AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಕಂಪನಿಯಲ್ಲಿ 1 ವರ್ಷ ಅನುಭವ ಇರುವವರಿಗೆ 35 ಲಕ್ಷದ ಪ್ಯಾಕೇಜ್? 5 ವರ್ಷ ದುಡಿದವರಿಗೆ ಮರ್ಯಾದೆಯೇ ಇಲ್ಲ

ಬೆಂಗಳೂರಿನಲ್ಲಿ ಕೇವಲ 1 ವರ್ಷದ ಅನುಭವ ಇರುವ ಸಾಫ್ಟ್‌ವೇರ್ ಇಂಜಿನಿಯರ್‌ಗೆ ವಾರ್ಷಿಕ 35 ಲಕ್ಷ ರೂ. ಪ್ಯಾಕೇಜ್ ಆಫರ್ ಕುರಿತು ವೈರಲ್ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಸೈನ್-ಆನ್ ಬೋನಸ್, ESOP, ಭತ್ಯೆಗಳೂ ಸೇರಿ ಈ ಆಫರ್, ಅನುಭವಿ ಉದ್ಯೋಗಿಗಳಿಗೆ ಸಿಗುವ ವೇತನಕ್ಕಿಂತ ಹೆಚ್ಚಾಗಿದೆ. ಇದು ಐಟಿ ಉದ್ಯಮದಲ್ಲಿ ವೇತನ ತಾರತಮ್ಯ, ಉದ್ಯೋಗಿ ನಿಷ್ಠೆ ಹಾಗೂ ಸಾಮರ್ಥ್ಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರಿನ ಕಂಪನಿಯಲ್ಲಿ 1 ವರ್ಷ ಅನುಭವ ಇರುವವರಿಗೆ 35 ಲಕ್ಷದ ಪ್ಯಾಕೇಜ್? 5 ವರ್ಷ ದುಡಿದವರಿಗೆ ಮರ್ಯಾದೆಯೇ ಇಲ್ಲ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jan 16, 2026 | 4:17 PM

Share

ಬೆಂಗಳೂರು, ಜ.16: ಬೆಂಗಳೂರಿನಲ್ಲಿ (Bengaluru IT salary) ಕೆಲಸಕ್ಕೆ ಸೇರಿ 5 ವರ್ಷ ಅನುಭವ ಇದ್ರೂ ಸರಿಯಾದ ಸಂಬಳ ಸಿಗುವುದಿಲ್ಲ. ಅಂತದ್ರಲ್ಲಿ 1 ವರ್ಷ ಅನುಭವ ಇರುವವರಿಗೆ ಲಕ್ಷ ಸಂಬಳ ಸಿಗುತ್ತದೆ ಎಂದ್ರೆ ನಂಬುದು ಹೇಗೆ? ಆದರೆ ಈ ಪೋಸ್ಟ್​ ನೋಡಿದ ಮೇಲೆ ನಂಬಲೇಬೇಕು. ಹೌದು ಇದೀಗ ಇಲ್ಲೊಂದು ವೈರಲ್​​ ಆಗಿರುವ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ (ಎಸ್‌ಡಿಇ) ಹುದ್ದೆಗೆ ನೇಮಕಾತಿ ಮಾಡಲಾಗುತ್ತಿದ್ದಾರೆ. ಇದರಲ್ಲಿ ಸಂಬಳದ ಬಗ್ಗೆ ತಿಳಿಸಿದ್ದಾರೆ. ಕಂಪನಿಯೊಂದು ಒಂದು ವರ್ಷ ಅನುಭವ ಇರುವವರಿಗೆ 1 ಲಕ್ಷ ಸಂಬಳ ನೀಡಲು ಮುಂದಾಗಿದೆ. ಈ ಬಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಪೋಸ್ಟ್​​ನ್ನು ಎಕ್ಸ್​​ನಲ್ಲಿ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಭಾರತದ ತಂತ್ರಜ್ಞಾನ ಉದ್ಯಮ ತಮ್ಮ ಉದ್ಯೋಗಿಗಳಿಗೆ ಹೇಗೆ ಹೆಚ್ಚಿನ ಆದಾಯವನ್ನು ನೀಡುತ್ತಿದೆ ಎಂಬುದನ್ನು ಇದು ತಿಳಿಸುತ್ತದೆ. ಈ ಬಗ್ಗೆ ನೆಟ್ಟಿಗರು ಕೂಡ ಸೋಶಿಯಲ್​​​​ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಾರೆ.

ಈ ಪೋಸ್ಟ್​​ನ ಸ್ಕ್ರೀನ್‌ಶಾಟ್ ಅನ್ನು ಎಂಜಿನಾರ್ಡ್ ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದು, ಈ ಸಂಬಳದ ಬಗ್ಗೆ ಟೀಕೆಗಳು ಕೂಡ ಬಂದಿದೆ. ಒಂದು ಕಡೆ ಕೆಲಸದಿಂದ ವಜಾಗಳು ನಡೆಯುತ್ತಿವೆ ಮತ್ತು ಇನ್ನೊಂದು ಕಡೆ ಕಂಪನಿಗಳು 1 ವರ್ಷದ ಅನುಭವಕ್ಕೆ ಇಷ್ಟೊಂದು ಸಂಬಳ ನೀಡುತ್ತಿದೆ ಎಂದು ಕಮೆಂಟ್​ ಮಾಡಿತ್ತಿದ್ದಾರೆ. ವಾರ್ಷಿಕ 25 ಲಕ್ಷ ರೂ. (ಎಲ್‌ಪಿಎ) ಸಂಬಳ, 20 ಲಕ್ಷ ರೂ. ಮೌಲ್ಯದ ESOP (ಉದ್ಯೋಗಿ ಷೇರು ಮಾಲೀಕತ್ವ ಯೋಜನೆ , ಸೈನ್-ಆನ್ ಬೋನಸ್ ಜತೆಗೆ ಪದೋನ್ನತಿ, ಜಿಮ್​​ನ ಖರ್ಚು, ಮನೆಯಿಂದ ಕೆಲಸ ಮಾಡಲು 21,000 ರೂ. ಭತ್ಯೆ, ಪ್ರತಿ ಮೂರು ವರ್ಷಗಳಿಗೊಮ್ಮೆ ಬದಲಿ ಸ್ಮಾರ್ಟ್‌ಫೋನ್, ಝೊಮ್ಯಾಟೊದಿಂದ ದಿನಕ್ಕೆ 600 ರೂ. ಮೌಲ್ಯದ ಕ್ರೆಡಿಟ್‌, ಮೊಬೈಲ್ ಫೋನ್ ಮತ್ತು ವೈಫೈ ಬಿಲ್‌ ಪಾವತಿಯನ್ನು ಈ ಕಂಪನಿಯೇ ಮಾಡುತ್ತಿದೆ ಎಂದು ಈ ಪೋಸ್ಟ್​​ನಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಕದ್ದ ಗಡಿಯಾರದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ಹಾಕಿ ಮಾಲೀಕನ ಕೈಗೆ ಸಿಕ್ಕಿಬಿದ್ದ ಮನೆಗೆಲಸದಾಕೆ

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್:

ಈ ಎಲ್ಲ ಸೌಲಭ್ಯಗಳು ಸೇರಿ ಮೊದಲ ವರ್ಷಕ್ಕೆ ಒಬ್ಬ ಉದ್ಯೋಗಿಗೆ 35 ಲಕ್ಷ ರೂ. ವ್ಯಯ ಮಾಡುತ್ತದೆ. ಕೇವಲ ಒಂದು ವರ್ಷದ ಅನುಭವ ಹೊಂದಿರುವ ಎಂಜಿನಿಯರ್‌ಗೆ ಇಷ್ಟೊಂದು ಸೌಲಭ್ಯವೇ ಎಂದು ಹಲವು ಜನಗಳು ಅಚ್ಚರಿಗೊಂಡಿದ್ದಾರೆ. ಅದೇ ಕಂಪನಿಯಲ್ಲಿ ಕೆಲಸ ಮಾಡುವ ಇತರ ಉದ್ಯೋಗಿಗಳಿಗೆ ಇದಕ್ಕಿಂತ ಕಡಿಮೆ ಸಂಬಳ ಇರಬಹುದು ಎಂದು ಒಬ್ಬರು ಹೇಳಿದ್ದಾರೆ. 1 ವರ್ಷ ಅನುಭವ ಇರುವ ವ್ಗಕ್ತಿಗಿಂತ 5-8 ವರ್ಷಗಳ ಅನುಭವ ಹೊಂದಿರುವ ಉದ್ಯೋಗಿಗಳಿಗೆ ಕಡಿಮೆ ವೇತನವನ್ನು ನೀಡುತ್ತದೆ. ಇದು ಐಟಿ ಕಂಪನಿಗಳ ರೂಲ್ಸ್​​ ಎಂದು ಮತ್ತೊಬ್ಬರು ಹೇಳಿದ್ದಾರೆ. ನಿಷ್ಠೆ, ಉಳಿಸಿಕೊಳ್ಳುವಿಕೆ ಮತ್ತು ಅನ್ಯಾಯದ ವೇತನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದೆ. ಇನ್ನೊಬ್ಬರು ಸರಳವಾಗಿ ಹೇಳಬೇಕೆಂದರೆ ಮುಗ್ಧರಾಗಿರಬೇಡಿ ಮತ್ತು ನಿಮ್ಮನ್ನು ಕಂಪನಿಗೆ ನಿಷ್ಠರಾಗಿ ಇರಬೇಕು. ಕೆಲಸವನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಳೆ ಕೊರತೆ: ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ
ಮಳೆ ಕೊರತೆ: ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ
ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಸರತ್ತು: ನವದೆಹಲಿಯತ್ತ ನಾಯಕರ ಪಯಣ!
ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಸರತ್ತು: ನವದೆಹಲಿಯತ್ತ ನಾಯಕರ ಪಯಣ!
ಜುಲೈ 27 ರಿಂದ ಆಗಸ್ಟ್ 02ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
ಜುಲೈ 27 ರಿಂದ ಆಗಸ್ಟ್ 02ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ