AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದುಕೊಂಡ ಕೆಲಸವು ಸಿದ್ಧಿಯಾಗಲು ಯಾವ ವಾರ, ಯಾವ ದಿಕ್ಕಿಗೆ ಮುಖಮಾಡಿ ಹೋಗಬೇಕು?

ದಿನವೂ ಮಾಡುವ ಕೆಲಸವು ಪೂರ್ಣವಾಗಲಿ, ಲಾಭವಾಗಲಿ ಎಂಬ ಭಾವನೆಯಿಂದ ಆರಂಭಿಸುವುದು ಇದೆ. ಆದರೆ ದಿನ ಮುಕ್ತಾಯವಾಗುವಾಗ ಕೆಲವರದ್ದು ಕೆಲವೇ ಕಾರ್ಯಗಳು ಮಾತ್ರ ಆರಂಭವಾಗುತ್ತವೆ, ಮುಕ್ತಾಯವಾಗುತ್ತವೆ. ಇನ್ನು ಉಳಿದವರದ್ದು ಆಗದು. ಇದೆಕ್ಕೆ ಮುಖ್ಯ ಕಾರಣ ಅನುಸರಿಸದೇ ಇರುವ ನಿಯಮ. ಕಾಲಕ್ಕೆ ತುಂಬ ಶಕ್ತಿ‌ ಇದೆ. ಅದು ಸಾಧ್ಯವನ್ನೂ ಸಾಧಿಸಕೊಡಬಲ್ಲದು. ಆದರೆ ಅದನ್ನು ತಿಳಿಯುವ ಯೋಜನೆಗೆ ಯೋಚನೆ ಬೇಕು. ಅದಕ್ಕೆ ಅಂದುಕೊಂಡ ಕೆಲಸವು ಸಿದ್ಧಿಯಾಗಲು ಯಾವ ವಾರ, ಯಾವ ದಿಕ್ಕಿಗೆ ಮುಖಮಾಡಿ ಹೋಗಬೇಕು ಇಲ್ಲಿದೆ ನೋಡಿ

ಅಂದುಕೊಂಡ ಕೆಲಸವು ಸಿದ್ಧಿಯಾಗಲು ಯಾವ ವಾರ, ಯಾವ ದಿಕ್ಕಿಗೆ ಮುಖಮಾಡಿ ಹೋಗಬೇಕು?
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 13, 2025 | 4:15 PM

Share

ಪ್ರತಿದಿನ‌ ಚೆನ್ನಾಗಿದ್ದರೆ, ಪ್ರತಿ ವಾರವೂ ಚೆನ್ನಾಗಿಯೇ ಇರುವುದು. ಪ್ರತಿ ವಾರ ಸುಂದರವಾಗಿದ್ದರೆ, ಪ್ರತಿ ತಿಂಗಳೂ ಸುಂದರ. ಹೀಗೆ ಒಂದು ವರ್ಷ. ಮುಂದುವರಿದು ಜೀವನವೇ ಚೆನ್ನಾಗಿ ಇಟ್ಟುಕೊಳ್ಳಲು ಸಾಧ್ಯ. ಅಂತಹ ವಿಶೇಷತೆಯನ್ನು ದಿನದಲ್ಲಿ ಹಾಸುಹೊಕ್ಕಾಗುವಂತೆ ಮಾಡಿದ್ದಾರೆ.

ದಿನವೂ ಮಾಡುವ ಕೆಲಸವು ಪೂರ್ಣವಾಗಲಿ, ಲಾಭವಾಗಲಿ ಎಂಬ ಭಾವನೆಯಿಂದ ಆರಂಭಿಸುವುದು ಇದೆ. ಆದರೆ ದಿನ ಮುಕ್ತಾಯವಾಗುವಾಗ ಕೆಲವರದ್ದು ಕೆಲವೇ ಕಾರ್ಯಗಳು ಮಾತ್ರ ಆರಂಭವಾಗುತ್ತವೆ, ಮುಕ್ತಾಯವಾಗುತ್ತವೆ. ಇನ್ನು ಉಳಿದವರದ್ದು ಆಗದು. ಇದೆಕ್ಕೆ ಮುಖ್ಯ ಕಾರಣ ಅನುಸರಿಸದೇ ಇರುವ ನಿಯಮ. ಕಾಲಕ್ಕೆ ತುಂಬ ಶಕ್ತಿ‌ ಇದೆ.‌ ಅದು ಸಾಧ್ಯವನ್ನೂ ಸಾಧಿಸಕೊಡಬಲ್ಲದು. ಆದರೆ ಅದನ್ನು ತಿಳಿಯುವ ಯೋಜನೆಗೆ ಯೋಚನೆ ಬೇಕು. ಯಾವ ವಾರ ಯಾವ ದಿಕ್ಕಿನಿಂದ ಶುಭ, ಲಾಭ, ಸಂತೋಷ, ನೆಮ್ಮದಿ ಸಿಗುತ್ತದೆ ಎಂದು ನೋಡುವುದಾದರೆ

ರವಿವಾರ ಹಾಗೂ ಶುಕ್ರವಾದದಂದು ಮೊದಲು ಹೊರಡಬೇಕಾದ ದಿಕ್ಕು ಪಶ್ಚಿಮ, ಸೋಮವಾರ ಮತ್ತು ಶನಿವಾರದಂದು ಪೂರ್ವ, ಮಂಗಳವಾರ ಮತ್ತು ಬುಧವಾ ಉತ್ತರ, ಗುರುವಾರದಂದು ದಕ್ಷಿಣ ದಿಕ್ಕಿನಲ್ಲಿ ಹಾಗೂ ಶನಿವಾರದಂದು ಆಗ್ನೇಯ ದಿಕ್ಕಿನಲ್ಲಿ ಶೂಲವಿರುವುದು. ಇದನ್ನು ದಿಕ್ ಶೂಲ ಎನ್ನುತ್ತಾರೆ. ಅದೇ ರೀತಿಯಲ್ಲಿ ಇನ್ನೊಂದಿಷ್ಟು ದಿಕ್ ಶೂಲವನ್ನು ಹೇಳಲಾಗಿದೆ.

ಸೋಮ ಮತ್ತು ಗುರುವಾರದಲ್ಲಿ ದಕ್ಷಿಣ ದಿಕ್ಕು, ಬುಧವಾರ ನೈರುತ್ಯ, ರವಿವಾರ ಪಶ್ಚಿಮ, ಶುಕ್ರವಾರ ವಾಯವ್ಯ, ಮಂಗಳವಾರ ಮತ್ತು ಬುಧವಾರದಂದು ಉತ್ತರದಿಕ್ಕಿನಲ್ಲಿ ಶೂಲವಿರಲಿದ್ದು ಈ ದಿಕ್ಕಿನ ಕಡೆ ಶುಭ ಕಾರ್ಯಗಳಿಗೆ ಮುಖಮಾಡಿ ಹೊರಡಬಾರದು. ಅಥವಾ ಆ ದಿಕ್ಕಿನ‌ಕಡೆ ಹೋಗದಿರುವುದು ಉತ್ತಮ.‌ ಕಾರ್ಯಹಾನಿ, ಮಾನಹಾನಿ, ಧನಹಾನಿ ಎಲ್ಲವೂ ಸಂಭವಿಸುವುದು.

ಮೇಲೆ‌ ಹೇಳಿದ ದಿಕ್ಕುಗಳನ್ನು ಹೊರತುಪಡಿಸಿ, ಬೇರೆ ದಿಕ್ಕಿನಲ್ಲಿ ಆಯಾ ದಿನ ಹೋಗಬಹುದು. ಅದರ ವಿರುದ್ಧ ದಿಕ್ಕಾದರೆ ಉತ್ತಮ. ಅಂದುಕೊಂಡ ಕಾರ್ಯಗಳು ದಿಕ್ಕು ತಪ್ಪದೇ ಇರಲು, ದಿಕ್ಕನ್ನು ಕಂಡುಕೊಳ್ಳುವುದು ಅನಿವಾರ್ಯ.

– ಲೋಹಿತ ಹೆಬ್ಬಾರ್ – 8762924271

4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ