AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ ಆರೋಗ್ಯ ಇಲಾಖೆ: ಸಿಟಿ ಜನರಲ್ಲಿ ಹೆಚ್ಚುತ್ತಿದೆ ಮಾನಸಿಕ ಖಿನ್ನತೆ ಸಮಸ್ಯೆ

ಸಿಟಿಯ ವೇಗದ ಜೀವನಶೈಲಿ ಬೆಂಗಳೂರಿನ ಜನರಲ್ಲಿ ಮಾನಸಿಕ ಅನಾರೋಗ್ಯ ಮತ್ತು ಒತ್ತಡವನ್ನು ಹೆಚ್ಚಿಸಿದೆ. ಸಿ.ಜೆ. ರಾಯ್ ಘಟನೆಯ ನಂತರ, ಆತ್ಮಹತ್ಯೆ ಯೋಚನೆಗಳು ಮತ್ತು ಖಿನ್ನತೆ ಪ್ರಕರಣಗಳು ಹೆಚ್ಚಾಗಿರುವುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಟೆಲಿ ಮಾನಸ್ (14416) ಸಹಾಯವಾಣಿ ಆರಂಭಿಸಿದೆ.

ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ ಆರೋಗ್ಯ ಇಲಾಖೆ: ಸಿಟಿ ಜನರಲ್ಲಿ ಹೆಚ್ಚುತ್ತಿದೆ ಮಾನಸಿಕ ಖಿನ್ನತೆ ಸಮಸ್ಯೆ
ಪ್ರಾತಿನಿಧಿಕ ಚಿತ್ರImage Credit source: healthcare
Vinay Kashappanavar
| Edited By: |

Updated on: Feb 07, 2026 | 10:16 PM

Share

ಬೆಂಗಳೂರು, ಫೆಬ್ರವರಿ 07: ಸಿಲಿಕಾನ್ ಸಿಟಿ ಬೆಂಗಳೂರು (bangaluru) ಒಂಥರಾ ಬ್ಯುಸಿ ಸಿಟಿ. ಇಲ್ಲಿ ಇರುವ ಜನರು ಕೂಡ ಅಷ್ಟೇ ಬ್ಯುಸಿ ಹಾಗೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಇದೀಗ ಸಿಟಿ ಮಂದಿ ಹೆಚ್ಚು ಮಾನಸಿಕ ಅನಾರೋಗ್ಯಕ್ಕೆ (Mental Health) ತುತ್ತಾಗುತ್ತಿದ್ದಾರೆ. ಹೀಗಾಗಿ ಟೆಲಿ ಮಾನಸ್​​ಗೆ ಮನೋ ರೋಗಿಗಳಿಂದ ಲಕ್ಷಾಂತರ ಕರೆಗಳು ಬರುತ್ತಿವೆ. ಸಿ. ಜೆ ರಾಯ್​ ಹಾಗೂ ಮಕ್ಕಳ ಸೂಸೈಡ್ ಬಳಿಕ ಆರೋಗ್ಯ ಇಲಾಖೆ ಶಾಕಿಂಗ್ ಮಾಹಿತಿಯೊಂದನ್ನು ಬಯಲು ಮಾಡಿದೆ.

ಹೌದು.. ಇತ್ತೀಚೆಗೆ ಜನರ ಜೀವನ ಶೈಲಿಯೇ ಬದಲಾಗಿಬಿಟ್ಟಿದೆ. ಇದರಿಂದ ಜನರು ಅನೇಕ ಖಾಯಿಲೆಗಳಿಗೂ ತುತ್ತಾಗುತ್ತಿದ್ದಾರೆ. ಅದರಲ್ಲೂ ಆತಂಕ ಹುಟ್ಟಿಸುವ ವಿಚಾರವೆಂದರೆ ಅನೇಕ ಜನರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಅಂತೆ. ಅನೇಕರಿಗೆ ತಮ್ಮ ಒತ್ತಡ ಹಾಗೂ ಸಮಸ್ಯೆಗಳನ್ನ ಹೇಳಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಸಾಕಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ

ಸಿಜೆ ರಾಯ್ ಹಾಗೂ ಮಕ್ಕಳ ಸೂಸೈಡ್ ಘಟನೆ ಬಳಿಕ ಆರೋಗ್ಯ ಇಲಾಖೆ ಅಚ್ಚರಿಯ ಮಾಹಿತಿ ನೀಡಿದೆ. ಒಂದೇ ವರ್ಷದಲ್ಲಿ 101,898 ಜನರಿಗೆ ಆತ್ಮಹತ್ಯೆ ಯೋಚನೆಗಳು ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಗುಪ್ತ ಖಿನ್ನತೆ ಕೇಸ್ ಹೆಚ್ಚಳ ಕಂಡಿದೆ. ಹಗಲು-ರಾತ್ರಿ ಎನ್ನದೇ ಟೆಲಿ ಮಾನಸ್​​ಗೆ ಮನೋ ರೋಗಿಗಳು ಕರೆ ಮಾಡುತ್ತಿದ್ದಾರೆ.

ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಸ್ಫೋಟಕ ಅಂಕಿ-ಅಂಶ ಬಯಲಾಗಿದೆ. ಟೆಲಿ ಮಾನಸ್​ಗೆ ಸರಾಸರಿ ಎರಡುವರೆ ಲಕ್ಷ ಜನ ಕರೆ ಮಾಡಿ ತಮ್ಮ ಖಿನ್ನತೆ ಬಗ್ಗೆ ದೂರು ಹೇಳಿಕೊಂಡಿದ್ದಾರೆ. ಈ ಪೈಕಿ ಪುರಷರಲ್ಲಿ 49.86%, ಮಹಿಳೆಯರಲ್ಲಿ 45.45% ಮಾನಸಿಕ ಒತ್ತಡ ಕಂಡು ಬಂದಿದೆ.

ರಾಯ್ ಅವರಂತೆ ನಗದರ ಅನೇಕ ಜನರಿಲ್ಲಿ ಗುಪ್ತ ಖಿನ್ನತೆ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಒತ್ತಡ, ಕೌಟುಂಬಿಕ ಮತ್ತು ಕೆಲಸದ ಒತ್ತಡಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ತಮಗೆ ಗೊತ್ತಿಲ್ಲದೆ ಜನರು ಖಿನ್ನತೆಗೆ ಒಳಪಡುತ್ತಿದ್ದು, ಗುಪ್ತ ಖಿನ್ನತೆಗೆ ಒಳಪಟ್ಟು ಸಾಕಷ್ಟು ಸಮಯದ ನಂತರ ಮನೋಶಾಸ್ತ್ರಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕಾಗಿ ಆರೋಗ್ಯ ಇಲಾಖೆ ಸಿಟಿ ಜನರ ಮಾನಸಿಕ ಆರೋಗ್ಯಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯಿಂದ ಟೆಲಿ ಮಾನಸ್ ಯೋಜನೆ ಶುರು ಮಾಡಿದೆ. ನಿಮ್ಹಾನ್ಸ್ ಆಸ್ಪತ್ರೆ ಸಹಯೋಗದಲ್ಲಿ ಟೆಲಿ ಮಾನಸ್ ಸೇವೆ ಆರಂಭವಾಗಿದ್ದು, ಈಗಾಗಲೇ ಸರಾಸರಿ 2 ಲಕ್ಷ 3 ಸಾವಿರ ಜನರಿಗೆ ಚಿಕಿತ್ಸೆ ಸಲಹೆ ನೀಡಲಾಗಿದೆ.

2025 ಜನವರಿಯಿಂದ ಡಿಸೆಂಬರ್ 25ರ ವರೆಗೆ ಟೆಲಿ ಮಾನಸ್​ಗೆ ಬಂದ ಕರೆಗಳೆಷ್ಟು?

ಸಮಸ್ಯೆ ಹೇಳಿಕೊಂಡು ಬಂದ ಕರೆಗಳು ಒಟ್ಟು ಕರೆಗಳು; 101,898, ನೇರ ಕರೆ; 82,027, ಸರ್ವಿಸ್ ಕರೆ; 19,871, ರೋಟಿನ್ ಕಾಲ್; 61,888, ಮಾಹಿತಿಗೋಸ್ಕರ ಕರೆ; 10,510, ಫ್ರಾಂಕ್ ಕಾಲ್​; 817, ಒಟ್ಟು ವಿಡಿಯೋ ಕಾಲ್; 77. ನಿರಾಸಕ್ತಿ ಮತ್ತು ಇತರೆ ಸಿಂಟಮ್ಸ್: 28.18%, ಒತ್ತಡ: 13.0%, ಪ್ಯಾನಿಕ್, ಫೋಬಿಯಾ ಸಿಂಪ್ಟಮ್ಸ್: 12.26%, ನಿದ್ದೆ ಸಮಸ್ಯೆ; 12.3%, ಆತ್ಮಹತ್ಯೆ ಆಲೋಚನೆ: 3.88%.

ಪುರುಷರಲ್ಲೇ ಹೆಚ್ಚು ಮಾನಸಿಕ ಸಮಸ್ಯೆ

ಪುರುಷರು: 49.86%, ಮಹಿಳೆಯರು: 45.45%, ಲೈಂಗಿಕ ಅಲ್ಪಸಂಖ್ಯಾತರು: 0.02%.

ವಯೋಮಿತಿ ಡಾಟಾ

  • 18-45 ವಯೋಮಿತಿ ; 69.7%
  • 46-64 ವಯೋಮಿತಿ ; 15.7%
  • 65 + ವಯೋಮಿತಿ ; 4.5%
  • 13-17 ವಯೋಮಿತಿ ; 7.2%
  • 0-12 ವಯೋಮಿತಿ; 2.9%

ಖಿನ್ನತೆ ಬಗ್ಗೆ ಹೆಚ್ಚಿರುವ ಹಿನ್ನಲೆ ಆರೋಗ್ಯ ಇಲಾಖೆ ಮೂರು ಹಂತದಲ್ಲಿ ವೈದ್ಯರ ನೇಮಕ ಮಾಡಿಕೊಂಡಿದೆ. ಸಿಂಪಲ್ ಸಮಸ್ಯೆಗೆ ಜ್ಯೂನಿಯರ್ ಸೈಕಾಲಜಿಸ್ಟ್ಗಳಿಂದ ಚಿಕಿತ್ಸೆ ನೀಡಿದರೆ, ಕಷ್ಟಕರ ಕೇಸ್​​ಗಳಿಗೆ ಸೀನಿಯರ್ ಸೈಕಾಲಜಿಸ್ಟ್ ಸಹಾಯ ಮಾಡುತ್ತಾರೆ. ಗೊಂದಲಮಯ ಸೇರಿದಂತೆ ದೊಡ್ಡ ಸಮಸ್ಯೆಗಳಿದ್ದಾಗ ವೃತ್ತಿಪರ ವೈದ್ಯರು ಸಹಾಯ ಮಾಡುತ್ತಾರೆ. ಇದಕ್ಕಾಗಿಯೇ 14416 ಸಹಾಯವಾಣಿ ಶುರು ಮಾಡಿದ್ದು, ಯಾವುದೇ ಮುಜುಗರ ಇಲ್ಲದೇ ಸೇವೆ ಪಡೆಯಲು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಸಿಕ್ತು 3 ಕೋಟಿ ರೂ. ಮೌಲ್ಯದ ಗಾಂಜಾ! ಮೂವರು ಆರೋಪಿಗಳು ವಶಕ್ಕೆ

14416 ಸಹಾಯವಾಣಿ ವಾರದ ಎಲ್ಲಾ ದಿನಗಳಲ್ಲಿ 24 ಗಂಟೆಯೂ ದೂರವಾಣಿ ಕರೆಗಳನ್ನು 20 ಭಾಷೆಗಳಲ್ಲಿ ಸ್ವೀಕರಿಸಲಾಗುತ್ತಿದೆ. ಒಟ್ಟಿನಲ್ಲಿ ಸಿಟಿ ಜನರು ತಮ್ಮ ಕೆಲಸದ ಒತ್ತಡ, ಮಕ್ಕಳು ಓದಿನ ಒತ್ತಡ ಹೀಗೆ ಅನೇಕ ಸಮಸ್ಯೆಗಳಿಂದ ಮಾನಸಿಕ ಆರೋಗ್ಯ ಹಾಳಾಗುತ್ತಿದ್ದು, ಅನೇಕರು ಒತ್ತಡ ನಿವಾರಣೆಯನ್ನ ಮಾಡಿಕೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರಿಗೆ ಭೇಟಿ
ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರಿಗೆ ಭೇಟಿ
ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು?
ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು?