AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ ಉದ್ಯೋಗ ಭವಿಷ್ಯ: ಮೇಲಧಿಕಾರಿಗಳಿಂದ ಬೇಸರ, ಉದ್ಯೋಗದಿಂದ ತೆಗದುಹಾಕುವ ಭೀತಿ ಇವೆಲ್ಲ ಈ ವಾರದ ಉದ್ಯೋಗ ಭವಿಷ್ಯ

ಜುಲೈ 19ರಿಂದ 24ರವರೆಗೆ ನಾಲ್ಕನೇ ವಾರವಾಗಿದ್ದು ಆಷಾಡ ಮಾಸ ನಡೆಯುತ್ತಿದೆ. ನಿಮ್ಮ ಉದ್ಯೋಗದ ಬಗೆಗಿನ ನಿರ್ಧಾರಗಳನ್ನು ನೀವು ಒಬ್ಬರೇ ಮಾಡುವುದು, ಆದಾಯ ಹೆಚ್ಚಿಸುವುದರಲ್ಲಿ ಹೂಡಿಕೆ, ಭವಿಷ್ಯಕ್ಕೆ ಆಸ್ತಿ, ಮೇಲಧಿಕಾರಿಗಳಿಂದ ಬೇಸರ, ಉದ್ಯೋಗದಿಂದ ತೆಗದುಹಾಕುವ ಭೀತಿ ಇವೆಲ್ಲ ಈ ವಾರದ ಉದ್ಯೋಗ ಭವಿಷ್ಯ.

ಜುಲೈ ಉದ್ಯೋಗ ಭವಿಷ್ಯ: ಮೇಲಧಿಕಾರಿಗಳಿಂದ ಬೇಸರ, ಉದ್ಯೋಗದಿಂದ ತೆಗದುಹಾಕುವ ಭೀತಿ ಇವೆಲ್ಲ ಈ ವಾರದ ಉದ್ಯೋಗ ಭವಿಷ್ಯ
Career Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jul 20, 2026 | 9:27 AM

Share

ಜುಲೈ 19ರಿಂದ 24ರವರೆಗೆ ನಾಲ್ಕನೇ ವಾರವಾಗಿದ್ದು ನಿರ್ಧಾರಗಳನ್ನು ಒಬ್ಬರೇ ಮಾಡುವುದು, ಆದಾಯದ ಹೂಡಿಕೆ, ಭವಿಷ್ಯಕ್ಕೆ ಆಸ್ತಿ, ಮೇಲಧಿಕಾರಿಗಳಿಂದ ಬೇಸರ, ಉದ್ಯೋಗದಿಂದ ತೆಗದುಹಾಕುವ ಭೀತಿ ಇವೆಲ್ಲ ಈ ವಾರದ ಉದ್ಯೋಗ ಭವಿಷ್ಯ.

ಮೇಷ ರಾಶಿ: ಮಂಗಳನ ಬಲದಿಂದಾಗಿ ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಹೊಸ ಜವಾಬ್ದಾರಿಗಳು ಸಿಗುತ್ತವೆ ನಿಜ, ಆದರೆ ಸಹೋದ್ಯೋಗಿಗಳ ಮೇಲೆ ಅತಿಯಾದ ಅಧಿಕಾರ ಚಲಾಯಿಸಲು ಹೋಗಬೇಡಿ. ಮಾತಿನಲ್ಲಿ ವಿನಮ್ರತೆ ಇರಲಿ.

ವೃಷಭ ರಾಶಿ: ನಿಮ್ಮದೇ ರಾಶಿಯಲ್ಲಿ ಮಂಗಳ ಇರುವುದರಿಂದ ಕೆಲಸದಲ್ಲಿ ವಿಪರೀತ ಆತುರ ಇರುತ್ತದೆ. ಶುಕ್ರ-ಕೇತುವಿನ ಪ್ರಭಾವದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಯಾವುದೇ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಯೋಚಿಸಿ. ​

ಮಿಥುನ ರಾಶಿ: ಬುಧನು ನಿಮ್ಮ ರಾಶಿಯಲ್ಲೇ ಇರುವುದರಿಂದ ನಿಮ್ಮ ಬುದ್ಧಿವಂತಿಕೆ ಮತ್ತು ಸಂವಹನ ಕಲೆ ಉತ್ತುಂಗದಲ್ಲಿರುತ್ತದೆ. ಐಟಿ, ಬ್ಯಾಂಕಿಂಗ್ ಮತ್ತು ಮಾರಾಟ ವಿಭಾಗದವರಿಗೆ ಬಡ್ತಿ ಅಥವಾ ಹೊಸ ಆಫರ್ ಸಿಗುವ ಲಕ್ಷಣಗಳಿವೆ. ನಿಮ್ಮ ಐಡಿಯಾಗಳನ್ನು ಧೈರ್ಯವಾಗಿ ಪ್ರಸ್ತುತಿ ಮಾಡಿ. ​

ಕರ್ಕಾಟಕ ರಾಶಿ: ಸೂರ್ಯ ನಿಮ್ಮ ರಾಶಿಯಲ್ಲಿದ್ದರೂ, ಗುರು ಅಸ್ತಂಗತನಾಗಿದ್ದಾನೆ. ನೀವು ಕಷ್ಟಪಟ್ಟು ಮಾಡಿದ ಕೆಲಸದ ಕ್ರೆಡಿಟ್ ಬೇರೆಯವರ ಪಾಲಾಗಬಹುದು ಅಥವಾ ತಡವಾಗಿ ಸಿಗಬಹುದು. ಬಾಸ್ ಜೊತೆ ವಾದಕ್ಕೆ ಇಳಿಯಬೇಡಿ, ಸಮ್ಮನೆ ಆಗಿರಿ. ​

ಸಿಂಹ ರಾಶಿ: ರಾಶಿಯಲ್ಲಿ ಶುಕ್ರ ಮತ್ತು ಕೇತು ಒಟ್ಟಿಗಿರುವುದರಿಂದ ಕ್ರಿಯೇಟಿವಿಟಿ ಹೆಚ್ಚಿರುತ್ತದೆ. ಕಚೇರಿಯ ರಾಜಕೀಯ ಅಥವಾ ಭ್ರಮೆಗಳಿಗೆ ಒಳಗಾಗಿ ಹಾದಿ ತಪ್ಪಬೇಡಿ. ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡಿ. ​

ಕನ್ಯಾ ರಾಶಿ: ಬುಧನ ಅನುಕೂಲಕರ ಸ್ಥಿತಿಯಿಂದಾಗಿ ವೃತ್ತಿಯಲ್ಲಿ ಭಾರಿ ಮುನ್ನಡೆ ಸಿಗಲಿದೆ. ಉದ್ಯೋಗ ಬದಲಾವಣೆ ಅಥವಾ ಹೊಸ ಬಿಸಿನೆಸ್ ಆರಂಭ ಮಾಡಲು ನಿಮಗೆ ಇದು ಸೂಕ್ತ ಸಮಯ. ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಳ್ಳಿ. ​

ತುಲಾ ರಾಶಿ: ಶುಕ್ರನ ಸ್ಥಾನ ಬದಲಾವಣೆಯಿಂದ ಹಳೆಯ ಸ್ನೇಹಿತರು ಅಥವಾ ವೃತ್ತಿಪರ ಸಂಪರ್ಕಗಳು ಸಹಾಯಕ್ಕೆ ಬರುತ್ತವೆ. ಶನಿಯ ದೃಷ್ಟಿ ಇರುವುದರಿಂದ ತಕ್ಷಣದ ಲಾಭ ನಿರೀಕ್ಷಿಸಬೇಡಿ. ಸಾರ್ವಜನಿಕ ಸಂಪರ್ಕವನ್ನು ವೃದ್ಧಿಸಿಕೊಳ್ಳಿ. ​

ವೃಶ್ಚಿಕ ರಾಶಿ: ​ಮಂಗಳನ ದೃಷ್ಟಿಯಿಂದಾಗಿ ಕಠಿಣವಾದ ಪ್ರಾಜೆಕ್ಟ್‌ಗಳನ್ನೂ ಸುಲಭವಾಗಿ ಮುಗಿಸುತ್ತೀರಿ. ಭೂ ವ್ಯವಹಾರ ಮತ್ತು ಇಂಜಿನಿಯರಿಂಗ್ ಕ್ಷೇತ್ರದವರಿಗೆ ಅತ್ಯುತ್ತಮ ದಿನಗಳು. ಉದ್ವೇಗಕ್ಕೆ ಒಳಗಾಗದೆ ಕೆಲಸ ಮಾಡಿ. ​

ಧನು ರಾಶಿ: ರಾಶ್ಯಾಧಿಪತಿ ಗುರು ಅಸ್ತಂಗತನಾಗಿರುವುದರಿಂದ ಉದ್ಯೋಗದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ. ಸದ್ಯಕ್ಕೆ ಹೊಸ ಕೆಲಸಕ್ಕೆ ಜಂಪ್ ಆಗುವ ಆಲೋಚನೆ ಕೈಬಿಡುವುದು ಒಳಿತು. ಕೊಟ್ಟಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ​

ಮಕರ ರಾಶಿ: ​ಶನಿಯ ಪ್ರಭಾವದಿಂದಾಗಿ ನಿಮ್ಮ ಹೆಗಲ ಮೇಲೆ ಕಚೇರಿಯ ಕೆಲಸದ ಹೊರೆ ದಿಢೀರ್ ಹೆಚ್ಚಾಗಲಿದೆ. ಆರಂಭದಲ್ಲಿ ಬೇಸರವಾದರೂ, ವಾರದ ಕೊನೆಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ.

​ಕುಂಭ ರಾಶಿ: ​ರಾಶಿಯಲ್ಲಿ ರಾಹು ಇರುವುದರಿಂದ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವ ಐಡಿಯಾಗಳು ಹೊಳೆಯುತ್ತವೆ. ಶಾರ್ಟ್‌ಕಟ್‌ಗಳ ಮೂಲಕ ಯಶಸ್ಸು ಗಳಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ನಿಯಮಗಳನ್ನು ಮೀರಿ ನಡೆಯಬೇಡಿ. ​

ಮೀನ ರಾಶಿ: ಶನಿ ದೇವನು ನಿಮ್ಮ ರಾಶಿಯಲ್ಲೇ ಇರುವುದರಿಂದ ವೃತ್ತಿಜೀವನದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಸಣ್ಣ ತಪ್ಪುಗಳೂ ದೊಡ್ಡದಾಗಿ ಬಿಂಬಿತವಾಗಬಹುದು. ಶಿಸ್ತು ಅತಿ ಮುಖ್ಯ. ತಾಳ್ಮೆಯೇ ನಿಮ್ಮ ಪರಮ ಆಯುಧವಾಗಲಿ.

– ಲೋಹಿತ್ ಹೆಬ್ಬಾರ್

Published On - 9:20 am, Mon, 20 July 26

Follow Us
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ದೇವೇಗೌಡರ ಪತ್ನಿ ಚೆನ್ನಮ್ಮ ಅಂತಿಮ ದರ್ಶನ ಪಡೆದ ಡಾಲಿ, ದೊಡ್ಡಣ್ಣ: ವಿಡಿಯೋ
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ
ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ
ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು
ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು
ವಾಸ್ತು ಪ್ರಕಾರವೇ ಚೆನ್ನಮ್ಮ ಅಂತ್ಯಕ್ರಿಯೆ: ವಾಸ್ತು ತಜ್ಞರು ಹೇಳಿದ್ದಿಷ್ಟು
ವಾಸ್ತು ಪ್ರಕಾರವೇ ಚೆನ್ನಮ್ಮ ಅಂತ್ಯಕ್ರಿಯೆ: ವಾಸ್ತು ತಜ್ಞರು ಹೇಳಿದ್ದಿಷ್ಟು
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು