AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಪಕ್ಷ ಬಿಜೆಪಿಯ ಸಮೀಕರಣ ಬದಲಿಸಲಿದ್ಯಾ ಸಿದ್ದರಾಮಯ್ಯ ರಾಜೀನಾಮೆ?: ಹೀಗೊಂದು ಲೆಕ್ಕಾಚಾರ

ಸಿದ್ದರಾಮಯ್ಯ ರಾಜೀನಾಮೆ ಹಾಗೂ ಡಿ.ಕೆ. ಶಿವಕುಮಾರ್ ರಾಜ್ಯದ ನೂತನ ಸಿಎಂ ಆಗಲಿರುವುದು ಬಹುತೇಕ ನಿಶ್ಚಿತವಾಗಿರುವ ಬೆನ್ನಲ್ಲೇ ವಿಪಕ್ಷ ಬಿಜೆಪಿ ಕೂಡ ತನ್ನ ರಾಜಕೀಯ ಲೆಕ್ಕಾಚಾರಗನ್ನು ಬದಲಾಯಿಸಲು ಮುಂದಾಗಿದೆ. ಜಾತಿ ಸಮೀಕರಣ ಸರಿದೂಗಿಸಲು ಕಮಲ ಪಾಳಯ ಹೊಸ ತಂತ್ರ ಹೂಡಲಿರುವ ಮುನ್ಸೂಚನೆ ಸಿಕ್ಕಿದ್ದು, ಕಮಲ ಪಡೆಯ ಆ ತೀರ್ಮಾನ ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಪಕ್ಷ ಬಿಜೆಪಿಯ ಸಮೀಕರಣ ಬದಲಿಸಲಿದ್ಯಾ ಸಿದ್ದರಾಮಯ್ಯ ರಾಜೀನಾಮೆ?: ಹೀಗೊಂದು ಲೆಕ್ಕಾಚಾರ
ವಿಪಕ್ಷ ಬಿಜೆಪಿಯ ಸಮೀಕರಣ ಬದಲಿಸಲಿದ್ಯಾ ಸಿದ್ಧರಾಮಯ್ಯ ರಾಜೀನಾಮೆ?Image Credit source: PTI
ಕಿರಣ್​ ಹನಿಯಡ್ಕ
| Edited By: |

Updated on:May 29, 2026 | 3:20 PM

Share

ಬೆಂಗಳೂರು, ಮೇ 29: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿರೋದು ರಾಜ್ಯ ರಾಜಕಾರಣದಲ್ಲಿ ಹತ್ತು ಹಲವು ಬದಲಾವಣೆಗಳಿಗೆ ನಾಂದಿ ಹಾಡಿದೆ. ನೂತನ ಮುಖ್ಯಮಂತ್ರಿಯ ಆಯ್ಕೆ, ಸಚಿವ ಸಂಪುಟ ಹೀಗೆ ನಾನಾ ಚರ್ಚೆಗಳಲ್ಲಿ ಕಾಂಗ್ರೆಸ್​​ ಹೈಕಮಾಂಡ್​​ ಇದ್ದರೆ ಇತ್ತ ಬಿಜೆಪಿ ಕೂಡ ತನ್ನದೇ ಆದ ತಂತ್ರ ಹೆಣೆಯಲು ಸಿದ್ಧತೆ ನಡೆಸಿದೆ. ಸಿದ್ದರಾಮಯ್ಯ ರಾಜೀನಾಮೆ ರಾಜ್ಯ ಬಿಜೆಪಿಯಲ್ಲಿನ ರಾಜಕೀಯ ಲೆಕ್ಕಾಚಾರ ಬದಲು ಮಾಡುವ ಸಾಧ್ಯತೆ ಇದ್ದು, ಜಾತಿ ಸಮೀಕರಣದ ಆಧಾರದಲ್ಲಿ ಕೆಲ ನಿರ್ಧಾರಗಳು ಹೊರಬರುವ ಸಾಧ್ಯತೆ ಬಗ್ಗೆ ಅಂದಾಜಿಸಲಾಗಿದೆ.

ಮುಖ್ಯಾಂಶಗಳು

  • ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಅಲರ್ಟ್​​
  • ಡಿಕೆಶಿ ಸಿಎಂ ಆದ್ರೆ ಭಾಜಪಾದಲ್ಲಿಯೂ ಬದಲಾವಣೆ ಫಿಕ್ಸ್​​?
  • ಜಾತಿ ಸಮೀಕರಣದಲ್ಲಿ ನಾಯಕತ್ವ ಹಂಚಿಕೆ ಬಗ್ಗೆ ಚಿಂತನೆ

ಇನ್ನು ಸಿದ್ದರಾಮಯ್ಯನವರ ರಾಜೀನಾಮೆ ಹಿನ್ನೆಲೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್​​ ನೇಮಕ ಬಹುತೇಕ ಕನ್ಫರ್ಮ್​​ ಆಗಿದೆ. ಹೀಗಾದಲ್ಲಿ ಸಿಎಂ ಮತ್ತು ವಿಪಕ್ಷ ನಾಯಕ ಇಬ್ಬರೂ ಒಂದೇ ಸಮುದಾಯದವರಾಗಲಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಆರ್​​.ಅಶೋಕ್ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ, ಕಾಂಗ್ರೆಸ್​ನಲ್ಲಿ ಅಧಿಕಾರ ಬದಲಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಜಾತಿ ಸಮೀಕರಣ ನಡೆಯುವ ಸಾಧ್ಯತೆ ಇದೆ. ಲಿಂಗಾಯತ, ಒಕ್ಕಲಿಗ, ದಲಿತ ಸಮೀಕರಣದಲ್ಲಿ ನಾಯಕತ್ವ ಹಂಚಿಕೆ ಆಗಬಹುದೆಂಬ ಸುಳಿವು ಸಿಕ್ಕಿದೆ.

ಇದನ್ನೂ ಓದಿ:

ಒಬಿಸಿ, ಕುರುಬ ಸಮುದಾಯ ಫೋಕಸ್​​

ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ನಾಯಕರ ಕೊರತೆ ಎದುರಿಸುತ್ತಿರವ ಕಾರಣ ಒಬಿಸಿ ಮತ್ತು ಕುರುಬ ಸಮುದಾಯ ಫೋಕಸ್​ಗೆ ಬಿಜೆಪಿ ಮುಂದಾಗುವ ಸಾಧ್ಯತೆ ಇದೆ. 63 ಬಿಜೆಪಿ ಶಾಸಕರಲ್ಲಿ ಕೇವಲ 13 ಮಂದಿ ಒಬಿಸಿ ಸಮುದಾಯದವರಿದ್ದರೆ, 36 ಶಾಸಕರು ಮೇಲ್ವರ್ಗಕ್ಕೆ ಸೇರಿದವರು. ಆ ಪೈಕಿ 19 ಲಿಂಗಾಯತ, 11 ಒಕ್ಕಲಿಗ, 6 ಬ್ರಾಹ್ಮಣ ಶಾಸಕರನ್ನು ಬಿಜೆಪಿ ಹೊಂದಿದೆ. ರಾಜ್ಯದಲ್ಲಿ ಕುರುಬ ಸಮುದಾಯ ಮತಗಳು ಶೇ.7ರಿಂದ ಶೇ.8ರಷ್ಟಿದ್ದು, ಈಶ್ವರಪ್ಪ ಪಕ್ಷ ತ್ಯಜಿಸಿದ ಬಳಿಕ ಬಿಜೆಪಿಯಲ್ಲಿ ಕುರುಬ ನಾಯಕರ ಕೊರತೆ ಎದುರಾಗಿದೆ. ಭೈರತಿರನ್ನು ಲಾಂಚ್ ಮಾಡುವ ಪ್ರಯತ್ನದಲ್ಲಿ ಬಿಜೆಪಿ ಇತ್ತಾದರೂ ಆ ಕಾರ್ಯಕದಲ್ಲಿ ಬಿಜೆಪಿ ವಿಫಲವಾಗಿದೆ. ಹೀಗಾಗಿ ಸದ್ಯ ಲಿಂಗಾಯತ, ಒಕ್ಕಲಿಗ ಮತ್ತು ದಲಿತ ಸಮೀಕರಣದಲ್ಲಿ ನಾಯಕತ್ವ ಹಂಚಿಕೆ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:17 pm, Fri, 29 May 26

Follow Us
Kiran Haniyadka
Kiran Haniyadka