Horoscope Today 03 November: ಈ ರಾಶಿಯವರಿಗೆ ತಮ್ಮ ಕಾರ್ಯದಿಂದ ಎರಡೆರಡು ಪ್ರಯೋಜನ
ದಿನ ಭವಿಷ್ಯ: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಶುಕ್ಲ ಪಕ್ಷದ ತ್ರಯೋದಶೀ ತಿಥಿ, ಸ್ವಾತಿ ಮಹಾನಕ್ಷತ್ರ, ಸೋಮವಾರ ಮಿತ್ರನಿಗೆ ಸಹಾಯ, ಕಲ್ಲಿನ ವ್ಯಾಪಾರ, ಧಾರ್ಮಿಕ ಆಚರಣೆ, ಮೂರ್ಖತನ, ಬಂಧುವಿನಿಂದ ಬಂಧನ, ಸಂತೋಷ ವಿತರಣೆ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಹರ್ಷಣ, ಕರಣ : ಭದ್ರ, ಸೂರ್ಯೋದಯ – 06 – 14 am, ಸೂರ್ಯಾಸ್ತ – 05 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:42 – 09:09, ಗುಳಿಕ ಕಾಲ 13:30 – 14:57, ಯಮಗಂಡ ಕಾಲ 10:36 – 12:03.
ಮೇಷ ರಾಶಿ: ನಿಮ್ಮ ಆಸ್ತಿಯಲ್ಲಿ ವ್ಯಾಪಾರಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ಎಲ್ಲ ಒತ್ತಡಗಳನ್ನು ಮರೆತು ಕೆಲವು ಎಲ್ಲರ ಜೊತೆ ಬೆರೆಯುವಿರಿ. ಒಮ್ಮನಸ್ಸಿನಿಂದ ಇಂದು ಕಾರ್ಯ ಅಸಾಧ್ಯ. ಇಂದು ನಿಮ್ಮ ಅಮೂಲ್ಯ ಸಮಯವನ್ನು ಸ್ನೇಹಿತರ ಕೆಲಸಕ್ಕಾಗಿ ಕೊಡುವಿರಿ. ಆದರೂ ಕೆಲಸವು ಸಾಧ್ಯವಾಗದು. ಬಯಕೆಗಳನ್ನು ಈಡೇರಿಸಿಕೊಳ್ಳಲು ಮಾರ್ಗಗಳನ್ನು ಹುಡುಕಿಕೊಳ್ಳುವಿರಿ. ಸಂಗಾತಿಗೆ ಏನಾದರೂ ಉಡುಗೊರೆ ಕೊಡುವ ಮನಸ್ಸಾಗುವುದು. ಇದರಿಂದ ನಿಮ್ಮನ್ನು ಅರ್ಥಮಾಡಿಕೊಳ್ಳುವ ಸಂಗಾತಿಗೆ ಕಷ್ಟವಾಗುವುದು. ಮಹಿಳೆಯು ನಿಮ್ಮ ವಿರುದ್ಧ ಮಾತನಾಡಿದ್ದು ಸಹಿಸಲಾಗದು. ಯಾರಿಂದಲೂ ಗೌರವ ಸಿಗುತ್ತಿಲ್ಲ ಎಂಬ ಕೊರಗು ಇರುವುದು. ಆರ್ಥಿಕವಾಗಿ ಸಬಲರಾಗುವಿರಿ. ನಿರುದ್ಯೋಗಿ ಮಿತ್ರನಿಗೆ ನಿಮ್ಮ ಸಹಾಯವು ಸಿಗಲಿದೆ. ಹೊಸತನ್ನು ವಿಚಾರಗಳತ್ತ ನಿಮ್ಮ ಬುದ್ಧಿಯು ಓಡುವುದು. ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳುವಿರಿ. ಉದ್ಯೋಗದ ಕಾರಣಕ್ಕೆ ನೀವು ಮನೆಯಿಂದ ದೂರ ಇರಬೇಕಾದೀತು.
ವೃಷಭ ರಾಶಿ: ನಂಬಿಕೆಯಿಂದ ಎಷ್ಟೋ ಪ್ರತಿಶತ ಕಾರ್ಯ ಸಫಲವಾವುವಾಗುವಾಗ ನಿಮ್ಮ ವಾಹನದಿಂದ ನಷ್ಟ ಸಂಭವಿಸುವುದು. ನಿಮ್ಮ ಮಾತುಗಳನ್ನು ನಂಬುವವರ ಸಂಖ್ಯೆ ಕಡಿಮೆ ಆದೀತು. ಕೃಷಿಯಿಂದ ಲಾಭ ಗಳಿಸಲು ನೀವು ಸಲಹೆಯನ್ನು ಪಡೆಯಿರಿ. ಓದಿನ ವಿಚಾರವಾಗಿ ವಿದ್ಯಾರ್ಥಿಗಳಲ್ಲಿ ಗೊಂದಲವಿರಬಹುದು. ನಿಮ್ಮ ಬೆಂಬಲವನ್ನು ಹಿಂಪಡೆಯಬಹುದು. ಸಿಕ್ಕ ಅವಕಾಶಗಳನ್ನು ಬಿಡದೇ ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುವಿರಿ. ಬಂಧುಗಳ ಪ್ರೀತಿಯೂ ಸಿಗಲಿದೆ. ಸಿದ್ಧವಾದ ವಿಚಾರವನ್ನು ಪ್ರಯೋಗ ಮಾಡಲು ಹೋಗಿ ಅಪಾಯ ತಂದುಕೊಳ್ಳುವಿರಿ. ಅತಿಥಿ ಸತ್ಕಾರವನ್ನು ಮಾಡಲಿದ್ದೀರಿ. ನಿಮ್ಮ ಚಿಂತನೆಯನ್ನು ನೀವು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಪುಣ್ಯ ಸ್ಥಳದ ದರ್ಶನವಾಗಲಿದೆ. ದಾಂಪತ್ಯದಲ್ಲಿ ಸಾಮರಸ್ಯ ಉಂಟಾಗುವಂತೆ ನೋಡಿಕೊಳ್ಳಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು.
ಮಿಥುನ ರಾಶಿ: ಕಲ್ಲಿನ ವ್ಯಾಪಾರದಲ್ಲಿ ಹಳೆಯದನ್ನು ಹೊಸ ಬೆಲೆಯ ಜೊತೆ ಮಾರಾಟ ಮಾಡಿ ಲಾಭ ಗಳಿಸುವಿರಿ. ಇಂದು ನಿಮ್ಮ ಭಾವನೆಯ ಜೊತೆ ಆಟವಾಡುವರು. ವಿದ್ಯಾರ್ಥಿಗಳಿಗೆ ಮಾನಸಿಕವಾದ ಭಯವನ್ನು ತೆಗೆದರೆ ಮುನ್ನಡೆಗೆ ಅವಕಾಶವಿದೆ. ಸಾಲದಿಂದ ಮುಕ್ತಿ ಒಡೆದು ಮನಸ್ಸು ನಿರಾಳವಾಗುವುದು. ನಿಮ್ಮ ಯಶಸ್ಸಿಗೆ ಕಲ್ಲು ಹಾಕುವವರು ಗೊತ್ತಾಗಲಿದ್ದರೆ. ಹೊಸ ಉದ್ಯೋಗತ್ತ ನಿಮ್ಮ ಮನಸ್ಸು ಇರಲಿದೆ. ಮಕ್ಕಳಿಗೆ ಬೇಕಾದುದನ್ನು ನೀವು ಕೊಡಿಸುವಿರಿ. ಸಂಗಾತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೋಲಾಗಬಹುದು. ನಟರು ಅಥವಾ ವಾಗ್ಮಿಗಳಿಗೆ ಉತ್ತಮ ಅವಕಾಶಕ್ಕೆ ಸೂಚನೆ ಸಿಗುವುದು. ಉಪಕಾರಕ್ಕೆ ಪ್ರತಿಯಾಗಿ ಉಪಕಾರವನ್ನು ಮಾಡುವಿರಿ. ನಿಮಗೆ ಸಂತೋಷವನ್ನು ಕೊಡುವ ಇಂದಿನ ಸಂದರ್ಭವಾಗಿದೆ. ಅಪರಿಚಿತರ ಜೊತೆ ವ್ಯರ್ಥವಾದ ಕಲಹವನ್ನು ಮಾಡಿಕೊಳ್ಳುವಿರಿ. ಸನ್ನಿವೇಶಕ್ಕೆ ತಕ್ಕಂತೆ ನಿಮ್ಮ ಮಾತಿರಲಿ. ನಿಮ್ಮ ಯಾರದರೂ ದೂರು ಸಲ್ಲಿಸಬಹುದು. ಅನಿವಾರ್ಯ ಕಾರಣದಿಂದ ಮನೆಗೆ ಹೋಗಲು ಆಗದೇ ಇರಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ.
ಕರ್ಕಾಟಕ ರಾಶಿ: ಧಾರ್ಮಿಕ ಕ್ರಿಯೆಗೆ ಉಪಯೋಗಿಸುವ ವಸ್ತುಗಳಿಂದ ಲಾಭ. ಇಂದು ಪ್ರಾಮುಖ್ಯ ಕೊಡಬೇಕಾದಲ್ಲಿ ಅರಿತು ಪ್ರಯತ್ನಪೂರ್ವಕವಾಗಿ ಕೊಡಿ. ಬರಬೇಕಾದ ಹಣವು ನಿಮಗೆ ಸಿಗುಬುದು ಕಷ್ಟವಾಗುವುದು. ಧಾರ್ಮಿಕ ಸಂಭ್ರಮದಲ್ಲಿ ನೀವು ಇರುವಿರಿ. ಯಾರದೋ ಮಾತಿನಿಂದ ನೀವು ಕ್ಲೇಶಕ್ಕೆ ಒಳಗಾಗುವಿರಿ. ಆಪ್ತರನ್ನು ಮನೆಗೆ ಕರೆದು ಸತ್ಕರಿಸಲಿದ್ದೀರಿ. ಪ್ರೇಮವು ನಿಮ್ಮ ಮನಸ್ಸನ್ನು ಕದಡಬಹುದು. ಸಂತಾನಯೋಗದಿಂದ ನಿಮಗೂ ಕುಟುಂಬದಲ್ಲಿಯೂ ಸಂತಸ. ಮಕ್ಕಳ ಮನೋದೌರ್ಬಲ್ಯವನ್ನು ಕೌನ್ಸಿಲ್ ಮೂಲಕ ಸರಿಮಾಡಿಸಿ. ಒಳ್ಳೆಯದಾಗಲು ಸಮಯವನ್ನು ನೀವು ಕಾಯಬೇಕಾಗುವುದು. ಮಾನಸಿಕವಾಗಿ ನೀವು ಬಲವಾಗಬೇಕಿದೆ. ಎಲ್ಲ ಸಂದರ್ಭದಲ್ಲಿಯೂ ದುಃಖಿಸಬೇಕಾಗುವುದು. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ದುರ್ಬಲ ಮಾಡಬಹುದು. ಮೊದಲೇ ನಿಶ್ಚಯವಾದ ವಿವಾಹವು ಕಾರಣಾಂತರಗಳಿಂದ ಮಂದೆ ಹೋಗಲಿದೆ. ಕಲಾಕೌಶಲವನ್ನು ಮೆರೆಯಬಹುದು.
ಸಿಂಹ ರಾಶಿ: ನಿಮ್ಮ ಕೃಷಿ ಭೂಮಿಯನ್ನು ನಿವೇಶನಕ್ಕೆ ಪರಿವರ್ತಿಸುವ ಯೋಚನೆ ಇರುವುದು. ನಿಮ್ಮ ಉದ್ಯೋಗವನ್ನು ಇನ್ನೊಬ್ಬರ ಜೊತೆ ತುಲನೆ ಮಾಡುವಿರಿ. ಆಕಸ್ಮಿಕ ಅಪಘಾತಗಳಿಂದ ನೋವು ಹೆಚ್ಚಾಗುವುದು. ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಯಾರಿಂದಲಾದರೂ ಹೇಳಿಸಿಕೊಳ್ಳುವಿರಿ. ಸ್ತ್ರೀಯರು ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವರು. ಪಾಲುದಾರಿಕೆಯಲ್ಲಿ ಸಂಶಯ ಕಾಣಿಸುವುದು. ಮಾಡಿದ ತಪ್ಪಿಗೆ ನಿಮಗೆ ಬೇಸರವಾಗಬಹುದು. ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಹಣವು ನಿಮಗೆ ಸಿಗದು. ವೇದನೆಯು ಒಂದಾಮೇಲೊಂದರಂತೆ ಶರೀರವನ್ನು ಪೀಡಿಸುವುದು. ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗಬಹುದು. ಮಕ್ಕಳ ವಿವಾಹಕ್ಕೆ ಪ್ರಯತ್ನ ಅತಿಯಾಗುವುದು. ಯಂತ್ರಗಳ ವ್ಯಾಪಾರದಲ್ಲಿ ನಿಮಗೆ ಲಾಭವು ಸಿಗುವುದು. ಸ್ವಂತ ವಾಹನವನ್ನು ಖರೀದಿ ಮಾಡಬೇಕಾಗುವುದು. ಅನಾರೋಗ್ಯವನ್ನು ಯಾರ ಬಳಿಯಾದರೂ ಹೇಳಿಕೊಂಡು ಸೂಕ್ತವಾದ ಸಲಹೆಯನ್ನು ಪಡೆಯುವಿರಿ. ಉದ್ಯೋಗದ ಅನುಭವವನ್ನು ಸರಿಯಾಗಿ ಪಡೆಯಿರಿ.
ಕನ್ಯಾ ರಾಶಿ: ನೌಕರರ ಜೊತೆ ಕಾರ್ಯಕ್ಕೆ ಸಂಬಂಧಿಸಿದ ವಾಗ್ವಾದ ಮಾಡುವಿರಿ. ಸಂಗಾತಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಇರುವಿರಿ. ನೌಕರರಿಂದ ನಿರೀಕ್ಷಿಸಿದ್ದು ಸುಳ್ಳಾಗಬಹುದು. ಇಂದು ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಆಸಕ್ತಿ ಹೆಚರಚಾಗುವುದು. ಸಂಗಾತಿಯ ಸಂಪತ್ತನ್ನು ಇಂದು ಖಾಲಿಮಾಡಲಿದ್ದೀರಿ. ನಿಮ್ಮ ಮನಸ್ಸು ಯಾವುದೋ ಆಲೋಚನೆಯಲ್ಲಿ ಇರಲಿದೆ. ಸಂಬಂಧಗಳಲ್ಲಿ ಅಭದ್ರತೆಯು ಕಾಡುವುದು. ತಂದೆಯ ಮಾತು ನಿಮಗೆ ಕಿರಿಕಿರಿ ನೀಡಬಹುದು. ಕರ್ತವ್ಯ ಲೋಪವಾಗದಂತೆ ನಿಮ್ಮ ಕಾರ್ಯವನ್ನು ನಿರ್ವಹಿಸಿ. ನಿಮ್ಮ ಆದಾಯದ ಮೂಲವಾದ ವ್ಯಾಪಾರದಲ್ಲಿ ಲಾಭವಿರುವುದು. ಕಡಿಮೆಯಾಗದ ರೋಗಕ್ಕೆ ಔಷಧವು ಸಿಗಬಹುದು. ಇಂದು ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವಿರಿ. ಕೌಟುಂಬಿಕ ಸಮಾಧಾನವನ್ನು ತರುವುದು ನಿಮಗೆ ಸವಾಲಗಬಹುದು. ನಿಮ್ಮ ಉದ್ಯೋಗದ ಬಗ್ಗೆ ಅಸೂಯೆ ಬರಬಹುದು. ಸಂಗಾತಿಯ ಬಗ್ಗೆ ಪ್ರೀತಿ ಹೆಚ್ಚಾಗುವುದು. ನಿಮ್ಮ ಇಂದಿನ ಅಸಹಾಯಕತೆಯನ್ನು ಯಾರ ಎದುರೂ ಹೇಳುವುದು ಬೇಡ. ನಿಮ್ಮ ಎಲ್ಲ ಕಾರ್ಯಕ್ಕೂ ಯಶಸ್ಸು ಬೇಕು ಎಂಬ ಹಂಬಲ ಬೇಡ.
ತುಲಾ ರಾಶಿ: ಸಾಲದ ಕಾರಣ ಹಲವು ಕಡೆಗಳಿಂದ ಒತ್ತಡ ಬರಲಿದೆ. ಮಿತ್ರರ ಸಹಾಯಕ್ಕೆ ಇಂದು ಕಿರು ಪ್ರಯಾಣ ಮಾಡುವಿರಿ. ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ವಂಚಿಸುವ ಸಾಧ್ಯತೆ ಇದೆ. ಕೆಲವು ಘಟನೆಗಳು ನಿಮ್ಮ ಮನಸ್ಸನ್ನು ವಿಚಲಿತಗೊಳಿಸುವುದು. ಸ್ಪರ್ಧೆಯಲ್ಲಿ ಜಯಗಳಿಸುವ ಬದಲು ಸೋಲಾಗಬಹುದು ಇದರಿಂದ. ತಪ್ಪಾಗಿ ಆಡಿದ ಮಾತಿನಿಂದ ಸಮಸ್ಯೆಯನ್ನು ಎದುರಿಸಬೇಕಾಗುವುದು. ಮಹಿಳೆಯರು ಸ್ವ ಉದ್ಯೋಗದಲ್ಲಿ ಲಾಭವನ್ನು ಮಾಡಿಕೊಳ್ಳುವಿರಿ ನಂಬಿಕೆಯ ಕೊರತೆಯಿಂದ ಪ್ರೇಮವು ಭಗ್ನವಾಗಬಹುದು. ನಿದ್ರಾಭಂಗದಿಂದ ಕಾರ್ಯವೂ ಅಸ್ತವ್ಯಸ್ತವಾಗಲಿದೆ. ಆಪ್ತರ ಸಹಕಾರದಿಂದ ನಿಮಗೆ ಉದ್ಯೋಗವು ಸಿಗುವುದು. ಭವಿಷ್ಯದ ಯೋಜನೆಯನ್ನು ಕುಟುಂಬದ ಜೊತೆ ಹಂಚಿಕೊಳ್ಳಿ. ಪಾರದರ್ಶಕ ಕಾರ್ಯವು ನಿಮ್ಮ ಮೇಲಿನ ಅನುಮಾನವನ್ನು ದೂರಮಾಡುಬುದು. ನಿಮ್ಮ ಶುದ್ಧತೆಯನ್ನು ನೀವು ಅರಿತರೆ ಸಾಕು. ನಿಮ್ಮದಲ್ಲದ ತಪ್ಪನ್ನೂ ನೀವು ಒಪ್ಪಿಕೊಂಡು ಕಲಹವಾಗುವುದನ್ನು ನಿಲ್ಲಿಸುವಿರಿ. ಮಕ್ಕಳ ವಿವಾಹಕ್ಕಾಗಿ ಓಡಾಟ ಮಾಡಬೇಕಾಗುವುದು.
ವೃಶ್ಚಿಕ ರಾಶಿ: ಸಂಗಾತಿಗಾಗಿ ಏನನ್ನಾದರೂ ಸಹಾಯವನ್ನು ಮಾಡಿಕೊಡುವಿರಿ. ಕೊಟ್ಟ ಗೌರವ ನಿಮಗೆ ಸಾಲದು. ಮಕ್ಕಳಿಗಾಗಿ ಪಟ್ಟಶ್ರಮವು ಇಂದು ಸಾರ್ಥಕ ಎನಿಸುವುದು. ಅಹಂಕಾರದಿಂದ ನಿಮಗೆ ಮಿತ್ರರು ದೂರವಾಗಬಹುದು. ಸುಮ್ಮನೇ ಇದ್ದು ಹತ್ತಾರು ಯೋಚನೆಗಳು ಬರಲಿದೆ. ರಾಜಭೀತಿ ಕಾಡುವುದು. ಬಂಧುಗಳಿಂದ ಉಡುಗೊರೆ ಸಿಗಲಿದೆ. ಮಾತಿನ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಗುಂಪಿನಲ್ಲಿ ಕಳೆಯುವುದು ಇಷ್ಟವಾಗದು. ನೀರಿನಿಂದ ಭೀತಿಯು ಇರಲಿದೆ. ಕಲಾವಿದರಿಗೆ ಅವಕಾಶಗಳು ತಪ್ಪಿಹೋಗಬಹುದು. ನಿಮ್ಮ ಯಶಸ್ಸಿನ ವೇಗವನ್ನು ತಗ್ಗಿಸುವರು. ಆರ್ಥಿಕ ವ್ಯವಹಾರದಲ್ಲಿ ಶುದ್ಧತೆ ಮತ್ತು ನಿಖರತೆ ಇರಲಿ. ಮನೆಯ ಕಾರ್ಯದಲ್ಲಿ ಇಂದು ಹೆಚ್ಚು ತೊಡಗಬೇಕಾಗುವುದು. ಸಭೆ ಸಮಾರಂಭಗಳಿಗೆ ಹೋಗುವಿರಿ. ಸ್ನೇಹಿತರಿಗೆ ಸಹಾಯ ಮಾಡುವಿರಿ. ವ್ಯವಹಾರದಲ್ಲಿ ನಿಮ್ಮ ಮಾನಸಿಕ ಆನುಕೂಲ್ಯವೂ ಮುಖ್ಯವಾಗುವುದು. ನಿಮ್ಮ ಮೆಚ್ಚುಗೆಯಿಂದ ಅಪರಿಚಿತರಿಗೆ ಖುಷಿಯಾಗಬಹುದು. ಹೊಸ ವಸ್ತುಗಳ ಬಗ್ಗೆ ಅಸೆ ಬರುವುದು.
ಧನು ರಾಶಿ: ಬಾಂಧವರಿಂದ ನಿಮಗೆ ಬಂಧನ. ಸಿಗುವ ನೆಮ್ಮದಿಯನ್ನು ದುಡುಕಿ ಹಾಳುಮಾಡಿಕೊಳ್ಳುವಿರಿ. ಸಣ್ಣದಾದರೂ ಸ್ವಂತ ಉದ್ಯೋಗವಿರಬೇಕು ಎನ್ನುವ ಧ್ಯೇಯ ನಿಮ್ಮದು. ಹಣಕಾಸಿನ ವಿಚಾರದಲ್ಲಿ ನಿಮಗೆ ಮಿತ್ರರ ಜೊತೆ ಕಲಹವಾಗಲಿದೆ. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವ ಇರಿ. ಸ್ತ್ರೀಯರಿಗೆ ಸಂತೋಷದ ದಿನವಾಗುವುದು. ಒಂದು ಕಾರ್ಯದ ಮುಕ್ತಾಯದಿಂದ ಇನ್ನೊಂದರ ಆಗಮನವಾಗಲಿದೆ. ಹಿತಶತ್ರುಗಳು ನಿಮ್ಮ ಔದ್ಯೋಗಿಕ ಸಮೀಕ್ಷೆ ಮಾಡುವರು. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರಗತಿಯನ್ನು ಪರಿಶೀಲಿಸುವುದು ಅಗತ್ಯ. ನಿಮ್ಮ ಪ್ರಾಮಾಣಿಕ ಮಾತುಗಳು ಹಣವನ್ನು ಸಾಲವಾಗಿ ಕೊಟ್ಟವರಿಗೆ ನಂಬಿಕೆ ತರಲಿದೆ. ಅಪರಿಚಿತರಿಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೆರಮನೆಯರ ಜೊತೆ ಕಲಹವಾಗಲಿದೆ. ನಿಮ್ಮ ಮಾತುಗಳು ಸಂತೋಷವನ್ನು ಕೊಡದೇ ಇರಬಹುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ.
ಮಕರ ರಾಶಿ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಆಗುವುದು. ಪ್ರೀತಿಗಾಗಿ ತ್ಯಾಗಮಾಡಬೇಕಾದೀತು. ದುರಸ್ತಿ ಕಾರ್ಯವನ್ನು ಮಾಡುವವರಿಗೆ ಈ ದಿನ ಒತ್ತಡವಿರುವುದು. ಹೊಸ ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗುವುದು. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮಫಲಿತಾಂಶವು ಸಿಗುವುದು. ಆಕಸ್ಮಿಕ ಧನಲಾಭದಿಂದ ನಿಮಗೆ ಸಂತೋಷವಾಗಲಿದೆ. ಆರ್ಥಿಕತೆಯನ್ನು ನಿಭಾಯಿಸುವ ಕಲೆ ಗೊತ್ತಿರಲಿ. ಅನ್ಯ ಆಲೋಚನೆಯಿಂದ ನಿದ್ರೆಗೆ ತೊಂದರೆ ಆಗಬಹುದು. ಅನ್ಯರ ಸ್ಥಿತಿಯನ್ನು ಕಂಡು ಮನಸ್ಸು ಕರಗುವುದು. ಉದ್ಯಮದಿಂದ ನಿಮ್ಮನ್ನು ಹೊರಹಾಕುವಿರಿ. ಅನವಶ್ಯಕ ಮಾತುಗಳು ವಿವಾದಕ್ಕೆ ಕಾರಣವಾಗುವುದು. ಹಂಚಿಕೊಂಡು ಮಾಡುವ ಕೆಲಸವು ಸಂತೋಷವನ್ನು ನೀಡುವುದು ಹಾಗೂ ವೇಗವಾಗಿ ಕಾರ್ಯವು ಆಗುವುದು. ಧಾರ್ಮಿಕವಾದ ಆಚರಣೆಗಳಲ್ಲಿ ತೊಡಗುವಿರಿ. ನಿಮ್ಮ ವಿಷಯವನ್ನು ಯಾರ ಬಳಿಯೂ ಹೇಳುವುದು ಬೇಡ. ಮಕ್ಕಳ ಪ್ರಗತಿಯಿಂದ ಸಂತಸ. ಉದ್ಯೋಗದಲ್ಲಿ ಅಧಿಕ ವೇತನದ ನಿರೀಕ್ಷೆ ಇರುವುದು.
ಕುಂಭ ರಾಶಿ: ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನಿಮಗೆ ಬಂದ ಕಾರ್ಯವನ್ನು ಅನ್ಯರ ಬಳಿ ಮಾಡಿಸುವಿರಿ. ಇಂದು ಅನವಶ್ಯಕವಾದ ಪ್ರಯಾಣವಾಗುವುದು. ಇನ್ನೊಬ್ಬರಿಗೆ ಹೇಳುವಾಗ ನೀವು ಅದನ್ನು ಆಚರಿಸಬೇಕಾಗಬಹುದು. ನಿಮ್ಮ ಸಲಹೆಯನ್ನು ಪಡೆಯದೇ ಇರುವುದಕ್ಕೆ ನಿಮಗೆ ಬೇಸರವಾಗುವುದು. ನೌಕರರು ನಿಮ್ಮ ಮೇಲೆ ಮುನಿಸಿಕೊಂಡಾರು. ವ್ಯಾಪಾರದ ಆಧಿಕ್ಯಕ್ಕೆ ಇಂದು ವ್ಯವಸ್ಥೆ ಮಾಡಿಕೊಳ್ಳುವಿರಿ. ನಿಮ್ಮ ಪ್ರತಿಜ್ಞೆ ಭಂಗವಾಗಬಹುದು. ಇಂದು ಜೀವನವು ಹೊಸ ತಿರುವನ್ನು ಪಡೆದುಕೊಳ್ಳುವುದು. ದೂರದ ಬಂಧುಗಳ ಆಗಮನವು ಅನಿರೀಕ್ಷಿತವಾಗಿ ಆಗಲಿದೆ. ಹೊಸ ವ್ಯಕ್ತಿಗಳ ಪರಿಚಯವು ನಿಮಗೆ ಆಗುವುದು. ಇಂದು ನಿಮ್ಮ ಸಂಗಾತಿಯಿಂದ ಕೆಲವು ವಿಚಾರಗಳಿಗೆ ಸಲಹೆಯನ್ನು ಪಡೆಯುವಿರಿ. ನಿಮ್ಮ ಮನೆ ಕೆಲಸವು ಇಂದು ಅರ್ಧಕ್ಕೆ ನಿಲ್ಲಬಹುದು. ಸಾಲವೇ ನಿಮಗೆ ದೊಡ್ಡ ಶತ್ರುವಾಗಬಹುದು. ಪ್ರಭಾವಿ ವ್ಯಕ್ತಿಗಳ ಜೊತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮವರ ಮೇಲೆ ಅನುಕಂಪ ಇರಲಿದೆ. ಸಾಮಾಜಿಕ ಕಾರ್ಯದಲ್ಲಿ ಉತ್ಸಾಹದಿಂದ ಇರುವಿರಿ.
ಮೀನ ರಾಶಿ: ವಾಹನಗಳಿಂದ ಹೆಚ್ಚಿನ ಲಾಭ. ವ್ಯಾಪಾರದ ಅನುಕೂಲತೆಯನ್ನು ನೋಡಿ ಮುಂದಡಿ ಇಡಿ. ಧಾರ್ಮಿಕ ನಂಬಿಕೆಗಳು ನಿಮಗೆ ಸತ್ಯವೆನಿಸಿ, ಶ್ರದ್ಧೆಯು ಹೆಚ್ಚಾಗುವುದು. ಇಂದಿನ ಆಲಸ್ಯವು ನಿಮಗೆ ಯಾವ ಕೆಲಸಗಳಿಗೂ ಪ್ರೇರಣೆಯನ್ನು ನೀಡದು. ಪ್ರಗತಿಯನ್ನು ನಿಮ್ಮ ಒತ್ತಡಗಳನ್ನು ಎಲ್ಲವನ್ನು ಮರೆತು ನಿಶ್ಚಿಂತೆಯಿಂದ ಇಂದಿನ ದಿನವನ್ನು ಕಳೆಯುವಿರಿ. ನಿಮ್ಮ ನೌಕರರಿಂದ ತೊಂದರೆಯಾಗಬಹುದು. ಆಧಿಕಾರಿಗಳಿಂದ ನಿರೀಕ್ಷಿತ ತೊಂದರೆ ಮೊದಲೇ ಗೊತ್ತಾಗಿ, ತಪ್ಪಿಸಿಕೊಳ್ಳಲು ಪ್ರಯತ್ನ. ನಿಮ್ಮ ಮಾತಿನಿಂದ ದಾಂಪತ್ಯದಲ್ಲಿ ವೈಮನಸ್ಯ ಕಾಣಿಸುವುದು. ಧಾರ್ಮಿಕ ಸ್ಥಳಗಳಿಗೆ ಹೋಗಿ ಬರುವಿರಿ. ತಾಯಿಯ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ವಿಚಾರಗಳು ತಪ್ಪಾಗಿ ಇರಬಹುದು. ಸಿಕ್ಕ ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳಲು ಆಲೋಚಿಸುವಿರಿ. ನಿಮ್ಮ ಚಿಂತೆಯೂ ದೂರಾಗಬಹುದು. ಭೂಮಿಯನ್ನು ಖರೀದಿಸುವ ಆಲೋಚನೆ ಇರಲಿದೆ. ನಿಮ್ಮನ್ನು ಕೆಲವರು ಅನಾದರ ಮಾಡಿದಂತೆ ಕಾಣಿಸೀತು.
ಲೋಹಿತ ಹೆಬ್ಬಾರ್ – 8762924271 (what’s app only)




