AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ 7 ದಿನ 7 ಬಗೆಯ ಹಣ್ಣು: ಸೇಬಿನಿಂದ ಕಿವಿವರೆಗೆ ಯಾವ ದಿನ ಯಾವ ಹಣ್ಣು ತಿನ್ನಬೇಕು?

ಪ್ರತಿದಿನ ಒಂದೇ ಹಣ್ಣು ತಿನ್ನುವ ಬದಲು ವಿವಿಧ ಹಣ್ಣುಗಳನ್ನು ವಾರದ 7 ದಿನವೂ ಆಹಾರದ ಜೊತೆ ಸೇರಿಸಿಕೊಂಡು ಸೇವನೆ ಮಾಡುವುದು ಒಳ್ಳೆಯದು. ಇದರಿಂದ ದೇಹಕ್ಕೆ ಫೈಬರ್, ವಿಟಮಿನ್‌ಗಳು, ಖನಿಜಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಂತಹ ವಿಭಿನ್ನ ಪೋಷಕಾಂಶಗಳು ದೊರೆಯುತ್ತವೆ. ಹಾಗಾದರೆ ಆರೋಗ್ಯ ಕಾಪಾಡಿಕೊಳ್ಳಲು ಯಾವ ದಿನ ಯಾವ ರೀತಿಯ ಹಣ್ಣುಗಳ ಸೇವನೆ ಮಾಡಬೇಕು, ಟೈಮ್ ಟೇಬಲ್ ಹೇಗಿದ್ದರೆ ಒಳ್ಳೆಯದು ತಿಳಿದುಕೊಳ್ಳಿ.

ವಾರದ 7 ದಿನ 7 ಬಗೆಯ ಹಣ್ಣು: ಸೇಬಿನಿಂದ ಕಿವಿವರೆಗೆ ಯಾವ ದಿನ ಯಾವ ಹಣ್ಣು ತಿನ್ನಬೇಕು?
Best Fruits For ImmunityImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 03, 2026 | 7:15 PM

Share

ಪ್ರತಿದಿನ ಒಂದೇ ಹಣ್ಣು ತಿನ್ನುವುದಕ್ಕಿಂತ ವಾರದಲ್ಲಿ ವಿವಿಧ ಬಗೆಯ ಹಣ್ಣುಗಳನ್ನು ಆಹಾರದ ಜೊತೆಯಲ್ಲಿ ಸೇವನೆ ಮಾಡುವುದರಿಂದ ದೇಹಕ್ಕೆ ವಿಭಿನ್ನ ವಿಟಮಿನ್‌, ಖನಿಜಗಳು, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ದೊರೆಯುತ್ತವೆ. ಯಾವುದೇ ಒಂದು ಹಣ್ಣು ರೋಗನಿರೋಧಕ ಶಕ್ತಿಯನ್ನು ಡಬಲ್ ಮಾಡುವುದಿಲ್ಲ. ಆದರೆ ಸಮತೋಲಿತ ಆಹಾರದ ಭಾಗವಾಗಿ ವಿವಿಧ ಹಣ್ಣುಗಳನ್ನು ಸೇವಿಸುವುದು ಒಟ್ಟಾರೆ ಆರೋಗ್ಯಕ್ಕೆ ಸಹಾಯಕವಾಗಬಹುದು. ಹಾಗಾದರೆ ಆರೋಗ್ಯ ಕಾಪಾಡಿಕೊಳ್ಳಲು ಯಾವ ದಿನ ಯಾವ ರೀತಿಯ ಹಣ್ಣುಗಳ ಸೇವನೆ ಮಾಡಬೇಕು, ಟೈಮ್ ಟೇಬಲ್ ಹೇಗಿದ್ದರೆ ಒಳ್ಳೆಯದು ತಿಳಿದುಕೊಳ್ಳಿ.

ಸೋಮವಾರ: ಸೇಬು ಮತ್ತು ಬಾಳೆಹಣ್ಣು

ಸೇಬಿನಲ್ಲಿ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಇದ್ದರೆ, ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ. ಇವೆರಡನ್ನೂ ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಆರೋಗ್ಯಕರ ಸ್ನ್ಯಾಕ್ ಆಗಿ ಸೇವಿಸಬಹುದು.

ಮಂಗಳವಾರ: ಕಿತ್ತಳೆ ಮತ್ತು ಪಪ್ಪಾಯಿ

ಕಿತ್ತಳೆಯಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ಪಪ್ಪಾಯಿಯಲ್ಲಿ ವಿಟಮಿನ್ ಎ ಸೇರಿದಂತೆ ಹಲವು ಪೋಷಕಾಂಶಗಳು ಮತ್ತು ಪಪೈನ್ ಎಂಬ ಎಂಜೈಮ್ ಇದೆ. ವೈವಿಧ್ಯಮಯ ಹಣ್ಣುಗಳ ಸೇವನೆಯಿಂದ ವಿವಿಧ ಪೋಷಕಾಂಶಗಳನ್ನು ಪಡೆಯಬಹುದು.

ಬುಧವಾರ: ದಾಳಿಂಬೆ ಮತ್ತು ಪೇರಳೆ

ದಾಳಿಂಬೆಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಇದ್ದರೆ, ಪೇರಳೆಯಲ್ಲಿ ಫೈಬರ್ ಮತ್ತು ವಿಟಮಿನ್ ಸಿ ದೊರೆಯುತ್ತದೆ. ಇವುಗಳನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸಬಹುದು.

ಇದನ್ನೂ ಓದಿ: ವಿಚಿತ್ರ ವಾಸನೆಯ ನೋನಿ ಹಣ್ಣಿಗೆ ಇಷ್ಟೊಂದು ಆರೋಗ್ಯ ಪ್ರಯೋಜನಗಳಿವೆಯೇ? ಆರೋಗ್ಯ ತಜ್ಞರು ಹೇಳುವುದೇನು?

ಗುರುವಾರ: ಕಲ್ಲಂಗಡಿ ಮತ್ತು ಕಿವಿ

ಕಲ್ಲಂಗಡಿಯಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ ದೇಹದ ದ್ರವಪೂರೈಕೆಗೆ ಸಹಾಯ ಮಾಡಬಹುದು. ಕಿವಿಯಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಫೋಲೇಟ್ ಮತ್ತು ಪೊಟ್ಯಾಸಿಯಂ ಸೇರಿದಂತೆ ಹಲವು ಪೋಷಕಾಂಶಗಳಿವೆ.

ಶುಕ್ರವಾರ: ದ್ರಾಕ್ಷಿ ಮತ್ತು ಅನಾನಸ್

ದ್ರಾಕ್ಷಿಯಲ್ಲಿ ವಿವಿಧ ಆ್ಯಂಟಿಆಕ್ಸಿಡೆಂಟ್ ಸಂಯುಕ್ತಗಳಿದ್ದು, ಅನಾನಸ್‌ನಲ್ಲಿ ಬ್ರೊಮೆಲೈನ್ ಎಂಬ ಎಂಜೈಮ್ ಕಂಡುಬರುತ್ತದೆ. ಪ್ರಮಾಣವನ್ನು ಗಮನಿಸಿ ಸೇವಿಸುವುದು ಉತ್ತಮ.

ಶನಿವಾರ ಮತ್ತು ಭಾನುವಾರ: ಡ್ರ್ಯಾಗನ್ ಫ್ರೂಟ್, ಹಲಸು, ಸಪೋಟಾ ಮತ್ತು ಏಪ್ರಿಕಾಟ್

ಡ್ರ್ಯಾಗನ್ ಫ್ರೂಟ್ ಮತ್ತು ಹಲಸಿನಲ್ಲಿ ಫೈಬರ್ ಸೇರಿದಂತೆ ಹಲವು ಪೋಷಕಾಂಶಗಳಿವೆ. ಸಪೋಟಾ ಮತ್ತು ಏಪ್ರಿಕಾಟ್‌ನಲ್ಲೂ ವಿವಿಧ ವಿಟಮಿನ್‌ಗಳು ಮತ್ತು ಖನಿಜಗಳು ದೊರೆಯುತ್ತವೆ. ಆದರೆ ಸಪೋಟಾ, ಹಲಸಿನಂತಹ ಸಿಹಿ ಹಣ್ಣುಗಳನ್ನು ಮಿತವಾಗಿ ಸೇವಿಸುವುದು ಸೂಕ್ತ. ಇದು ಸಿಗದಿದ್ದಾಗ ಇದರ ಪರ್ಯಾಯವಾಗಿ ಬೇರೆ ಹಣ್ಣುಗಳ ಸೇವನೆ ಮಾಡಬಹುದು.

ಹಣ್ಣು ತಿನ್ನುವ ಸರಿಯಾದ ವಿಧಾನ ಯಾವುದು?

ಸಾಧ್ಯವಾದಷ್ಟು ಹಣ್ಣುಗಳನ್ನು ತಾಜಾ ಮತ್ತು ಸಂಪೂರ್ಣ ಹಣ್ಣಿನ ರೂಪದಲ್ಲಿ ಸೇವಿಸುವುದು ಉತ್ತಮ. ಜ್ಯೂಸ್ ಮಾಡುವುದಕ್ಕಿಂತ ಹಣ್ಣನ್ನು ಹಾಗೆಯೇ ತಿನ್ನುವುದರಿಂದ ಫೈಬರ್ ಹೆಚ್ಚು ಉಳಿಯುತ್ತದೆ. ಹೆಚ್ಚುವರಿ ಸಕ್ಕರೆ ಅಥವಾ ಸಿರಪ್ ಸೇರಿಸಬೇಡಿ.

ಆ ದಿನ ಅದೇ ಹಣ್ಣನ್ನು ತಿನ್ನಬೇಕೆಂದಿಲ್ಲ. ಆದರೆ ಒಂದು ಸೂಕ್ತ ಟೈಮ್ ಟೇಬಲ್ ಅನುಸರಿಸುವುದರಿಂದ ಎಲ್ಲಾ ರೀತಿಯ ಹಣ್ಣುಗಳ ಸೇವನೆ ಮಾಡಿದಂತಾಗುತ್ತದೆ.

ಗಮನಿಸಿ: ಮಧುಮೇಹ ಅಥವಾ ಇತರ ಆರೋಗ್ಯ ಸಮಸ್ಯೆಗಳಿರುವವರು ಹಣ್ಣಿನ ಪ್ರಕಾರ ಮತ್ತು ಪ್ರಮಾಣವನ್ನು ವೈದ್ಯರು ಅಥವಾ ಡೈಟಿಷಿಯನ್ ಸಲಹೆಯಂತೆ ನಿರ್ಧರಿಸುವುದು ಉತ್ತಮ. ಹಣ್ಣುಗಳು ಆರೋಗ್ಯಕರ ಆಹಾರದ ಒಂದು ಭಾಗ ಮಾತ್ರ; ಸಮತೋಲಿತ ಆಹಾರ, ವ್ಯಾಯಾಮ ಮತ್ತು ಉತ್ತಮ ಜೀವನಶೈಲಿಯೂ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ಬೃಹತ್ ಪಾದಯಾತ್ರೆ
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ಬೃಹತ್ ಪಾದಯಾತ್ರೆ
‘ಬೃಂದಾವಿಹಾರಿ’ ಸಿನಿಮಾ ಕತೆ ಬಗ್ಗೆ ರಂಗಾಯಣ ರಘು ಹೇಳಿದ್ದೇನು?
‘ಬೃಂದಾವಿಹಾರಿ’ ಸಿನಿಮಾ ಕತೆ ಬಗ್ಗೆ ರಂಗಾಯಣ ರಘು ಹೇಳಿದ್ದೇನು?
ಚಂದ್ರನ ಮೇಲೆ ಮನೆ ಕಟ್ಟಲಿದೆ ಭಾರತ; ಬೆಂಗಳೂರಿನ ವಿಜ್ಞಾನಿಗಳ 'ಭೀಮ್' ಯೋಜನೆ!
ಚಂದ್ರನ ಮೇಲೆ ಮನೆ ಕಟ್ಟಲಿದೆ ಭಾರತ; ಬೆಂಗಳೂರಿನ ವಿಜ್ಞಾನಿಗಳ 'ಭೀಮ್' ಯೋಜನೆ!
ಕಳುವಾಗಿದ್ದ ಬಂಗಾರ, ಹಣ ರಿಕವರಿ ಮಾಡಿ ಪೊಲೀಸರಿಂದಲೇ ಲೂಟಿ?
ಕಳುವಾಗಿದ್ದ ಬಂಗಾರ, ಹಣ ರಿಕವರಿ ಮಾಡಿ ಪೊಲೀಸರಿಂದಲೇ ಲೂಟಿ?
ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ IAS ಅಧಿಕಾರಿ ಎಸ್ಕೇಪ್ ಆಗಿದ್ದು ಹೇಗೆ?
ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ IAS ಅಧಿಕಾರಿ ಎಸ್ಕೇಪ್ ಆಗಿದ್ದು ಹೇಗೆ?
ಏರೋ ಇಂಡಿಯಾ ಏರ್ ಶೋ 16ನೇ ಆವೃತ್ತಿಯ ದಿನಾಂಕ ಘೋಷಣೆ
ಏರೋ ಇಂಡಿಯಾ ಏರ್ ಶೋ 16ನೇ ಆವೃತ್ತಿಯ ದಿನಾಂಕ ಘೋಷಣೆ
ನೈಸ್ ರಸ್ತೆ ವಿಚಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಹತ್ವದ ತೀರ್ಮಾ‌ನ
ನೈಸ್ ರಸ್ತೆ ವಿಚಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಹತ್ವದ ತೀರ್ಮಾ‌ನ
ರಾಜ್ಯ ಸರ್ಕಾರದಿಂದ ಉದ್ಯಾನವನ ತಿದ್ದುಪಡಿ ಮಸೂದೆ ವಾಪಸ್?
ರಾಜ್ಯ ಸರ್ಕಾರದಿಂದ ಉದ್ಯಾನವನ ತಿದ್ದುಪಡಿ ಮಸೂದೆ ವಾಪಸ್?
ಬೀಗ ಹಾಕಿದ್ದ ಮನೆಗೆ ಕನ್ನ, 40 ಗ್ರಾಂ ಚಿನ್ನ-ಬೆಳ್ಳಿ ಎಗರಿಸಿದ ಖದೀಮರು
ಬೀಗ ಹಾಕಿದ್ದ ಮನೆಗೆ ಕನ್ನ, 40 ಗ್ರಾಂ ಚಿನ್ನ-ಬೆಳ್ಳಿ ಎಗರಿಸಿದ ಖದೀಮರು
ನೇಗಿಲು ಹೊತ್ತು 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಬಿವೈ ವಿಜಯೇಂದ್ರ
ನೇಗಿಲು ಹೊತ್ತು 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಬಿವೈ ವಿಜಯೇಂದ್ರ