Bone Donation: ಅಪಘಾತದಲ್ಲಿ ಮೂಳೆ ಮುರಿದುಕೊಂಡ ಯುವಕನಿಗೆ ಮೂಳೆ ದಾನ, ಬೋನ್ ಬ್ಯಾಂಕ್ ಬಗ್ಗೆ ತಜ್ಞರು ಹೇಳುವುದೇನು?

ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಜನರು ರಸ್ತೆ ಅಪಘಾತದಲ್ಲಿ ಮೂಳೆ ಮುರಿತಕೊಳಗಾಗುತ್ತಿದ್ದಾರೆ. ಮೂಳೆ ಮುರಿದು ಹಾಸಿಗೆ ಹಿಡಿಯುವವರಲ್ಲಿ ಶೇಕಡಾ 70 ರಷ್ಟು ಜನರು 20 ರಿಂದ 40 ವರ್ಷ ವಯಸ್ಸಿನವರು. ಆದರೆ ಅಂತವರಿಗೂ ಮೂಳೆ ದಾನ ಮೂಲಕ ಹೊಸ ಜೀವನವನ್ನು ನೀಡಬಹುದು. ದೇಶದಲ್ಲಿ ಅನೇಕ ಬೋನ್ ಬ್ಯಾಂಕ್‌ಗಳಿವೆ, ಆದರೆ ಅರಿವಿನ ಕೊರತೆಯಿಂದ ಜನರು ಮೂಳೆಗಳನ್ನು ದಾನ ಮಾಡುತ್ತಿಲ್ಲ ಎಂದು ತಜ್ಞರು ಹೇಳುತ್ತಾರೆ.

Bone Donation: ಅಪಘಾತದಲ್ಲಿ ಮೂಳೆ ಮುರಿದುಕೊಂಡ ಯುವಕನಿಗೆ ಮೂಳೆ ದಾನ, ಬೋನ್ ಬ್ಯಾಂಕ್ ಬಗ್ಗೆ ತಜ್ಞರು ಹೇಳುವುದೇನು?
Bone Donation
Follow us
|

Updated on: Oct 24, 2024 | 5:16 PM

ಮೊಣಕಾಲುಗಳ ಕೀಲು ಮೂಳೆ ಕಳೆದುಕೊಂಡು ನಡೆಯಲು ಸಾಧ್ಯವಾಗದೇ ಇದ್ದ ದೆಹಲಿಯ ಕಾಲೇಜು ವಿದ್ಯಾರ್ಥಿ ಈಗ ಮತ್ತೆ ನಡೆಯುವಂತಾಗಿದೆ. ಹೌದು, ಏಮ್ಸ್ ವೈದ್ಯರು ಈ ವಿದ್ಯಾರ್ಥಿಗೆ ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿ ಮೊಣಕಾಲಿನ ಕೀಲು ಮೂಳೆಯನ್ನು ತೆಗೆದು ಅದಕ್ಕೆ ಮೂಳೆ ದಾನಿಯ ಮೂಳೆಯನ್ನು ಬದಲಾಯಿಸಿದ್ದಾರೆ. ಇದರೊಂದಿಗೆ, ವಿದ್ಯಾರ್ಥಿಯು ಈಗ ಮತ್ತೆ ನಡೆಯಲು ಸಾಧ್ಯವಾಗಿದೆ.

ಎಐಐಎಂಎಸ್‌ನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡ ಹೇಳುವಂತೆ ” ಅಪಘಾತದಲ್ಲಿ ಮೊಣಕಾಲಿನ ಮೂಳೆಗಳು ಮುರಿದು ಮಲಗಿದಲ್ಲೇ ಇದ್ದ ವಿದ್ಯಾರ್ಥಿಗೆ ಏಮ್ಸ್‌ನ ಟ್ರಾಮಾ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಮೃತ ದಾನಿಯೊಬ್ಬರು ದಾನ ಮಾಡಿದ ಮೂಳೆಗಳನ್ನು ವಿದ್ಯಾರ್ಥಿಯ ಎಡಗಾಲಿನ ಮೊಣಕಾಲಿನ ಮೂಳೆಯೊಂದಿಗೆ ಬದಲಾಯಿಸಲಾಯಿತು. ಅಸ್ಥಿ ದಾನದಿಂದ ಜನರ ಜೀವ ಉಳಿಸಲು ಸಾಧ್ಯವಾಗದಿದ್ದರೂ, ಖಂಡಿತವಾಗಿಯೂ ಜನರ ಬದುಕನ್ನು ಬದಲಾಯಿಸಲು ಸಾಧ್ಯವಿದೆ” ಎಂದು ಹೇಳುತ್ತಾರೆ.

ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಜನರು ರಸ್ತೆ ಅಪಘಾತದಲ್ಲಿ ಮೂಳೆ ಮುರಿತಕೊಳಗಾಗುತ್ತಿದ್ದಾರೆ. ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಲ್ಲಿ ಶೇಕಡಾ 70 ರಷ್ಟು ಜನರು 20 ರಿಂದ 40 ವರ್ಷ ವಯಸ್ಸಿನವರು. ಅಪಘಾತದ ನಂತರ ಮೂಳೆ ಮುರಿತದಿಂದಾಗಿ ಸಾಮಾನ್ಯವಾಗಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮೂಳೆ ಬ್ಯಾಂಕ್ ಸಹಾಯದಿಂದ, ಅವರು ಮತ್ತೆ ಸಕ್ರಿಯ ಜೀವನವನ್ನು ನಡೆಸಬಹುದು. ಬೋನ್ ಬ್ಯಾಂಕ್ ನ ವಿಶೇಷತೆ ಎಂದರೆ ಇಲ್ಲಿ ದಾನ ಮಾಡುವ ಮೂಳೆಗಳನ್ನು ಐದು ವರ್ಷಗಳ ಕಾಲ ಸುರಕ್ಷಿತವಾಗಿ ಇಡಬಹುದು.

ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ದೇಹ ಭಾರವಾದಂತೆ ಅನಿಸಿದರೆ ನಿರ್ಲಕ್ಷ್ಯ ಮಾಡಬೇಡಿ

ಜನರು ಮೂಳೆ ದಾನಕ್ಕೆ ಹೆದರುತ್ತಾರೆ:

ದೇಶದಲ್ಲಿ ಅನೇಕ ಬೋನ್ ಬ್ಯಾಂಕ್‌ಗಳು ತೆರೆದಿವೆ, ಆದರೆ ಅರಿವಿನ ಕೊರತೆಯಿಂದ ಜನರು ಇಲ್ಲಿ ಮೂಳೆಗಳನ್ನು ದಾನ ಮಾಡುವುದಿಲ್ಲ. ಅಸ್ಥಿ ದಾನ ಮಾಡಿದರೆ ದಾನಿಯ ದೇಹದ ಸ್ಥಿತಿ ಹದಗೆಡುತ್ತದೆ ಎಂಬ ಭಯ ಜನರಲ್ಲಿದೆ. ಅದರಲ್ಲೂ ಯುವ ದಾನಿಗಳ ಸಂಖ್ಯೆ ತೀರಾ ಕಡಿಮೆ ಮತ್ತು ಮೂಳೆ ದಾನಕ್ಕೆ ಯುವ ದಾನಿಗಳ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್
ಜನ ಕುಮಾರಸ್ವಾಮಿ ಹೊರಗಿನವ ಅಂದುಕೊಂಡಿದ್ದರೆ 2 ಬಾರಿ ಗೆಲ್ಲಿಸುತ್ತಿದ್ವರೇ?
ಜನ ಕುಮಾರಸ್ವಾಮಿ ಹೊರಗಿನವ ಅಂದುಕೊಂಡಿದ್ದರೆ 2 ಬಾರಿ ಗೆಲ್ಲಿಸುತ್ತಿದ್ವರೇ?
ಬಾಬುಸಾಬ್​ ​ಪಾಳ್ಯ ದುರಂತ: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ಬಾಬುಸಾಬ್​ ​ಪಾಳ್ಯ ದುರಂತ: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ಬಿಗ್​ಬಾಸ್ ಮನೆಗೆ ಬಂದ ಸುದ್ದಿ ವಾಚಕಿ, ಮನೆ ಮಂದಿಗೆ ಕ್ಲಾಸ್
ಬಿಗ್​ಬಾಸ್ ಮನೆಗೆ ಬಂದ ಸುದ್ದಿ ವಾಚಕಿ, ಮನೆ ಮಂದಿಗೆ ಕ್ಲಾಸ್
ಬೆಂಗಳೂರು ನಗರ ಉಸ್ತುವಾರಿ ಸಚಿವ ಶಿವಕುಮಾರ್ ಚನ್ನಪಟ್ಟಣದಲ್ಲಿ ಬ್ಯೂಸಿ!
ಬೆಂಗಳೂರು ನಗರ ಉಸ್ತುವಾರಿ ಸಚಿವ ಶಿವಕುಮಾರ್ ಚನ್ನಪಟ್ಟಣದಲ್ಲಿ ಬ್ಯೂಸಿ!
ಹಾಸನಾಂಬಾ ಸನ್ನಿಧಾನದಲ್ಲಿ ಭರದ ಸಿದ್ಧತೆ
ಹಾಸನಾಂಬಾ ಸನ್ನಿಧಾನದಲ್ಲಿ ಭರದ ಸಿದ್ಧತೆ