುದು. ಫೈಟೊಕಾನ್ಸ್​​ಟಿಟ್ಯೂಂಟ್‌ಗಳು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ ಎಂಬುದನ್ನು ಸಂಶೋಧನೆ ತೋರಿಸಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್