ಬಾಗಲಕೋಟೆ: ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ದೇಶಕ್ಕೆ‌ 2ನೇ ಟಾಪರ್ ಆದ ತೇರದಾಳದ ಯುವ ವೈದ್ಯ

ಸಾಧಿಸುವ ಛಲ ಇದ್ದರೆ ಏನನ್ನಾದರೂ ಸಾಧಿಸಬಹುದೆಂಬ ಮಾತಿಗೆ ವೈದ್ಯ ದಂಪತಿ ಮಗ ಸಾಕ್ಷಿಯಾಗಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಎರಡನೇ ಟಾಪರ್ ಆಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ನಿವಾಸಿ ಡಾ. ವಿಶಾಲ್​ ಇದೀಗ ಇಡೀ ದೇಶ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ.

ಬಾಗಲಕೋಟೆ: ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ದೇಶಕ್ಕೆ‌ 2ನೇ ಟಾಪರ್ ಆದ ತೇರದಾಳದ ಯುವ ವೈದ್ಯ
ಡಾ. ವಿಶಾಲ ಹುಬ್ಬಳ್ಳಿ
Edited By:

Updated on: Apr 28, 2025 | 12:49 PM

ಬಾಗಲಕೋಟೆ, ಏಪ್ರಿಲ್ 28: ಭಾರತ ಸರ್ಕಾರದ ನೀಟ್ ಸೂಪರ್ ಸ್ಪೆಷಾಲಿಟಿ (NEET Super Specialty)
ಪ್ರವೇಶ ಪರೀಕ್ಷೆಯಲ್ಲಿ ಜಿಲ್ಲೆಯ ತೇರದಾಳ (Terdal) ನಗರದ ಡಾ. ವಿಶಾಲ ಹುಬ್ಬಳ್ಳಿ ಎಂಬುವವರು ಇಡೀ ದೇಶಕ್ಕೆ‌ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ. ವಿಶಾಲ್​ ತಂದೆ ಶ್ರೀಶೈಲ್ ಹುಬ್ಬಳ್ಳಿ ಮತ್ತು ಗೀತಾ ಹುಬ್ಬಳ್ಳಿ ಇಬ್ಬರು ಕೂಡ ಬಿಎಎಂಎಸ್ ವೈದ್ಯರಾಗಿದ್ದು, ಇದೀಗ ಮಗನ ಸಾಧನೆ ಕಂಡು ಫುಲ್​ ಖುಷ್​ ಆಗಿದ್ದಾರೆ.

ಎಂಬಿಬಿಎಸ್​, ಎಂಎಸ್​ ನಂತರ ವೈದ್ಯಕೀಯ ವಿಶೇಷ ಕೋರ್ಸ್​​ಗೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಡಾ. ವಿಶಾಲ್​ ಹುಬ್ಬಳ್ಳಿ ಮೈಸೂರಲ್ಲಿ ಎಂಸಿಹೆಚ್ ವಿಭಾಗಕ್ಕೆ ನೀಟ್ ಪರೀಕ್ಷೆ ಬರೆದಿದ್ದರು. 2025 ಮಾರ್ಚ್ 30ರಂದು ಪರೀಕ್ಷೆ ನಡೆದಿತ್ತು.

ಇದನ್ನೂ ಓದಿ: ಸೀಟ್ ಬ್ಲಾಕಿಂಗ್ ತಡೆಗೆ KEA ಹೊಸ ನಿಯಮ: 3 ವರ್ಷ ಬ್ಯಾನ್​

ಇದನ್ನೂ ಓದಿ
ಇದೇನು ನದಿಯೋ ಇಲ್ಲಾ ಮೈದಾವೋ? ಖಾಲಿಯಾದ ಮಲಪ್ರಭೆ
ಯುಗಾದಿ ಹಬ್ಬದಂದು ಕರ್ನಾಟಕದಲ್ಲಿ ಜಲ ಗಂಡಾಂತರ: ಐವರು ನೀರುಪಾಲು
ಬರಿದಾಗುತ್ತಿರುವ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು: ರೈತರಲ್ಲಿ ಆತಂಕ
ಜೋಳ ಬೆಳೆಯುವ ನೆಲದಲ್ಲಿ ಸೇಬು ಬೆಳೆದ ರೈತ: ನಗಾಡಿವರ ಮುಂದೆ ಲಕ್ಷ ಲಕ್ಷ ಲಾಭ

ಎಂಸಿಹೆಚ್ ಮೂಲಕ ನ್ಯೂರೋ ಸರ್ಜರಿ, ಗ್ಯಾಸ್ಟೊ ಸರ್ಜರಿ ಸೇರಿದಂತೆ ವಿವಿಧ ಸ್ಪೇಷಲ್​ ತಜ್ಞರಾಗಬಹುದು‌. ಇನ್ನು ಡಾ ವಿಶಲ್​​ ಎಂಬಿಬಿಎಸ್​​, ಎಂಎಸ್​ ಈಗಾಗಲೇ ಮುಗಿಸಿದ್ದು, ಎಂಸಿಹೆಚ್ ಮೂಲಕ ಗ್ಯಾಸ್ಟೊ ಸರ್ಜರಿ ಮಾಡಲಿದ್ದಾರೆ. ಡಾ. ವಿಶಾಲ್ ಮಾಡಿರುವ ಸಾಧನೆಗೆ ಇದೀಗ ಅಭಿನಂದನೆಗಳ ಮಹಾಪುರವೇ ಹರಿದು ಬರುತ್ತಿದೆ. ತೇರದಾಳ ಶಾಸಕ ಸಿದ್ದು ಸವದಿ ಸ್ವತಃ ಅವರ ಮನೆಗೆ ಹೋಗಿ ಸನ್ಮಾನಿಸಿದ್ದಾರೆ. ಜೊತೆಗೆ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ.

ನೀಟ್​ಗೆ ಹೇಗೆ ತಯಾರಿ ಮಾಡಬೇಕೆಂದು ತಿಳಿಸಿದ ಡಾ. ವಿಶಾಲ್​

ಪಿಯುಸಿ ಪಠ್ಯವನ್ನು ಗಂಭೀರವಾಗಿ ಓದಬೇಕು. ಅದರಲ್ಲಿನ ಬಹುತೇಕ ಪ್ರಶ್ನೆಗಳನ್ನು ನೀಟ್​ನಲ್ಲಿ ಕೇಳಲಾಗುತ್ತದೆ. ಎಂಸಿಕ್ಯೂ (ಬಹು ಆಯ್ಕೆಯ ಪ್ರಶ್ನೆ) ಬಗ್ಗೆ ಹೆಚ್ಚು ಗಮನಹರಿಸಬೇಕು. ಜೊತೆಗೆ ನೀಟ್​ಗಾಗಿ ಅಭ್ಯಾಸ ಮಾಡುತ್ತಿರುವ ಸ್ನೇಹಿತರ ಜೊತೆ ಚರ್ಚೆ ಮಾಡ್ತಿರಬೇಕು. ಇದೆಲ್ಲಾ ನಿರಂತರವಾಗಿ ಇದ್ದರೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಬಹುದು. ಕೋಚಿಂಗ್ ಹೋಗಬೇಕು ಅಂತೇನೂ ಇಲ್ಲ ಎಂದಿದ್ದಾರೆ.

ಸ್ಥಳೀಯವಾಗಿ ವೈದ್ಯಕೀಯ ಸೇವೆ ಸಲ್ಲಿಸುವ ಬಯಕೆ

ತೇರದಾಳದಲ್ಲೇ ಸೇವೆ ಸಲ್ಲಿಸಲು ಇಚ್ಚೆ ವ್ಯಕ್ತಪಡಿಸಿದ ಡಾ ವಿಶಾಲ್​, ಈಗಾಗಲೇ ನಮ್ಮ ತಂದೆ-ತಾಯಿ ತೇರದಾಳ ಪಟ್ಟಣದಲ್ಲಿ ಬಿಎಎಂಎಸ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ಎಂಸಿಹೆಚ್ ಮೂಲಕ ಗ್ಯಾಸ್ಟೊ ಸರ್ಜರಿ ಮುಗಿಸಿ ಇಲ್ಲಿಯೇ ಜನರಿಗೆ ವೈದ್ಯಕೀಯ ಸೇವೆ ನೀಡಬೇಕೆಂದಿದ್ದೇನೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ಇದನ್ನೂ ಓದಿ: Success Story: ಕಸದ ಬುಟ್ಟಿಯಲ್ಲಿ ಸಿಕ್ಕಿದ್ದ ಅಂಧ ಮಗು ಇಂದು ಅಸಿಸ್ಟಂಟ್ ಕಲೆಕ್ಟರ್

ಒಟ್ಟಿನಲ್ಲಿ ಡಾ. ವಿಶಾಲ್ ನೀಟ್​ನಲ್ಲಿ ಇಡೀ ದೇಶಕ್ಕೆ ಟಾಪರ್​ ಆಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸ್ಥಳೀಯವಾಗಿ ವೈದ್ಯಕೀಯ ಸೇವೆ ಸಲ್ಲಿಸಬೇಕೆಂದಿರುವ ಅವರ ಅಭಿಪ್ರಾಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:36 pm, Mon, 28 April 25

ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us