AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

May Horoscope: ಮೇ ತಿಂಗಳ ಅದೃಷ್ಟದ ರಾಶಿಗಳು; ಈ 4 ರಾಶಿಯವರಿಗೆ ಕಾದಿದೆ ಭಾರೀ ಆರ್ಥಿಕ ಲಾಭ!

2026ರ ಮೇ ತಿಂಗಳಲ್ಲಿ ಗ್ರಹಗಳ ಸಂಚಾರವು ಕೆಲವು ರಾಶಿಗಳಿಗೆ ಸುವರ್ಣ ಕಾಲ ತರಲಿದೆ. ಮಿಥುನ, ಕುಂಭ, ವೃಶ್ಚಿಕ, ಧನು ರಾಶಿಗಳಿಗೆ ಆರ್ಥಿಕ ಸ್ಥಿತಿ ಸುಧಾರಣೆ, ಉದ್ಯೋಗದಲ್ಲಿ ಪ್ರಗತಿ, ಕೌಟುಂಬಿಕ ಸುಖ ಹಾಗೂ ನೆಮ್ಮದಿ ದೊರೆಯಲಿದೆ. ಈ ತಿಂಗಳು ಅದೃಷ್ಟವಂತ ರಾಶಿಗಳ ಜೀವನದಲ್ಲಿ ಅನಿರೀಕ್ಷಿತ ಯಶಸ್ಸು, ಆದಾಯ ಹೆಚ್ಚಳ ಮತ್ತು ಶುಭ ಕಾರ್ಯಗಳು ನಡೆಯಲಿವೆ.

May Horoscope: ಮೇ ತಿಂಗಳ ಅದೃಷ್ಟದ ರಾಶಿಗಳು; ಈ 4 ರಾಶಿಯವರಿಗೆ ಕಾದಿದೆ ಭಾರೀ ಆರ್ಥಿಕ ಲಾಭ!
ಮೇ ತಿಂಗಳ ರಾಶಿ ಭವಿಷ್ಯ
ಅಕ್ಷತಾ ವರ್ಕಾಡಿ
|

Updated on:Apr 25, 2026 | 6:16 PM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಚಾರವು ಮನುಷ್ಯನ ಜೀವನದ ಮೇಲೆ ನಿರಂತರ ಪ್ರಭಾವ ಬೀರುತ್ತದೆ. 2026ರ ಮೇ ತಿಂಗಳು ಕೆಲವು ರಾಶಿಯ ವ್ಯಕ್ತಿಗಳಿಗೆ ಸುವರ್ಣ ಕಾಲವೆಂದೇ ಹೇಳಬಹುದು. ಈ ತಿಂಗಳು ಸಂಭವಿಸುವ ಪ್ರಮುಖ ಗ್ರಹಗಳ ಪಥ ಬದಲಾವಣೆಯು ಕೆಲವು ರಾಶಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಲ್ಲದೆ, ಜೀವನದಲ್ಲಿ ನೆಮ್ಮದಿ ಮತ್ತು ಯಶಸ್ಸನ್ನು ತರಲಿವೆ. ಆ ಅದೃಷ್ಟವಂತ ರಾಶಿಗಳ ವಿವರ ಇಲ್ಲಿದೆ.

ಮಿಥುನ ರಾಶಿ ಅನಿರೀಕ್ಷಿತ ಬದಲಾವಣೆಗಳ ಪರ್ವ:

ಮಿಥುನ ರಾಶಿಯವರಿಗೆ ಮೇ ತಿಂಗಳು ಸರ್ವತೋಮುಖ ಅಭಿವೃದ್ಧಿಯನ್ನು ತರಲಿದೆ. ಈ ರಾಶಿಯವರು ಆರ್ಥಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಸದೃಢರಾಗಿರುತ್ತಾರೆ. ಮುಖ್ಯವಾಗಿ, ವಿದೇಶ ಪ್ರಯಾಣದ ಕನಸು ಕಾಣುತ್ತಿರುವವರಿಗೆ ಈ ಅವಧಿಯು ಅತ್ಯಂತ ಅನುಕೂಲಕರವಾಗಿದೆ. ನೀವು ಕೈಗೊಳ್ಳುವ ಪ್ರಯಾಣಗಳು ಕೇವಲ ಸಂತೋಷ ನೀಡುವುದಲ್ಲದೆ, ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ತಂದುಕೊಡಲಿವೆ. ಜೀವನದಲ್ಲಿ ಎದುರಾಗುವ ಸಕಾರಾತ್ಮಕ ಬದಲಾವಣೆಗಳು ನಿಮ್ಮನ್ನು ಯಶಸ್ಸಿನ ಹಾದಿಗೆ ಕೊಂಡೊಯ್ಯಲಿವೆ.

ಕುಂಭ ರಾಶಿ ಉದ್ಯೋಗದಲ್ಲಿ ಪ್ರಗತಿ ಮತ್ತು ಕೌಟುಂಬಿಕ ಸುಖ:

ಕುಂಭ ರಾಶಿಯವರಿಗೆ ಈ ತಿಂಗಳು ಆರ್ಥಿಕ ಲಾಭಗಳ ಮಹಾಪೂರವೇ ಹರಿಯಲಿದೆ. ವೃತ್ತಿಜೀವನದಲ್ಲಿ ಉತ್ತಮ ಪದೋನ್ನತಿ ಅಥವಾ ಪ್ರಗತಿಯನ್ನು ಕಾಣುವ ಸಾಧ್ಯತೆ ಇದೆ. ಇನ್ನು ವಿದ್ಯಾರ್ಥಿಗಳಿಗೆ ಇದು ಶೈಕ್ಷಣಿಕವಾಗಿ ಅತ್ಯುತ್ತಮ ಸಮಯವಾಗಿದ್ದು, ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯನ್ನು ಸಾಧಿಸಲಿದ್ದಾರೆ. ಕುಟುಂಬ ಸದಸ್ಯರೊಂದಿಗೆ ತೀರ್ಥಯಾತ್ರೆಗೆ ಹೋಗುವ ಸುಯೋಗ ಒದಗಿಬರಲಿದ್ದು, ಮನೆಯಲ್ಲಿ ಸದಾ ಸಂತೋಷದ ವಾತಾವರಣ ನೆಲೆಸಿರುತ್ತದೆ.

ಇದನ್ನೂ ಓದಿ: ಭಾರತದ ಈ ಪಟ್ಟಣದಲ್ಲಿ ಈರುಳ್ಳಿ ಮಾರಾಟ ಮಾಡುವಂತಿಲ್ಲ, ನಿಷೇಧದ ಹಿಂದಿನ ಕುತೂಹಲಕಾರಿ ಸಂಗತಿ ಇಲ್ಲಿದೆ

ವೃಶ್ಚಿಕ ರಾಶಿ ಆದಾಯ ದ್ವಿಗುಣ ಮತ್ತು ಆಸ್ತಿ ಖರೀದಿ:

ಗ್ರಹಗಳ ಶುಭ ಸಂಚಾರದಿಂದಾಗಿ ವೃಶ್ಚಿಕ ರಾಶಿಯವರ ಆರ್ಥಿಕ ಸಂಕಷ್ಟಗಳು ದೂರವಾಗಲಿವೆ. ನಿಮ್ಮ ಆದಾಯವು ನಿರೀಕ್ಷೆಗೂ ಮೀರಿ ದ್ವಿಗುಣಗೊಳ್ಳಲಿದ್ದು, ಅಗತ್ಯ ಕೆಲಸಗಳಿಗೆ ಹಣದ ಕೊರತೆ ಎದುರಾಗದು. ಬಹಳ ದಿನಗಳಿಂದ ವಾಹನ ಖರೀದಿಸಬೇಕು ಎಂದು ಯೋಜಿಸುತ್ತಿದ್ದವರಿಗೆ ಈ ತಿಂಗಳು ಅತ್ಯಂತ ಸೂಕ್ತವಾಗಿದೆ. ಕೌಟುಂಬಿಕ ಸಮಸ್ಯೆಗಳು ಬಗೆಹರಿದು ಮನಸ್ಸಿಗೆ ಶಾಂತಿ ದೊರೆಯಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಮಯವಿದು.

ಧನು ರಾಶಿ ಚಿನ್ನದಂತ ಕಾಲ ಮತ್ತು ಕಲಾತ್ಮಕ ಯಶಸ್ಸು:

ಧನು ರಾಶಿಯವರಿಗೆ ಮೇ ತಿಂಗಳು ಅದ್ಭುತ ಪ್ರಯೋಜನಗಳನ್ನು ನೀಡಲಿದೆ. ವಿಶೇಷವಾಗಿ ಮಹಿಳೆಯರು ಅಥವಾ ಬಹಳ ದಿನಗಳಿಂದ ಚಿನ್ನಾಭರಣ ಖರೀದಿಸಲು ಬಯಸುತ್ತಿದ್ದವರಿಗೆ ಈ ಅವಧಿಯಲ್ಲಿ ಆಸೆ ಈಡೇರಲಿದೆ. ಆದಾಯದ ಮೂಲಗಳು ಹೆಚ್ಚಾಗುವುದರಿಂದ ಆರ್ಥಿಕವಾಗಿ ಸುಭದ್ರರಾಗುವಿರಿ. ಇನ್ನು ಕಲಾ ಕ್ಷೇತ್ರ, ಸಂಗೀತ ಅಥವಾ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರಿಗೆ ಹೆಚ್ಚಿನ ಕೀರ್ತಿ ಮತ್ತು ಲಾಭ ದೊರೆಯಲಿದೆ. ಒಟ್ಟಾರೆಯಾಗಿ ಧನು ರಾಶಿಯವರಿಗೆ ಎಲ್ಲವೂ ಸಕಾರಾತ್ಮಕವಾಗಿ ಜರುಗಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Sat, 25 April 26

Follow Us
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ
3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ
ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್
ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!
ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು
ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು
ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತ ಅಭಿಮಾನಿಗಳು!
ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತ ಅಭಿಮಾನಿಗಳು!
ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ