AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಿಗ್ಗೆ ಎದ್ದ ತಕ್ಷಣ ದೇಹ ಭಾರವಾದಂತೆ ಅನಿಸಿದರೆ ನಿರ್ಲಕ್ಷ್ಯ ಮಾಡಬೇಡಿ

ದೇಹದಿಂದ ಹೆಚ್ಚುವರಿ ದ್ರವವನ್ನು ಪರಿಣಾಮಕಾರಿಯಾಗಿ ಹೊರಹಾಕುವ ಬದಲು ದೇಹದಲ್ಲಿ ಸಂಗ್ರಹವಾದಾಗ ನೀರಿನ ಧಾರಣ ಸಂಭವಿಸುತ್ತದೆ. ಇದನ್ನು ನೀರಿನ ತೂಕ ಎಂದು ಕರೆಯಲಾಗುತ್ತದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಈ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಏಕೆಂದರೆ ಬಿಸಿಯಾದ ವಾತಾವರಣದಲ್ಲಿ ಅಂಗಾಂಶದಿಂದ ದ್ರವಗಳನ್ನು ಹೊರಹಾಕುವುದು ದೇಹಕ್ಕೆ ಕಷ್ಟವಾಗುತ್ತದೆ. ಈ ಸಮಸ್ಯೆಯು ದೇಹದ ಕೆಲವು ರೋಗಲಕ್ಷಣಗಳಿಂದ ಉಂಟಾಗುತ್ತದೆ. ಹಾಗಾದರೆ ಈ ಸಮಸ್ಯೆ ಏಕೆ ಕಂಡುಬರುತ್ತದೆ? ಲಕ್ಷಣಗಳೇನು? ಇಲ್ಲಿದೆ ಮಾಹಿತಿ.

ಬೆಳಿಗ್ಗೆ ಎದ್ದ ತಕ್ಷಣ ದೇಹ ಭಾರವಾದಂತೆ ಅನಿಸಿದರೆ ನಿರ್ಲಕ್ಷ್ಯ ಮಾಡಬೇಡಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 23, 2024 | 5:53 PM

Share

ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ದೇಹ ತುಂಬಾ ಭಾರವಾದ ಹಾಗೆ ಅನಿಸುತ್ತದೆಯೇ? ದೇಹದ ತೂಕದಲ್ಲಿನ ಈ ಬದಲಾವಣೆಯು ನೀರಿನ ತೂಕದಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಇದು ನಿಮಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ಸತ್ಯ. ನಮ್ಮ ಒಟ್ಟು ದೇಹದ ತೂಕದ 50- 60 ಪ್ರತಿಶತ ನೀರು ಇರುತ್ತದೆ. ಹೆಚ್ಚಿನ ಸಮಯದಲ್ಲಿ, ನೀರು ಮತ್ತು ಇತರ ದ್ರವಗಳು ದೇಹದಲ್ಲಿ ಅಸಹಜವಾಗಿ ಸಂಗ್ರಹವಾದಾಗ ತೂಕ ಹೆಚ್ಚಾಗುವ ಸಮಸ್ಯೆ ಉಂಟಾಗುತ್ತದೆ. ಇದು ಹೊಟ್ಟೆ, ತೋಳುಗಳು, ಕಾಲುಗಳು, ಪಾದಗಳು, ಕೈಗಳು, ಕಾಲುಗಳು ಮತ್ತು ಕಾಲಿನ ಬೆರಳುಗಳಲ್ಲಿ ಊತವನ್ನು ಉಂಟುಮಾಡಬಹುದು. ಕೆಲವೊಮ್ಮೆ ಮುಖವೂ ಊದಿಕೊಂಡಂತೆ ಕಾಣಿಸಬಹುದು. ಋತುಚಕ್ರ ಮತ್ತು ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೆಚ್ಚಾಗಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ, ಇವುಗಳ ಹೊರತಾಗಿ, ನೀರಿನ ತೂಕದ ಸಮಸ್ಯೆ ಇದ್ದರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಿ. ಏಕೆಂದರೆ ಆಹಾರ ಪದ್ಧತಿಯಲ್ಲಿ ಆದಂತಹ ಸಮಸ್ಯೆ ದೊಡ್ಡದಾಗುವ ಸಾಧ್ಯತೆಯಿದೆ.

ದೇಹದಿಂದ ಹೆಚ್ಚುವರಿ ದ್ರವವನ್ನು ಪರಿಣಾಮಕಾರಿಯಾಗಿ ಹೊರಹಾಕುವ ಬದಲು ದೇಹದಲ್ಲಿ ಸಂಗ್ರಹವಾದಾಗ ನೀರಿನ ಧಾರಣ ಸಂಭವಿಸುತ್ತದೆ. ಇದನ್ನು ನೀರಿನ ತೂಕ ಎಂದು ಕರೆಯಲಾಗುತ್ತದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಈ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಏಕೆಂದರೆ ಬಿಸಿಯಾದ ವಾತಾವರಣದಲ್ಲಿ ಅಂಗಾಂಶದಿಂದ ದ್ರವಗಳನ್ನು ಹೊರಹಾಕುವುದು ದೇಹಕ್ಕೆ ಕಷ್ಟವಾಗುತ್ತದೆ. ಈ ಸಮಸ್ಯೆಯು ದೇಹದ ಕೆಲವು ರೋಗಲಕ್ಷಣಗಳಿಂದ ಉಂಟಾಗುತ್ತದೆ. ಹಾಗಾದರೆ ಈ ಸಮಸ್ಯೆ ಏಕೆ ಕಂಡುಬರುತ್ತದೆ? ಲಕ್ಷಣಗಳೇನು? ಇಲ್ಲಿದೆ ಮಾಹಿತಿ.

ತೂಕ ಹೆಚ್ಚಳ ಅಥವಾ ತೂಕದಲ್ಲಿ ಏರಿಳಿತಗಳು

ಕಾಲಿನ ಬೆರಳು ಮತ್ತು ಪಾದಗಳಲ್ಲಿ ಊತ

ಊದಿಕೊಂಡ ಚರ್ಮ

ಕೀಲುಗಳ ಬಿಗಿತ

ಕೆಲವು ಕಡೆ ನೋವು

ಋತುಚಕ್ರದ ಸಮಯದಲ್ಲಿ ಸ್ತನದ ತೂಕ ಹೆಚ್ಚಳ

ಈ ಸಮಸ್ಯೆ ಏಕೆ ಕಂಡುಬರುತ್ತದೆ?

ಉಪ್ಪು ಮತ್ತು ಕಾರ್ಬೋಹೈಡ್ರೇಟ್ ಗಳ ಹೆಚ್ಚಿನ ಸೇವನೆ

ದೀರ್ಘಕಾಲ ನಿಲ್ಲುವುದು ಅಥವಾ ಕುಳಿತುಕೊಳ್ಳುವುದು

ಅಲರ್ಜಿಯ ಪ್ರತಿಕ್ರಿಯೆ, ಸೋಂಕು, ಸುಟ್ಟಗಾಯ, ಗಾಯ, ರಕ್ತ ಹೆಪ್ಪುಗಟ್ಟುವಿಕೆಯು ದುರ್ಬಲ ರೋಗನಿರೋಧಕ ಶಕ್ತಿಯನ್ನು ಉಂಟುಮಾಡಬಹುದು.

ದೇಹದಲ್ಲಿ ಪ್ರೋಟೀನ್ ಅಥವಾ ವಿಟಮಿನ್ ಬಿ 1 ನಂತಹ ಪೋಷಕಾಂಶಗಳ ಕೊರತೆ

(ಸೂಚನೆ: ಇಲ್ಲಿರುವ ವಿಷಯಗಳು ಕೇವಲ ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಸಂದೇಹಗಳಿದ್ದರೂ, ತಜ್ಞರನ್ನು ಸಂಪರ್ಕಿಸಿ.)

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ