AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pediatric Liver Disease: ನಿಮ್ಮ ಮಕ್ಕಳಲ್ಲಿ ಹೆಪಟೈಟಿಸ್ ತಡೆಯಲು ಡಾ. ರಾಕೇಶ್ ಹೇಳಿರುವ ಈ ಸಲಹೆಯನ್ನು ಅನುಸರಿಸಿ

Pediatrics Liver diseases: ಹದಗೆಡುತ್ತಿರುವ ಜೀವಶೈಲಿಯಿಂದಾಗಿ ಮಕ್ಕಳಲ್ಲಿಯೂ ಅನೇಕಾನೇಕ ರೋಗಗಳು ಕಂಡು ಬರುತ್ತಿದೆ. ಅದರಲ್ಲಿ ಯಕೃತ್ತು ಅಥವಾ ಪಿತ್ತಜನಕಾಂಗದ ಕಾಯಿಲೆಗಳು ಒಂದು. ನಿಮಗೆ ಗೊತ್ತಾ? ಮಕ್ಕಳಲ್ಲಿಯೂ ಯಕೃತ್ತಿನ ಕಾಯಿಲೆ ಕಂಡು ಬರುತ್ತದೆ. ಇದನ್ನು ಪೀಡಿಯಾಟ್ರಿಕ್ ಲಿವರ್ ಡಿಸೀಸ್ ಎಂದು ಕರೆಯಲಾಗುತ್ತದೆ. ದಿನದಿಂದ ದಿನಕ್ಕೆ ಚಿಕ್ಕ ಮಕ್ಕಳಲ್ಲಿ ಹೆಪಟೈಟಿಸ್ ರೋಗ ಹೆಚ್ಚಾಗುತ್ತಿದೆ. ಇದು ಗಂಭೀರವಾದ ಯಕೃತ್ತಿನ ಕಾಯಿಲೆಯಾಗಿದ್ದು, ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2023 ರಲ್ಲಿ, ವಿಶ್ವಾದ್ಯಂತ ಮಕ್ಕಳಲ್ಲಿ ಸುಮಾರು 1.5 ಮಿಲಿಯನ್ ಹೆಪಟೈಟಿಸ್ ಪ್ರಕರಣಗಳು ಕಂಡು ಬಂದಿವೆ. ಹಾಗಾದರೆ ಮಕ್ಕಳಲ್ಲಿ ಯಕೃತ್ತಿನ ಕಾಯಿಲೆ ಕಂಡು ಬರಲು ಕಾರಣವೇನು? ಹೇಗೆ ಕಂಡು ಬರುತ್ತದೆ? ಅದರ ರೋಗಲಕ್ಷಣಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ತಜ್ಞರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

Pediatric Liver Disease: ನಿಮ್ಮ ಮಕ್ಕಳಲ್ಲಿ ಹೆಪಟೈಟಿಸ್ ತಡೆಯಲು ಡಾ. ರಾಕೇಶ್ ಹೇಳಿರುವ ಈ ಸಲಹೆಯನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 12, 2024 | 11:15 AM

Share

ವಯಸ್ಸು ಹೆಚ್ಚಾದಂತೆ ಅನೇಕ ರೀತಿಯ ಕಾಯಿಲೆಗಳು ಕಂಡು ಬರುವುದು ಸಹಜ. ಆದರೆ ಇತ್ತೀಚಿನ ಹದಗೆಡುತ್ತಿರುವ ಜೀವಶೈಲಿಯಿಂದಾಗಿ ಮಕ್ಕಳಲ್ಲಿಯೂ ಅನೇಕಾನೇಕ ರೋಗಗಳು ಕಂಡು ಬರುತ್ತಿದೆ. ಅದರಲ್ಲಿ ಯಕೃತ್ತು ಅಥವಾ ಪಿತ್ತಜನಕಾಂಗದ ಕಾಯಿಲೆಗಳು ಒಂದು. ನಿಮಗೆ ಗೊತ್ತಾ? ಮಕ್ಕಳಲ್ಲಿಯೂ ಯಕೃತ್ತಿನ ಕಾಯಿಲೆ ಕಂಡು ಬರುತ್ತದೆ. ಇದನ್ನು ಪೀಡಿಯಾಟ್ರಿಕ್ ಲಿವರ್ ಡಿಸೀಸ್ (Pediatric Liver Disease) ಎಂದು ಕರೆಯಲಾಗುತ್ತದೆ. ದಿನದಿಂದ ದಿನಕ್ಕೆ ಚಿಕ್ಕ ಮಕ್ಕಳಲ್ಲಿ ಹೆಪಟೈಟಿಸ್ ರೋಗ ಹೆಚ್ಚಾಗುತ್ತಿದೆ. ಇದು ಗಂಭೀರವಾದ ಯಕೃತ್ತಿನ ಕಾಯಿಲೆಯಾಗಿದ್ದು, ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2023 ರಲ್ಲಿ, ವಿಶ್ವಾದ್ಯಂತ ಮಕ್ಕಳಲ್ಲಿ ಸುಮಾರು 1.5 ಮಿಲಿಯನ್ ಹೆಪಟೈಟಿಸ್ ಪ್ರಕರಣಗಳು ಕಂಡು ಬಂದಿವೆ. ಹಾಗಾದರೆ ಮಕ್ಕಳಲ್ಲಿ ಯಕೃತ್ತಿನ ಕಾಯಿಲೆ ಕಂಡು ಬರಲು ಕಾರಣವೇನು? ಹೇಗೆ ಕಂಡು ಬರುತ್ತದೆ? ಅದರ ರೋಗಲಕ್ಷಣಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ತಜ್ಞರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಏಮ್ಸ್ ನ ಮಕ್ಕಳ ವಿಭಾಗದ ಡಾ. ರಾಕೇಶ್ ಕುಮಾರ್ ಅವರು ಹೇಳುವ ಪ್ರಕಾರ, “ಕಲುಷಿತ ನೀರು ಮತ್ತು ಕಲಬೆರಕೆಯ ಆಹಾರದಿಂದಾಗಿ ಮಕ್ಕಳು ಹೆಪಟೈಟಿಸ್ ರೋಗಕ್ಕೆ ಬಲಿಯಾಗುತ್ತಾರೆ” ಎಂದು ಹೇಳುತ್ತಾರೆ. “ಅದರಲ್ಲಿಯೂ ಹೆಪಟೈಟಿಸ್ ನಲ್ಲಿ ಐದು ವಿಧಗಳಿವೆ (ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ). ಹೆಪಟೈಟಿಸ್ ಎ ಮಕ್ಕಳಿಗೆ ಹೆಚ್ಚು ಅಪಾಯ ತರಬಹುದು. ಈ ರೋಗವು ಯಕೃತ್ತಿನಲ್ಲಿ ಊತವನ್ನು ಉಂಟುಮಾಡುತ್ತದೆ. ಇದರಿಂದಾಗಿ ಯಕೃತ್ತಿನ ಜೀವಕೋಶಗಳು ಹಾನಿಗೊಳಗಾಗುತ್ತವೆ. ಕೆಲವು ಸಂದರ್ಭಗಳಲ್ಲಿ, ರೋಗನಿರೋಧಕ ಸಂಬಂಧಿತ ಸಮಸ್ಯೆಗಳು ಮತ್ತು ತಪ್ಪು ರಕ್ತ ವರ್ಗಾವಣೆ ಕೂಡ ಹೆಪಟೈಟಿಸ್ಗೆ ರೋಗಕ್ಕೆ ಕಾರಣವಾಗುತ್ತದೆ” ಎಂದು ಹೇಳುತ್ತಾರೆ.

ಹೆಪಟೈಟಿಸ್ ಹೇಗೆ ಅಪಾಯಕಾರಿ?

ಜನನದ ನಂತರ ಹೆಪಟೈಟಿಸ್ ಲಸಿಕೆ ಪಡೆಯದ ಮಕ್ಕಳಲ್ಲಿ ಈ ರೋಗ ಬರುವ ಅಪಾಯವಿದೆ ಎಂದು ಡಾ. ರಾಕೇಶ್ ಹೇಳುತ್ತಾರೆ. ಹೆಪಟೈಟಿಸ್ ಅನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ, ಅದು ಯಕೃತ್ತಿನ ಸೋಂಕಿಗೆ ಕಾರಣವಾಗುತ್ತದೆ. ನಂತರ ಇದು ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು. ಹಾಗಾಗಿ ಇದರ ರೋಗಲಕ್ಷಣಗಳನ್ನು ಸಮಯೋಚಿತವಾಗಿ ಗುರುತಿಸುವುದು ಮುಖ್ಯ.

ಹೆಪಟೈಟಿಸ್ ನ ಲಕ್ಷಣಗಳು ಯಾವುವು?

ಕಣ್ಣುಗಳು ಹಳದಿಯಾಗುವುದು

ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವುದು

ದಣಿವಾಗುವುದು

ವಾಂತಿ

ಅತಿಸಾರ

ಹೊಟ್ಟೆ ನೋವು

ಹಸಿವಾಗದಿರುವುದು

ಇದನ್ನೂ ಓದಿ: ಸಂಧಿವಾತವಿದ್ದರೆ ಈ ತಪ್ಪುಗಳನ್ನು ಮಾಡಬೇಡಿ, ಸಮಸ್ಯೆ ಹೆಚ್ಚಾಗುತ್ತದೆ

ಹೆಪಟೈಟಿಸ್ ಪರೀಕ್ಷೆ ಮಾಡುವುದು ಹೇಗೆ?

ರಕ್ತ ಪರೀಕ್ಷೆ

ಪಿತ್ತಜನಕಾಂಗದ ಕಿಣ್ವ ಪರೀಕ್ಷೆ

ಎಲ್ಎಫ್ಟಿ (LFT)

ಸೆಲ್ಯುಲಾರ್ ರಕ್ತ ಪರೀಕ್ಷೆ CT ಸ್ಕ್ಯಾನ್

ಅಲ್ಟ್ರಾಸೌಂಡ್

ಪಿತ್ತಜನಕಾಂಗದ ಬಯಾಪ್ಸಿ

ಹೆಪಟೈಟಿಸ್ ನಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?

ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ

ಮಕ್ಕಳಿಗೆ ಹೊರಗಿನ ಆಹಾರವನ್ನು ನೀಡಬೇಡಿ

ಕುಡಿಯಲು ಶುದ್ಧ ನೀರು ಕೊಡಿ.

ಹೆಪಟೈಟಿಸ್ ವಿರುದ್ಧ ಲಸಿಕೆ ಹಾಕಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ