AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​​-ಯಶವಂತಪುರ ಹೊಸ ರೈಲು ಸಂಚಾರ ಆರಂಭ: ಇಲ್ಲಿದೆ ವೇಳಾಪಟ್ಟಿ

ನೈಋತ್ಯ ರೈಲ್ವೆ ಕಲಬುರಗಿ ಮಾರ್ಗವಾಗಿ ಬೀದರ್ ಮತ್ತು ಯಶವಂತಪುರ ನಡುವೆ ಹೊಸ ರೈಲು ಸಂಚಾರ ಆರಂಭಿಸಿದೆ. ವಾರಕ್ಕೆ ಒಂದು ಸಲ ಬೀದರ್​ನಿಂದ ಬೆಂಗಳೂರಿಗೆ ರೈಲು ಓಡಾಡಲಿದ್ದು, ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ ಹೊಸ ರೈಲು ಸಂಚಾರಕ್ಕೆ ನಿನ್ನೆ ಚಾಲನೆ ನೀಡಿದ್ದಾರೆ.

ಬೀದರ್​​-ಯಶವಂತಪುರ ಹೊಸ ರೈಲು ಸಂಚಾರ ಆರಂಭ: ಇಲ್ಲಿದೆ ವೇಳಾಪಟ್ಟಿ
ಬೀದರ್ ಟು ಯಶವಂತಪುರ ಹೊಸ ರೈಲು ಸಂಚಾರಕ್ಕೆ ಚಾಲನೆ ನೀಡಿದ ಸಚಿವ ಭಗವಂತ್ ಖೂಬಾ
ಗಂಗಾಧರ​ ಬ. ಸಾಬೋಜಿ
|

Updated on:Oct 30, 2023 | 10:23 AM

Share

ಬೀದರ್​​​, ಅಕ್ಟೋಬರ್​​​ 30: ನೈಋತ್ಯ ರೈಲ್ವೆ ಇಲಾಖೆ ಕಲಬುರಗಿ ಮಾರ್ಗವಾಗಿ ಬೀದರ್ ಮತ್ತು ಯಶವಂತಪುರ (Bidar to Yesvantpur) ನಡುವೆ ಹೊಸ ರೈಲು ಸಂಚಾರ ಆರಂಭಿಸಿದೆ. ಬೀದರ್ ಕಲಬುರಗಿ ರೈಲ್ವೆ ಮಾರ್ಗ ನಿರ್ಮಾಣವಾದಾಗಿನಿಂದ ಬೆಂಗಳೂರಿಗೆ ರೈಲುಗಳು ಓಡಾಡುತ್ತಿರಲಿಲ್ಲ. ಆದರೆ ಇದೀಗ ವಾರಕ್ಕೆ ಒಂದು ಸಲ ಬೀದರ್​ನಿಂದ ಬೆಂಗಳೂರಿಗೆ ರೈಲು ಓಡಾಡಲಿದ್ದು, ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ ಬೀದರ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ.

ಬೀದರ್​ನಿಂದ ಪ್ರತಿ ಭಾನುವಾರು ಮಧ್ಹಾಹ್ನ 2:40 ಹೊರಡಿರುವ ರೈಲು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಅನಂತ್​ಪುರ ಗೌರಿಬಿದನೂರು ಮಾರ್ಗವಾಗಿ ಯಂಶವಂತಪುರ ತಲುಪಲಿದೆ. ಇನ್ನು ಪ್ರತಿ ಶನಿವಾರ ಯಶವಂತಪುರದಿಂದ ಮಧ್ಹಾಹ್ನ 1:30 ಹೊರಡಲಿದೆ.

ಇದನ್ನೂ ಓದಿ: ದಸರಾ ಪ್ರಯುಕ್ತ ಬೆಂಗಳೂರು, ಬೀದರ್ ಮಧ್ಯೆ 3 ವಿಶೇಷ ರೈಲು: ಇಲ್ಲಿದೆ ವಿವರ

ರೈಲು ಸಂಖ್ಯೆ 16577 ಯಶವಂತಪುರ-ಬೀದರ್ ಪ್ರತಿ ಶನಿವಾರ ಯಶವಂತಪುರದಿಂದ ರಾತ್ರಿ 11.15 ಕ್ಕೆ ಹೊರಟು ಮರುದಿನ ಮಧ್ಯಾಹ್ನ 1.30 ಕ್ಕೆ ಬೀದರ್ ತಲುಪುತ್ತದೆ. ಈ ರೈಲು ಯಲಹಂಕದಲ್ಲಿ ರಾತ್ರಿ 11.33ಕ್ಕೆ ತಲುಪಲ್ಲಿದ್ದು, ರಾತ್ರಿ 11.35ಕ್ಕೆ, ಗೌರಿಬಿದನೂರಿನಲ್ಲಿ 12.27ಕ್ಕೆ/12.28ಕ್ಕೆ, ಹಿಂದೂಪುರಕ್ಕೆ 12.47ಕ್ಕೆ/12.48ಕ್ಕೆ, ಧರ್ಮಾವರಂನಲ್ಲಿ 3.55ಕ್ಕೆ/4ಕ್ಕೆ, ಅನಂತಪುರಕ್ಕೆ 4.38ಕ್ಕೆ 4.38ಕ್ಕೆ ಜಿ. ಬೆಳಗ್ಗೆ 6.05/6.10, ಮಂತ್ರಾಲಯ ರಸ್ತೆ ಬೆಳಿಗ್ಗೆ 7.39/7.40, ರಾಯಚೂರು 8.03/8.05, ಯಾದಗಿರಿ 9.08/9.10, ವಾಡಿ 10.10/10.15, ಶಹಾಬಾದ ಬೆಳಿಗ್ಗೆ 10.43, ಕಲಬುರಗಿ 10.44/10.45/ ಬೆಳಿಗ್ಗೆ 11.10/11.15, ಕಮಲಾಪುರ ಮಧ್ಯಾಹ್ನ 12.04/12.05 ಕ್ಕೆ ಮತ್ತು 12.34 ಕ್ಕೆ ಹುಮನಾಬಾದ್ ತಲುಪಿ 12.35 ಕ್ಕೆ ಹೊರಡುತ್ತದೆ.

ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಮಾಲ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ವಿಡಿಯೋ ವೈರಲ್

ರೈಲು ಸಂಖ್ಯೆ 16578 ಬೀದರ್‌- ಯಶವಂತಪುರ ನಡುವೆ ಪ್ರತಿ ಭಾನುವಾರ ಬೀದರ್‌ನಿಂದ ಮಧ್ಯಾಹ್ನ 2.40 ಕ್ಕೆ ಹೊರಟು ಮರುದಿನ ಮುಂಜಾನೆ 4 ಗಂಟೆಗೆ ಯಶವಂತಪುರ ತಲುಪುತ್ತದೆ. ಈ ರೈಲು ಹುಮನಾಬಾದ್‌ನಲ್ಲಿ ಮಧ್ಯಾಹ್ನ 3.01ಕ್ಕೆ ತಲುಪಲಿದ್ದು ಮತ್ತು ಮಧ್ಯಾಹ್ನ 3.02 ಕ್ಕೆ, ಕಮಲಾಪುರ 3.31 ಕ್ಕೆ / 3.32 ಕ್ಕೆ, ಕಲಬುರಗಿಯಲ್ಲಿ ಸಂಜೆ 5 / 5.05 ಕ್ಕೆ, ಶಹಾಬಾದ 5.30 ಕ್ಕೆ / 5.32 ಕ್ಕೆ, ವಾಡಿ 5.40 ಕ್ಕೆ / 5.45 ಕ್ಕೆ, ಯಾದಗಿರಿ ಸಂಜೆ 6.04/6.05, ರಾಯಚೂರು 7.13/7.15, ಮಂತ್ರಾಲಯ ರಸ್ತೆ ರಾತ್ರಿ 7.39/7.40, ಗುಂತಕಲ್ ರಾತ್ರಿ 9.40/9.45, ಅನಂತಪುರ ರಾತ್ರಿ 10.48/10.50, ಹಿಂದೂಪುರ ರಾತ್ರಿ 10.48/10.50, 1.40ಕ್ಕೆ ಧರ್ಮಾವರಂ. 12.54ಕ್ಕೆ/12.55ಕ್ಕೆ, ಗೌರಿಬಿದನೂರು 1.14ಕ್ಕೆ/1.15ಕ್ಕೆ ಮತ್ತು ಯಲಹಂಕಕ್ಕೆ 2.08ಕ್ಕೆ ತಲುಪಿ 2.10ಕ್ಕೆ ಹೊರಡಲಿದೆ.

ಬೀದರ್‌- ಯಶವಂತಪುರ ಹೊಸ ರೈಲು ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಭಗವಂತ್ ಖೂಬಾ, ಸದ್ಯ ಈ ರೈಲು ವಾರಕ್ಕೊಮ್ಮೆ ಸಂಚರಿಸಲಿದ್ದು, ಮುಂದಿನ ದಿನಗಳಲ್ಲಿ ಪ್ರತಿನಿತ್ಯ ಸಂಚಾರಿಸಲಿವೆ ಎಂದು ಹೇಳಿದ್ದಾರೆ. ಬೀದರ್​-ಹುಬ್ಬಳ್ಳಿ, ಬೀದರ್​- ಬೆಳಗಾವಿ ನಡುವೆ ಹೊಸ ರೈಲು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:22 am, Mon, 30 October 23

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ