AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲದಲ್ಲಿ ಫಾರ್ಚೂನರ್ ಕಾರು ಅಪಘಾತ: ಕಾರಿನಲ್ಲಿ ಶಾಸಕರಿಲ್ಲ, ಆದರೆ ಪಾಸ್ ಪತ್ತೆ

ನೆಲಮಂಗಲ ತಾಲೂಕಿನ ಕೆಬಿಡಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತಕ್ಕೊಳಗಾದ ಕಾರ್​ನಲ್ಲಿ ಶಾಸಕ ಭೀಮಾನಾಯ್ಕ್‌ಗೆ ಸೇರಿದ ಪಾಸ್‌ ಪತ್ತೆಯಾಗಿದೆ.

ನೆಲಮಂಗಲದಲ್ಲಿ ಫಾರ್ಚೂನರ್ ಕಾರು ಅಪಘಾತ: ಕಾರಿನಲ್ಲಿ ಶಾಸಕರಿಲ್ಲ, ಆದರೆ ಪಾಸ್ ಪತ್ತೆ
ಶಾಸಕ ಭೀಮಾನಾಯ್ಕ್‌ ಆಪ್ತನ ಕಾರು ಅಪಘಾತ
TV9 Web
| Edited By: |

Updated on: Nov 20, 2022 | 9:47 PM

Share

ನೆಲಮಂಗಲ: ನೆಲಮಂಗಲ (Nelamangala) ತಾಲೂಕಿನ ಕೆಬಿಡಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ, ಷರಾಪುರಪಾಳ್ಯದ ನಿವಾಸಿ ಸಿದ್ದಪ್ಪ (55) ಅವರಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಪಘಾತವಾದ ಕಾರಿನಲ್ಲಿ ಶಾಸಕರ ಪಾಸ್‌ ಪತ್ತೆ

ಅಪಘಾತಕ್ಕೊಳಗಾದ ಫಾರ್ಚೂನರ್ ಕಾರಿನಲ್ಲಿ (KA24 M4365) ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್​ ಶಾಸಕ ಭೀಮಾನಾಯ್ಕ್‌ಗೆ ಸೇರಿದ ಪಾಸ್‌ ಪತ್ತೆಯಾಗಿದೆ. ಕಾರಿನಲ್ಲಿ ಶಾಸಕ ಭೀಮಾನಾಯ್ಕ್‌ ಅವರ KA29 N1221 ಸಂಖ್ಯೆಯ ಪಾಸ್ ಪತ್ತೆಯಾಗಿದೆ.

ಅಪಘಾತವಾದ ಕಾರಿನಲ್ಲಿ ಶಾಸಕರ ಪಾಸ್‌ ಪತ್ತೆ: ಶಾಸಕ ಭೀಮಾನಾಯ್ಕ್‌ ಸ್ಪಷ್ಟನೆ

ಅಪಘಾತಕ್ಕೊಳಗಾದ ಫಾರ್ಚೂನರ್ ಕಾರು ಆಪ್ತ ನಾಗರಾಜ್‌ಗೆ ಸೇರಿದ್ದು. ನಾಗರಾಜ್‌ ನನ್ನ ಕಾರಿನ ಪಾಸ್ ಕೇಳಿ ಪಡೆದಿದ್ದನು. ಹೀಗಾಗಿ ಪಕ್ಷದ ಕೆಲಸ ಸೇರಿದಂತೆ ಕ್ಷೇತ್ರದ ಕೆಲಸಕ್ಕೆ ಬಳಸಲು ನಾನೇ ಎಂಎಲ್​ಎ ಪಾಸ್​​ ನೀಡಿದ್ದೇನೆ. ನಾನು ಕೊಪ್ಪಳದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ನೆಲಮಂಗಲದ ಅಪಘಾತದ ವಿಚಾರ ನನಗೆ ತಡವಾಗಿ ಮಾಹಿತಿ ದೊರೆತಿದೆ  ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ