Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಣ್ಯ ಇಲಾಖೆಯಿಂದ ವಿನೂತನ ಹೆಜ್ಜೆ: ವನ್ಯಜೀವಿ ಅಪರಾಧ ತಡೆಯಲು ಡಿಜಿಟಲ್ ಅಸ್ತ್ರ

ಇಲಾಖೆಯ ಅಧಿಕಾರಿಗಳ ಪ್ರಕಾರ, ಪ್ರಸ್ತುತ, ವನ್ಯಜೀವಿ ಅಪರಾಧಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯು ಸಂಘಟಿತ ರೂಪದಲ್ಲಿ ಲಭ್ಯವಿಲ್ಲ ಮತ್ತು ಇಲಾಖೆಗೆ ನೇಮಕವಾಗುವ ಹೊಸ ಅಧಿಕಾರಿಯು ಅಪರಾಧದ ಇತಿಹಾಸವನ್ನು ತಿಳಿದುಕೊಳ್ಳುವುದು ಕಷ್ಟಕರವಾಗಿದೆ. ಹಳೇ ಪ್ರಕರಣಗಳ ಕುರಿತು ಅಧ್ಯಯನ ಮಾಡಲು ಅಧಿಕಾರಿಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಇದನ್ನು ನಿವಾರಣೆ ಮಾಡಲು ಇಲಾಖೆಯು ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯುಟಿಐ) ಅಭಿವೃದ್ಧಿಪಡಿಸಿದ ಹಾಸ್ಟೈಲ್ ಆಕ್ಟಿವಿಟಿ ವಾಚ್ ಕರ್ನಲ್ (HAWK) ಸಾಫ್ಟ್‌ವೇರ್ ಅನ್ನು ಅಳವಡಿಸಿಕೊಳ್ಳುತ್ತಿದೆ.

ಅರಣ್ಯ ಇಲಾಖೆಯಿಂದ ವಿನೂತನ ಹೆಜ್ಜೆ: ವನ್ಯಜೀವಿ ಅಪರಾಧ ತಡೆಯಲು ಡಿಜಿಟಲ್ ಅಸ್ತ್ರ
ಅರಣ್ಯ ಇಲಾಖೆ
Follow us
ವಿವೇಕ ಬಿರಾದಾರ
|

Updated on: Oct 28, 2023 | 7:39 AM

ಬೆಂಗಳೂರು ಅ.28: ವನ್ಯಜೀವಿ ಅಪರಾಧ (Wildlife Offence) ಪ್ರಕರಣಗಳ ವಿರುದ್ಧ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮತ್ತು ವನ್ಯಜೀವಿ ಅಪರಾಧ ಮತ್ತು ಅರಣ್ಯ ಅಪರಾಧಗಳ ಎಲ್ಲಾ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ಅರಣ್ಯ ಇಲಾಖೆಯು (Forest Department) ಐಟಿ (IT) ಆಧಾರಿತ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಇಲಾಖೆಯ ಅಧಿಕಾರಿಗಳ ಪ್ರಕಾರ, ಪ್ರಸ್ತುತ, ವನ್ಯಜೀವಿ ಅಪರಾಧಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯು ಸಂಘಟಿತ ರೂಪದಲ್ಲಿ ಲಭ್ಯವಿಲ್ಲ ಮತ್ತು ಇಲಾಖೆಗೆ ನೇಮಕವಾಗುವ ಹೊಸ ಅಧಿಕಾರಿಯು ಅಪರಾಧದ ಇತಿಹಾಸವನ್ನು ತಿಳಿದುಕೊಳ್ಳುವುದು ಕಷ್ಟಕರವಾಗಿದೆ. ಹಳೇ ಪ್ರಕರಣಗಳ ಕುರಿತು ಅಧ್ಯಯನ ಮಾಡಲು ಅಧಿಕಾರಿಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಇದನ್ನು ನಿವಾರಣೆ ಮಾಡಲು ಇಲಾಖೆಯು ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯುಟಿಐ) ಅಭಿವೃದ್ಧಿಪಡಿಸಿದ ಹಾಸ್ಟೈಲ್ ಆಕ್ಟಿವಿಟಿ ವಾಚ್ ಕರ್ನಲ್ (HAWK) ಸಾಫ್ಟ್‌ವೇರ್ ಅನ್ನು ಅಳವಡಿಸಿಕೊಳ್ಳುತ್ತಿದೆ.

ಇಲಾಖೆಯ ಪ್ರಕಾರ, ಸಾಫ್ಟ್‌ವೇರ್ ಅರಣ್ಯ ಮತ್ತು ವನ್ಯಜೀವಿಗಳ ಪರಿಣಾಮಕಾರಿ ನಿರ್ವಹಣೆ ಮತ್ತು ಆಡಳಿತವನ್ನು ಖಚಿತಪಡಿಸುತ್ತದೆ. ಪ್ರಾಣಿಗಳ ಸಾವುಗಳನ್ನು ನಿರ್ವಹಿಸಲು ಮತ್ತು ಸ್ವಯಂಚಾಲಿತವಾಗಿ ಹುಡುಕಾಟ ವಾರಂಟ್‌ಗಳನ್ನು ನೀಡಲು ಸಾಧ್ಯವಾಗುತ್ತದೆ. ಹೆಚ್​​ಎಡಬ್ಲೂಕೆ ಎಲ್ಲ ಅರಣ್ಯ ಮತ್ತು ವನ್ಯಜೀವಿ-ಸಂಬಂಧಿತ ಪ್ರಕರಣಗಳ ಅವಲೋಕನವನ್ನು ಮಾಡುತ್ತದೆ. ದಾಖಲಾತಿ ಪ್ರಕ್ರಿಯೆಯಲ್ಲಿ ಕಾರ್ಯವಿಧಾನದ ತಪ್ಪುಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ: ಹುಲಿ‌ ಚರ್ಮದ ಮೇಲೆ ಕುಳಿತ ಬಾಬಾ ಬುಡನ್ ದರ್ಗಾದ ಶಾಖಾದ್ರಿಗೆ ಅರಣ್ಯ ಇಲಾಖೆ ನೋಟಿಸ್, ಕ್ರಮಕ್ಕೆ ಹಿಂದೂ ಸಂಘಟನೆ ಒತ್ತಾಯ

ರಾಜ್ಯ ಗಡಿಯಿಂದ ಜಾರುತ್ತಿರುವ ಕಳ್ಳ ಸಾಗಾಣಿಕೆ ಮತ್ತು ಕಳ್ಳಸಾಗಾಣಿಕೆದಾರರನ್ನು ಹಿಡಿಯುವಲ್ಲಿ ಸಹಾಯ ಮಾಡುತ್ತದೆ. ವನ್ಯಜೀವಿಗಳ ಸಾವು, ಶಂಕಿತ ಅಪರಾಧ ಚಟುವಟಿಕೆಗಳು ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಾಹನಗಳ ಚಲನವಲನದ ಮಾಹಿತಿಯ ಬಗ್ಗೆ ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

ರಾಜ್ಯದಾದ್ಯಂತ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳಿಗೆ ಸಂಬಂಧಿಸಿದ ಡೇಟಾವನ್ನು ನೈಜ ಸಮಯದಲ್ಲಿ ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ಹೆಚ್​​ಎಡ್ಲೂಕೆ ವ್ಯವಸ್ಥೆಯು ಇಲಾಖೆಗೆ ಸಹಾಯ ಮಾಡುತ್ತದೆ. ಇದು ಅಪರಾಧ ನಿರ್ವಹಣೆಯಲ್ಲಿ ಇಲಾಖೆಯ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಸುಭಾಷ್ ಕೆ ಮಾಳಖೇಡೆ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ