AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡಬಳ್ಳಾಪುರ: ನೂರಾರು ವರ್ಷಗಳ ಸ್ಮಶಾನ ಜಾಗವನ್ನು ತನ್ನದೆಂದು ಗ್ರಾಮಸ್ಥರೊಬ್ಬರು ವಶಪಡಿಸಿಕೊಂಡಿದ್ದಾರೆ, ಮುಂದೇನು?

ದೊಡ್ಡಬಳ್ಳಾಪುರ ತಾಲೂಕಿನ ಮೇಡಿಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಗಳು ಅಂತ್ಯಕ್ರಿಯೆ ಮಾಡುತ್ತಿದ್ದ ಸ್ಮಶಾನ ಜಾಗವನ್ನು ಗ್ರಾಮಸ್ಥರೊಬ್ಬರು ರಾತ್ರೋ‌ ರಾತ್ರಿ ನಾಶ ಮಾಡಿ ಸದರಿ ಜಾಗ ನಮ್ಮದು ಅಂತಾ ಹೇಳುತ್ತಿದ್ದಾರೆ. ಅಂತ್ಯಕ್ರಿಯೆ ಮಾಡಲು ದಲಿತ ಕುಟುಂಬಗಳಿಗೆ ಇದೀಗ ಸ್ಮಶಾನ ಜಾಗವಿಲ್ಲದೆ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ದಲಿತ ಕುಟುಂಬಗಳಿಗೆ ಸ್ಮಶಾನ ಒದಗಿಸುವ ಕೆಲಸ ಮಾಡಬೇಕಿದೆ.

ದೊಡ್ಡಬಳ್ಳಾಪುರ: ನೂರಾರು ವರ್ಷಗಳ ಸ್ಮಶಾನ ಜಾಗವನ್ನು ತನ್ನದೆಂದು ಗ್ರಾಮಸ್ಥರೊಬ್ಬರು ವಶಪಡಿಸಿಕೊಂಡಿದ್ದಾರೆ, ಮುಂದೇನು?
ಸ್ಮಶಾನ ಜಾಗವನ್ನು ತನ್ನದೆಂದು ಗ್ರಾಮಸ್ಥ ವಶಪಡಿಸಿಕೊಂಡಿದ್ದಾರೆ
Follow us
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​

Updated on:Dec 08, 2023 | 1:44 PM

ಆ ಗ್ರಾಮದ ದಲಿತ (Dalit) ಕುಟುಂಬಗಳು ಊರಿನ ಹೊರವಲಯದ ಜಾಗವೊಂದರಲ್ಲಿ ಹಲವು ವರ್ಷಗಳಿಂದ ಸತ್ತ ವ್ಯಕ್ತಿಗಳ ಅಂತ್ಯಕ್ರಿಯೆ ಮಾಡ್ತಿದ್ದರು. ಆದ್ರೆ ಅಂತ್ಯಕ್ರಿಯೆ ಮಾಡುತ್ತಿದ್ದ ಸ್ಮಶಾನ ಜಾಗವನ್ನ ರಾತ್ರೋರಾತ್ರಿ ನಾಶ ಮಾಡಲಾಗಿದೆ. ಗ್ರಾಮಸ್ಥನೊಬ್ಬ ಇದು ನಮ್ಮ ಜಾಗ ಅಂತಾ ದಲಿತರು ಅಂತ್ಯಕ್ರಿಯೆ ಮಾಡುತ್ತಿದ್ದ ಜಾಗದ ಸಮಾಧಿಗಳನ್ನ ( burial ground) ಡೆಮಾಲಿಷ್ ಮಾಡಿ ನಾಶ ಮಾಡಿದ್ದು ದಲಿತ ಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿದೆ. ದಲಿತರು ಅಂತ್ಯಕ್ರಿಯೆ ಮಾಡುತ್ತಿದ್ದ ಸ್ಮಶಾನದಲ್ಲಿ ರಾತ್ರೋರಾತ್ರಿ ಮಾಯವಾಗಿರೋ ಸಮಾಧಿಗಳು…… ಸಮಾಧಿ ಗುಡಿಗಳ ಕಲ್ಲುಗಳನ್ನ ತೋರಿಸಿಕೊಂಡು ಅಳಲನ್ನ ತೋಡಿಕೊಳ್ತಿರೋ ದಲಿತ ಕುಟುಂಬಗಳು…. ಹೌದು ದಲಿತರ ಸ್ಮಶಾನವನ್ನ ರಾತ್ರೋರಾತ್ರಿ ಗ್ರಾಮಸ್ಥನೊಬ್ಬ ನಾಶ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಮೇಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂದಹಾಗೆ ಗ್ರಾಮದ ಸರ್ವೆ ನಂ. 1/1 ರಲ್ಲಿ ದಲಿತ ಕುಟುಂಬಗಳು ನೂರಾರು ವರ್ಷಗಳಿಂದ ತಮ್ಮ ಮನೆತನದ ಹಿರಿಯರು ಸತ್ತರೆ ಇಲ್ಲಿಯೇ ಅಂತ್ಯಕ್ರಿಯೆ ಮಾಡುತ್ತಿದ್ದರಂತೆ. ಸುಮಾರು 250 ರಿಂದ 300 ಸಮಾಧಿ ಗುಡಿಗಳು ಇಲ್ಲಿ ಇದ್ದು, ಇದೀಗ ರಾತ್ರೋರಾತ್ರಿ ಗ್ರಾಮಸ್ಥನೊಬ್ಬ ಸದರಿ ಜಾಗ ತನಗೆ ಸೇರಬೇಕೆಂದು ಸ್ಮಶಾನವನ್ನ ನಾಶ ಮಾಡಿದ್ದಾನಂತೆ. ಹೀಗಾಗಿ ನಾಶವಾಗಿರೋ ಸ್ಮಶಾನದ ಸಮಾಧಿ ಕಲ್ಲುಗಳನ್ನ ಹಿಡಿದುಕೊಂಡು ದಲಿತ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಹಿರಿಯರ ಸಮಾಧಿಗಳನ್ನ ಹಾಳು ಮಾಡಿದ್ರಲ್ಲ ಅಂತಾ ಕಣ್ಣಿರು ಹಾಕಿದ್ದಾರೆ.

ಅಂದಹಾಗೆ ಹಿಂದಿನಿಂದಲೂ ಇದೇ ಜಾಗದಲ್ಲಿ ದಲಿತ ಕುಟುಂಬಗಳು ತಮ್ಮವರು ಸತ್ತರೆ ಅಂತ್ಯಕ್ರಿಯೆ ಮಾಡಿಕೊಂಡು ಸಮಾಧಿಗಳನ್ನ ಮಾಡುತ್ತಿದ್ದರಂತೆ. ಆದ್ರೆ ಗ್ರಾಮದ ಮಲ್ಲಿಕಾರ್ಜುನಪ್ಪ ಹಾಗೂ ಲೋಕೇಶ್ ಎನ್ನುವವರು ಈ ಜಾಗ ನಮಗೆ ಸೇರಬೇಕೆಂದು ತಾಲೂಕು ಕಚೇರಿಗೆ ಅರ್ಜಿ ಹಾಕಿಕೊಂಡು ಇದೀಗ ಬೆಳಗಾಗೋದ್ರಲ್ಲಿ ಸಮಾಧಿಗಳನ್ನ ನಾಶ ಮಾಡಿರೋ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಆರಗ ಜ್ಞಾನೇಂದ್ರ ಕ್ಷೇತ್ರದ ಗ್ರಾಮಸ್ಥರಿಗೆ ಸಾವಿನ ನೋವಿಗಿಂತ ಅಂತ್ಯಸಂಸ್ಕಾರ ಮಾಡುವುದೇ ಸಂಕಟಮಯ!

ಇನ್ನು ಇದೀಗ ಇದ್ದ ಸಮಾಧಿಗಳು ಕಾಣಿಸದೇ ಗ್ರಾಮದ ದಲಿತ ಕುಟುಂಬಗಳು ನಾಶ ಮಾಡಿರೋ ಗ್ರಾಮದ ಪ್ರಭಾವಿಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಬೇರೆಕಡೆ ದಲಿತರ ಅಂತ್ಯಕ್ರಿಯೆಗೆ ಜಾಗವಿಲ್ಲ. ಇದ್ದ ಜಾಗವನ್ನ ನಾಶ ಮಾಡಿದ್ದು ಎಷ್ಟು ಸರಿ? ಅಂತಾ ಗರಂ ಆಗಿದ್ದಾರೆ. ಇನ್ನು ಈ ಬಗ್ಗೆ ಸ್ಮಶಾನ ನಾಶ ಮಾಡಿದ ಆರೋಪ ಹೊತ್ತಿರೋ ಮಲ್ಲಿಕಾರ್ಜುನಪ್ಪರನ್ನ ಕೇಳಿದ್ರೆ ಇದು ನಮ್ಮ ಜಮೀನಾಗಿದ್ದು ಗಿಡಗಂಟೆಗಳು ಬೆಳೆದುಕೊಂಡಿತ್ತು. ಎರಡು ಮೂರು ಸಮಾಧಿಗಳು ಮಾತ್ರವಿದ್ದು, ನಮ್ಮ ಜಾಗದಲ್ಲಿ ಬೆಳೆ ಇಡಲು ನಾವು ಸಮತಟ್ಟು ಮಾಡಿದ್ದೇವೆ ಅಂತಾ ಹೇಳ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Fri, 8 December 23

ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?