AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್; ಸುಮಾ-ರೇಖಾಳ ಮತ್ತೊಂದು ಆಡಿಯೋ ವೈರಲ್, ಅಬಾರ್ಷನ್ ಬಗ್ಗೆ ಮಾತು

ಎರಡು ಬಾರಿ ಅಬಾರ್ಷನ್ ಮಾಡಿಕೊಂಡಿರೋದಾಗಿ ಆಡಿಯೋದಲ್ಲಿ ರೇಖಾ ಹೇಳಿದ್ದಾರೆ. ತಾಯಿಯಾಗಿರೋ ವಿಚಾರ ಅನಂತುಗೆ ಹೇಳಿದ್ಯಾ ಇಲ್ವಾ ಅಂತಾ ರೇಖಾಗೆ ಸುಮಾ ಕೇಳಿದ್ದಾಳೆ. ವಾಟ್ಸ್ ಅಪ್ನಲ್ಲಿ ಅನಂತುಗೆ ಹೇಳಿದ್ದೆ ಅಂತಾ ರೇಖಾ ಕಣ್ಣೀರಾಕಿದ್ದಾರೆ.

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್; ಸುಮಾ-ರೇಖಾಳ ಮತ್ತೊಂದು ಆಡಿಯೋ ವೈರಲ್, ಅಬಾರ್ಷನ್ ಬಗ್ಗೆ ಮಾತು
ಬಿಜೆಪಿ ಮುಖಂಡ ಅನಂತರಾಜು ದಂಪತಿ
TV9 Web
| Edited By: ಆಯೇಷಾ ಬಾನು|

Updated on:Jun 02, 2022 | 7:54 AM

Share

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ದಿನಕ್ಕೊಂದು‌ ತಿರುವು ಪಡೆದುಕೊಳ್ತಿದೆ. ಸುಮಾ-ರೇಖಾ ಮಾತುಕತೆಯ ಆಡಿಯೋಗಳು ಒಂದೊಂದೇ ಹೊರ ಬರ್ತಿವೆ. ಜಗಳ ಆಡಿದ್ದ ಆಡಿಯೋ ಆಯ್ತು ಈಗ ಅಬಾರ್ಷನ್ ಬಗ್ಗೆ ಮಾತನಾಡಿರೋ ಆಡಿಯೋ ಕೂಡ ವೈರಲ್ ಆಗಿದೆ. ರೇಖಾ ತಾಯಿಯಾಗಿರೋದ್ರ ಬಗ್ಗೆ ಸುಮಾ-ರೇಖಾ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸದ್ಯ ವೈರಲ್ ಆಗುತ್ತಿದೆ.

ಆಡಿಯೋದಲ್ಲೇನಿದೆ? ಎರಡು ಬಾರಿ ಅಬಾರ್ಷನ್ ಮಾಡಿಕೊಂಡಿರೋದಾಗಿ ಆಡಿಯೋದಲ್ಲಿ ರೇಖಾ ಹೇಳಿದ್ದಾರೆ. ತಾಯಿಯಾಗಿರೋ ವಿಚಾರ ಅನಂತುಗೆ ಹೇಳಿದ್ಯಾ ಇಲ್ವಾ ಅಂತಾ ರೇಖಾಗೆ ಸುಮಾ ಕೇಳಿದ್ದಾಳೆ. ವಾಟ್ಸ್ ಅಪ್ನಲ್ಲಿ ಅನಂತುಗೆ ಹೇಳಿದ್ದೆ ಅಂತಾ ರೇಖಾ ಕಣ್ಣೀರಾಕಿದ್ದಾರೆ. ತಾಯಿಯಾಗಿರೋದ್ರ ಬಗ್ಗೆ ಅನಂತುಗೆ ಹೇಳಿದ್ದೆ. ಎರಡು ಸರಿ ಅಬಾರ್ಷನ್ ಮಾಡಿಸಿದೀನಿ ಎಂದು ರೇಖಾ ಆಡಿಯೋದಲ್ಲಿ ಸುಮಾಗೆ ತಿಳಿಸಿದ್ದಾಳೆ. ಅಬಾರ್ಷನ್ ಅದ ಮೇಲೆ ಅನಂತು ‘ಹೇಗಿದಿರಾ ರೆಸ್ಟ್ ಮಾಡಿ’ ಅಂದಿದ್ರು ಎಂದಿದ್ದಾರೆ. ಈ ವೇಳೆ ನಮಗೂ ಒಂದು ಗಂಡು ಮಗು ಬೇಕು ಅಂತಾ ಅನಂತು ಹೇಳಿದ್ರಾ ಎಂದು ಸುಮಾ ಕೇಳಿದ್ದಾರೆ. ನಮಗೂ ಒಂದು ಮಗು ಇದ್ರೆ ನಮ್ಮ ಸಂಬಂಧ ಗಟ್ಟಿ ಇರುತ್ತೆ ಅಂತಾ ನೀನು ಹೇಳಿದ್ಯಂತೆ. ನಾನು ರೇಖಾ ಹಾಗೆ ಮಾತಾಡಿದ್ವಿ ಅಂತಾ ಅನಂತ್ ನನ್ನ ಬಳಿ ಹೇಳಿದ್ದ ಎಂದು ಸುಮಾ ರೇಖಾಗೆ ತಿಳಿಸಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮೂಲಕ ಮರಣಿಸಿದ ಬಿಜೆಪಿ ನಾಯಕ ಅನಂತರಾಜು ಸ್ನೇಹಿತೆ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನನಗೆ ಈಗಾಗಲೇ ಎರಡು ಮಗು ಇದೆ. ಮತ್ತೊಂದು ಮಗು ಇದ್ರೆ ಸಾಕೋಕೆ ಕಷ್ಟ ಆಗುತ್ತೆ. ನಾಳೆ‌ ವಿನೋದ್ ಗೆ ಗೊತ್ತಾದ್ರೆ ತೊಂದರೆಯಾಗುತ್ತೆ ಎಂದಿದ್ರು. ನನ್ನನ್ನ ನಂಬೋದಾದ್ರೆ ಮಗು ತೆಗೆಸು ಎಂದಿದ್ರು. ಹೀಗಾಗಿ ಮಗು ಅಬಾರ್ಷನ್ ಮಾಡಿಸಿದ್ದೆ. ಎರಡು ಬಾರಿ ಅಬಾರ್ಷನ್ ಮಾಡಿಸಿದ್ದು ಅನಂತುಗೆ ಗೊತ್ತಿತ್ತು ಅಂತಾ ಸುಮಾಗೆ ರೇಖಾ ವಿವರಿಸಿದ್ದಾಳೆ. ನಿನಗೆ ಮಗುನಾ ಇಟ್ಕೋ ಬೇಕು ಅಂತಾ ಆಸೆ ಇತ್ತಾ ಎಂದು ರೇಖಾಗೆ ಸುಮಾ ಕೇಳಿದ್ದಾಳೆ. ಅದ್ರೆ ನನಗೆ ಈ ಮಗುನಾ ಇಟ್ಕೋ ಬೇಕು ಅನ್ನೋ ಆಸೆ ಇತ್ತು ಎಂದು ರೇಖಾ ಪ್ರತಿಕ್ರಿಯಿಸಿದ್ದು ಸದ್ಯ ರೇಖಾ ಮತ್ತು ಸುಮಾ‌ ಮಾತನಾಡಿರೋ ಆಡಿಯೋ ವೈರಲ್ ಆಗಿದೆ. ಇದನ್ನೂ ಓದಿ: KK’s Death: ಕೆಕೆ ನಿಧನಕ್ಕೆ ಪ್ರಾಥಮಿಕ ವೈದ್ಯಕೀಯ ವರದಿಯಲ್ಲಿ ಕಾರಣ ಬಹಿರಂಗ; ಇಂದು ಮುಂಬೈನಲ್ಲಿ ಖ್ಯಾತ ಗಾಯಕನ ಅಂತ್ಯಕ್ರಿಯೆ

Published On - 7:54 am, Thu, 2 June 22

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ