Theertha or Sacred Water: ಪುಣ್ಯ ಜಲ, ಪವಿತ್ರ ತೀರ್ಥದ ಮಹತ್ವ: ಪೂಜೆಯ ವೇಳೆ ನಾವು ತೀರ್ಥವನ್ನು ಹೇಗೆ ಸ್ವೀಕರಿಸಬೇಕು?
Spiritual Significance of Holy water: ತೀರ್ಥವನ್ನು ಸ್ವೀಕರಿಸಿದ ಬಳಿಕ ಭಕ್ತರು ಅದನ್ನ ತಲೆಗೆ ಒರೆಸಿಕೊಳ್ಳುತ್ತಾರೆ. ಆದರೆ ಆ ರೀತಿ ಮಾಡಬಾರದು. ತಲೆಯ ಮೇಲೆ ಬ್ರಹ್ಮ ದೇವರು ಇರುತ್ತಾರೆ. ನಮ್ಮ ಎಂಜಲನ್ನು ಬ್ರಹ್ಮನಿಗೆ ಅರ್ಪಣೆ ಮಾಡಿದವರಾಗುತ್ತೇವೆ. ಆದ್ದರಿಂದ ಕಣ್ಣಿಗೆ ಒತ್ತಿಕೊಳ್ಳುವುದು ಉತ್ತಮ. ಮನೆಯಲ್ಲಿ ತೀರ್ಥ ಸ್ವೀಕರಿಸುವಾಗ ಕೆಳಗೆ ಕೂತು ಸ್ವೀಕರಿಸಬೇಕು. ದೇವಸ್ಥಾನದಲ್ಲಾದರೆ ನಿಂತುಕೊಂಡು ಸ್ವೀಕರಿಸಬಹುದು.

ತೀರ್ಥ ಅಥವಾ ಪವಿತ್ರ ನೀರು ಕೇವಲ ಸಾಮಾನ್ಯ ನೀರಲ್ಲ. ಆದರೆ ಕರ್ಪೂರ, ಲವಂಗ, ಕೇಸರಿ, ಏಲಕ್ಕಿ, ತುಳಸಿ (ಪವಿತ್ರ ತುಳಸಿ) ಸೇರಿದಂತೆ ವಿವಿಧ ಪದಾರ್ಥಗಳ ಸಂಯೋಜನೆಯಾಗಿದೆ. ಮೂರು ಚಮಚದಷ್ಟು ತೀರ್ಥವನ್ನು ಭಕ್ತರಿಗೆ ಹಂಚಲಾಗುತ್ತದೆ. ಈ ನೀರು ದೈಹಿಕ-ಮಾನಸಿಕ ಚಿಕಿತ್ಸೆಯ ಮೂಲವಾಗಿದೆ. ನೈಸರ್ಗಿಕ ರಕ್ತ ಶುದ್ಧೀಕರಣ ಸೇರಿದಂತೆ ಉತ್ತಮ ಔಷಧೀಯ ಮೌಲ್ಯವನ್ನು ಹೊಂದಿದೆ. ಅದೇ ನೀರಿನಿಂದ ವಿಗ್ರಹವನ್ನು ಸ್ನಾನ ಮಾಡಿರುವುದರಿಂದ ನೀರಿನಲ್ಲಿ ಕಾಂತೀಯ ವಿಕಿರಣವೂ ಇರುತ್ತದೆ. ಇನ್ನು, ಎರಡು ನಿರ್ದಿಷ್ಟ ಆಶೀರ್ವಾದಗಳು ಅಂದರೆ ತೀರ್ಥ ಸ್ವೀಕಾರ ಮತ್ತು ಶಠಾರಿಗೆ ಭಕ್ತರ ಎಲ್ಲಾ ಪಾಪಗಳನ್ನು ತೊಳೆಯುವ ಶಕ್ತಿ ಇದೆ. ತೀರ್ಥ ಪದಾರ್ಥಗಳು ಈ ಕೆಳಗಿನ ಪ್ರಾಮುಖ್ಯತೆಯನ್ನು ಹೊಂದಿವೆ: * ಲವಂಗ – ದಂತಕ್ಷಯದಿಂದ ರಕ್ಷಿಸುತ್ತದೆ. * ಕರ್ಪೂರ ಮತ್ತು ಏಲಕ್ಕಿ – ಕೆಮ್ಮು ಮತ್ತು ನೆಗಡಿ ವಿರುದ್ಧ ರಕ್ಷಣೆ. * ಕೇಸರಿ ಮತ್ತು ತುಳಸಿ (ಪವಿತ್ರ ತುಳಸಿ) – ನೈಸರ್ಗಿಕವಾಗಿ ಬಾಯಿಯನ್ನು ತಾಜಾಗೊಳಿಸುವ ಪರಿಣಾಮ ಒದಗಿಸುತ್ತದೆ. ದೇವರ ಪೂಜೆಯನ್ನು ಮಾಡಿದ ನಂತರ ತೀರ್ಥವನ್ನು ತೆಗೆದುಕೊಳ್ಳುವುದು ಅತ್ಯಂತ ಪುಣ್ಯ ಕಾರ್ಯವೆಂದು ಪರಿಗಣಿಸಲಾಗುತ್ತದೆ. ನಾವು ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ಅರ್ಚಕರು ನಮಗೆ ಪವಿತ್ರ ನೀರನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ನಾವು ಹಸ್ತ ಗೋಕರ್ಣ ಮುದ್ರೆಯನ್ನು ಮಾಡಿ ತೀರ್ಥವನ್ನು ತೆಗೆದುಕೊಳ್ಳುತ್ತೇವೆ. ಗೋಕರ್ಣ ಮುದ್ರೆಯಲ್ಲಿ ನಮ್ಮ ಹೆಬ್ಬೆರಳು ತೋರ್ಬೆರಳನ್ನು ನಿಯಂತ್ರಿಸುತ್ತದೆ. ತೋರ್ಬರಳಿನ ಬೆನ್ನಿನ ಮೇಲೆ ಹೆಬ್ಬೆರಳನ್ನು ಇಡಲಾಗುತ್ತದೆ. ಮತ್ತುಳಿದ ಮೂರು ಬೆರಳುಗಳು ಮುಂದಕ್ಕೆ ಚಾಚಿಕೊಂಡಿರುತ್ತದೆ. ಮುದ್ರೆಯನ್ನು ಮಾಡಿಕೊಂಡ ನಂತರ ಭಕ್ತರು ಅಂಗೈಯ ಆಳವಾದ ಭಾಗದಲ್ಲಿ ದೇವರ ಪವಿತ್ರ ನೀರನ್ನು ತೆಗೆದುಕೊಂಡು ಬಾಯಿಯಿಂದ ಯಾವುದೇ ಶಬ್ದವನ್ನು ಮಾಡದೆ ಪ್ರಾರ್ಥಿಸಬೇಕು. ತೀರ್ಥ ತೆಗೆದುಕೊಳ್ಳುವಾಗಲೇ...
Published On - 6:06 am, Tue, 27 August 24




