AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drumstick: ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನೆ ಹೊಂದಿವೆ! ಮಿಸ್ ಮಾಡಬೇಡಿ

Drumstick: ನುಗ್ಗೆಯಲ್ಲಿ ಕಿತ್ತಳೆಗಿಂತ ಹೆಚ್ಚು ಸಿ ವಿಟಮಿನ್, ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ, ಕ್ಯಾರೆಟ್ ಗಿಂತ ಹೆಚ್ಚು ಎ ವಿಟಮಿನ್, ಬಾದಾಮಿಗಿಂತ ಹೆಚ್ಚು ಇ ವಿಟಮಿನ್ ಇದೆಯೆಂದು ಹೇಳಲಾಗುತ್ತದೆ. ನುಗ್ಗೆ ಕಾಯಿ ಗಿಡ ತರಕಾರಿ ಹಾಗೂ ಮನೆ ಮದ್ದಾಗಿ ಹಿಂದಿನಿಂದಲೂ ಬಳಕೆಯಲ್ಲಿದೆ.

Drumstick: ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನೆ ಹೊಂದಿವೆ! ಮಿಸ್ ಮಾಡಬೇಡಿ
ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನೆ ಹೊಂದಿವೆ!
TV9 Web
| Edited By: ಸಾಧು ಶ್ರೀನಾಥ್​|

Updated on: Jun 01, 2022 | 6:06 AM

Share

ನುಗ್ಗೆ ಕಾಯಿ, ನುಗ್ಗೆ ಸೊಪ್ಪು ಎಲ್ಲರಿಗೂ ಚಿರಪರಿಚಿತವಾದ ತರಕಾರಿ. ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳಿಂದ ತುಂಬಿವೆ. ಆಂಗ್ಲ ಭಾಷೆಯಲ್ಲಿ Drumstick tree. Moringa drumstick tree, ಸಂಸ್ಕೃತ ಭಾಷೆಯಲ್ಲಿ ಶೋಭಾಂಜನ, ತೀಕ್ಷ್ಣ ಗಂಧ ಎಂದೂ. ಹಿಂದಿ ಭಾಷೆಯಲ್ಲಿ ಸಹಜನ, ಮುನಗಾ ಎಂದೂ ತೆಲುಗುವಿನಲ್ಲಿ ಮುನಗ ಮಾನು, ಮುನಗ ಕಾಯಿ ಎಂದು ಕರೆಯುತ್ತಾರೆ.

ನುಗ್ಗೆಯಲ್ಲಿ ಕಿತ್ತಳೆಗಿಂತ ಹೆಚ್ಚು ಸಿ ವಿಟಮಿನ್, ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ, ಕ್ಯಾರೆಟ್ ಗಿಂತ ಹೆಚ್ಚು ಎ ವಿಟಮಿನ್, ಬಾದಾಮಿಗಿಂತ ಹೆಚ್ಚು ಇ ವಿಟಮಿನ್ ಇದೆಯೆಂದು ಹೇಳಲಾಗುತ್ತದೆ. ನುಗ್ಗೆ ಕಾಯಿ ಗಿಡ ತರಕಾರಿ ಹಾಗೂ ಮನೆ ಮದ್ದಾಗಿ ಹಿಂದಿನಿಂದಲೂ ಬಳಕೆಯಲ್ಲಿದೆ:

  1. * ನುಗ್ಗೆ ಸೊಪ್ಪು ಬೇಯಿಸಿ ತೆಗೆದು ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
  2. * ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ನುಗ್ಗೆ ಸೊಪ್ಪು ಕಾಯಿ ಉತ್ತಮ ಆಹಾರವಾಗಿದೆ.
  3. * ಬೇಯಿಸಿ ಬಸಿದ ಸೊಪ್ಪಿನ ರಸಕ್ಕೆ ನಿಂಬೆ ರಸ ಸೇರಿಸಿ ಸೇವಿಸಿದರೆ ತಲೆ ಸುತ್ತು ನಿವಾರಣೆಯಾಗುತ್ತದೆ.
  4. * ನುಗ್ಗೆ ಕಾಯಿ ಸೇವನೆಯಿಂದ ನಿರ್ವೀರ್ಯತೆ, ನರಗಳ ದೌರ್ಬಲ್ಯ, ಮಲಬದ್ಧತೆ ನಿವಾರಣೆಯಾಗುತ್ತದೆ.
  5. * ನುಗ್ಗೆ ಎಲೆಗಳ 10 ಎಂ ಎಲ್ ರಸದಲ್ಲಿ ಶುದ್ಧವಾದ ಒಂದು ಟೀ ಚಮಚ ಜೇನುತುಪ್ಪ ಬೆರೆಸಿ ಅಂಜನ ಮಾಡಿದರೆ ಕಣ್ಣಿನ ರೋಗಗಳಲ್ಲಿ ಉಪಯುಕ್ತವಾಗಿದೆ.
  6. * ದೇಹದ ಬಾವು ನೋವುಗಳಿಗೆ ನುಗ್ಗೆ ಗಿಡದ ಚಕ್ಕೆಯನ್ನು ನೀರಿನಲ್ಲಿ ತೇಯ್ದು 10 ಗ್ರಾಂ ನಷ್ಟು ಸೇವನೆ ಮಾಡಬೇಕು.
  7. * ಪುರುಷತ್ವ ವೃದ್ಧಿಗೆ ಎಂಟ್ಹತ್ತು ನುಗ್ಗೆ ಹೂಗಳನ್ನು ಹಾಲಿನಲ್ಲಿ ಬೇಯಿಸಿ ಎರಡು ಬಾರಿ ಕುಡಿಯಬೇಕು.
  8. * ನುಗ್ಗೆ ಸೊಪ್ಪು ಅರೆದು ಸಾಸಿವೆ ಎಣ್ಣೆಯಲ್ಲಿ ಕುದಿಸಿ ಈ ಎಣ್ಣೆಯನ್ನು ಮೊಳಕಾಲು ನೋವಿಗೆ ಬಳಸಬಹುದಾಗಿದೆ.
  9. * ನುಗ್ಗೆ ಗಿಡದ ಬೇರನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿದ ಎಣ್ಣೆಯು ಚರ್ಮ ರೋಗಗಳಿಗೆ ಉಪಯುಕ್ತವಾಗಿದೆ.
  10. * ನುಗ್ಗೆ ಗಿಡದ 100 ಗ್ರಾಂ ನಷ್ಟು ಎಲೆಗಳಲ್ಲಿ 20 ಗ್ರಾಂ ಒಣ ಶುಂಠಿ, 05 ಗ್ರಾಂ ಇಂಗು ಸೇರಿಸಿ ನೀರಿನಲ್ಲಿ ಅರೆದು ಸಣ್ಣ ಸಣ್ಣ ಗಾತ್ರದ ಗುಳಿಗೆಗಳನ್ನು ಮಾಡಿ ದಿನದಲ್ಲಿ ಮೂರು ಬಾರಿ ಸೇವಿಸಿದರೆ ಹೊಟ್ಟೆಯುಬ್ಬರ ಮತ್ತು ಹೊಟ್ಟೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.
  11. * ಇದರ ಅಂಟನ್ನು ಬಾಯಿಯಲ್ಲಿ ಚೀಪುತ್ತಿದ್ದರೆ ಹಲ್ಲು ನೋವಿಗೆ ಪರಿಹಾರ.
  12. * ಅರ್ಧ ತಲೆ ನೋವಿಗೆ ನುಗ್ಗೆ ಎಲೆಗಳ ರಸವನ್ನು ನೋವಿರುವ ವಿರುದ್ಧದ ಕಿವಿಯಲ್ಲಿ ನಾಲ್ಕೈದು ಹನಿ ಹಾಕಬೇಕು.
  13. * ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆ ಮಾಡುವ ಮತ್ತು ರಕ್ತದೊತ್ತಡ ನಿವಾರಿಸುವ ಗುಣ ನುಗ್ಗೆಯಲ್ಲಿದೆ. ಮೂಳೆಗಳನ್ನು ಬಲಪಡಿಸುವ, ಮಲಬದ್ಧತೆ ಅಸಿಡಿಟಿ ಗ್ಯಾಸ್ಟ್ರಿಕ್ ದೂರ ಮಾಡುವ ಗುಣ ಹೊಂದಿರುವ ಈ ನುಗ್ಗೆ ಗಿಡದ ಚಕ್ಕೆಗೆ ಸ್ವದೇಶಿ ಪೆನ್ಸಿಲಿನ್ ಎಂದೂ ಕರೆಯಲಾಗುತ್ತದೆ.
  14. ಮಾರುಕಟ್ಟೆಯಲ್ಲಿ ನುಗ್ಗೆ ಬೀಜದ ಎಣ್ಣೆ, Moringa ಹೆಸರಿನಲ್ಲಿ ಇದರ ಸೊಪ್ಪಿನ ಪೌಡರ್ ಮಾರಾಟ ಮಾಡುತ್ತಾರೆ. (ಮಾಹಿತಿ ಸಂಗ್ರಹ: ಎಸ್​ ಹೆಚ್​ ನದಾಫ್)

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ