AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಆಪ್ತರ ಸಲಹೆಗಳನ್ನು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಕೃಷ್ಣ ಪಕ್ಷದ ತೃತೀಯಾ ತಿಥಿ ಮಂಗಳವಾರ ಗೌರವಕ್ಕೆ ಧಕ್ಕೆ, ಧಾರ್ಮಿಕ ಆಚರಣೆ, ಪ್ರಲೋಭನೆ, ವಸ್ತುಸ್ಥಿತಿಯ ಅವಲೋಕನ, ಅಕಾರಣ ವಿವಾದ, ನಿರುದ್ಯೋಗದಿಂದ ಮನಸ್ತಾಪ ಇವೆಲ್ಲ ಈ ದಿನದ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ನೀವು ಆಪ್ತರ ಸಲಹೆಗಳನ್ನು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Aug 26, 2025 | 12:34 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಭಾದ್ರಪದ, ಸೌರ ಮಾಸ: ಸಿಂಹ, ಮಹಾನಕ್ಷತ್ರ: ಮಘಾ, ವಾರ: ಮಂಗಳ, ಪಕ್ಷ: ಕೃಷ್ಣ, ತಿಥಿ: ತೃತೀಯಾ ನಿತ್ಯನಕ್ಷತ್ರ: ಹಸ್ತಾ, ಯೋಗ: ಪರಿಘ, ಕರಣ: ತೈತಿಲ, ಸೂರ್ಯೋದಯ – 06 : 21 am, ಸೂರ್ಯಾಸ್ತ – 06 : 47 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 15:41 – 17:14, ಗುಳಿಕ ಕಾಲ 12:34 – 14:08 ಯಮಗಂಡ ಕಾಲ 09:28 – 11:01

ಸ್ವರ್ಣಗೌರೀ ತದಿಗೆ ಇಂದಿನ ಹಬ್ಬ. ಗಣೇಶ ಚತುರ್ಥಿಯ ಹಿಂದಿನ ದಿನ ಅವನ ಜನನಿಯ ಹಬ್ಬ. ಸ್ತ್ರೀಯರಿಗೆ ವಿಶೇಷ ವ್ರತದ ದಿನ.‌ ದೀರ್ಘಸುಮಂಗಲಿಯಾಗಿರಲು ಈ ವ್ರತವನ್ನು ಕೆಲವರು ಮಾಡುತ್ತಾರೆ. ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ಮುತ್ತೈದೆಯರಿಗೆ ಬಾಗಿನವನ್ನ ಕೊಟ್ಟು ಆಶೀರ್ವಾದವನ್ನು ಪಡೆಯುತ್ತಾರೆ. ಜಗಜ್ಜನನೀ ಪಾರ್ವತೀ ಸಕಲರಿಗೂ ಶುಭವನ್ನೇ ಮಾಡಲಿ.

ತುಲಾ ರಾಶಿ: ಯಾವುದೋ ವಿಷಯಕ್ಕೆ ಆದ ಕಲಹವು ಮತ್ಯಾವುದಕ್ಕೋ ಜೋಡಣೆಯಾಗಲಿದೆ. ಇಂದು ಉದ್ವೇಗವು ನಿಮ್ಮ ಕೆಲಸವನ್ನು ಅಸ್ತವ್ಯಸ್ತ ಮಾಡಲಿದೆ. ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಇಂದು ನಿಮ್ಮ ಸೇವೆಗೆ ಗೌರವವು ಸಿಗಬೇಕಾದರೂ ಸಿಗದೇ ಹೋದೀತು. ಪ್ರಭಾವಿ ವ್ಯಕ್ತಿಗಳ ಜೊತೆ ಸೆಣಸುವ ಸನ್ನಿವೇಶಗಳು ಬರಬಹುದು. ಅನಧಿಕೃತಿ ವ್ಯವಹಾರದಿಂದ ನಿಮಗೆ ಕಷ್ಟವಾದೀತು. ನಿಮ್ಮ ಅಂತರಂಗವು ನಕಾರಾತ್ಮಕವಾಗಿ ಏನನ್ನಾದರೂ ಹೇಳುತ್ತಿದ್ದರೆ ಅದನ್ನು ವ್ಯಕ್ತಪಡಿಸಲು ಹೋಗಬೇಡಿ. ನಿಮಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವ ಅವಕಾಶ ಸಿಗುವುದು. ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ಸರ್ಕಾರದಿಂದ ಬರುವ ಹಣವು ಕೈ ತಪ್ಪಬಹುದು. ಅದು ಬಂದಂತೆ ಸದ್ಯ ಮುಂದುವರಿಯಿರಿ. ಪುರುಷಪ್ರಯತ್ನವು ಈಗ ಬೇಡ. ಅಪ್ರಯೋಜಕವಾಗಲಿದೆ. ಆದಷ್ಟು ಸಮಯ ತಾಳ್ಮೆಯಿಂದ ಇರಬೇಕಾಗಿದೆ. ವಿದೇಶ ಪ್ರವಾಸದ ಕನಸು ಕಾಣುತ್ತಿರುವವರು ನನಸು ಮಾಡಿಕೊಳ್ಳಬಹುದಾಗಿದೆ. ಉಪಕಾರದ ಸ್ಮರಣೆಯಿಂದ ಉಪಕೃತಿಯವರಿಗೆ ಆನಂದ.

ವೃಶ್ಚಿಕ ರಾಶಿ: ಮೇಲ್ನೋಟಕ್ಕೆ ವಂಚನೆ ನಿಮಗೆ ಗೊತ್ತಾಗದು. ಒಮ್ಮೆ ಕುಳಿತು ಯೋಚಿಸಿದಾಗ ಅದರ ಜಾಲ ಎಲ್ಲಿಂದ ಎಲ್ಲಿಗೆ ಹಬ್ಬಿದೆ ಎನ್ನುವುದು ಗೊತ್ತಾಗಲಿದೆ. ನಿಮ್ಮ ನ್ಯಾಯಾಲಯದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಎಂದೋ ಮಾಡಿದ ಉಪಕಾರವು ಇಂದು ನಿಮ್ಮ ಕೈ ಸೇರುವುದು. ನಿಶ್ಚಿತ ಕಾರ್ಯಗಳು ಸರಿಯಾಗಿ ಆಗದೇ ಇರುವುದು ಅಸಮಾಧನಕ್ಕೆ ಮುಖ್ಯಕಾರಣವಾಗಿದೆ. ಶ್ರಮದಿಂದ ಗೆಲ್ಲವುದು ಅಸಾಧ್ಯವಾದಾಗ ಬೇರೆ ದಾರಿಗಳು ತಾನಾಗಿಯೇ ತೆರೆಯುವುದು‌. ನಿಮ್ಮ ವಿದ್ಯೆಗೆ ಅನುಗುಣವಾದ ವೃತ್ತಿಯು ಸಿಗಲಿದೆ. ನಿಮ್ಮ ಅನಾರೋಗ್ಯಕ್ಕೆ ಅನೇಕ ವೈದ್ಯರನ್ನು ಸಂಪರ್ಕಿಸಿ ಸೋಲುವಿರಿ. ಸುಳ್ಳಾಡುವ ಸಂದರ್ಭವು ಬರಬಹುದು. ಅಹಂಕಾರದಿಂದ ಕಛೇರಿಯಲ್ಲಿ ಕಲಹವಾಗಬಹುದು. ಸಹೋದ್ಯೋಗಿಗಳನ್ನು ಎದುರುಹಾಕಿಕೊಳ್ಳುವಿರಿ. ಇನ್ನೊಬ್ಬರನ್ನು ನೋಡಿ ಅಸೂಯೆಪಡುವುದು ಬೇಡ. ಬಂಧುಗಳ ವರ್ತನೆಯು ನಿಮಗೆ ಬೇಸರ ತರಿಸೀತು. ಮೇಲ್ನೋಟಕ್ಕೆ ಯಾವುದನ್ನೂ ತೀರ್ಮಾನ ಮಾಡುವುದು ಬೇಡ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವರು. ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ.

ಧನು ರಾಶಿ: ಹಳೆಯ ಗಿರಾಕಿಯನ್ನು ಬಿಟ್ಟುಕೊಡುವುದು ಬೇಡ. ಮನವೊಲಿಸುವ ಪ್ರಯತ್ನ ನಿಮ್ಮದಾಗಲಿ. ನೀವು ಇಂದು ಮಾಡಿದ ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಪರರ ಕಷ್ಟಗಳಗೆ ಸ್ಪಂದಿಸಲು ಆಗದೇ ಇರಬಹುದು. ಬಂಧುಗಳ ಜೊತೆ ಸಂಬಂಧವನ್ನು ಇಟ್ಟುಕೊಳ್ಳುವುದು ನಿಮ್ಮ ವರ್ತನೆಯ ಮೇಲೆ ಇರುವುದು. ಹೊಸ‌ ಕೆಲಸವನ್ನೇನಾದರೂ ಆರಂಭಿಸಿದರೆ ಅದನ್ನು ನಿಮ್ಮ ಶತ್ರುಗಳು ನಿಲ್ಲಿಸುವರು. ನಿಮ್ಮ ಗೌಪ್ಯ ವಿಚಾರಗಳು ಕೆಲವರಿಗೆ ತಿಳಿದು ಹಾಸ್ಯ ಮಾಡಬಹುದು. ನೆರೆಯವರನ್ನು ಪ್ರೀತಿಯಿಂದ ಮಾತನಾಡಿಸುವುದು ಅನಿವಾರ್ಯವಾಗಲಿದೆ. ಬ್ರಾಂಡಡ್ ವಸ್ತುಗಳನ್ನು ಖರೀದಿಸುವ ಉತ್ಸಾಹ ಬರಲಿದೆ. ಸಂಗಾತಿಯ ಜೊತೆ ವಾದಕ್ಕಿಳಿದು ಸೋಲಬೇಕಾಗುವುದು. ವಿದ್ಯಾಭ್ಯಾಸದ ಹಿನ್ನಡೆಯಿಂದ ನಿಮಗೆ ಆತಂಕ ಹೆಚ್ಚಾಗುವುದು. ಹೊಂದಾಣಿಕೆಯನ್ನು ನೀವು ಬೆಳೆಸಿಕೊಳ್ಳಬೇಕಾಗಬಹುದು. ಸ್ನೇಹಿತರು ವಂಚಿಸುವ ಸಾಧ್ಯತೆ ಇದೆ. ರಾಜಕೀಯ ಒತ್ತಡವು ನಿಮಗೆ ಹೆಚ್ಚು ಬರುವುದು. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು.

ಮಕರ ರಾಶಿ: ಸಾಲವನ್ನು ಕಡಿಮೆ ಮಾಡಿಕೊಳ್ಳಲು ಹೆಚ್ಚು ಮೊತ್ತವನ್ನು ಕಟ್ಟುವಿರಿ. ನೀವು ಆಪ್ತರ ಸಲಹೆಗಳನ್ನು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ನಿಮ್ಮ ದುರುಪಯೋಗವನ್ನು ಸ್ನೇಹಿತರು ತಪ್ಪಿಸುವರು. ಇಂದು ನೀವು ಎಲ್ಲವನ್ನೂ ಮಾಡಬಲ್ಲವರು ಎಂಬ ಅಭಿಮಾನ ಉಂಟಾಗಲಿದೆ. ಆಪ್ತರೇ ನಿಮಗೆ ನಂಬಿಕೆಗೆ ದ್ರೋಹ ಬಗೆಯಬಹುದು. ಕೇಳಬೇಕಾದುದನ್ನು ನೇರವಾಗಿ ಕೇಳಿ. ಬಹಳ ದಿನಗಳಿಂದ ಉದ್ಯೋಗವು ಸಿಗದೇ ಮಾನಸಿಕವಾಗಿ ಕುಗ್ಗುವಿರಿ. ಸಹನೆಯನ್ನು ಕಾಪಾಡಿಕೊಂಡು ನಿರ್ವಹಿಸುವ ಸ್ಥಾನ ನಿಮ್ಮದು. ಮಕ್ಕಳು ಕೇಳಿದ್ದನ್ನು ಕೊಡಿಸಿ ಅವರನ್ನು ಸಂತೋಷಪಡಿಸುವಿರಿ. ವಿದೇಶ ಪ್ರಯಾಣದ‌ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಿ. ಊಹಿಸದ ವಾರ್ತೆಯೊಂದು ಬಂದು ಸಂತೋಷವಾಗಿ ಇಡುವುದು. ಉತ್ತಮ ಲಾಭಕ್ಕಾಗಿ ನೀವು ಯೋಜನೆಯನ್ನು ಹಾಕುವಿರಿ. ನಿಮ್ಮ ವಸ್ತುವು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಅನುಕಂಪ ಬೇಕಸದೀತು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು. ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ.

ಕುಂಭ ರಾಶಿ: ನಿಮ್ಮ ಬಳಿ ಹೇಳಿಕೊಳ್ಳುವುದರಿಂದ ಸಮಾಧಾನವಾದರೆ ಅವರಿಗೆ ಸಮಯ ಕೊಡುವಿರಿ. ಇಂದು ನಿಮ್ಮನ್ನು ಅಪರಿಚಿತರು ವಶ ಮಾಡಿಕೊಳ್ಳಲು ಪ್ರಯತ್ನಿಸುವರು. ಉದ್ಯೋಗದ ಸ್ಥಳವನ್ನು‌ ಸದ್ಯ ಅನ್ವೇಷಿಸುವುದು ಬೇಡ.‌ ಒಂದು ಕಡೆ ಸುಮ್ನನೆ‌ ಕುಳಿತು ಅಭ್ಯಾಸವಿರದು. ಬೇರೆಯವರಿಗೆ ಉಪಕಾರ ಮಾಡಲು ಹೋಗಿ ನಿಮಗೆ ಸಿಗುವುದು ಕಷ್ಟ. ಯಾರಮೇಲಾದರೂ ಅಪವಾದವನ್ನು ಮಾಡುವ ಮೊದಲು ಆಲೋಚಿಸಿ. ಆಪ್ತರ ಮಾತನ್ನು ಕೇಳದೇ ಬೇಸರಿಸುವ ಸಂದರ್ಭವು ಬರಬಹುದು. ಅಂತಿಮ ಕ್ಷಣದ ಬದಲಾವಣೆಯಿಂದ ನಿಮಗೆ ಕೋಪ. ವಾಹನದಲ್ಲಿ ಸಂಚಾರವು ನಿಮಗೆ ಹೆಚ್ಚು ಇಷ್ಟವಾಗುವುದು. ಅಪರಿಚಿತರ ಜೊತೆ ಮಾತುಗಳನ್ನು ಕಡಿಮೆ‌ ಮಾಡಿ. ಇಂದಿನ‌ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನವಿರಲಿದೆ. ಮೇಲಧಿಕಾರಿಗಳ ನಡುವೆ ಚರ್ಚೆ ಮಾಡಲಿದ್ದೀರಿ. ಸಮಯವನ್ನು ಹಾಳು ಮಾಡಿಕೊಂಡು ದುಃಖಿಸುವಿರಿ. ನಿಮ್ಮನ್ನು ನಂಬಿಸಿ ಕೆಲಸ ಮಾಡಿಸಿಕೊಳ್ಳುವರು. ಪರಿಚಿತರ ಮೂಲಕ ನಿಮಗೆ ಅಪರಿಚಿತರ ಸಹಾಯ ದೊರೆಯುವುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು.

ಮೀನ ರಾಶಿ: ಉಪಯೋಗಕ್ಕೆ ಬಾರದ ಬಾಂಧವ್ಯವನ್ನು ಬಿಡುವಿರಿ. ಇಂದು ನಿಮಗೆ ನೌಕರರಿಂದ ತೊಂದರೆ ಬರಬಹುದು. ವಿಶೇಷ ದ್ರವ್ಯ ಲಾಭದಿಂದ ಸಂತೋಷಪಡುವಿರಿ. ಆಕಸ್ಮಿಕ ಭೇಟಿಯು ಪ್ರೇಮವಾಗಿ ಬದಲಾಗಬಹುದು. ಮಕ್ಕಳ ಜೊತೆ ನೀವು ಹೆಚ್ಚಿನ ಸಮಯವನ್ನು ಕಳೆಯುವಿರಿ. ಯಾರ‌ ಮಾತನ್ನೋ‌ ನಂಬಿ ನಿಮ್ಮವರ ಮೇಲೆ‌ ಅನುಪಡುವಿರಿ. ಹೊರಗಿನ ಆಹಾರವನ್ನು ತಿನ್ನಲು ನೀವು ಇಚ್ಛಿಸುವಿರಿ. ಬಂದ ಹೊಣೆಗಾರಿಕೆಯನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ಆತಂಕದಲ್ಲಿ ನಿಮ್ಮ ಕಾರ್ಯವನ್ನು ಹಾಳುಮಾಡಿಕೊಳ್ಳುವಿರಿ. ‌ಸಂಗಾತಿಯಿಂದ ನೀವು ಉಡುಗೊರೆಯನ್ನು ಪಡೆಯುವಿರಿ. ತಪ್ಪಿಗೆ ಪಶ್ಚಾತ್ತಾಪವನ್ನು ಪಡೆಯುವ ದಿನ ಇಂದು. ದೇವರಿಗೆ ಶರಣಾಗಿ ನಿಮಗೆ ಆಗಬೇಕಾದ ಕೆಲಸವನ್ನು ನಿವೇದಿಸಿಕೊಳ್ಳುವಿರಿ. ಮನೋರಂಜನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ನಿಮ್ಮ ಕೇಳಿಕೊಂಡು ಬಂದವರಿಗೆ ಸಹಾಯವನ್ನು ಮಾಡಲು ಒಪ್ಪಿಕೊಳ್ಳುವಿರಿ.

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..