Daily Horoscope 20 August 2024: ವೃತ್ತಿಗಾಗಿ ಈ ರಾಶಿಯವರು ಹೆಚ್ಚು ಹುಡುಕಾಟ ಮಾಡಬೇಕಾಗುವುದು

ಆಗಸ್ಟ್​ 20,​ 2024ರ​​ ನಿಮ್ಮ ರಾಶಿಭವಿಷ್ಯ: ಸಂಗಾತಿಯನ್ನು ನೀವು ಬಹಳ ದಿನಗಳ ಅನಂತರ ಪ್ರಶ್ನಿಸುವಿರಿ. ಯಾವುದೂ ಸುಮ್ಮನೇ ನಿಮಗೆ ಸಿಗದು. ನಿಮ್ಮ ಬಗ್ಗೆ ಭಯವೂ ಹುಟ್ಟಬಹುದು. ನಿರ್ಭಾವುಕರಾಗಿ ವರ್ತಿಸುವುದು ನಿಮ್ಮವರಿಗೆ ಇಷ್ಟವಾಗದೇ ಹೋಗಬಹುದು. ನೀವು ಕೆಲಸವನ್ನು ಒಲ್ಲದ ಮನಸ್ಸಿನಿಂದ ಮಾಡುವಿರಿ. ಹಾಗಾದರೆ ಆಗಸ್ಟ್​ 20ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 20 August 2024: ವೃತ್ತಿಗಾಗಿ ಈ ರಾಶಿಯವರು ಹೆಚ್ಚು ಹುಡುಕಾಟ ಮಾಡಬೇಕಾಗುವುದು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 20, 2024 | 12:02 AM

ಜಾತಕವು ಒಬ್ಬ ವ್ಯಕ್ತಿಯ ಹುಟ್ಟಿನ ಸಮಯದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳ ಆಧಾರದ ಮೇಲೆ ಭವಿಷ್ಯದ (Horoscope) ಮುನ್ಸೂಚನೆ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯವು ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶೋಭನ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:51 ಗಂಟೆ, ರಾಹು ಕಾಲ ಮಧ್ಯಾಹ್ನ 03:44 ರಿಂದ ಸಂಜೆ 05:17, ಯಮಘಂಡ ಕಾಲ ಬೆಳಿಗ್ಗೆ 09:28 ರಿಂದ 11:02ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:36 ರಿಂದ 02:10ರ ವರೆಗೆ.

ಮೇಷ ರಾಶಿ: ಯಾರಾದರೂ ನಿಮ್ಮ ದೌರ್ಬಲ್ಯವನ್ನು ಅರಿತು ನಿಮ್ಮನ್ನು ಪೀಡಿಸಬಹುದು. ವ್ಯಾಪಾರವು ಇಂದು ಅಲ್ಪಪ್ರಮಾಣದ ಲಾಭವನ್ನು ಕೊಡಬಹುದು. ಅಶಿಸ್ತಿನಿಂದ ನೀವು ಇರಲಿದ್ದೀರಿ. ಯೋಜನೆಯನ್ನು ಸಿದ್ಧಪಡಿಸಲು ನೀವು ಅಧಿಕ ಶ್ರಮವನ್ನು ವಹಿಸಬೇಕಾದೀತು. ಹೇಳಾಬಾರದೆಂದು ಮುಚ್ಚಿಟ್ಟಿದ್ದನ್ನು ಸಂಗಾತಿಗೆ ತಿಳಿಸುವಿರಿ. ಉದ್ಯೋಗದ ಸ್ಥಳವು ಸ್ವಲ್ಪ ಕಿರಿಕಿರಿಯಿಂದ ಇರಲಿದೆ. ನಿಮ್ಮ ಆದಾಯದ ಮೂಲವನ್ನು ನೀವು ಯಾರಿಗೂ ಹೇಳಬೇಡಿ.‌ ಸಾಮಾನ್ಯ ವಿಚಾರವನ್ನು ದೊಡ್ಡದಾಗಿ ಬಿಂಬಿಸುವ ಅವಶ್ಯಕತೆ ಇಲ್ಲ. ಸರಿಯಾದುದನ್ನು ನೀವು ಆಯ್ಕೆ ಮಾಡಿಕೊಳ್ಳಲು ಕಷ್ಟವಾದೀತು. ಹಗುರವಾದಷ್ಟು ಬೆಲೆ ಹೆಚ್ಚು ಎಂದು ಮನವರಿಕೆಯಾಗಬಹುದು. ಸಾಹಸದಿಂದ ಏನಾದರೂ ಅನಾಹುತ ಮಾಡಿಕೊಳ್ಳಬಹುದು. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಿ. ದೊಡ್ಡದಾಗಿ ಏನನ್ನೋ ಯೋಚಿಸುವ ಬದಲು, ಚಿಕ್ಕದಾದರೂ ಚಿಕ್ಕವಾಗಿರಲಿ.

ವೃಷಭ ರಾಶಿ; ನಿಮ್ಮ ಕೈ‌ಮೀರಿದ ಸಂಗತಿಗಳಿಗೆ ಜವಾಬ್ದಾರಿಯನ್ನು ತೆಗೆದುಕಕೊಳ್ಳಬೇಕಿಲ್ಲ. ನಿಮ್ಮ ವಸ್ತುಗಳು ಕಾಣಿಸದೇ ಹೋದೀತು. ನೋವು ಇಂದು ಇದ್ದುದರಲ್ಲಿ ತೃಪ್ತಿಪಡಬೇಕಾದೀತು. ಎದುರು ಮಾತನಾಡುವುದು ನಿಮಗೆ ಇಂದು ಸರಿ‌ಕಾಣದು. ವ್ಯರ್ಥವಾದ ಕಾಲಹರಣದ ಬದಲು ಏನಾದರೂ ಯೋಗ್ಯವಾದುದನ್ನು ಮಾಡಬಹುದು. ಗಳಿಕೆ ಸ್ವಲ್ಪ‌ಭಾಗವನ್ನು ನೀವು ಉಳಿತಾಯ ಮಾಡಲು ಉಪಯೋಗಿಸುವಿರಿ. ಪೂರ್ತಿ ತಿಳಿಯದೇ ಯಾವುದನ್ನೂ ಹೇಳಲು ಹೋಗಬೇಡಿ. ನಿಮ್ಮೆದುರೇ ನಿಮ್ಮವರನ್ನು ಅಲ್ಲಗಳೆಯಬಹುದು. ನಿಮ್ಮ ವರ್ತನೆಗಳು ಸ್ವಲ್ಪ ಮಾರ್ಗವನ್ನು ಬಿಡಬಹುದು. ಅತಿಥಿಗಳಿಂದ ನಿಮಗೆ ಪ್ರಶಂಸೆ ಸಿಗುವುದು. ಕೆಲವು ವಿಚಾರವನ್ನು ನಿಮ್ಮ ತಲೆಯಿಂದ ತೆಗೆದುಹಾಕಬೇಕಾಗಬಹುದು. ನಿಭಾಯಿಸುವ ದಾರ್ಢ್ಯವನ್ನು ಬೆಳೆಸಿಕೊಳ್ಳಿ. ವೃತ್ತಿಜೀವನದಲ್ಲಿ ಆದ ಅಚಾತುರ್ಯದಿಂದ ಭಯವಾಗುವುದು. ನಿಮ್ಮ ನಂಬಿಕೆಯನ್ನು ಯಾರಾದರೂ ಬದಲುಮಾಡಬಹುದು. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು.

ಮಿಥುನ ರಾಶಿ: ಉನ್ನತ ವಿದ್ಯಾಭ್ಯಾಸಕ್ಕೆ ಎದುರಾಗುವ ಸಾಧಕ ಬಾಧಕಗಳ ಮಾಹಿತಿ ಇರಲಿ. ಕೋಪವು ಒಂದು ಮಿತಿಯಲ್ಲಿ ಇದ್ದರೆ ಚೆಂದ. ಕಾಲವು ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬಹುದು. ಹೊಸ ಸುದ್ದಿಯು ನಿರೀಕ್ಷೆಯಲ್ಲಿ ನೀವು ಇರುವಿರಿ. ಎಲ್ಲರ‌ ನಡುವೆ ಇದ್ದರೂ ಒಂಟಿತನವು ನಿಮ್ಮನ್ನು ಕಾಡಬಹುದು. ಸುಲಭದಲ್ಲಿ ಮುಗಿಸುವುದನ್ನು ಬಹಳ ಸಂಕೀರ್ಣ ಮಾಡುವಿರಿ. ಯಾರದೋ ಮಾತಿನ ಮೇಲೆ‌ ಹಣವನ್ನು ಹೂಡುವಿರಿ. ಅಲಭ್ಯ ವಸ್ತುವಿಗೆ ದುಃಖಿಸುವ ಅವಶ್ಯಕತೆ ಇಲ್ಲ. ಸಮಾಜದ ಕಾರ್ಯಗಳಲ್ಲಿ ನೀವು ತೊಡಗಿಕೊಳ್ಳುವವರಿದ್ದೀರಿ. ಅಧಿಕಾರವು ಕಾರ್ಯವನ್ನು ಮಾಡಲಿಕ್ಕಾಗಿ ಮಾತ್ರ ಎನ್ನುವುದು ಗೊತ್ತಿರಲಿ. ದೈವಾನುಗ್ರಹದ ಅವಶ್ಯಕತೆ ಬಹಳ ಇದೆ. ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶರಾಗಬೇಕಾಗುವುದು. ನಿಮ್ಮ ತಪ್ಪನ್ನು ಒಪ್ಪಿಕೊಂಡರೆ ಸಣ್ಣವರೇನು ಆಗುವುದಿಲ್ಲ. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ.

ಕರ್ಕಾಟಕ ರಾಶಿ; ಇಂದು ನೀವು ಅತಿಯಾದ ಆತುರದಲ್ಲಿ ಇರುವಿರಿ. ನಿಮ್ಮ ಹಿಂದೆ ಕಹಿಯಾದ ಮಾತುಗಳನ್ನು ಯಾರಾದರೂ ಆಡುವು ಕೇಳಿಬರಬಹುದು. ಅನಾಮಧೇಯ ಕರೆಗಳು ನಿಮ್ಮನ್ನು ಹೂಡಿಕೆಗೆ ಪ್ರೇರಿಸಬಹುದು. ನಿಮ್ಮ ಪರಿಶ್ರಮದ್ದು ಮಾತ್ರ ನಿಮಗೆ ಸಿಗುವುದು. ನಿಮ್ಮ ಆಪ್ತರನ್ನು ನೀವು ದೂರ ಮಾಡುವಿರಿ. ನಿಮ್ಮ ಸೌಂದರ್ಯವು ಇಂದು ಆಕರ್ಷಕವಾಗಿರುವುದು. ಎಂದಿನಂತೆ ನಿಮ್ಮ ಮಾನಸಿಕ ಸ್ಥಿತಿಯು ಇರದು. ವಿದ್ಯಾರ್ಥಿಗಳು ತಕ್ಕಮಟ್ಟಿನ ಪ್ರದರ್ಶನವನ್ನು ತೋರುವರು. ಸರ್ಕಾರಿ ಉದ್ಯೋಗಿಗಳು ಒತ್ತಡದಲ್ಲಿ ಇರುವರು. ನಿಮ್ಮ ಆಡಳಿತವು ಬೇಸರ ತರಿಸೀತು. ನಿಮ್ಮ ಮಾತುಗಳು ಇತರರಿಗೆ ಸುಳ್ಳೆನಿಸುವುದು. ಕೆಲವು ವಿಚಾರಗಳು ಬಹಳ ವಿಳಂಬವಾಗಿ ನಿಮ್ಮ ಗಮನಕ್ಕೆ ಬರಬಹುದು. ಯಾರನ್ನೂ ನಿಮ್ಮವರನ್ನಾಗಿ ಮನಸ್ಸಿನಿಂದ ಭಾವಿಸಲಾರಿರಿ. ಇದು ಬೇಸರವನ್ನು ಉಂಟುಮಾಡೀತು. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು. ನಿಮ್ಮ ಮಿತಿಯಲ್ಲಿ ನೀವು ಇರುವುದು ಸೂಕ್ತ.

ಸಿಂಹ ರಾಶಿ; ಇಂದು ಅತಿಯಾದ ಉತ್ಸಾಹದಿಂದ ನಿಮ್ಮ ಮೇಲೆ‌ ನಿಮಗೆ ನಿಯಂತ್ರಣ ಸಿಗದಾದೀತು. ಇಂದಿನ ಕೆಲವು ಸಂದರ್ಭಗಳು ನಿಮಗೆ ಪಾಠವಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳಲು ಅನೇಕ ಸಂಗತಿಗಳು ಇರಲಿವೆ. ದುರಾಲೋಚನೆಯನ್ನು ಬಿಟ್ಟುಬಿಡುವುದು ಒಳ್ಳೆಯದು. ನಿಮ್ಮ ಅಹಂಕಾರವು ನಿಮಗೆ ಸೋಲನ್ನು ತಂದುಕೊಡುವುದು. ಬೇಕಾದಷ್ಟು ನಿಮ್ಮೊಳಗಿದ್ದರೂ ಅದನ್ನು ಪ್ರಕಟಿಸುವ ಆಲೋಚನೆ ಇರದು. ವಿವೇಕವನ್ನು ಬಿಟ್ಟು ನೀವು ವ್ಯವಹರಿಸಲು ಹೋಗಿ ಮೋಸಹೋಗುವಿರಿ. ಖರ್ಚಿನ ಅಂದಾಜಿನ ಮೇಲೆ ಇಂದಿನ ವ್ಯವಹಾರವಿರಲಿ. ಹಿತಶತ್ರುಗಳ ಸಂಚು ಇಂದು ತಿಳಿಯಬಹುದು. ಉನ್ನತ ವ್ಯಾಸಂಗವು ನಿಮ್ಮ ಸ್ಥಾನವನ್ನು ಹೆಚ್ಚಿಸೀತು. ಆರ್ಥಿಕ ವಿಚಾರದಲ್ಲಿ ಹಿನ್ನಡೆಯಾಗಲಿದೆ. ಬಾಡಿಗೆ ಮನೆಯಲ್ಲಿ ನೀವಿದ್ದರೆ ಕಿರಿಕಿರಿಯಾದೀತು. ವ್ಯಾವಹಾರಿಕವಸದ ಅಪವಾದಗಳು ಬರಬಹುದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ.

ಕನ್ಯಾ ರಾಶಿ; ಇಂದು ನಿಮ್ಮ ಜೊತೆ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ನಿಮ್ಮ ನಿರೀಕ್ಷೆಯು ಇಂದು ಸಫಲವಾದೀತು.‌ ಕಛೇರಿಯ ಉಸ್ತುವಾರಿಗಳಾಗಿ ಎಲ್ಲವನ್ನೂ ಗಮನಿಸಿ ವರದಿ ನೀಡಲು ಹೇಳಬಹುದು. ನಿಮ್ಮ ಕಷ್ಟಗಳನ್ನು ನೀವು ಗಟ್ಟಿ‌ ಮನಸ್ಸಿನಿಂದ ಎದುರಿಸುವಿರಿ. ವಾಹನ ಸವಾರಿ ಮಾಡುವಾಗ ಸ್ವಲ್ಪ ಎಚ್ಚರಿಕೆ ಅಗತ್ಯ. ಸಮಯಕ್ಕೆ ಬೆಲೆ ಕೊಟ್ಟು ನಿಮ್ಮ ಕೆಲಸಗಳನ್ನು ಮುಗಿಸಿಕೊಳ್ಳುವಿರಿ. ವಿವಾಹ ಕಾರ್ಯವು ಬಹಳ ವಿಜೃಂಭಣೆಯಿಂದ ಮುಕ್ತಾಯಗೊಳ್ಳುವುದು. ಕೆಲವನ್ನು ಕಳೆದುಕೊಳ್ಳುವುದು ಅನಿವಾರ್ಯವಾಗಬಹುದು. ಒಳ್ಳೆಯ ಭೋಜನವನ್ನು ಇಂದು ಮಾಡುವಿರಿ. ನಿಮ್ಮ ಊಹೆ ಪೂರ್ಣ ಸತ್ಯವಾಗದು. ಸಂಬಂಧಗಳನ್ನು ನೀವು ಬಿಟ್ಟುಕೊಡಬೇಕಾದೀತು. ಶ್ರಮವಹಿಸಿದ ಕಾರ್ಯಕ್ಕೆ ಫಲವು ಸಿಗಬಹುದಿ. ನಿಮ್ಮ ಒಳ ಮನಸ್ಸು ಹೇಳಿದಂತೆ ಕೇಳಿ.‌ ನೆಮ್ಮದಿಗೆ ಅದೇ ದಾರಿ. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಸ್ತ್ರೀಯರ ಬಗ್ಗೆ ನಿಮಗೆ ಅನುಕಂಪವಿದ್ದರೂ ಅದನ್ನು ಹೇಳಿಕೊಳ್ಳಲಾಗದು.

ತುಲಾ ರಾಶಿ: ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಒಬ್ಬರೇ ಆಲೋಚನೆಯಲ್ಲಿ ಮಗ್ನರಾಗಿ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ವಿದ್ಯಾರ್ಥಿಗಳು ಪರೀಕ್ಷೆಯ ಭಯದಲ್ಲಿ ಓದಿದ್ದನ್ನು ಮರೆತುಕೊಳ್ಳವ ಸಾಧ್ಯತೆ ಇದೆ. ವಿವಾಹಕ್ಕೆ ಸಂಬಂಧಿಸಿದಂತೆ ನೀವು ಮುಂದೆ ಹಾಕಲಿದ್ದೀರಿ. ವಿವಾಹಗಳನ್ನು ಆಗುವ ಸಮಯಕ್ಕೆ ಆಗುವುದು ಒಳ್ಳೆಯದು. ನಿಮಗೆ ಆಗಬೇಕಾದ ಕಾರ್ಯವನ್ನು ಯಾರಿಂದಲಾದರೂ ಮಾಡಿಸಿಕೊಳ್ಳುವಿರಿ. ನಿಮಗೆ ಮನೆಯಲ್ಲಿ ಯಾರ ಸಹಕಾರವೂ ಇಲ್ಲವೆಂದು ಮನಸ್ಸು ಸ್ವಲ್ಪ ಹಗುರಾಗಲಿದೆ. ಪೋಷಕರಿಗೆ ನೀವು ಸಹಾಯವನ್ನು ಮಾಡಲು ಬಯಸುವಿರಿ. ಹೆಚ್ಚಿನ ಆದಾಯಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಅಷ್ಟು ಸುಖವಿಲ್ಲ. ಮನೋರಂಜನೆಗೆ ನಿಮಗೆ ಅವಕಾಶಗಳು ದೊರೆಯುವುದು. ಆದರೆ ಅದನ್ನು ಬಿಡಲು ಯೋಚಿಸುವಿರಿ. ಅತಿಯಾದ ಮಾತುಗಳು ನಿಮಗೇ ಬೇಸರ ತರಿಸಬಹುದು.

ವೃಶ್ಚಿಕ ರಾಶಿ; ಇಂದುಬನಿಮ್ಮ ಭವಿಷ್ಯ ಹಾಗೂ ಮಕ್ಕಳ ಬಗ್ಗೆ ಯೋಚನೆ ಅಧಿಕವಾಗುವುದು. ಇದ್ದಕ್ಕಿದ್ದಂತೆ ನೀವು ಪ್ರಚಾರವನ್ನು ಗಿಟ್ಟಿಸಿಕೊಳ್ಳುವಿರಿ. ನಿಮ್ಮ ಯೋಚನೆಗಳು ನಿಮಗೆ ಪ್ರಸಿದ್ಧಿಯನ್ನು ತಂದುಕೊಟ್ಟಾವು. ಸ್ವತಂತ್ರದ ಕಾರ್ಯದಿಂದ ನಿಮಗೆ ಶ್ರೇಯಸ್ಸು ಸಿಗುವುದು. ಪ್ರತಿಷ್ಠಿತ ಸಂಸ್ಥೆಯನ್ನು ನೀವು ಇಂದು ಸೇರಿಕೊಳ್ಳಬಹುದು. ಒತ್ತಡವನ್ನು ನಿವಾರಿಸಿಕೊಳ್ಳಲು ಸ್ವಲ್ಪ ಕಾಲ ಧ್ಯಾನ ಮಾಡಬೇಕಾಗಬಹುದು. ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗುವುದು. ಹಣಕಾಸಿನ ವ್ಯವಹಾರಕ್ಕೆ ತಿಳಿದವರ ಸಹಾಯವನ್ನು ಪಡೆಯುವಿರಿ. ತಾಯಿಯ ಕಡೆಯಿಂದ ನಿಮಗೆ ಉಚಿತ ಸಲಹೆಗಳು ಬರಬಹುದು. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ತಮ್ಮ ಕಾರ್ಯಕ್ಕೆ ಸೇರಿಸಿಕೊಳ್ಳಬಹುದು. ನ್ಯಾಯದ ವಿಚಾರದಲ್ಲಿ ನೀವು ಸ್ವಲ್ಪ ಹಿನ್ನಡೆ ಪಡೆಯಬಹುದು. ದೇವತಾ ಕಾರ್ಯಕ್ಕೆ ಬೇಕಾದ ತಯಾರಿಯಲ್ಲಿ ಇರುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು.

ಧನು ರಾಶಿ; ಇಂದು ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಪರಸ್ಪರ ಹೇಳಿ ವಾದ ಮಾಡುವಿರಿ. ಉನ್ನತ ಶಿಕ್ಷಣದಲ್ಲಿ ಕೆಲವು ಕಟ್ಟುಪಾಡುಗಳಿಗೆ ತಯಾರಿರಬೇಕಾದೀತು. ನಿಮ್ಮ ಉದ್ಯಮಕ್ಷೇತ್ರವನ್ನು ವಿಸ್ತರಿಸಲು ಇಷ್ಟಪಡುವಿರಿ. ಸಂಗಾತಿಗೆ ಬೇಕಾದ ವಸ್ತುಗಳನ್ನು ತಂದುಕೊಡುವಿರಿ. ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಕಳೆಯುವ ಸಾಧ್ಯತೆ ಇದೆ. ವಿದೇಶದ ವ್ಯವಹಾರಕ್ಕೆ ಇಟ್ಟುಕೊಂಡ ವ್ಯಕ್ತಿಯಿಂದ ನೀವು ಮೋಸ ಹೋಗಬಹುದು. ಇನ್ನೊಬ್ಬರ ಮಾತಿನಿಂದ ನಿಮಗೆ ತೊಂದರೆಗಳು ಸೃಷ್ಟಿಯಾಗಬಹುದು. ಉದ್ಯೋಗಕ್ಕೆ ನೀವು ಕೊಟ್ಟ ಸಮಯವು ಸಫಲವಾಗಲಿದೆ. ನಿಮ್ಮ ಉತ್ಸಾಹವು ಇನ್ನೊಬ್ಬರ ಹೊಗಳಿಕೆಯಿಂದ ಬರಲಿದೆ. ದೇವಾಲಯದಲ್ಲಿ ಹೆಚ್ಚಿನ ಸಮಯವನ್ನು ನೀವು ಕಳೆಯುವಿರಿ. ಸರ್ಜನಶೀಲ ವ್ಯಕ್ತಿಗಳಾಗಿದ್ದರೆ ನಿಮಗೆ ಅವಕಾಶಗಳು ಹೆಚ್ಚು ಬರುತ್ತದೆ. ಒಳ್ಳೆಯದನ್ನು ಬೆಂಬಲಿಸಿ. ಸುಮ್ಮನೇ ಸುತ್ತಾಟ ಇಂದು ಬೇಡ. ನಕಾರಾತ್ಮಕ ಯೋಚನೆಯಿಂದ ನಿಮಗೆ ಕಷ್ಟವಾದೀತು.

ಮಕರ ರಾಶಿ; ನೀವು ಇಂದು ಸೌಂದರ್ಯಕ್ಕೆ ಪ್ರಾಮುಖ್ಯ‌ ಕೊಟ್ಟು ಕಾರ್ಯವನ್ನು ವಿಳಂಬ ಮಾಡುವಿರಿ. ಮಕ್ಕಳಿಂದ ನಿಮಗೆ ಅಪಮಾನದಂತೆ ಆಗಬಹುದು. ನಿಮಗೆ ಸಿಗುವುದಿಲ್ಲ ಎಂದುಕೊಂಡ ಸ್ಥಾನವು ನಿಮಗೆ ಸಿಗಬಹುದು. ಅದೃಷ್ಟ ನಿಮ್ಮ‌ ಕಡೆಗಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಿ. ದೇವರ ಜೊತೆ ಸಮಯವನ್ನು ಕಳೆಯುವುದನ್ನು ಮರೆಯಬೇಡಿ. ನಿಮ್ಮ ಮೇಲೆ ವಾಗ್ದಾಳಿ ಮಾಡಬಹುದು. ನಿಮ್ಮ ಬಗ್ಗೆ ಸುಳ್ಳು ಪ್ರಚಾರವನ್ನೂ ಮಾಡಬಹುದು. ಸರಿಯಾದ ಉತ್ತರವನ್ನು ನೀವು ಕೊಡಬೇಕಾದೀತು. ಸ್ಪರ್ಧಾತ್ಮಕ ಓದು ಶಿಸ್ತಿನಿಂದ ಸಾಗುವುದು. ನಿಮ್ಮ ಸೌಂದರ್ಯದ ಬಗ್ಗೆ ನಿಮಗೇ ಅಸೂಯೆ ಬರಬಹುದು. ಮೆಲ್ಲಗೆ ಮಾತನಾಡಿ. ಆಲಸ್ಯದ ಮನೋಭಾವವನ್ನು ನೀವು ಬಿಡಬೇಕಾದೀತು. ಕೋಪದಿಂದ ಕೆಲವನ್ನು ಕಳೆದುಕೊಳ್ಳಬೇಕಾಗಬಹುದು. ಉದ್ವೇಗದಿಂದಾಗಿ ಇಂದಿನ ಉತ್ತಮ ಲಾಭದಾಯಕ ವ್ಯಾಪಾರವನ್ನು ಕಳೆದುಕೊಳ್ಳುವಿರಿ. ಗೃಹನಿರ್ಮಾಣ ಮಾಡುವುದು ನಿಮಗೆ ಅನಿವಾರ್ಯವಾದೀತು.

ಕುಂಭ ರಾಶಿ: ನೀವು ಯಾರಿಗಾದರೂ ಸಾಲ ಕೊಡುವ ಮೊದಲು ಆಲೋಚನೆ ಇರಲಿ. ನೀವೇ ಹೇಳಿದ ಸುಳ್ಳನ್ನು ಸತ್ತಮಾಡಬೇಕಾಗಬಹುದು. ಅನೇಕ ದಿನಗಳಿಂದ ಮಾಡುತ್ತಿದ್ದ ಕೆಲಸವನ್ನು ಇಂದು ಬಹಳ ವೇಗವಾಗಿ ಮುಗಿಸಿ ನಿರಾಳವಾಗುವಿರಿ. ಮಕ್ಕಳು ನಿಮ್ಮನ್ನು ಬಿಡಲು ಬಹಳ ಕಷ್ಟಪಡುವರು. ಸಂಗಾತಿಯನ್ನು ನೀವು ಬಹಳ ದಿನಗಳ ಅನಂತರ ಪ್ರಶ್ನಿಸುವಿರಿ. ಯಾವುದೂ ಸುಮ್ಮನೇ ನಿಮಗೆ ಸಿಗದು. ನಿಮ್ಮ ಬಗ್ಗೆ ಭಯವೂ ಹುಟ್ಟಬಹುದು. ನಿರ್ಭಾವುಕರಾಗಿ ವರ್ತಿಸುವುದು ನಿಮ್ಮವರಿಗೆ ಇಷ್ಟವಾಗದೇ ಹೋಗಬಹುದು. ನೀವು ಕೆಲಸವನ್ನು ಒಲ್ಲದ ಮನಸ್ಸಿನಿಂದ ಮಾಡುವಿರಿ. ಅಹಂಕಾರದ ಕಾರಣ ನೀವು ಕೆಲವರಿಂದ ದೂರಾಗಬೇಕಾಗುವುದು. ನಿರ್ಮೋಹವೇ ನಿಮಗೆ ಎಲ್ಲವನ್ನು ದೊರಕಿಸಿಕೊಡಬಲ್ಲದು. ಮಿಶ್ರಫಲವನ್ನು ಪಡೆಯುವಿರಿ. ನಿಮ್ಮ ಸುತ್ತಲಿನ ಜನರು ತಮ್ಮದೇ ಮಿತಿಯಲ್ಲಿ ಇರುವರು. ತಮ್ಮಷ್ಟಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿ. ಆಕಸ್ಮಿಕವಾಗಿ ನೀವು ಅಶುಭ ಸಮಾಚಾರವನ್ನು ಕೇಳಬೇಕಾಗುವುದು.

ಮೀನ ರಾಶಿ; ಇಂದಿನ ಎಂತ ಸ್ಥಿತಿಯಲ್ಲಿಯೂ ಮನಸ್ಸು ತಾಳ್ಮೆಯನ್ನು ಬಿಡದಿರಲಿ. ವೃತ್ತಿಗಾಗಿ ನೀವು ಹೆಚ್ಚು ಹುಡುಕಾಟ ಮಾಡಬೇಕಾಗುವುದು. ನಿಮ್ಮವರನ್ನು ನೀವು ಬಿಟ್ಟಕೊಡುವಿರಿ. ಅವರು ಸ್ವತಂತ್ರವಾದಷ್ಟೂ ನೀವು ನೆಮ್ಮದಿಯ ಪಡೆಯುವಿರಿ. ವ್ಯಾಪರವು ಸ್ವಲ್ಪಮಟ್ಟಿಗೆ ಸುಧಾರಿಸುವುದು. ಭೂಮಿಯ ವ್ಯವಹಾರವೂ ನಿಮಗೆ ನಷ್ಟವನ್ನು ಕೊಡಬಹುದು. ಕೆಲವರ ಮಾತಿಗೆ ನೀವು ಕಿವುಡಾಗುವೇ ಲೇಸು. ಜಾಗರೂಕತೆಯಿಂದ ವ್ಯವಹರಿಸಿ. ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳುವುದು ಒಳ್ಳೆಯದಲ್ಲ. ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಅನಂತರ ಇನ್ನೊಬ್ಬರ ಕೆಲಸದತ್ತ ಗಮನಕೊಡಿ. ಮಾಧ್ಯಮ ಕ್ಷೇತ್ರವು ನಿನಗೆ ಸದ್ಯ ಲಾಭದಾಯಕ ಆಗಲಿದೆ‌. ಯಶಸ್ಸನ್ನೂ ಅದು ತಂದುಕೊಡಬಹುದು. ಆತ್ಮವಿಶ್ವಾಸವನ್ನು ನೀವೇ ಕೊಲ್ಲುವಿರಿ. ವನ್ನು ದಾಂಪತ್ಯವನ್ನು ಸುಖವಾಗಿಡಲು ಉಡುಗೊರೆಯನ್ನು ಕೊಡಬೇಕಾಗಬಹದು. ದಿನದಲ್ಲಿ ಶುಭವು ಹೆಚ್ಚಿರಲಿದೆ. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು. ಆರ್ಥಿಕ ಸಮಸ್ಯೆಯು ತಾತ್ಕಾಲಿಕವಾಗಿ ನಿವಾರಣೆಯಾಗಿ ಒತ್ತಡದಿಂದ ಹೊರಬರುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)

ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಟ್ರಾವಿಸ್ ಹೆಡ್: ವಿಡಿಯೋ ವೀಕ್ಷಿಸಿ
ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಟ್ರಾವಿಸ್ ಹೆಡ್: ವಿಡಿಯೋ ವೀಕ್ಷಿಸಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ