AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮೆಡಿಕಲ್ ಎಮರ್ಜೆನ್ಸಿ ಫೋನ್ ಪೇ ಮಾಡ್ತೀನಿ ಎಂದು ಹಣ ಪಡೆದು ಮೋಸ, ವಿಡಿಯೋ​ ಹಂಚಿಕೊಂಡ ಮಾಲೀಕ

ಮೆಡಿಕಲ್ ಎಮರ್ಜೆನ್ಸಿ ಇದೆ ಹಣ ಬೇಕು ನಾವು ನಿಮಗೆ ಫೋನ್ ಪೇ ಮಾಡ್ತೀವಿ ಎಂದು ಬಂದ ವ್ಯಕ್ತಿಗಳು ಅಂದ್ರಹಳ್ಳಿಯ ಸೈಬರ್ ಸೆಂಟರ್ ಮಾಲೀಕನಿಗೆ ಪಂಗನಾಮ ಹಾಕಿದ್ದಾರೆ. ಸ್ಕ್ಯಾನರ್ ವರ್ಕ್ ಆಗ್ತಿಲ್ಲ, ಮೊಬೈಲ್ ನಂಬರ್​ಗೆ ಹಾಕ್ತೀನಿ ಎಂದು ನಾಟಕ‌ವಾಡಿ ಫೇಕ್ ಆ್ಯಪ್ ಮುಖಾಂತರ ಪೇಮೆಂಟ್ ಸಕ್ಸಸ್ ಎನ್ನುವ ಸ್ಕ್ರೀನ್ ಶಾಟ್ ತೋರಿಸಿ ಮೋಸ ಮಾಡಿದ್ದಾನೆ.

ಬೆಂಗಳೂರು: ಮೆಡಿಕಲ್ ಎಮರ್ಜೆನ್ಸಿ ಫೋನ್ ಪೇ ಮಾಡ್ತೀನಿ ಎಂದು ಹಣ ಪಡೆದು ಮೋಸ, ವಿಡಿಯೋ​ ಹಂಚಿಕೊಂಡ ಮಾಲೀಕ
ಮೆಡಿಕಲ್ ಎಮರ್ಜೆನ್ಸಿ ಫೋನ್ ಪೇ ಮಾಡ್ತೀನಿ ಎಂದು ಹಣ ಪಡೆದು ಮೋಸ
ರಾಚಪ್ಪಾಜಿ ನಾಯ್ಕ್
| Edited By: ಆಯೇಷಾ ಬಾನು|

Updated on: Aug 10, 2024 | 9:04 AM

Share

ಬೆಂಗಳೂರು, ಆಗಸ್ಟ್.10: ಡಿಜಿಟಲ್ ಇಂಡಿಯಾ, ಡಿಜಿಟಲ್ ಇಂಡಿಯಾ (Digital India) ಎಂದು ಈಗ ಎಲ್ಲಿ ನೋಡಿದರೂ ಜನ ಫೋನ್ ಪೇ, ಗೂಗಲ್ ಪೇ ಎಂದು ಓಡಾಡ್ತಿದ್ದಾರೆ. ಪರ್ಸ್​ನಲ್ಲಿ 10 ರೂಪಾಯಿ ಕೂಡ ಇಟ್ಟುಕೊಳ್ಳುತ್ತಿಲ್ಲ. ಮಕ್ಕಳು ಕೂಡ 5ರೂಪಾಯಿ ಪೆನ್ ಖರೀದಿಸಿದರೂ ಆನ್ ಲೈನ್ ಮೂಲಕ ಹಣ ಪಾವತಿಸುತ್ತಿದ್ದರೆ. ಈ ಮಟ್ಟಿಗೆ ಈಗ ಭಾರತ ಅಭಿವೃದ್ಧಿಯಾಗ್ತಿದೆ. ಆದರೆ ಕೆಲ ಖದೀಮರು ನಮಗೆ ಮೆಡಿಕಲ್ ಎಮರ್ಜೆನ್ಸಿ ಇದೆ ಎಂದು ನಾಟಕವಾಡಿ ಅಕೌಂಟ್​ಗೆ ಹಣ ಹಾಕ್ತೀವಿ ಕ್ಯಾಶ್ ಕೊಡಿ ಅಂತ ಕೇಳಿ ಮೋಸ (Cheating) ಮಾಡುತ್ತಿದ್ದಾರೆ. ಇತ್ತೀಜೆಗೆ ಇಂತಹ ಘಟನೆಗಳು ಹೆಚ್ಚಾಗಿವೆ.

ಅಂಗಡಿಗಳನ್ನು ಇಟ್ಟಿಕೊಂಡು ವ್ಯಾಪಾರ ಮಾಡುತ್ತಿರುವವರನ್ನೇ ಟಾರ್ಗೆಟ್​ ಮಾಡಿ ಫೋನ್ ಪೇ, ಜೀ ಪೇ ಮಾಡ್ತೀವಿ ಕ್ಯಾಶ್ ಇದ್ರೆ ಕೊಡಿ ಎಂದು ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೇ ರೀತಿ ಅಂದ್ರಹಳ್ಳಿಯ ಸೈಬರ್ ಸೆಂಟರ್ ಮಾಲೀಕನಿಗೆ ಯುವಕನೋರ್ವ ಪಂಗನಾಮ ಹಾಕಿದ್ದಾನೆ. ಸ್ವಲ್ಪ ಮೆಡಿಕಲ್ ಎಮರ್ಜೆನ್ಸಿ ಇದೆ 10,000 ನಿಮ್ಮ ಅಕೌಂಟ್​ಗೆ ಹಾಕ್ತೇನೆ, ಇಲ್ಲ ಅಂದರೆ 5,000 ಆದ್ರೂ ಕೊಡಿ ಮೆಡಿಕಲ್ ಎಮರ್ಜೆನ್ಸಿ ಅಂತ ಬಣ್ಣದ ಮಾತುಗಳನ್ನು ಆಡಿದ ಯುವಕ ಸ್ಕ್ಯಾನರ್​ ಅನ್ನು ಸ್ಕ್ಯಾನ್ ಮಾಡಿ ಬಳಿಕ ನೆಟ್ ಆಫ್ ಮಾಡಿದ್ದಾನೆ. ನಂತರ ಸ್ಕ್ಯಾನರ್ ವರ್ಕ್ ಆಗ್ತಿಲ್ಲ, ಮೊಬೈಲ್ ನಂಬರ್​ಗೆ ಹಾಕ್ತೀನಿ ಎಂಬ ನಾಟಕ‌ವಾಡಿದ್ದಾನೆ. ಫೇಕ್ ಆ್ಯಪ್ ಮುಖಾಂತರ ಪೇಮೆಂಟ್ ಸಕ್ಸಸ್ ಎನ್ನುವ ಸ್ಕ್ರೀನ್ ಶಾಟ್ ತೋರಿಸಿ ಮೋಸ ಮಾಡಿದ್ದಾನೆ.

ಇದನ್ನೂ ಓದಿ: ಲವ್,ಸೆಕ್ಸ್,ದೋಖಾ: ಗಂಡ ಬಿಟ್ಟಿದ್ದ ಮಹಿಳೆಗೆ ಬಾಳು ಕೊಡ್ತೀನಿ ಎಂದು ಕಾರು ಚಾಲಕನಿಂದ ಮೋಸ

ಹಣ ಪಡೆದು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾನೆ. ಮಾಲೀಕ ಮೊಬೈಲ್ ಚೆಕ್ ಮಾಡಿದಾಗ ಖಾತೆಗೆ ಹಣನೇ ಬಂದಿಲ್ಲ. ವಂಚನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮಾಲೀಕ ಈ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿ ಅಳಲು ತೋಡಿಕೊಂಡಿದ್ದಾರೆ. ಯಾರೂ ಈ‌ ರೀತಿ ಮೋಸ‌ ಹೋಗಬೇಡಿ, ಈ ರೀತಿ ಬಂದರೆ ಪೊಲೀಸರಿಗೆ‌ ತಿಳಿಸಿ ಅಂತ ಮನವಿ ಮಾಡಿದ್ದಾರೆ. ಅಂದ್ರಹಳ್ಳಿ, ತಿಗಳರಪಾಳ್ಯ, ಡಿ ಗ್ರೂಪ್ ಸುತ್ತಮುತ್ತ ಅಂಗಡಿಗಳಿಗೆ ಯುವಕ ಮೋಸ ಮಾಡಿದ್ದಾನೆ ಎಂದು ಪೋಸ್ಟ್​ನಲ್ಲಿ ಬರೆದುಕೊಳ್ಳಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು