AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಕಾರು ಕೊಳ್ಳುವವರಿಗೆ ಬೆಲೆ ಏರಿಕೆ ಶಾಕ್: ಹುಂಡೈ, ಟಾಟಾ ದರ ಹೆಚ್ಚಳ!

ಕಚ್ಚಾ ವಸ್ತುಗಳ ವೆಚ್ಚ ಹಾಗೂ ಸರಕು ಸಾಗಣೆ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಹುಂಡೈ, ಟಾಟಾ ಮೋಟಾರ್ಸ್ ಹಾಗೂ ಎಂಜಿ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಏರಿಕೆ ಮಾಡಿವೆ. ಸೆಪ್ಟೆಂಬರ್ 1 ರಿಂದ ಕ್ರೆಟಾ, ವೆನ್ಯೂ, ನೆಕ್ಸಾನ್, ಹ್ಯಾರಿಯರ್ ಸೇರಿದಂತೆ ಪ್ರಮುಖ ಮಾಡೆಲ್‌ಗಳ ದರ 15 ಸಾವಿರದಿಂದ 70 ಸಾವಿರ ರೂಪಾಯಿವರೆಗೆ ಹೆಚ್ಚಾಗಲಿದ್ದು, ಕಾರು ಕೊಳ್ಳುವ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್ ಎದುರಾಗಿದೆ.

ಹೊಸ ಕಾರು ಕೊಳ್ಳುವವರಿಗೆ ಬೆಲೆ ಏರಿಕೆ ಶಾಕ್: ಹುಂಡೈ, ಟಾಟಾ ದರ ಹೆಚ್ಚಳ!
ಕಾರ್ ದರ ಹೆಚ್ಚಳImage Credit source: mint
ಕಿರಣ್​ ಸೂರ್ಯ
| Edited By: |

Updated on: Sep 02, 2026 | 7:21 AM

Share

ಮುಖ್ಯಾಂಶಗಳು

  • ಸೆಪ್ಟೆಂಬರ್ 1 ರಿಂದ ಹುಂಡೈ, ಟಾಟಾ ಕಾರುಗಳ ಬೆಲೆ ಏರಿಕೆ.
  • ಮಾಡೆಲ್‌ಗಳಿಗೆ ಅನುಗುಣವಾಗಿ ಕಾರುಗಳ ದರ 70 ಸಾವಿರದವರೆಗೆ ಹೆಚ್ಚಳ.
  • ಕಚ್ಚಾ ವಸ್ತುಗಳ ವೆಚ್ಚ ಹೆಚ್ಚಿದ್ದರಿಂದ ಬೆಲೆ ಏರಿಸಿದ ಆಟೋಮೊಬೈಲ್ ಕಂಪನಿಗಳು.

ಬೆಂಗಳೂರು, ಸೆಪ್ಟೆಂಬರ್ 02: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ಕಾರು ಕಂಪನಿಗಳು ಮತ್ತೊಂದು ಶಾಕ್ ನೀಡಿವೆ. ಕಚ್ಚಾ ವಸ್ತುಗಳ ವೆಚ್ಚ ಹಾಗೂ ಸರಕು ಸಾಗಣೆ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಹುಂಡೈ , ಟಾಟಾ, ಎಂಜಿ ಸೇರಿದಂತೆ ಹಲವು ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು ತಮ್ಮ ಕಾರುಗಳ ಬೆಲೆಯನ್ನು ಏರಿಕೆ ಮಾಡಿವೆ.

ಗರಿಷ್ಠ 70 ಸಾವಿರ ರೂ.ವರೆಗೂ ಬೆಲೆ ಏರಿಕೆ

ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಈಗಾಗಲೇ ದರ ಹೆಚ್ಚಳ ಮಾಡಿದ್ದು, ಇದೀಗ ಹುಂಡೈ ಮೋಟಾರ್ಸ್ ತನ್ನ ಎಲ್ಲಾ ಮಾಡೆಲ್‌ಗಳ ಕಾರುಗಳ ಬೆಲೆಯಲ್ಲಿ ಶೇಕಡಾ 1 ರವರೆಗೆ ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಈ ದರ ಏರಿಕೆಯು ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿ ಮಾದರಿಗಳಾದ ಕ್ರೆಟಾ, ವೆನ್ಯೂ, ವರ್ಣಾ, ಅಲ್ಕಾಜರ್, ಎಕ್ಸ್‌ಟರ್, ಐ20 ಮತ್ತು ಗ್ರಾಂಡ್ ಐ10 ನಿಯೋಸ್ ಕಾರುಗಳಿಗೆ ಅನ್ವಯವಾಗಲಿದೆ. ಮಾಡೆಲ್‌ಗೆ ಅನುಗುಣವಾಗಿ ಕನಿಷ್ಠ 15,000 ರೂ. ರಿಂದ 70,000 ರೂ. ವರೆಗೆ ಬೆಲೆ ಏರಿಕೆಯಾಗಲಿದೆ.

ಟಾಟಾ ವಾಹನಗಳ ದರವೂ ಹೆಚ್ಚಳ

ಇತ್ತ ಟಾಟಾ ಮೋಟಾರ್ಸ್ ತನ್ನ ಪ್ಯಾಸೆಂಜರ್ ವಾಹನಗಳ ಬೆಲೆಯನ್ನು ಗರಿಷ್ಠ 25,000 ರೂ. ವರೆಗೆ ಹೆಚ್ಚಿಸುತ್ತಿದ್ದು, ನೆಕ್ಸಾನ್, ಪಂಚ್, ಹ್ಯಾರಿಯರ್, ಕರ್ವ್ ಇವಿ ಮತ್ತು ಟಿಯಾಗೋ ಕಾರುಗಳ ದರ ಏರಲಿದೆ. ಹಾಗೆಯೇ ಎಂಜಿ (MG) ಕಂಪನಿಯ ಕಾರುಗಳ ಮೇಲೆ 40,000 ರೂ.ನಿಂದ 50,000 ರೂ.ವರೆಗೆ ದರ ಹೆಚ್ಚಳವಾಗಲಿದೆ ಎಂದು ಶೋರೂಮ್ ಮೂಲಗಳು ತಿಳಿಸಿವೆ.

“ಜಾಗತಿಕ ಮಟ್ಟದ ಯುದ್ಧದ ಎಫೆಕ್ಟ್ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಾರುಗಳ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ” ಎಂದು ಸೇಲ್ಸ್ ಎಕ್ಸಿಕ್ಯುಟಿವ್‌ಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ದಿಢೀರ್ ದರ ಏರಿಕೆಯಿಂದಾಗಿ ಹೊಸ ಕಾರು ಖರೀದಿಸುವ ಯೋಜನೆಯಲ್ಲಿದ್ದ ಗ್ರಾಹಕರು ತೀವ್ರ ನಿರಾಶೆಗೊಂಡಿದ್ದು, ಸದ್ಯಕ್ಕೆ ಕಾರು ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ