Theertha or Sacred Water: ಪುಣ್ಯ ಜಲ, ಪವಿತ್ರ ತೀರ್ಥದ ಮಹತ್ವ: ಪೂಜೆಯ ವೇಳೆ ನಾವು ತೀರ್ಥವನ್ನು ಹೇಗೆ ಸ್ವೀಕರಿಸಬೇಕು?

Spiritual Significance of Holy water: ತೀರ್ಥವನ್ನು ಸ್ವೀಕರಿಸಿದ ಬಳಿಕ ಭಕ್ತರು ಅದನ್ನ ತಲೆಗೆ ಒರೆಸಿಕೊಳ್ಳುತ್ತಾರೆ. ಆದರೆ ಆ ರೀತಿ ಮಾಡಬಾರದು. ತಲೆಯ ಮೇಲೆ ಬ್ರಹ್ಮ ದೇವರು ಇರುತ್ತಾರೆ. ನಮ್ಮ ಎಂಜಲನ್ನು ಬ್ರಹ್ಮನಿಗೆ ಅರ್ಪಣೆ ಮಾಡಿದವರಾಗುತ್ತೇವೆ. ಆದ್ದರಿಂದ ಕಣ್ಣಿಗೆ ಒತ್ತಿಕೊಳ್ಳುವುದು ಉತ್ತಮ. ಮನೆಯಲ್ಲಿ ತೀರ್ಥ ಸ್ವೀಕರಿಸುವಾಗ ಕೆಳಗೆ ಕೂತು ಸ್ವೀಕರಿಸಬೇಕು. ದೇವಸ್ಥಾನದಲ್ಲಾದರೆ ನಿಂತುಕೊಂಡು ಸ್ವೀಕರಿಸಬಹುದು.

Theertha or Sacred Water: ಪುಣ್ಯ ಜಲ, ಪವಿತ್ರ ತೀರ್ಥದ ಮಹತ್ವ: ಪೂಜೆಯ ವೇಳೆ ನಾವು ತೀರ್ಥವನ್ನು ಹೇಗೆ ಸ್ವೀಕರಿಸಬೇಕು?
ತೀರ್ಥ ತೆಗೆದುಕೊಳ್ಳುವುದರ ವಿಧಾನ ಮತ್ತು ಮಹತ್ವ
Follow us
|

Updated on:Aug 27, 2024 | 5:15 PM

ತೀರ್ಥ ಅಥವಾ ಪವಿತ್ರ ನೀರು ಕೇವಲ ಸಾಮಾನ್ಯ ನೀರಲ್ಲ. ಆದರೆ ಕರ್ಪೂರ, ಲವಂಗ, ಕೇಸರಿ, ಏಲಕ್ಕಿ, ತುಳಸಿ (ಪವಿತ್ರ ತುಳಸಿ) ಸೇರಿದಂತೆ ವಿವಿಧ ಪದಾರ್ಥಗಳ ಸಂಯೋಜನೆಯಾಗಿದೆ. ಮೂರು ಚಮಚದಷ್ಟು ತೀರ್ಥವನ್ನು ಭಕ್ತರಿಗೆ ಹಂಚಲಾಗುತ್ತದೆ. ಈ ನೀರು ದೈಹಿಕ-ಮಾನಸಿಕ ಚಿಕಿತ್ಸೆಯ ಮೂಲವಾಗಿದೆ. ನೈಸರ್ಗಿಕ ರಕ್ತ ಶುದ್ಧೀಕರಣ ಸೇರಿದಂತೆ ಉತ್ತಮ ಔಷಧೀಯ ಮೌಲ್ಯವನ್ನು ಹೊಂದಿದೆ. ಅದೇ ನೀರಿನಿಂದ ವಿಗ್ರಹವನ್ನು ಸ್ನಾನ ಮಾಡಿರುವುದರಿಂದ ನೀರಿನಲ್ಲಿ ಕಾಂತೀಯ ವಿಕಿರಣವೂ ಇರುತ್ತದೆ. ಇನ್ನು, ಎರಡು ನಿರ್ದಿಷ್ಟ ಆಶೀರ್ವಾದಗಳು ಅಂದರೆ ತೀರ್ಥ ಸ್ವೀಕಾರ ಮತ್ತು ಶಠಾರಿಗೆ ಭಕ್ತರ ಎಲ್ಲಾ ಪಾಪಗಳನ್ನು ತೊಳೆಯುವ ಶಕ್ತಿ ಇದೆ.

ತೀರ್ಥ ಪದಾರ್ಥಗಳು ಈ ಕೆಳಗಿನ ಪ್ರಾಮುಖ್ಯತೆಯನ್ನು ಹೊಂದಿವೆ: * ಲವಂಗ – ದಂತಕ್ಷಯದಿಂದ ರಕ್ಷಿಸುತ್ತದೆ. * ಕರ್ಪೂರ ಮತ್ತು ಏಲಕ್ಕಿ – ಕೆಮ್ಮು ಮತ್ತು ನೆಗಡಿ ವಿರುದ್ಧ ರಕ್ಷಣೆ. * ಕೇಸರಿ ಮತ್ತು ತುಳಸಿ (ಪವಿತ್ರ ತುಳಸಿ) – ನೈಸರ್ಗಿಕವಾಗಿ ಬಾಯಿಯನ್ನು ತಾಜಾಗೊಳಿಸುವ ಪರಿಣಾಮ ಒದಗಿಸುತ್ತದೆ.

ದೇವರ ಪೂಜೆಯನ್ನು ಮಾಡಿದ ನಂತರ ತೀರ್ಥವನ್ನು ತೆಗೆದುಕೊಳ್ಳುವುದು ಅತ್ಯಂತ ಪುಣ್ಯ ಕಾರ್ಯವೆಂದು ಪರಿಗಣಿಸಲಾಗುತ್ತದೆ. ನಾವು ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ಅರ್ಚಕರು ನಮಗೆ ಪವಿತ್ರ ನೀರನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ನಾವು ಹಸ್ತ ಗೋಕರ್ಣ ಮುದ್ರೆಯನ್ನು ಮಾಡಿ ತೀರ್ಥವನ್ನು ತೆಗೆದುಕೊಳ್ಳುತ್ತೇವೆ. ಗೋಕರ್ಣ ಮುದ್ರೆಯಲ್ಲಿ ನಮ್ಮ ಹೆಬ್ಬೆರಳು ತೋರ್ಬೆರಳನ್ನು ನಿಯಂತ್ರಿಸುತ್ತದೆ. ತೋರ್ಬರಳಿನ ಬೆನ್ನಿನ ಮೇಲೆ ಹೆಬ್ಬೆರಳನ್ನು ಇಡಲಾಗುತ್ತದೆ.

ಮತ್ತುಳಿದ ಮೂರು ಬೆರಳುಗಳು ಮುಂದಕ್ಕೆ ಚಾಚಿಕೊಂಡಿರುತ್ತದೆ. ಮುದ್ರೆಯನ್ನು ಮಾಡಿಕೊಂಡ ನಂತರ ಭಕ್ತರು ಅಂಗೈಯ ಆಳವಾದ ಭಾಗದಲ್ಲಿ ದೇವರ ಪವಿತ್ರ ನೀರನ್ನು ತೆಗೆದುಕೊಂಡು ಬಾಯಿಯಿಂದ ಯಾವುದೇ ಶಬ್ದವನ್ನು ಮಾಡದೆ ಪ್ರಾರ್ಥಿಸಬೇಕು. ತೀರ್ಥ ತೆಗೆದುಕೊಳ್ಳುವಾಗಲೇ ಸ್ವಲ್ಪ ಪ್ರಮಾಣದ ಪವಿತ್ರ ನೀರನ್ನು ಮಾತ್ರ ತೆಗೆದುಕೊಳ್ಳಬೇಕು. ಇದರ ಹಿಂದಿರುವ ಕಾರಣವೇನೆಂದರೆ, ತೀರ್ಥವು ( ದೇವರ ಪ್ರಸಾದವೂ ಸಹ) ಮಲವಾಗಿ ಅಲ್ಲ, ಲಾಲಾರಸವಾಗಿ ಬದಲಾಗಬೇಕು.

ತೀರ್ಥ ತೆಗೆದುಕೊಳ್ಳುವುದರ ವಿಧಾನ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳಿ

ಎಷ್ಟು ಬಾರಿ ತೀರ್ಥ ದ ನೀರನ್ನು ತೆಗೆದುಕೊಳ್ಳಬೇಕು..?

ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಸೂಚನೆಯ ಪ್ರಕಾರ ಮನೆಯಲ್ಲಿ ಸಾಮಾನ್ಯವಾಗಿ ಪೂಜೆ ಮಾಡಿದ ನಂತರ, ತೀರ್ಥವನ್ನು ತೆಗೆದುಕೊಳ್ಳಬೇಕು. ಅಂದು ಅನ್ನಗ್ರಹಣದ ಸಾಧ್ಯತೆ ಇಲ್ಲದಿದ್ದರೆ ಮೂರು ಬಾರಿ ತೀರ್ಥವನ್ನು ತೆಗೆದಿಕೊಳ್ಳಬೇಕು. ನೀವು ದೇವಸ್ಥಾನಕ್ಕೆ ಹೋದಾಗ ಒಮ್ಮೆ ಮಾತ್ರ ತೀರ್ಥದ ನೀರನ್ನು ತೆಗೆದುಕೊಳ್ಳಿ. ಏಕಾದಶಿಯಂದು ಉಪವಾಸ ಮಾಡುವ ಆರಾಧಕರು ಅಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ಮರುದಿನ ಸೂರ್ಯೋದಯದಲ್ಲಿ ಮತ್ತೊಮ್ಮೆ ತೀರ್ಥವನ್ನು ತೆಗೆದುಕೊಳ್ಳಬೇಕು.

ಇದು ನಿಮ್ಮ ಉಪವಾಸ ವ್ರತದ ಮುಕ್ತಾಯವನ್ನು ಸೂಚಿಸುತ್ತದೆ. ಮನೆಯಲ್ಲಿ ನೈಮಿತ್ತಿಕ ಸತ್ಯನಾರಾಯಣ ಪೂಜೆಯಂತಹ ಮಹಾಪೂಜೆಯು ನಡೆಯುತ್ತಿದ್ದರೆ ಅಂದು ಬೆಳಗ್ಗೆ ನಿತ್ಯ ಪೂಜೆಯ ನಂತರ ಪುಣ್ಯಜಲವನ್ನು ತಕ್ಷಣ ತೆಗೆದುಕೊಳ್ಳಬಾರದು. ಮಹಾಪೂಜೆ ಅಥವಾ ಶ್ರಾದ್ಧದ ನಂತರ, ಪೂಜೆಯ ಕಥೆಯನ್ನು ಕೇಳುವ ಮೊದಲು ತೀರ್ಥದ ನೀರನ್ನು ತೆಗೆದುಕೊಳ್ಳಿ. ದೇವ ಗೌರವ ಮತ್ತು ಪಿತೃ ಗೌರವವನ್ನು ಈ ಮೂಲಕ ಸರಳಗೊಳಿಸಬಹುದು.

ಈ ಸಂದರ್ಭಗಳಲ್ಲಿ ತೀರ್ಥವನ್ನು ತೆಗೆದುಕೊಳ್ಳಿ:

ಯಾರಿಗಾದರೂ ಜೀವನದ ಅಂತ್ಯ ಸಮಯ ಬಂದಿದ್ದರೆ ಅಂದರೆ ಯಾವುದೇ ವ್ಯಕ್ತಿ ಸಾವಿನ ಅಂತಿಮ ಕ್ಷಣದಲ್ಲಿದ್ದರೆ ತುಳಸಿಪತ್ರೆ (ತುಳಸಿ ಎಲೆ) ಮತ್ತು ದೇವತೀರ್ಥವನ್ನು ಅವರ ಬಾಯಿಗೆ ಹಾಕಲಾಗುತ್ತದೆ. ಯಾರಾದರೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರಿಗೆ ತೀರ್ಥದ ನೀರನ್ನು ಕುಡಿಸಬೇಕು. ಕುಟುಂಬದ ಯಾವುದೇ ಸದಸ್ಯರು ಕಿರುಕುಳ ಮಾಡುತ್ತಿದ್ದರೆ ಅಥವಾ ಧರ್ಮ ನಿಂದೆಯಂತಹ ಅಪರಾಧಗಳನ್ನು ಮಾಡಿದ್ದರೆ, ಮೊದಲು ಅವರಿಗೆ ತೀರ್ಥದ ನೀರನ್ನು ತೆಗೆದುಕೊಳ್ಳುವಂತೆ ಮಾಡಿ.

Also Read: Roofless Shikari Devi Temple: ಆ ದೇವಸ್ಥಾನ ಬಟಾಬಯಲಿನಲ್ಲಿದೆ, ಶಿಕಾರಿ ದೇವಿಗೆ ಆಕಾಶವೇ ಶ್ರೀರಕ್ಷೆ! ಎಲ್ಲಿದೆ ಈ ಮಂದಿರ?

ತೀರ್ಥದ ನೀರು ಸಂಜೆಯ ವೇಳೆಗೆ ಕಲುಷಿತಗೊಳ್ಳುತ್ತದೆ. ಪಂಚಾಮೃತ ತೀರ್ಥ ಪ್ರಾಶನ ಮಾಡಿದ ನಂತರ ನಿಮ್ಮ ಕೈಗಳನ್ನು ನಿಮ್ಮ ತಲೆಯ ಮುಂಭಾಗದಿಂದ ಹಿಂದಕ್ಕೆ ತೆಗೆದುಕೊಂಡು ಹೋಗುವ ಮೂಲಕ ತೀರ್ಥವನ್ನು ತೆಗೆದುಕೊಳ್ಳಿ. ಇದನ್ನು ಮಾಡುವುದರಿಂದ ನಿಮ್ಮ ತೀರ್ಥ ಪ್ರಕ್ರಿಯೆಯು ಮುಕ್ತಾಯವಾಗಿದೆ ಎಂದರ್ಥ.

ಪೂಜೆಯ ನಂತರ ಮಾತ್ರ ನಾವು ತೀರ್ಥವನ್ನು ತೆಗೆದುಕೊಳ್ಳಬೇಕೆಂಬದನ್ನು ಗಮನದಲ್ಲಿಟ್ಟುಕೊಳ್ಳಿ. ಮತ್ತು ತೀರ್ಥವನ್ನು ತೆಗೆದುಕೊಳ್ಳುವಾಗ ನಾವು ಈ ಮೇಲಿನ ಎಲ್ಲಾ ನಿಯಮಗಳನ್ನು ಅನುಸರಿಸಬೇಕು. ಇದರಲ್ಲಿ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ ನೀವು ತೀರ್ಥವನ್ನು ತೆಗೆದುಕೊಂಡ ನಂತರ ನಿಮ್ಮ ಎರಡೂ ಅಂಗೈಯನ್ನು ತಲೆಗೆ ಸವರಿಕೊಳ್ಳಬಾರದು ಬದಲಾಗಿ ಎರಡು ಅಂಗೈಗಳನ್ನು ಉಜ್ಜಬೇಕು.

ತೀರ್ಥ ಹೇಗೆ ಸ್ವೀಕರಿಸಬೇಕು:

ತೀರ್ಥ ತೆಗೆದುಕೊಳ್ಳುವ ಮೂರು ಬಾರಿಯೂ ಸಹ ಬಲಗೈ ಕೆಳಗೆ ಎಡಗೈ ಇಟ್ಟು ತೀರ್ಥ ಸ್ವೀಕರಿಸಬೇಕು. ಬಲಗೈನ ತೋರು ಬೆರಳು ಮಧ್ಯಕ್ಕೆ ಹೆಬ್ಬೆರಳನ್ನು ಮಡಚಿದರೆ ಗೋಮುಖ ಎಂಬ ಮುದ್ರ ಬರುತ್ತದೆ. ಈ ಮುದ್ರೆಯಲ್ಲಿ ತೀರ್ಥವನ್ನು ಸ್ವೀಕರಿಸಬೇಕು. ತೀರ್ಥವನ್ನು ಸ್ವೀಕರಿಸಿದ ಬಳಿಕ ತಲೆಗೆ ಒರೆಸಿಕೊಳ್ಳುತ್ತಾರೆ. ಆದರೆ ಆ ರೀತಿ ಮಾಡಬಾರದು. ತಲೆಯ ಮೇಲೆ ಬ್ರಹ್ಮ ದೇವರು ಇರುತ್ತಾರೆ. ನಮ್ಮ ಎಂಜಲನ್ನು ಬ್ರಹ್ಮನಿಗೆ ಅರ್ಪಣೆ ಮಾಡಿದವರಾಗುತ್ತೇವೆ. ಆದ್ದರಿಂದ ಕಣ್ಣಿಗೆ ಒತ್ತಿಕೊಳ್ಳುವುದು ಉತ್ತಮ. ಮನೆಯಲ್ಲಿ ತೀರ್ಥ ಸ್ವೀಕರಿಸುವಾಗ ಕೆಳಗೆ ಕೂತು ಸ್ವೀಕರಿಸಬೇಕು. ದೇವಸ್ಥಾನದಲ್ಲಾದರೆ ನಿಂತುಕೊಂಡು ಸ್ವೀಕರಿಸಬಹುದು .

ತೀರ್ಥವನ್ನು ಮಾಡುವುದು ಹೇಗೆ ?

ಯಾಲಕ್ಕಿ , ತುಳಸಿ , ಲವಂಗ ಮುಂತಾದವುಗಳಿಂದ… ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ. ತೀರ್ಥಸೇವನೆಯಿಂದ ದೇಹದಲ್ಲಿ ಚೈತನ್ಯ ತುಂಬಿ, ಆಹ್ಲಾದವಾಗುತ್ತದೆ. ಆರೋಗ್ಯಕರವೂ ಹೌದು. ಹೇಗೆಂದರೆ, ಲವಂಗ ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ. ತುಳಸಿ ನೆಗಡಿ, ಕೆಮ್ಮು ಬರದಂತೇ ತಡೆಯುತ್ತದೆ, ಯಾಲಕ್ಕಿ ಅಥವಾ ಪಚ್ಚಕರ್ಪೂರ ಬಾಯಿಯನ್ನು ಶುದ್ಧವಾಗಿಸುತ್ತದೆ. ಹೀಗೆ ಇನ್ನೂ ಅನೇಕ ಔಷದೀಯ ಗುಣಗಳು ತೀರ್ಥದಲ್ಲಿರುತ್ತವೆ.

ತೀರ್ಥ ತಯಾರಿ ಹೇಗೆ? ಎರಡು ನಿಯಮಗಳು ಯಾವುವು?

ನಾವು ನಿತ್ಯ ಪೂಜೆಯ ಸಮಯದಲ್ಲಿ ಭಗವಂತನ ಮೇಲೆ ಸ್ನಾನದ ಪ್ರಯುಕ್ತ ಅಭಿಷೇಕ ಮಾಡುವ ಪದ್ಧತಿ: ಅವುಗಳಲ್ಲಿ ನಾಲ್ಕು ವಿಧದ ಅಭಿಷೇಕ. ಮಲಾಪಕರ್ಷಣ, ಪಂಚಾಮೃತ ಸ್ನಾನ, ಶುದ್ಧೋದಕ ಸ್ನಾನ, ಅಮೃತ ಅಭಿಷೇಕ.

Also Read: Krishna janmashtami-Saligrama Pooja – ಜನ್ಮಾಷ್ಟಮಿ ದಿನ ಸಾಲಿಗ್ರಾಮ ಪೂಜೆ ಮಾಡುವುದರಿಂದ ಆಗುವ ಲಾಭಗಳೇನು, ಪೂಜೆಯ ವಿಧಾನ ಹೇಗೆ?

ಇವುಗಳಲ್ಲದೆ ಇನ್ನೂ ಹಲವಾರು ದ್ರವ್ಯಗಳ ಸ್ನಾನ ಮಾಡುತ್ತಾರೆ. ಇವುಗಳಲ್ಲಿ ಅಮೃತ ಅಭಿಷೇಕ ಶಂಖದ ಮೂಲಕ ಮಾಡುವುದು. ಇದನ್ನು ತೀರ್ಥ ಎಂದು ಸೇವಿಸುತ್ತೇವೆ. ಒಂದು ಮಾತು ಕೇಳಿರಬಹುದು. ಶಂಖದಿಂದ ಬಂದರೆ ತೀರ್ಥ. ಇವೆಲ್ಲವೂ ಪುರಾಣೋಕ್ತ ಪೂಜೆ. ಇನ್ನು ಬರೀ ಜಲವನ್ನು ತೀರ್ಥವೆಂದು ತಿಳಿಯುವ ಬಗ್ಗೆ ಕೂಡಾ ಮಾಹಿತಿ ಹೀಗಿದೆ.

ಗಂಗಾನದಿಯ ನೀರನ್ನು ಸ್ನಾನ ಪಾನ ಮೊದಲಾದುವುಗಳಿಗೆ ಉಪಯೋಗ ಮಾಡುವುದು. ಇದರಲ್ಲಿ ವೈಜ್ಞಾನಿಕತೆ ಅಡಗಿದೆ. ಹಿಮಾಲಯದ ತಪ್ಪಲಲ್ಲಿರುವ ವನಸ್ಪತಿ ಹಾಗೂ ಖನಿಜಗಳನ್ನು ಹಾದು ಬರುವ ಪರಿಣಾಮ ಆರೋಗ್ಯ ದಾಯಕವಾಗಿದೆ. ಇಲ್ಲಿ ಪರಿಶುದ್ಧತೆಗೆ ಮಾತ್ರ ಪ್ರಾಮುಖ್ಯತೆ ಇರುವುದು. ಬದಲಾಗಿ ಅವೈಜ್ಞಾನಿಕ ಸಂಪ್ರದಾಯ ಇರಬಾರದು. ಇನ್ನು ತೀರ್ಥ ಎಂದರೆ ಕೇವಲ ಜಲ ಸಂಬಂಧಿಸಿದಂತೆ ಮಾತ್ರ ಅಲ್ಲ.

ಸ್ಥಾನಮಾನದ ವ್ಯವಹಾರ ಬಂದಾಗ ಸ್ವಾಮಿಗಳ ಹೆಸರಿನ ಮುಂದೆ ತೀರ್ಥ ಎಂದು ಸೇರಿದ ವಿಷಯ ನಿಮಗೆ ತಿಳಿದಿರಬಹುದು. ಅದು ಅವರವರ ಅರ್ಹತಾ ರೀತಿಯ ಚಿಂತನೆಯಾಗಿದೆ.

ದೀಪಾರಾಧನೆ, ವಿಶೇಷ ಪೂಜೆಗಳ ದಿನಗಳಲ್ಲಿ ದೇವಾಲಯಗಳಲ್ಲಿ ಹೆಚ್ಚು-ಹೆಚ್ಚು ಸಕಾರಾತ್ಮಕ ಶಕ್ತಿಯ ಸಂಚಾರವಾಗುತ್ತಿರುತ್ತದೆ. ಇನ್ನು ದೇವಸ್ಥಾನಗಳಲ್ಲಿ ಶುದ್ಧಿಗಾಗಿ ನೀರನ್ನು ದೇಹದ ಮೇಲೆ ಚಿಮುಕಿಸುತ್ತಿರುವುದನ್ನು ನೋಡಿರಬಹುದು. ಇದರಿಂದ ನಮ್ಮ ಶರೀರದ ಶುದ್ಧಿ ಹಾಗೂ ಆಯಾಸದ ನಿವಾರಣೆಯಾಗುತ್ತದೆ. ಆ ಕಾರಣದಿಂದಲೇ ಪುರುಷರು ದೇವಸ್ಥಾನಕ್ಕೆ ಹೋಗುವಾಗ ಅಂಗಿಯನ್ನು ಕಳಚಿಟ್ಟು ಹೋಗುವುದು ಒಳ್ಳೆಯದು.

ಮಹಿಳೆಯರು ಜಾಸ್ತಿ ಒಡವೆಗಳನ್ನು ಹಾಕಿಕೊಂಡು ಹೋಗುವುದು ಒಳ್ಳೆಯದು. ಏಕೆಂದರೆ ಲೋಹಗಳಿಂದ ಶಕ್ತಿಯ ಸಂಚಾರ ದೇಹದಲ್ಲಾಗುತ್ತದೆ. ಸತೀರ್ಥ ಎಂಬುದು ಹಿಂದೂ ಸಂಸ್ಕೃತಿಯದೇ ವಿಶೇಷ ಶಬ್ದ. ಸಾಧಾರಣವಾಗಿ ದೇವರಿಗೆ ಅಭಿಷೇಕ ಮಾಡಲ್ಪಟ್ಟ ನೀರು ತೀರ್ಥ, ಎಂದರೆ ಪವಿತ್ರ ಜಲ ಎನ್ನಿಸುತ್ತದೆ. ಅನೇಕ ಜಲಾಶಯಗಳು, ಬಾವಿ, ಕೆರೆ, ನದಿ, ಸಮುದ್ರಗಳು ಎಲ್ಲಿ ದೈವಸನ್ನಿಧಿ, ಋಷಿಸನ್ನಿಧಿ ಇರುವುದೋ ಅವು ತೀರ್ಥಗಳಾಗುತ್ತವೆ. ಕೆಲ ಸಂನ್ಯಾಸಿಗಳ ಹೆಸರಿನ ಕೊನೆಯಲ್ಲಿ ತೀರ್ಥ ಎಂಬ ಶಬ್ದವೂ ಬರುತ್ತದೆ. ಅಲ್ಲೂ ಪವಿತ್ರ ಎಂಬರ್ಥ ಬರುತ್ತದೆ. ಹೀಗೆ ಎಲ್ಲಿ ಹೋಗುವುದರಿಂದ ಪುಣ್ಯ ಬರುವುದೋ ಆ ಸ್ಥಾನವನ್ನು ತೀರ್ಥ ಎನ್ನುತ್ತಾರೆ, ಕ್ಷೇತ್ರ ಎನ್ನುತ್ತಾರೆ. ತೀರ್ಥಕ್ಷೇತ್ರ ಎಂದೂ ಹೇಳುತ್ತಾರೆ. (ಬರಹ: ಜ್ಯೋತಿಷಿ ರಘುನಾಥ್​)

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

Published On - 6:06 am, Tue, 27 August 24

ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ