
ಬಾಗಲಕೋಟೆ, ಸೆಪ್ಟೆಂಬರ್ 15: ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಒಂದು ಕುತಂತ್ರ. ಈ ಹಿಂದೆ ಕಾಂಗ್ರೆಸ್ನ 56 ಶಾಸಕರ ಪಟ್ಟಿ ಮಾಡಿದ್ದರು. ಆನೇಕ ಜನ ನಮ್ಮ ಹೆಸರನ್ನೂ ಕೊಟ್ಟಿದ್ದರು, ಆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಬಿಜೆಪಿಗೆ ಸೇರ್ಪಡೆಯಾಗದಿದ್ದರೆ ನಿಮ್ಮ ಮೇಲೆ ದಾಳಿ ಮಾಡ್ತೇವೆ ಅಂತಾರೆ. ಆದರೆ ನಾನು ಇಡಿ, ಐಟಿ ದಾಳಿ ಸೇರಿದಂತೆ ಎಲ್ಲವನ್ನೂ ಎದುರಿಸಲು ಸಿದ್ಧ. ಯಾವಾಗ ಬೇಕಾದ್ರೂ ನಮ್ಮ ಮನೆಗೆ ಇಡಿ, ಐಟಿಯವರು ಬರಬಹುದು ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. ಅವರ ಈ ಹೇಳಿಕೆಯ ಬೆನ್ನಲ್ಲೇ ಇಡಿ ದಾಳಿ ಸತೀಶ್ ಜಾರಕಿಹೊಳಿಯನ್ನು ಬಿಜೆಪಿಗೆ ಸೆಳೆಯುವ ತಂತ್ರನಾ? ಎಂಬ ಪ್ರಶ್ನೆ ಉದ್ಭವಿಸಿದೆ.
ಸತೀಶ್ ಮನೆ ಮೇಲೆ ಇಡಿ ದಾಳಿ ಹಿಂದೆ ಕಾಂಗ್ರೆಸ್ನವರ ಕೈವಾಡವಿದೆ. ಮುಡಾ ವಿವಾದದ ಹಿಂದೆಯೂ ಕಾಂಗ್ರೆಸ್ನವರೇ ಇದ್ರು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿರುವುದನ್ನು ನಾನು ಗಮನಿಸಿಲ್ಲ. ಇಂತಹ ಆರೋಪಗಳು ಕೇಳಿ ಬರುತ್ತಿವೆ, ಆದ್ರೆ ಕಾಂಗ್ರೆಸ್ನವರ ಕೈವಾಡವಿಲ್ಲ. ವಿನಾಕಾರಣ ಆರೋಪ ಮಾಡುತ್ತಾರೆ, ಅವೆಲ್ಲ ಸರಿಯಿಲ್ಲ, ಒಪ್ಪುವಂತಹದ್ದಲ್ಲ. ನಮ್ಮ ನಾಯಕರ ಬೆಳವಣಿಗೆ ಸಹಿಸದೆ ಬಿಜೆಪಿಯವರು ಕುತಂತ್ರ ಮಾಡ್ತಿದ್ದಾರೆ. ಕಾಂಗ್ರೆಸ್ನವರ ಮೇಲೆ ಮಾತ್ರ ಜಾರಿ ನಿರ್ದೇಶನಾಲಯ ದಾಳಿ ಮಾಡುತ್ತಿದೆ. ಇಡೀ ದೇಶದಲ್ಲಿ ಬಿಜೆಪಿಯ ಒಬ್ಬ ನಾಯಕನ ಮೇಲೂ ಇಡಿ ದಾಳಿ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ನವರ ಮೇಲೆ ದ್ವೇಷ, ಸೇಡಿನ ರಾಜಕಾರಣ ನಡೆಸಲಾಗ್ತಿದೆ. ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಮನೆ ಮೇಲೆ ಇಡಿ ದಾಳಿ ಮಾಡಲಿ. ಬಿಜೆಪಿ ಅವಧಿಯಲ್ಲಿ ಎಷ್ಟು ಹಗರಣವಾಗಿದೆ, ಅವೆಲ್ಲವನ್ನೂ ಮುಚ್ಚಿಹಾಕಿದ್ದಾರೆ ಎಂದವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಆತುರ ಬೇಡ, ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳ ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್
ಇಡಿಗೆ ದೂರು ಕೊಟ್ಟಿದ್ದು ಯಾರೆಂದು ಗೊತ್ತು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕೆ.ಎನ್.ರಾಜಣ್ಣ, ಮುಡಾ ದೂರು ಕೊಟ್ಟಿದ್ದು ಯಾರು, ಕಾಂಗ್ರೆಸ್ನವರೇ ಅಲ್ವಾ? ಅಧಿಕಾರ ಅನ್ನೋದು ಪಾಯ್ಸನ್, ಗಿಡದ ಸುತ್ತ ಇರುವ ಕಳೆ ರೀತಿ ಅದು. ಹೀಗಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದನ್ನು ನಂಬುತ್ತೇನೆ ಎಂದು ಹೇಳಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.