AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನೇಹಕ್ಕೂ ಬಂತು ಎಕ್ಸೆಲ್ ಲೆಕ್ಕಾಚಾರ: 6 ವರ್ಷಗಳ ‘ಫ್ರೆಂಡ್‌ಶಿಪ್ ROI’ ಹಂಚಿಕೊಂಡ ಬೆಂಗಳೂರಿನ ಟೆಕ್ಕಿ

ಬೆಂಗಳೂರಿನ ಪಂಕಜ್ ಎಂಬುವವರು ತಮ್ಮ ಸ್ನೇಹಿತರ ಜೊತೆಗಿನ ಒಡನಾಟವನ್ನು ಎಕ್ಸೆಲ್ ಶೀಟ್‌ನಲ್ಲಿ ದಾಖಲಿಸಿ, 'ಸ್ನೇಹದ ROI' ಲೆಕ್ಕಾಚಾರ ಹಾಕಿರುವುದು ಚರ್ಚೆಗೆ ಕಾರಣವಾಗಿದೆ. 'ಝಿಯಾ' ಎಂಬ ವೈಯಕ್ತಿಕ CRM ಮೂಲಕ ಸ್ನೇಹ ಸಂಬಂಧಗಳ ಭಾವನೆಗಳನ್ನು ದಾಖಲಿಸುವ ಇವರು, ಒಂದು ಸ್ನೇಹವನ್ನು ಉಳಿಸಿಕೊಳ್ಳಲು ವರ್ಷಕ್ಕೆ 45-65 ಗಂಟೆ ಬೇಕೆನ್ನುತ್ತಾರೆ. 25 ವರ್ಷದ ನಂತರ ಹೊಸ ಸ್ನೇಹ ವಿಫಲವಾಗುವ ಸಾಧ್ಯತೆ ಹೆಚ್ಚು. ಈ ಡೇಟಾ ಆಧಾರಿತ ಸ್ನೇಹ ನಿರ್ವಹಣೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಸ್ನೇಹಕ್ಕೂ ಬಂತು ಎಕ್ಸೆಲ್ ಲೆಕ್ಕಾಚಾರ: 6 ವರ್ಷಗಳ 'ಫ್ರೆಂಡ್‌ಶಿಪ್ ROI' ಹಂಚಿಕೊಂಡ ಬೆಂಗಳೂರಿನ ಟೆಕ್ಕಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Feb 18, 2026 | 3:16 PM

Share

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲವೂ ಡೇಟಾ ಮಯ. ಈಗ ಆ ಪಟ್ಟಿಗೆ ಸ್ನೇಹವೂ ಸೇರ್ಪಡೆಯಾಗಿದೆ. ಬೆಂಗಳೂರಿನ ಪಂಕಜ್ ಎಂಬ ವೃತ್ತಿಪರರೊಬ್ಬರು ಕಳೆದ 6 ವರ್ಷಗಳಿಂದ ತಮ್ಮ ಪ್ರತಿಯೊಬ್ಬ ಸ್ನೇಹಿತರ ಜೊತೆಗಿನ ಒಡನಾಟವನ್ನು ಎಕ್ಸೆಲ್ ಶೀಟ್‌ನಲ್ಲಿ ದಾಖಲಿಸಿ, ಸ್ನೇಹದ ROI (Return on Investment) ಲೆಕ್ಕಾಚಾರ ಹಾಕಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಪಂಕಜ್ ಅವರು ‘ಝಿಯಾ’ ಎಂಬ ವೈಯಕ್ತಿಕ CRM (Customer Relationship Management) ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಸ್ನೇಹಿತರ ಜೊತೆಗಿನ ಮಾತುಕತೆಯ ಸಂದರ್ಭ, ಮಾದರಿ ಮತ್ತು ಆ ಮಾತುಕತೆಯ ನಂತರ ತಮಗೆ ಹೇಗನಿಸಿತು ಎಂಬ ಭಾವನೆಯನ್ನು ಡೇಟಾ ರೂಪದಲ್ಲಿ ಸಂಗ್ರಹಿಸುತ್ತದೆ. ಯಾರಾದರೂ ದೀರ್ಘಕಾಲ ನೆಗೆಟಿವ್ ROI ನೀಡಿದರೆ, ನಾನು ಅವರ ಜೊತೆಗಿನ ಸಂಬಂಧ ಕಳೆದುಕೊಳ್ಳಬಹುದೇ ಎಂಬ ಸಲಹೆಯನ್ನು ಕೂಡ ನೀಡುತ್ತದೆ.

ಒಂದು ಹೊಸ ಆಪ್ತ ಸ್ನೇಹವನ್ನು ಬೆಳೆಸಲು ಎಷ್ಟು ಗಂಟೆಗಳ ಕಾಲ ಹೂಡಿಕೆ ಮಾಡಬೇಕು ಎಂಬುದಕ್ಕೆ ಪಂಕಜ್ ಅವರು ನೀಡಿರುವ ಲೆಕ್ಕಾಚಾರ ಹೀಗಿದೆ:

ಹಂತ ಬೇಕಾಗುವ ಸಮಯ ಕಾಲಮಿತಿ
ಪರಿಚಯದಿಂದ ಸಂಭಾಷಣೆಗೆ 8 – 12 ಗಂಟೆಗಳು
ನಂಬಿಕೆ ಬೆಳೆಯಲು 45 – 60 ಗಂಟೆಗಳು 3 – 6 ತಿಂಗಳು
ಭಾವನಾತ್ಮಕ ಆಪ್ತತೆಗೆ 80 – 120 ಗಂಟೆಗಳು 12 – 18 ತಿಂಗಳು
ಒಟ್ಟು ಸಮಯ ಹೂಡಿಕೆ 128 – 192 ಗಂಟೆಗಳು ಒಂದು ವರ್ಷಕ್ಕೂ ಹೆಚ್ಚು

ಒಂದು ಸ್ನೇಹವನ್ನು ಉಳಿಸಿಕೊಳ್ಳಲು ವರ್ಷಕ್ಕೆ ಸುಮಾರು 45 ರಿಂದ 65 ಗಂಟೆಗಳ ಸಮಯ ಬೇಕು. 25 ವರ್ಷ ವಯಸ್ಸಿನ ನಂತರ ಹೊಸಬರ ಜೊತೆ ಮಾಡುವ ಸ್ನೇಹವು ವಿಫಲವಾಗುವ ಸಾಧ್ಯತೆ ಶೇ.73 ರಷ್ಟಿರುತ್ತದೆ. ಒಬ್ಬ ಮನುಷ್ಯ ಗರಿಷ್ಠವಾಗಿ 5-8 ಆಪ್ತ ಗೆಳೆಯರನ್ನು ಮತ್ತು 10-12 ಅರ್ಥಪೂರ್ಣ ಗೆಳೆಯರನ್ನು ಮಾತ್ರ ಹೊಂದಲು ಸಾಧ್ಯ. ಹೊಸಬರನ್ನು ಸೇರಿಸಿಕೊಂಡಷ್ಟೂ ಹಳೆಯ ಗೆಳೆಯರ ಜೊತೆಗಿನ ಸಂಬಂಧದ ಗಾಢತೆ ಕಡಿಮೆಯಾಗುತ್ತದೆ.

“23 ವರ್ಷ ವಯಸ್ಸಿನ ನಂತರ ನನ್ನ ಸ್ನೇಹದ ಪಟ್ಟಿ (Roster) ಬಹುತೇಕ ಕ್ಲೋಸ್ ಆಗಿದೆ. ಹೊಸಬರಿಗೆ ನನ್ನ ಉತ್ತರ ‘ಇಲ್ಲ’ ಎಂದೇ ಇರುತ್ತದೆ. ಯಾರಾದರೂ ಅತಿ ವಿಶಿಷ್ಟ ವ್ಯಕ್ತಿಯಾಗಿದ್ದರೆ ಮಾತ್ರ ಅವರಿಗೆ ನನ್ನ ಜೀವನದಲ್ಲಿ ಅವಕಾಶ ನೀಡುತ್ತೇನೆ. ಇರುವ ಆಪ್ತ ಗೆಳೆಯರ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಲು ನಾನು ವರ್ಷಕ್ಕೆ 400 ಗಂಟೆಗಳನ್ನು ಮೀಸಲಿಡುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಡಲ್ ಥೆರಪಿ ಟ್ರೆಂಡ್: ಇಲ್ಲಿ ಅಪ್ಪಿಕೊಳ್ಳುತ್ತಾರೆ, ಕೈ ಹಿಡಿಯುತ್ತಾರೆ, ಗಂಟೆಗೆ 5,000 ರೂ.

ಸಾಮಾಜಿಕ ಜಾಲತಾಣದಲ್ಲಿ ಕಿಡಿ:

ಜೀವನ ಮತ್ತು ಸ್ನೇಹವನ್ನು ಹೀಗೆ ವ್ಯವಹಾರದ ದೃಷ್ಟಿಯಲ್ಲಿ ನೋಡುವುದು ಒಂದು ರೀತಿಯ ‘ಡಿಸ್ಟೋಪಿಯನ್’. ಸ್ನೇಹ ಎಂಬುದು ಖುಷಿಗಾಗಿ ಇರಬೇಕೇ ಹೊರತು ROI ಗಾಗಿ ಅಲ್ಲ” ಎಂದು ಒಬ್ಬರು ಕಿಡಿಕಾರಿದ್ದಾರೆ. ನಾನು ಜೀವನ ಸಂಗಾತಿಗಳನ್ನು ಹುಡುಕುತ್ತಿರುವಾಗ ಇದೇ ರೀತಿಯದ್ದನ್ನು ಮಾಡಿದ್ದೇನೆ! ಇದೊಂದು ಮೋಜಿನ ವಿಚಾರ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ