AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಾಶಿಯವರು ಒಂದು ಪಡೆಯಲು ಮತ್ತೊಂದು ಕಳೆದುಕೊಳ್ಳಬೇಕು: ಮೇ ತಿಂಗಳಲ್ಲಿ ನಿಮ್ಮ ಕೈಹಿಡಿಯುತ್ತಾನೆ ಕುಬೇರ

ಮೇ 2026 ಮಾಸವು ಗ್ರಹಗಳ ವಿಶೇಷ ಸ್ಥಾನಗಳಿಂದ ಕೂಡಿದೆ. ಕುಜನು ಮೇಷದಲ್ಲಿ, ರವಿ ವೃಷಭದಲ್ಲಿ, ಬುಧ-ಶುಕ್ರರು ಮಿಥುನದಲ್ಲಿದ್ದು, ಈ ಸ್ವಕ್ಷೇತ್ರ ಗ್ರಹಗಳ ದೃಷ್ಟಿ ಎಲ್ಲಾ ರಾಶಿಗಳ ಮೇಲೆ ಬೀಳಲಿದೆ. ವೃತ್ತಿ, ಆರ್ಥಿಕ, ಪ್ರೇಮ, ಆರೋಗ್ಯ ಮತ್ತು ಕೌಟುಂಬಿಕ ಜೀವನದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಿ. ನಿಮ್ಮ ಕುಲದೇವತಾ ಆರಾಧನೆಯಿಂದ ಉತ್ತಮ ಫಲಗಳನ್ನು ಪಡೆಯಿರಿ. ಈ ಮಾಸಿಕ ಭವಿಷ್ಯ ನಿಮ್ಮ ದಾರಿದೀಪವಾಗಲಿದೆ.

ಈ ರಾಶಿಯವರು ಒಂದು ಪಡೆಯಲು ಮತ್ತೊಂದು ಕಳೆದುಕೊಳ್ಳಬೇಕು: ಮೇ ತಿಂಗಳಲ್ಲಿ ನಿಮ್ಮ ಕೈಹಿಡಿಯುತ್ತಾನೆ ಕುಬೇರ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 29, 2026 | 9:56 PM

Share

ಮೇ 2026 ರಲ್ಲಿ ಕುಜನು ಸ್ವಕ್ಷೇತ್ರವಾದ ಮೇಷದಲ್ಲಿ, ರವಿ ವೃಷಭದಲ್ಲಿ, ಬುಧನು ಸ್ವಕ್ಷೇತ್ರ ಮಿಥುನದಲ್ಲಿ, ಶುಕ್ರನೂ ಮಿಥುನದಲ್ಲಿ ಇರಲಿದ್ದು ಸ್ವಕ್ಷೇತ್ರದ ಗ್ರಹಗಳ ಸ್ಥಿತಿ ಹಾಗೂ ಅವರ ದೃಷ್ಟಿಯ ಪರಿಣಾಮ ಎಲ್ಲ ರಾಶಿಗೂ ಆಗಲಿದೆ. ಕುಲದೇವಾತಾರಾಧನೆಯನ್ನು ಏಕಾಗ್ರತೆಯಿಂದ ಪ್ರತಿದಿನ ಮಾಡಿ.

ಮೇಷ:

ಸಾಹಸದ ಮೇಲೇರಿ ಸವಾರಿ ಮಾಡಲೂಬಹುದು. ಈ ತಿಂಗಳು ನಿಮ್ಮ ವೇಗಕ್ಕೆ ಯಾರೂ ಕಡಿವಾಣ ಹಾಕಲಾಗದು! ವೃತ್ತಿರಂಗದಲ್ಲಿ ನೀವು ರಿಯಲ್ ಹೀರೋ. ಆರ್ಥಿಕವಾಗಿ ಧನಲಕ್ಷ್ಮಿ ಒಲಿಯಲಿದ್ದಾಳೆ, ಆದರೆ ಖರ್ಚಿನ ಮೇಲೆ ಹಿಡಿತವಿರಲಿ. ಪ್ರೀತಿಯ ಹಾದಿಯಲ್ಲಿ ಹೊಸ ಸಂಚಲನ ಶುರುವಾಗಲಿದೆ. ಆರೋಗ್ಯದಲ್ಲಿ ಉತ್ಸಾಹ ತುಂಬಿರುತ್ತದೆ. ​ ​ವೃಷಭ:

ಬಂಗಾರದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲ ಬಂದಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದರಿಂದ ಮುಖದಲ್ಲಿ ಮಂದಹಾಸ ಮೂಡಲಿದೆ. ಕೌಟುಂಬಿಕವಾಗಿ ಹಳೆಯ ಸಮಸ್ಯೆಗಳು ಮಂಜಿನಂತೆ ಕರಗಲಿವೆ. ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ಬರಲಿದ್ದು, ಆಪ್ತರೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ​ ​ಮಿಥುನ:

ಈ ತಿಂಗಳು ಸಂವಹನದಲ್ಲಿ ಎತ್ತಿದ ಕೈ. ಮಾತೇ ಮುತ್ತು ಎನ್ನುವಂತೆ ನಿಮ್ಮ ಮಾತಿನಿಂದಲೇ ಅಸಾಧ್ಯವಾದುದನ್ನು ಸಾಧಿಸುವಿರಿ. ಹೊಸ ಸ್ನೇಹ ಸಂಬಂಧಗಳು ವೃತ್ತಿಜೀವನಕ್ಕೆ ಏಣಿ ಆಗಲಿವೆ. ದೂರದ ಪ್ರಯಾಣದ ಯೋಗವಿದ್ದು, ಅದು ಲಾಭದಾಯಕವಾಗಿರಲಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು, ದ್ರವಾಹಾರ ಸೇವನೆ ಹೆಚ್ಚಿರಲಿ.

ಕರ್ಕಾಟಕ:

ನೆಮ್ಮದಿಯ ನಿಲ್ದಾಣದಲ್ಲಿ ಕೆಲವು ಕಾಲ ತಂಗಲು ಅವಕಾಶವಿದೆ. ಮನಸ್ಸಿನ ಗೊಂದಲಗಳು ನೀಗಿ ಶಾಂತಿ ನೆಲೆಸಲಿದೆ. ಮನೆಯವರ ಬೆಂಬಲ ನಿಮ್ಮ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಲಿದೆ. ಆರ್ಥಿಕವಾಗಿ ಅನಿರೀಕ್ಷಿತ ಮೂಲಗಳಿಂದ ಧನಾಗಮನವಾಗಲಿದೆ. ಆಧ್ಯಾತ್ಮಿಕ ಚಿಂತನೆಗಳು ನಿಮ್ಮನ್ನು ಹೊಸ ಲೋಕಕ್ಕೆ ಕರೆದೊಯ್ಯಲಿವೆ. ಪ್ರೀತಿಪಾತ್ರರಿಂದ ಉಡುಗೊರೆ ಪಡೆಯುವಿರಿ. ​ ಸಿಂಹ:

ಗರ್ಜನೆಯಿಂದ ನಿಮ್ಮ ಗತ್ತನ್ನು ಗೊತ್ತು ಮಾಡಿಸುವ ಹೊತ್ತು. ರಾಜಕೀಯ ಅಥವಾ ಸಾಮಾಜಿಕ ರಂಗದಲ್ಲಿರುವವರಿಗೆ ಇದು ಯಶಸ್ಸಿನ ಶಿಖರ. ನಿಮ್ಮ ನಿರ್ಧಾರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತವೆ. ಪ್ರೀತಿಯ ವಿಷಯದಲ್ಲಿ ಸ್ವಲ್ಪ ಅಹಂ ಬಿಟ್ಟರೆ ಜೀವನ ಸ್ವರ್ಗ. ಹೂಡಿಕೆಗಳಿಗೆ ಇದು ಸುವರ್ಣ ಕಾಲ. ಬೆನ್ನು ನೋವಿನ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ. ​ ಕನ್ಯಾ:

ತಾಳ್ಮೆಯ ಪರೀಕ್ಷೆಯಲ್ಲಿ ಈ ತಿಂಗಳು ಉತ್ತೀರ್ಣರಾಗುವಿರಿ. ಕತ್ತಲೆಯ ಅನಂತರ ಬೆಳಕು ಬಂದೇ ಬರುತ್ತದೆ, ಹಾಗೆಯೇ ನಿಮ್ಮ ಸಣ್ಣಪುಟ್ಟ ಹಿನ್ನಡೆಗಳು ಶೀಘ್ರದಲ್ಲೇ ಯಶಸ್ಸಾಗಿ ಬದಲಾಗಲಿವೆ. ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ಇರಲಿ. ಮಕ್ಕಳ ಸಾಧನೆ ನಿಮಗೆ ಹೆಮ್ಮೆ ತರಲಿದೆ. ಗೆಳೆಯರೊಂದಿಗೆ ಸಣ್ಣ ಪ್ರವಾಸ ಮಾಡುವ ಸಾಧ್ಯತೆ ಇದೆ. ​ ತುಲಾ:

ಈ ತಿಂಗಳಲ್ಲಿ ಸಂತೋಷಕ್ಕೆ ಸುಗ್ಗಿ ಕಾಲವಾಗಲಿದೆ. ಜೀವನದಲ್ಲಿ ಸಮತೋಲನ ಕಂಡುಕೊಳ್ಳುವಿರಿ. ಹಳೆಯ ಗೆಳೆಯರ ಭೇಟಿ ಹಳೆಯ ನೆನಪುಗಳನ್ನು ಮರುಕಳಿಸಲಿವೆ. ಉದ್ಯೋಗದಲ್ಲಿ ಬಡ್ತಿಗಾಗಿ ಕಾಯುತ್ತಿದ್ದವರಿಗೆ ಸಿಹಿ ಸುದ್ಧಿ ಕಾದಿದೆ. ಕೌಟುಂಬಿಕವಾಗಿ ಶುಭ ಕಾರ್ಯಗಳ ತಯಾರಿ ನಡೆಯಲಿದೆ. ನಿಮ್ಮ ನಗು ಎಲ್ಲರನ್ನೂ ಸೆಳೆಯಲಿದೆ. ​ ವೃಶ್ಚಿಕ:

ಗೆಲುವಿನ ಹಾದಿಯಲ್ಲಿ ಎಲ್ಲವೂ ಸುಖಮಯ. ಶತ್ರುಗಳು ನಿಮ್ಮ ಮುಂದೆ ಮಂಡಿಯೂರುವ ಕಾಲವಿದು. ಅಡಚಣೆಗಳ ನಡುವೆಯೂ ನಿಮ್ಮ ಕೆಲಸಗಳು ಸುಗಮವಾಗಿ ಸಾಗಲಿವೆ. ಆರ್ಥಿಕವಾಗಿ ಇದು ಲಾಭದಾಯಕ ತಿಂಗಳು. ಸಂಗಾತಿಯೊಂದಿಗೆ ಸಣ್ಣ ಮುನಿಸು ಬಂದರೂ ಅದು ಪ್ರೀತಿಯನ್ನು ಹೆಚ್ಚಿಸಲಿದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ​ ಧನುಸ್ಸು:

ಬೌದ್ಧಿಕ ವಿಚಾರದಲ್ಲಿ ಇನ್ನಷ್ಟು ಚುರುಕುತನ. ನಿಮ್ಮ ಜ್ಞಾನ ಮತ್ತು ಕೌಶಲಕ್ಕೆ ವೇದಿಕೆ ಸಿಗಲಿದೆ. ಹೊಸ ವ್ಯವಹಾರ ಆರಂಭಿಸಲು ನಕ್ಷತ್ರಗಳು ಸಾಥ್ ನೀಡುತ್ತಿವೆ. ವಿದೇಶಿ ಪ್ರವಾಸದ ಕನಸು ನನಸಾಗುವ ಕಾಲ ಹತ್ತಿರದಲ್ಲಿದೆ. ಧಾರ್ಮಿಕ ಕಾರ್ಯಗಳಿಂದ ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ಖರ್ಚುಗಳು ಹೆಚ್ಚಾದರೂ ಆದಾಯಕ್ಕೆ ಕೊರತೆಯಿಲ್ಲ.

​ಮಕರ:

ಕಠಿಣ ಶ್ರಮ, ಸಿಹಿ ಫಲದ ಪ್ರಾಪ್ತಿ. ನಿಮ್ಮ ಸ್ಥಿರತೆ ಮತ್ತು ಶಿಸ್ತು ನಿಮಗೆ ಗೆಲುವು ತಂದುಕೊಡಲಿದೆ. ಆಸ್ತಿ ಪಾಸ್ತಿ ವಿಚಾರದಲ್ಲಿ ಲಾಭವಾಗುವ ಸೂಚನೆ ಇದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು, ಕಾಳಜಿ ಇರಲಿ. ಹೂಡಿಕೆ ಮಾಡುವಾಗ ಹಿರಿಯರ ಸಲಹೆ ಪಡೆಯುವುದು ಉತ್ತಮ. ​ ಕುಂಭ:

ಹೊಸ ಬೆಳಕು ನಿಮ್ಮ ಬದುಕಿಗೆ. ನಿಮ್ಮ ಕ್ರಿಯಾಶೀಲತೆಗೆ ಹೊಸ ಆಯಾಮ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ದುಪ್ಪಟ್ಟಾಗಲಿದೆ. ಹೊಸ ವಾಹನ ಅಥವಾ ಮನೆ ಖರೀದಿಸುವ ಯೋಗವಿದೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ. ಕ್ರೀಡಾಪಟುಗಳಿಗೆ ಮತ್ತು ಕಲಾವಿದರಿಗೆ ಈ ತಿಂಗಳು ಅತ್ಯಂತ ಅದ್ಭುತ. ​ ಮೀನ:

ಆನಂದದ ಅಲೆಗಳಿವೆ. ಮನಸ್ಸು ಹಗುರಾಗಲಿದೆ ಮತ್ತು ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಆರ್ಥಿಕ ಚೈತನ್ಯ ಹೆಚ್ಚಾಗಲಿದೆ. ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜೊತೆ ಸಂಜೆ ಕಳೆಯುವುದು ನಿಮಗೆ ಹೊಸ ಚೈತನ್ಯ ನೀಡಲಿದೆ. ದಾನ ಧರ್ಮದಲ್ಲಿ ಆಸಕ್ತಿ ಹೆಚ್ಚಲಿದೆ.

– ಲೋಹಿತ ಹೆಬ್ಬಾರ್

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ