AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿ; ಮಾಸ್ಕ್ ಧರಿಸಿದವರ ಮುಖದ ತುಂಬಾ ಗುಳ್ಳೆಗಳು

ನೆತ್ತಿ ಸುಡುವಂತಿರುವ ಬಿಸಿಲಿನಲ್ಲಿ ಮಾಸ್ಕ್ ಧರಿಸಿ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಮಾಸ್ಕ್ ಧರಿಸಿದವರ ಮುಖದ ತುಂಬಾ ಗುಳ್ಳೆಗಳು ಪತ್ತೆಯಾಗುತ್ತಿವೆ. ಅಧಿಕ ಮಾಸ್ಕ್ ಧಾರಣೆಯಿಂದ ಮಾಸ್ಕ್ ಆಕ್ನೆ ಸೃಷ್ಟಿಯಾಗುತ್ತಿದೆ.

ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿ; ಮಾಸ್ಕ್ ಧರಿಸಿದವರ ಮುಖದ ತುಂಬಾ ಗುಳ್ಳೆಗಳು
ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿ; ಮಾಸ್ಕ್ ಧರಿಸಿದವರ ಮುಖದ ತುಂಬಾ ಗುಳ್ಳೆಗಳು
TV9 Web
| Updated By: ಆಯೇಷಾ ಬಾನು|

Updated on: Apr 07, 2022 | 11:36 AM

Share

ಬೆಂಗಳೂರು: ಮಹಾಮಾರಿ ಕೊರೊನಾದಿಂದ 2 ವರ್ಷ ಹಾಳಾಗಿದೆ. ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಕೊರೊನಾದಿಂದ ಮುಕ್ತಿಸಿಕ್ಕಂತಾಗಿದೆ. ಆದ್ರೆ ಮಾಸ್ಕ್ಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ಕೊರೊನಾ ಕಡಿಮೆಯಾದರೂ ಮಾಸ್ಕ್ ಹಾಕುವುದು ಅನಿವಾರ್ಯವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ತಲುಪಿರುವ ಬಿಸಿಲಿನಲ್ಲಿ ಮಾಸ್ಕ್ ಧರಿಸುವುದು ದೊಡ್ಡ ಕಂಟಕವೇ ಆಗಿದೆ. ಸದ್ಯ ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿಯಾಗಿದೆ.

ನೆತ್ತಿ ಸುಡುವಂತಿರುವ ಬಿಸಿಲಿನಲ್ಲಿ ಮಾಸ್ಕ್ ಧರಿಸಿ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಮಾಸ್ಕ್ ಧರಿಸಿದವರ ಮುಖದ ತುಂಬಾ ಗುಳ್ಳೆಗಳು ಪತ್ತೆಯಾಗುತ್ತಿವೆ. ಅಧಿಕ ಮಾಸ್ಕ್ ಧಾರಣೆಯಿಂದ ಮಾಸ್ಕ್ ಆಕ್ನೆ ಸೃಷ್ಟಿಯಾಗುತ್ತಿದೆ. ಹೀಗಾಗಿ ಜನರು ಚಿಕಿತ್ಸೆ ಪಡೆಯಲು ಚರ್ಮ ತಜ್ಞರ ಮೊರೆ ಹೋಗುತ್ತಿದ್ದಾರೆ. ಯುವಕ, ಯುವತಿಯರು, ಮಹಿಳೆಯರು, ಪುರುಷರು ಸೇರಿದಂತೆ ಮಕ್ಕಳಲ್ಲೂ ಈ ಸಮಸ್ಯೆ ಕಂಡು ಬರುತ್ತಿದೆ. ಮಾಸ್ಕ್ನೊಳಗೆ ಬೆವರಿನಿಂದ ಮೊಡವೆಗಳು ಮೂಡುತ್ತಿವೆ. ಹೀಗಾಗಿ ಬಟ್ಟೆ ಮಾಸ್ಕ್ ಪ್ರತಿ‌ನಿತ್ಯ ಸ್ವಚ್ಛವಾಗಿ ತೊಳೆದು ಬಳಸಲು ತಜ್ಞರು ಸಲಹೆ ನೀಡಿದ್ದಾರೆ.

ದೇಶದಲ್ಲಿ ಕೊವಿಡ್ 19 ನಿಯಂತ್ರಣ ನಿರ್ಬಂಧಗಳು ಇರೋದಿಲ್ಲ; ಏನೆಲ್ಲ ಬದಲಾವಣೆ ಆಗಲಿದೆ? ಈಗೊಂದು ಎರಡು ವರ್ಷಗಳಿಂದ ದೇಶದಲ್ಲಿ ಕೊವಿಡ್ 19 ಸಾಂಕ್ರಾಮಿಕ ಇನ್ನಿಲ್ಲದಂತೆ ಕಾಡಿದೆ. ರೋಗ ಭಯ, ಅದನ್ನು ತಡೆಯಲು ಮಾಡಿದ ಕಟ್ಟುನಿಟ್ಟಿನ ಕಾನೂನುಗಳು, ಅದನ್ನು ಮೀರಿದರೆ ದಂಡ-ಶಿಕ್ಷೆಯ ಆತಂಕ..ಹೀಗೆ ಒಂದೆರಡೇ ಅಲ್ಲ. ಮನೆಯಿಂದ ಹೊರಗೆ ಬಂದು ಯಾವುದೇ ಕೆಲಸಕ್ಕೆ ಹೋದರೂ ಕೊವಿಡ್ 19 ನಿಯಂತ್ರಣ ನಿಯಮಗಳು ನಮ್ಮನ್ನು ಹಿಂಬಾಲಿಸುತ್ತಲೇ ಇದ್ದವು. ಆದರೆ ಇಂದಿನಿಂದ ಬದಲಾವಣೆಯಾಗಿದೆ. ಕೊರೊನಾ ನಿಯಂತ್ರಣಕ್ಕೆ ಹೇರಲಾಗಿದ್ದ ಎಲ್ಲ ನಿರ್ಬಂಧಗಳನ್ನೂ ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಇನ್ನು ಮುಂದೆ ಕೊವಿಡ್ 19 ಸುರಕ್ಷತಾ ಕ್ರಮಗಳಿಗೆ ಸಂಬಂಧಪಟ್ಟಂತೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಆಗುವುದಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಗಳು, ಜಿಮ್, ರೆಸ್ಟೋರೆಂಟ್, ಪಾರ್ಕ್ಗಳು, ಸಿನಿಮಾ ಹಾಲ್ಗಳು, ಮದುವೆ ಸಮಾರಂಭ, ಅಂತ್ಯಕ್ರಿಯೆ, ಸಾರ್ವಜನಿಕ ಸಭೆ-ಸಮಾರಂಭ..ಹೀಗೆ ಯಾವುದಕ್ಕೂ ಜನಮಿತಿಯಿಲ್ಲ, ನಿರ್ಬಂಧಗಳಿಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬ ನಿಯಮಗಳು ಹಾಗೇ ಇವೆ. ದೆಹಲಿ, ಮಹಾರಾಷ್ಟ್ರಗಳು ಮಾಸ್ಕ್ ಕೂಡ ಕಡ್ಡಾಯವಾಗಿ ಇಟ್ಟಿಲ್ಲ. ಒಮ್ಮೆ ಮಾಸ್ಕ್ ಧರಿಸಿದೆ ಇದ್ದರೆ ದಂಡ ವಿಧಿಸುವುದಿಲ್ಲ ಎಂದು ಹೇಳಿವೆ.

ಮಾರ್ಚ್ನಲ್ಲಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದ್ದರು. ಏಪ್ರಿಲ್ 1ನೇ ತಾರೀಖಿನಿಂದ ದೇಶದಲ್ಲಿ ಕೊವಿಡ್ 19 ನಿಯಂತ್ರಣಾ ನಿಯಮಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಬರುವುದಿಲ್ಲ ಎಂದು ಹೇಳಿದ್ದರು. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಪತ್ತೆ ಹಚ್ಚುವಿಕೆ, ಕಣ್ಗಾವಲು, ಸಂಪರ್ಕಿತರನ್ನು ಟ್ರೇಸ್ ಮಾಡುವುದು, ಚಿಕಿತ್ಸೆ, ಲಸಿಕೆ ನೀಡಿಕೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳು, ವ್ಯವಸ್ಥೆಗಳನ್ನೂ ಹೆಚ್ಚಿಸಲಾಗಿದೆ. ಹಾಗಾಗಿ ನಿಯಮಗಳನ್ನು ಸಡಿಲಿಸಬಹುದು ಎಂದೂ ಹೇಳಿದ್ದರು.

ಇದನ್ನೂ ಓದಿ: ಮೌಂಟ್ ಎವರೆಸ್ಟ್ ಶಿಖರದಿಂದ 360 ಡಿಗ್ರಿ ನೋಟದ ಮನಮೋಹಕ ವಿಡಿಯೋ ಮೂಲಕ ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ

Petrol Diesel Price Increase: ಕಚ್ಚಾತೈಲ ದರ ಏರಿಕೆ ಹಿನ್ನೆಲೆ ಬೆಂಗಳೂರಿನ ಬಹುತೇಕ ಪೆಟ್ರೋಲ್ ಬಂಕ್​ಗಳಲ್ಲಿ ನೋ ಸ್ಟಾಕ್ ಬೋರ್ಡ್

‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ