Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡಬಳ್ಳಾಪುರ: ನೂರಾರು ವರ್ಷಗಳ ಸ್ಮಶಾನ ಜಾಗವನ್ನು ತನ್ನದೆಂದು ಗ್ರಾಮಸ್ಥರೊಬ್ಬರು ವಶಪಡಿಸಿಕೊಂಡಿದ್ದಾರೆ, ಮುಂದೇನು?

ದೊಡ್ಡಬಳ್ಳಾಪುರ ತಾಲೂಕಿನ ಮೇಡಿಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಗಳು ಅಂತ್ಯಕ್ರಿಯೆ ಮಾಡುತ್ತಿದ್ದ ಸ್ಮಶಾನ ಜಾಗವನ್ನು ಗ್ರಾಮಸ್ಥರೊಬ್ಬರು ರಾತ್ರೋ‌ ರಾತ್ರಿ ನಾಶ ಮಾಡಿ ಸದರಿ ಜಾಗ ನಮ್ಮದು ಅಂತಾ ಹೇಳುತ್ತಿದ್ದಾರೆ. ಅಂತ್ಯಕ್ರಿಯೆ ಮಾಡಲು ದಲಿತ ಕುಟುಂಬಗಳಿಗೆ ಇದೀಗ ಸ್ಮಶಾನ ಜಾಗವಿಲ್ಲದೆ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ದಲಿತ ಕುಟುಂಬಗಳಿಗೆ ಸ್ಮಶಾನ ಒದಗಿಸುವ ಕೆಲಸ ಮಾಡಬೇಕಿದೆ.

ದೊಡ್ಡಬಳ್ಳಾಪುರ: ನೂರಾರು ವರ್ಷಗಳ ಸ್ಮಶಾನ ಜಾಗವನ್ನು ತನ್ನದೆಂದು ಗ್ರಾಮಸ್ಥರೊಬ್ಬರು ವಶಪಡಿಸಿಕೊಂಡಿದ್ದಾರೆ, ಮುಂದೇನು?
ಸ್ಮಶಾನ ಜಾಗವನ್ನು ತನ್ನದೆಂದು ಗ್ರಾಮಸ್ಥ ವಶಪಡಿಸಿಕೊಂಡಿದ್ದಾರೆ
Follow us
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​

Updated on:Dec 08, 2023 | 1:44 PM

ಆ ಗ್ರಾಮದ ದಲಿತ (Dalit) ಕುಟುಂಬಗಳು ಊರಿನ ಹೊರವಲಯದ ಜಾಗವೊಂದರಲ್ಲಿ ಹಲವು ವರ್ಷಗಳಿಂದ ಸತ್ತ ವ್ಯಕ್ತಿಗಳ ಅಂತ್ಯಕ್ರಿಯೆ ಮಾಡ್ತಿದ್ದರು. ಆದ್ರೆ ಅಂತ್ಯಕ್ರಿಯೆ ಮಾಡುತ್ತಿದ್ದ ಸ್ಮಶಾನ ಜಾಗವನ್ನ ರಾತ್ರೋರಾತ್ರಿ ನಾಶ ಮಾಡಲಾಗಿದೆ. ಗ್ರಾಮಸ್ಥನೊಬ್ಬ ಇದು ನಮ್ಮ ಜಾಗ ಅಂತಾ ದಲಿತರು ಅಂತ್ಯಕ್ರಿಯೆ ಮಾಡುತ್ತಿದ್ದ ಜಾಗದ ಸಮಾಧಿಗಳನ್ನ ( burial ground) ಡೆಮಾಲಿಷ್ ಮಾಡಿ ನಾಶ ಮಾಡಿದ್ದು ದಲಿತ ಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿದೆ. ದಲಿತರು ಅಂತ್ಯಕ್ರಿಯೆ ಮಾಡುತ್ತಿದ್ದ ಸ್ಮಶಾನದಲ್ಲಿ ರಾತ್ರೋರಾತ್ರಿ ಮಾಯವಾಗಿರೋ ಸಮಾಧಿಗಳು…… ಸಮಾಧಿ ಗುಡಿಗಳ ಕಲ್ಲುಗಳನ್ನ ತೋರಿಸಿಕೊಂಡು ಅಳಲನ್ನ ತೋಡಿಕೊಳ್ತಿರೋ ದಲಿತ ಕುಟುಂಬಗಳು…. ಹೌದು ದಲಿತರ ಸ್ಮಶಾನವನ್ನ ರಾತ್ರೋರಾತ್ರಿ ಗ್ರಾಮಸ್ಥನೊಬ್ಬ ನಾಶ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಮೇಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂದಹಾಗೆ ಗ್ರಾಮದ ಸರ್ವೆ ನಂ. 1/1 ರಲ್ಲಿ ದಲಿತ ಕುಟುಂಬಗಳು ನೂರಾರು ವರ್ಷಗಳಿಂದ ತಮ್ಮ ಮನೆತನದ ಹಿರಿಯರು ಸತ್ತರೆ ಇಲ್ಲಿಯೇ ಅಂತ್ಯಕ್ರಿಯೆ ಮಾಡುತ್ತಿದ್ದರಂತೆ. ಸುಮಾರು 250 ರಿಂದ 300 ಸಮಾಧಿ ಗುಡಿಗಳು ಇಲ್ಲಿ ಇದ್ದು, ಇದೀಗ ರಾತ್ರೋರಾತ್ರಿ ಗ್ರಾಮಸ್ಥನೊಬ್ಬ ಸದರಿ ಜಾಗ ತನಗೆ ಸೇರಬೇಕೆಂದು ಸ್ಮಶಾನವನ್ನ ನಾಶ ಮಾಡಿದ್ದಾನಂತೆ. ಹೀಗಾಗಿ ನಾಶವಾಗಿರೋ ಸ್ಮಶಾನದ ಸಮಾಧಿ ಕಲ್ಲುಗಳನ್ನ ಹಿಡಿದುಕೊಂಡು ದಲಿತ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಹಿರಿಯರ ಸಮಾಧಿಗಳನ್ನ ಹಾಳು ಮಾಡಿದ್ರಲ್ಲ ಅಂತಾ ಕಣ್ಣಿರು ಹಾಕಿದ್ದಾರೆ.

ಅಂದಹಾಗೆ ಹಿಂದಿನಿಂದಲೂ ಇದೇ ಜಾಗದಲ್ಲಿ ದಲಿತ ಕುಟುಂಬಗಳು ತಮ್ಮವರು ಸತ್ತರೆ ಅಂತ್ಯಕ್ರಿಯೆ ಮಾಡಿಕೊಂಡು ಸಮಾಧಿಗಳನ್ನ ಮಾಡುತ್ತಿದ್ದರಂತೆ. ಆದ್ರೆ ಗ್ರಾಮದ ಮಲ್ಲಿಕಾರ್ಜುನಪ್ಪ ಹಾಗೂ ಲೋಕೇಶ್ ಎನ್ನುವವರು ಈ ಜಾಗ ನಮಗೆ ಸೇರಬೇಕೆಂದು ತಾಲೂಕು ಕಚೇರಿಗೆ ಅರ್ಜಿ ಹಾಕಿಕೊಂಡು ಇದೀಗ ಬೆಳಗಾಗೋದ್ರಲ್ಲಿ ಸಮಾಧಿಗಳನ್ನ ನಾಶ ಮಾಡಿರೋ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಆರಗ ಜ್ಞಾನೇಂದ್ರ ಕ್ಷೇತ್ರದ ಗ್ರಾಮಸ್ಥರಿಗೆ ಸಾವಿನ ನೋವಿಗಿಂತ ಅಂತ್ಯಸಂಸ್ಕಾರ ಮಾಡುವುದೇ ಸಂಕಟಮಯ!

ಇನ್ನು ಇದೀಗ ಇದ್ದ ಸಮಾಧಿಗಳು ಕಾಣಿಸದೇ ಗ್ರಾಮದ ದಲಿತ ಕುಟುಂಬಗಳು ನಾಶ ಮಾಡಿರೋ ಗ್ರಾಮದ ಪ್ರಭಾವಿಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಬೇರೆಕಡೆ ದಲಿತರ ಅಂತ್ಯಕ್ರಿಯೆಗೆ ಜಾಗವಿಲ್ಲ. ಇದ್ದ ಜಾಗವನ್ನ ನಾಶ ಮಾಡಿದ್ದು ಎಷ್ಟು ಸರಿ? ಅಂತಾ ಗರಂ ಆಗಿದ್ದಾರೆ. ಇನ್ನು ಈ ಬಗ್ಗೆ ಸ್ಮಶಾನ ನಾಶ ಮಾಡಿದ ಆರೋಪ ಹೊತ್ತಿರೋ ಮಲ್ಲಿಕಾರ್ಜುನಪ್ಪರನ್ನ ಕೇಳಿದ್ರೆ ಇದು ನಮ್ಮ ಜಮೀನಾಗಿದ್ದು ಗಿಡಗಂಟೆಗಳು ಬೆಳೆದುಕೊಂಡಿತ್ತು. ಎರಡು ಮೂರು ಸಮಾಧಿಗಳು ಮಾತ್ರವಿದ್ದು, ನಮ್ಮ ಜಾಗದಲ್ಲಿ ಬೆಳೆ ಇಡಲು ನಾವು ಸಮತಟ್ಟು ಮಾಡಿದ್ದೇವೆ ಅಂತಾ ಹೇಳ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Fri, 8 December 23

ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು