ಬೆಂಗಳೂರು: ಮೆಡಿಕಲ್ ಎಮರ್ಜೆನ್ಸಿ ಫೋನ್ ಪೇ ಮಾಡ್ತೀನಿ ಎಂದು ಹಣ ಪಡೆದು ಮೋಸ, ವಿಡಿಯೋ​ ಹಂಚಿಕೊಂಡ ಮಾಲೀಕ

ಮೆಡಿಕಲ್ ಎಮರ್ಜೆನ್ಸಿ ಇದೆ ಹಣ ಬೇಕು ನಾವು ನಿಮಗೆ ಫೋನ್ ಪೇ ಮಾಡ್ತೀವಿ ಎಂದು ಬಂದ ವ್ಯಕ್ತಿಗಳು ಅಂದ್ರಹಳ್ಳಿಯ ಸೈಬರ್ ಸೆಂಟರ್ ಮಾಲೀಕನಿಗೆ ಪಂಗನಾಮ ಹಾಕಿದ್ದಾರೆ. ಸ್ಕ್ಯಾನರ್ ವರ್ಕ್ ಆಗ್ತಿಲ್ಲ, ಮೊಬೈಲ್ ನಂಬರ್​ಗೆ ಹಾಕ್ತೀನಿ ಎಂದು ನಾಟಕ‌ವಾಡಿ ಫೇಕ್ ಆ್ಯಪ್ ಮುಖಾಂತರ ಪೇಮೆಂಟ್ ಸಕ್ಸಸ್ ಎನ್ನುವ ಸ್ಕ್ರೀನ್ ಶಾಟ್ ತೋರಿಸಿ ಮೋಸ ಮಾಡಿದ್ದಾನೆ.

ಬೆಂಗಳೂರು: ಮೆಡಿಕಲ್ ಎಮರ್ಜೆನ್ಸಿ ಫೋನ್ ಪೇ ಮಾಡ್ತೀನಿ ಎಂದು ಹಣ ಪಡೆದು ಮೋಸ, ವಿಡಿಯೋ​ ಹಂಚಿಕೊಂಡ ಮಾಲೀಕ
ಮೆಡಿಕಲ್ ಎಮರ್ಜೆನ್ಸಿ ಫೋನ್ ಪೇ ಮಾಡ್ತೀನಿ ಎಂದು ಹಣ ಪಡೆದು ಮೋಸ
Follow us
| Updated By: ಆಯೇಷಾ ಬಾನು

Updated on: Aug 10, 2024 | 9:04 AM

ಬೆಂಗಳೂರು, ಆಗಸ್ಟ್.10: ಡಿಜಿಟಲ್ ಇಂಡಿಯಾ, ಡಿಜಿಟಲ್ ಇಂಡಿಯಾ (Digital India) ಎಂದು ಈಗ ಎಲ್ಲಿ ನೋಡಿದರೂ ಜನ ಫೋನ್ ಪೇ, ಗೂಗಲ್ ಪೇ ಎಂದು ಓಡಾಡ್ತಿದ್ದಾರೆ. ಪರ್ಸ್​ನಲ್ಲಿ 10 ರೂಪಾಯಿ ಕೂಡ ಇಟ್ಟುಕೊಳ್ಳುತ್ತಿಲ್ಲ. ಮಕ್ಕಳು ಕೂಡ 5ರೂಪಾಯಿ ಪೆನ್ ಖರೀದಿಸಿದರೂ ಆನ್ ಲೈನ್ ಮೂಲಕ ಹಣ ಪಾವತಿಸುತ್ತಿದ್ದರೆ. ಈ ಮಟ್ಟಿಗೆ ಈಗ ಭಾರತ ಅಭಿವೃದ್ಧಿಯಾಗ್ತಿದೆ. ಆದರೆ ಕೆಲ ಖದೀಮರು ನಮಗೆ ಮೆಡಿಕಲ್ ಎಮರ್ಜೆನ್ಸಿ ಇದೆ ಎಂದು ನಾಟಕವಾಡಿ ಅಕೌಂಟ್​ಗೆ ಹಣ ಹಾಕ್ತೀವಿ ಕ್ಯಾಶ್ ಕೊಡಿ ಅಂತ ಕೇಳಿ ಮೋಸ (Cheating) ಮಾಡುತ್ತಿದ್ದಾರೆ. ಇತ್ತೀಜೆಗೆ ಇಂತಹ ಘಟನೆಗಳು ಹೆಚ್ಚಾಗಿವೆ.

ಅಂಗಡಿಗಳನ್ನು ಇಟ್ಟಿಕೊಂಡು ವ್ಯಾಪಾರ ಮಾಡುತ್ತಿರುವವರನ್ನೇ ಟಾರ್ಗೆಟ್​ ಮಾಡಿ ಫೋನ್ ಪೇ, ಜೀ ಪೇ ಮಾಡ್ತೀವಿ ಕ್ಯಾಶ್ ಇದ್ರೆ ಕೊಡಿ ಎಂದು ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೇ ರೀತಿ ಅಂದ್ರಹಳ್ಳಿಯ ಸೈಬರ್ ಸೆಂಟರ್ ಮಾಲೀಕನಿಗೆ ಯುವಕನೋರ್ವ ಪಂಗನಾಮ ಹಾಕಿದ್ದಾನೆ. ಸ್ವಲ್ಪ ಮೆಡಿಕಲ್ ಎಮರ್ಜೆನ್ಸಿ ಇದೆ 10,000 ನಿಮ್ಮ ಅಕೌಂಟ್​ಗೆ ಹಾಕ್ತೇನೆ, ಇಲ್ಲ ಅಂದರೆ 5,000 ಆದ್ರೂ ಕೊಡಿ ಮೆಡಿಕಲ್ ಎಮರ್ಜೆನ್ಸಿ ಅಂತ ಬಣ್ಣದ ಮಾತುಗಳನ್ನು ಆಡಿದ ಯುವಕ ಸ್ಕ್ಯಾನರ್​ ಅನ್ನು ಸ್ಕ್ಯಾನ್ ಮಾಡಿ ಬಳಿಕ ನೆಟ್ ಆಫ್ ಮಾಡಿದ್ದಾನೆ. ನಂತರ ಸ್ಕ್ಯಾನರ್ ವರ್ಕ್ ಆಗ್ತಿಲ್ಲ, ಮೊಬೈಲ್ ನಂಬರ್​ಗೆ ಹಾಕ್ತೀನಿ ಎಂಬ ನಾಟಕ‌ವಾಡಿದ್ದಾನೆ. ಫೇಕ್ ಆ್ಯಪ್ ಮುಖಾಂತರ ಪೇಮೆಂಟ್ ಸಕ್ಸಸ್ ಎನ್ನುವ ಸ್ಕ್ರೀನ್ ಶಾಟ್ ತೋರಿಸಿ ಮೋಸ ಮಾಡಿದ್ದಾನೆ.

ಇದನ್ನೂ ಓದಿ: ಲವ್,ಸೆಕ್ಸ್,ದೋಖಾ: ಗಂಡ ಬಿಟ್ಟಿದ್ದ ಮಹಿಳೆಗೆ ಬಾಳು ಕೊಡ್ತೀನಿ ಎಂದು ಕಾರು ಚಾಲಕನಿಂದ ಮೋಸ

ಹಣ ಪಡೆದು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾನೆ. ಮಾಲೀಕ ಮೊಬೈಲ್ ಚೆಕ್ ಮಾಡಿದಾಗ ಖಾತೆಗೆ ಹಣನೇ ಬಂದಿಲ್ಲ. ವಂಚನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮಾಲೀಕ ಈ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿ ಅಳಲು ತೋಡಿಕೊಂಡಿದ್ದಾರೆ. ಯಾರೂ ಈ‌ ರೀತಿ ಮೋಸ‌ ಹೋಗಬೇಡಿ, ಈ ರೀತಿ ಬಂದರೆ ಪೊಲೀಸರಿಗೆ‌ ತಿಳಿಸಿ ಅಂತ ಮನವಿ ಮಾಡಿದ್ದಾರೆ. ಅಂದ್ರಹಳ್ಳಿ, ತಿಗಳರಪಾಳ್ಯ, ಡಿ ಗ್ರೂಪ್ ಸುತ್ತಮುತ್ತ ಅಂಗಡಿಗಳಿಗೆ ಯುವಕ ಮೋಸ ಮಾಡಿದ್ದಾನೆ ಎಂದು ಪೋಸ್ಟ್​ನಲ್ಲಿ ಬರೆದುಕೊಳ್ಳಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​