AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bone Donation: ಅಪಘಾತದಲ್ಲಿ ಮೂಳೆ ಮುರಿದುಕೊಂಡ ಯುವಕನಿಗೆ ಮೂಳೆ ದಾನ, ಬೋನ್ ಬ್ಯಾಂಕ್ ಬಗ್ಗೆ ತಜ್ಞರು ಹೇಳುವುದೇನು?

ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಜನರು ರಸ್ತೆ ಅಪಘಾತದಲ್ಲಿ ಮೂಳೆ ಮುರಿತಕೊಳಗಾಗುತ್ತಿದ್ದಾರೆ. ಮೂಳೆ ಮುರಿದು ಹಾಸಿಗೆ ಹಿಡಿಯುವವರಲ್ಲಿ ಶೇಕಡಾ 70 ರಷ್ಟು ಜನರು 20 ರಿಂದ 40 ವರ್ಷ ವಯಸ್ಸಿನವರು. ಆದರೆ ಅಂತವರಿಗೂ ಮೂಳೆ ದಾನ ಮೂಲಕ ಹೊಸ ಜೀವನವನ್ನು ನೀಡಬಹುದು. ದೇಶದಲ್ಲಿ ಅನೇಕ ಬೋನ್ ಬ್ಯಾಂಕ್‌ಗಳಿವೆ, ಆದರೆ ಅರಿವಿನ ಕೊರತೆಯಿಂದ ಜನರು ಮೂಳೆಗಳನ್ನು ದಾನ ಮಾಡುತ್ತಿಲ್ಲ ಎಂದು ತಜ್ಞರು ಹೇಳುತ್ತಾರೆ.

Bone Donation: ಅಪಘಾತದಲ್ಲಿ ಮೂಳೆ ಮುರಿದುಕೊಂಡ ಯುವಕನಿಗೆ ಮೂಳೆ ದಾನ, ಬೋನ್ ಬ್ಯಾಂಕ್ ಬಗ್ಗೆ ತಜ್ಞರು ಹೇಳುವುದೇನು?
Bone Donation
ಅಕ್ಷತಾ ವರ್ಕಾಡಿ
|

Updated on: Oct 24, 2024 | 5:16 PM

Share

ಮೊಣಕಾಲುಗಳ ಕೀಲು ಮೂಳೆ ಕಳೆದುಕೊಂಡು ನಡೆಯಲು ಸಾಧ್ಯವಾಗದೇ ಇದ್ದ ದೆಹಲಿಯ ಕಾಲೇಜು ವಿದ್ಯಾರ್ಥಿ ಈಗ ಮತ್ತೆ ನಡೆಯುವಂತಾಗಿದೆ. ಹೌದು, ಏಮ್ಸ್ ವೈದ್ಯರು ಈ ವಿದ್ಯಾರ್ಥಿಗೆ ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿ ಮೊಣಕಾಲಿನ ಕೀಲು ಮೂಳೆಯನ್ನು ತೆಗೆದು ಅದಕ್ಕೆ ಮೂಳೆ ದಾನಿಯ ಮೂಳೆಯನ್ನು ಬದಲಾಯಿಸಿದ್ದಾರೆ. ಇದರೊಂದಿಗೆ, ವಿದ್ಯಾರ್ಥಿಯು ಈಗ ಮತ್ತೆ ನಡೆಯಲು ಸಾಧ್ಯವಾಗಿದೆ.

ಎಐಐಎಂಎಸ್‌ನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡ ಹೇಳುವಂತೆ ” ಅಪಘಾತದಲ್ಲಿ ಮೊಣಕಾಲಿನ ಮೂಳೆಗಳು ಮುರಿದು ಮಲಗಿದಲ್ಲೇ ಇದ್ದ ವಿದ್ಯಾರ್ಥಿಗೆ ಏಮ್ಸ್‌ನ ಟ್ರಾಮಾ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಮೃತ ದಾನಿಯೊಬ್ಬರು ದಾನ ಮಾಡಿದ ಮೂಳೆಗಳನ್ನು ವಿದ್ಯಾರ್ಥಿಯ ಎಡಗಾಲಿನ ಮೊಣಕಾಲಿನ ಮೂಳೆಯೊಂದಿಗೆ ಬದಲಾಯಿಸಲಾಯಿತು. ಅಸ್ಥಿ ದಾನದಿಂದ ಜನರ ಜೀವ ಉಳಿಸಲು ಸಾಧ್ಯವಾಗದಿದ್ದರೂ, ಖಂಡಿತವಾಗಿಯೂ ಜನರ ಬದುಕನ್ನು ಬದಲಾಯಿಸಲು ಸಾಧ್ಯವಿದೆ” ಎಂದು ಹೇಳುತ್ತಾರೆ.

ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಜನರು ರಸ್ತೆ ಅಪಘಾತದಲ್ಲಿ ಮೂಳೆ ಮುರಿತಕೊಳಗಾಗುತ್ತಿದ್ದಾರೆ. ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಲ್ಲಿ ಶೇಕಡಾ 70 ರಷ್ಟು ಜನರು 20 ರಿಂದ 40 ವರ್ಷ ವಯಸ್ಸಿನವರು. ಅಪಘಾತದ ನಂತರ ಮೂಳೆ ಮುರಿತದಿಂದಾಗಿ ಸಾಮಾನ್ಯವಾಗಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮೂಳೆ ಬ್ಯಾಂಕ್ ಸಹಾಯದಿಂದ, ಅವರು ಮತ್ತೆ ಸಕ್ರಿಯ ಜೀವನವನ್ನು ನಡೆಸಬಹುದು. ಬೋನ್ ಬ್ಯಾಂಕ್ ನ ವಿಶೇಷತೆ ಎಂದರೆ ಇಲ್ಲಿ ದಾನ ಮಾಡುವ ಮೂಳೆಗಳನ್ನು ಐದು ವರ್ಷಗಳ ಕಾಲ ಸುರಕ್ಷಿತವಾಗಿ ಇಡಬಹುದು.

ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ದೇಹ ಭಾರವಾದಂತೆ ಅನಿಸಿದರೆ ನಿರ್ಲಕ್ಷ್ಯ ಮಾಡಬೇಡಿ

ಜನರು ಮೂಳೆ ದಾನಕ್ಕೆ ಹೆದರುತ್ತಾರೆ:

ದೇಶದಲ್ಲಿ ಅನೇಕ ಬೋನ್ ಬ್ಯಾಂಕ್‌ಗಳು ತೆರೆದಿವೆ, ಆದರೆ ಅರಿವಿನ ಕೊರತೆಯಿಂದ ಜನರು ಇಲ್ಲಿ ಮೂಳೆಗಳನ್ನು ದಾನ ಮಾಡುವುದಿಲ್ಲ. ಅಸ್ಥಿ ದಾನ ಮಾಡಿದರೆ ದಾನಿಯ ದೇಹದ ಸ್ಥಿತಿ ಹದಗೆಡುತ್ತದೆ ಎಂಬ ಭಯ ಜನರಲ್ಲಿದೆ. ಅದರಲ್ಲೂ ಯುವ ದಾನಿಗಳ ಸಂಖ್ಯೆ ತೀರಾ ಕಡಿಮೆ ಮತ್ತು ಮೂಳೆ ದಾನಕ್ಕೆ ಯುವ ದಾನಿಗಳ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​