ಯಾವ ದಿನ ಹೇಗಿರಲಿದೆ ಎನ್ನುವುದು ಪ್ರತಿಯೊಬ್ಬನೂ ತನ್ನ ಬಗ್ಗೆ ತಿಳಿಯಬಹುದು
ಯಾವ ನಕ್ಷತ್ರಗಳಿಗೆ ಯಾವ ವಾರ ಶುಭ ಹಾಗೂ ಕಾರ್ಯ ಸಿದ್ಧಿಗೆ ಯೋಗ್ಯ ಎನ್ನುವುದನ್ನು ಮನಗಾಣಬೇಕಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಆಯಾ ವಾರದಲ್ಲಿ ಹೆಚ್ಚು ಬಲಿಷ್ಠರೂ, ಉತ್ಸಾಹಿಗಳೂ ಆಗಿರುತ್ತಾರೆ. ಹಾಗಾಗಿ ಯಾವ ದಿನ ಹೇಗಿರಲಿದೆ ಎನ್ನುವುದು ಪ್ರತಿಯೊಬ್ಬನೂ ತನ್ನ ಬಗ್ಗೆ ತಿಳಿಯಬಹುದು. ಇಲ್ಲಿದೆ ನೋಡಿ

ಈ ತಿಥಿ, ವಾರ, ನಕ್ಷತ್ರಗಳಾಗುವುದೇ ಒಂದು ವಿಸ್ಮಯ. ವಾರ ಮತ್ತು ತಿಥಿಗಳು ಹೇಗೆ ಒಂದಕ್ಕೊಂದು ಪೂರಕವಾಗಿದ್ದಾಗ ಅನುಕೂಲವೋ ಅದೇ ರೀತಿ ವಾರ ಮತ್ತು ನಕ್ಷತ್ರಗಳು ಇರುವುದೂ ಮುಖ್ಯವೇ. ಇಪ್ಪತ್ತೇಳು ನಕ್ಷತ್ರಗಳೂ ಮನುಷ್ಯನ ಮೇಲೆ ಪರಿಣಾಮವನ್ನು ಬೀರುವ ಕಾರಣ ಇದನ್ನು ಗಣನೆ ಮಾಡುವುದು ಪ್ರಾಚೀನ ಪದ್ಧತಿ. ವಿವಾಹಾದಿಗಳಿಗೆ ನಕ್ಷತ್ರದ ಬಲಾಬಲವನ್ನು ಚಿಂತಿಸಿದಂತೆ ಇದಕ್ಕೂ ಚಿಂತನ ಮಂಥನಗಳ ಅವಶ್ಯಕತೆ ಇರುತ್ತದೆ.
ಯಾವ ನಕ್ಷತ್ರಗಳಿಗೆ ಯಾವ ವಾರ ಶುಭ ಹಾಗೂ ಕಾರ್ಯ ಸಿದ್ಧಿಗೆ ಯೋಗ್ಯ ಎನ್ನುವುದನ್ನು ಮನಗಾಣಬೇಕಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಆಯಾ ವಾರದಲ್ಲಿ ಹೆಚ್ಚು ಬಲಿಷ್ಠರೂ, ಉತ್ಸಾಹಿಗಳೂ ಆಗಿರುತ್ತಾರೆ.
ರವಿವಾರ – ಪುಷ್ಯಾ, ಅಶ್ವಿನೀ, ಮೂಲಾ, ಹಸ್ತಾ, ಉತ್ತರಾಫಲ್ಗುಣೀ, ಉತ್ತರಾಭಾದ್ರ, ಉತ್ತರಾಷಾಢ
ಸೋಮವಾರ – ಅನುರಾಧಾ, ಶ್ರವಣಾ, ರೋಹಿಣೀ, ಪುಷ್ಯಾ, ಮೃಗಶಿರಾ
ಮಂಗಳವಾರ – ಅಶ್ವಿನೀ, ಕೃತ್ತಿಕಾ, ಉತ್ತರಾಭಾದ್ರ, ಆಶ್ಲೇಷಾ
ಬುಧವಾರ – ಅನುರಾಧಾ, ಹಸ್ತಾ, ಕೃತ್ತಿಕಾ, ಮೃಗಶಿರಾ, ರೋಹಿಣೀ
ಗುರುವಾರ – ಅನುರಾಧಾ, ಪುಷ್ಯಾ, ಅಶ್ವಿನೀ, ರೇವತೀ, ಪುನರ್ವಸು,
ಶುಕ್ರವಾರ – ಪುನರ್ವಸು, ಅನುರಾಧಾ, ಅಶ್ವಿನೀ, ರೇವತೀ, ಮೃಗಶಿರಾ
ಶನಿವಾರ – ರೋಹಿಣೀ, ಶ್ರವಣಾ, ಸ್ವಾತೀ
ಇವಿಷ್ಟು ಒಂದು ಯೋಗವಾದರೆ, ಇನ್ನೂ ಒಂದಿಷ್ಟು ವಾರ ಮತ್ತು ನಕ್ಷತ್ರಗಳ ಸಂಯೋಗದಿಂದ ಆಗಲಿದೆ. ಈ ವಾರ ಜನಿಸಿದವರಿಗೆ ಅಥವಾ ಇವೆರಡರ ಸಂಯೋಗ ಬಂದಾಗಲೂ ಶುಭವಾಗಲಿದ್ದು, ಕೈಗೊಂಡ ಕಾರ್ಯಗಳು ಯಶಸ್ಸನ್ನು ಪಡೆಯಬಹುದು, ಯಶಸ್ಸಿನ ದಾರಿಯನ್ನು ತೋರಿಸಬಹುದು.
ರವಿ ಮತ್ತು ಸೋಮವಾರ : ಪುಷ್ಯಾ, ಹಸ್ತಾ, ಉತ್ತರಾ, ಮೂಲಾ, ರೋಹಿಣೀ
ಮಂಗಳವಾರ : ಶ್ರವಣಾ, ಮೃಗಶಿರಾ, ಪುಷ್ಯಾ, ಉತ್ತರಾಫಲ್ಗುಣೀ, ಉತ್ತರಾಭಾದ್ರ, ಉತ್ತರಾಷಾಢ
ಬುಧವಾರ : ಕೃತ್ತಿಕಾ, ಅನುರಾಧಾ, ಶತಭಿಷಾ,
ಗುರುವಾರ : ಪುನರ್ವಸು, ಪುಷ್ಯಾ
ಶುಕ್ರವಾರ : ಪೂರ್ವಾಫಲ್ಗುಣೀ, ಅಶ್ವಿನೀ, ಶ್ರವಣಾ
ಶನಿವಾರ : ಸ್ವಾತೀ, ರೋಹಿಣೀ
ಇಲ್ಲಿ ಹೇಳಲ್ಪಟ್ಟ ನಕ್ಷತ್ರಗಳು ವಾರಕ್ಕೂ ವಾರದ ಅಧಿಪತಿಗೂ, ನಕ್ಷತ್ರದ ಅಧಿಪತಿಗೂ ಸೂಕ್ತವಾಗಿದೆ. ಅವರಿಗೆ ಯೋಗ್ಯವಾದ ಸಂಯೋಜನೆ ಉಂಟಾದರೆ ಬಲ ಅಧಿಕ, ಫಲವೂ ಅಧಿಕವೇ.
ವಿಶಿಷ್ಟ ಯೋಗ :
ರವಿವಾರದಂದು ಹಸ್ತಾ ನಕ್ಷತ್ರ, ಸೋಮವಾರದಂದು ಮೃಗಶಿರಾ, ಮಂಗಳವಾರದಂದು ಅಶ್ವಿನೀ, ಬುಧವಾರದಂದು ಅನುರಾಧಾ, ಗುರುವಾರದಂದು ಪುಷ್ಯಾ, ಶುಕ್ರವಾರದಂದು ರೇವತೀ, ಶನಿವಾರದಂದು ರೋಹಿಣೀ ನಕ್ಷತ್ರಗಳ ಯೋಗಗಳು ಅಮೃತಸಿದ್ಧಿಯನ್ನು ನೀಡುವುವು.
ಮೃತ್ಯು ಯೋಗ :
ಅನುರಾಧಾ ನಕ್ಷತ್ರ ಮತ್ತು ರವಿವಾರ, ಉತ್ತರಾಷಾಢ ಮತ್ತು ಸೋಮವಾರ, ಮಂಗಳವಾರ ಮತ್ತು ಶತಭಿಷಾ, ಅಶ್ವಿನೀ ಮತ್ತು ಬುಧವಾರ, ಗುರುವಾರ ಮತ್ತು ಮೃಗಶಿರಾ, ಶುಕ್ರಾರ ಮತ್ತು ಆಶ್ಲೇಷಾ, ಶನಿವಾರ ಮತ್ತು ಹಸ್ತಾ ಈ ಸಂಯೋಗದಿಂದ ಕಾರ್ಯನಾಶ, ಅನಾರೋಗ್ಯ, ಮೃತ್ಯು, ಅಪವಾದ ಇಂತಹ ಅವಗಡಗಳು ಸಂಭವಿಸುವವು.
ಮುಂದೆ ಹೆಜ್ಜೆ ಇಡುವ ಮೊದಲು ಇದರ ಮೇಲೆ ದೃಷ್ಟಿ ಇಟ್ಟರೆ ಮಾಡುವ ಕಾರ್ಯ ದೈವಬಲದಿಂದಲೂ ಕೂಡಿರುವುದು.
– ಲೋಹಿತ ಹೆಬ್ಬಾರ್ – 8762924271
Published On - 4:34 pm, Thu, 13 February 25




