AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​​-ಯಶವಂತಪುರ ಹೊಸ ರೈಲು ಸಂಚಾರ ಆರಂಭ: ಇಲ್ಲಿದೆ ವೇಳಾಪಟ್ಟಿ

ನೈಋತ್ಯ ರೈಲ್ವೆ ಕಲಬುರಗಿ ಮಾರ್ಗವಾಗಿ ಬೀದರ್ ಮತ್ತು ಯಶವಂತಪುರ ನಡುವೆ ಹೊಸ ರೈಲು ಸಂಚಾರ ಆರಂಭಿಸಿದೆ. ವಾರಕ್ಕೆ ಒಂದು ಸಲ ಬೀದರ್​ನಿಂದ ಬೆಂಗಳೂರಿಗೆ ರೈಲು ಓಡಾಡಲಿದ್ದು, ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ ಹೊಸ ರೈಲು ಸಂಚಾರಕ್ಕೆ ನಿನ್ನೆ ಚಾಲನೆ ನೀಡಿದ್ದಾರೆ.

ಬೀದರ್​​-ಯಶವಂತಪುರ ಹೊಸ ರೈಲು ಸಂಚಾರ ಆರಂಭ: ಇಲ್ಲಿದೆ ವೇಳಾಪಟ್ಟಿ
ಬೀದರ್ ಟು ಯಶವಂತಪುರ ಹೊಸ ರೈಲು ಸಂಚಾರಕ್ಕೆ ಚಾಲನೆ ನೀಡಿದ ಸಚಿವ ಭಗವಂತ್ ಖೂಬಾ
ಗಂಗಾಧರ​ ಬ. ಸಾಬೋಜಿ
|

Updated on:Oct 30, 2023 | 10:23 AM

Share

ಬೀದರ್​​​, ಅಕ್ಟೋಬರ್​​​ 30: ನೈಋತ್ಯ ರೈಲ್ವೆ ಇಲಾಖೆ ಕಲಬುರಗಿ ಮಾರ್ಗವಾಗಿ ಬೀದರ್ ಮತ್ತು ಯಶವಂತಪುರ (Bidar to Yesvantpur) ನಡುವೆ ಹೊಸ ರೈಲು ಸಂಚಾರ ಆರಂಭಿಸಿದೆ. ಬೀದರ್ ಕಲಬುರಗಿ ರೈಲ್ವೆ ಮಾರ್ಗ ನಿರ್ಮಾಣವಾದಾಗಿನಿಂದ ಬೆಂಗಳೂರಿಗೆ ರೈಲುಗಳು ಓಡಾಡುತ್ತಿರಲಿಲ್ಲ. ಆದರೆ ಇದೀಗ ವಾರಕ್ಕೆ ಒಂದು ಸಲ ಬೀದರ್​ನಿಂದ ಬೆಂಗಳೂರಿಗೆ ರೈಲು ಓಡಾಡಲಿದ್ದು, ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ ಬೀದರ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ.

ಬೀದರ್​ನಿಂದ ಪ್ರತಿ ಭಾನುವಾರು ಮಧ್ಹಾಹ್ನ 2:40 ಹೊರಡಿರುವ ರೈಲು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಅನಂತ್​ಪುರ ಗೌರಿಬಿದನೂರು ಮಾರ್ಗವಾಗಿ ಯಂಶವಂತಪುರ ತಲುಪಲಿದೆ. ಇನ್ನು ಪ್ರತಿ ಶನಿವಾರ ಯಶವಂತಪುರದಿಂದ ಮಧ್ಹಾಹ್ನ 1:30 ಹೊರಡಲಿದೆ.

ಇದನ್ನೂ ಓದಿ: ದಸರಾ ಪ್ರಯುಕ್ತ ಬೆಂಗಳೂರು, ಬೀದರ್ ಮಧ್ಯೆ 3 ವಿಶೇಷ ರೈಲು: ಇಲ್ಲಿದೆ ವಿವರ

ರೈಲು ಸಂಖ್ಯೆ 16577 ಯಶವಂತಪುರ-ಬೀದರ್ ಪ್ರತಿ ಶನಿವಾರ ಯಶವಂತಪುರದಿಂದ ರಾತ್ರಿ 11.15 ಕ್ಕೆ ಹೊರಟು ಮರುದಿನ ಮಧ್ಯಾಹ್ನ 1.30 ಕ್ಕೆ ಬೀದರ್ ತಲುಪುತ್ತದೆ. ಈ ರೈಲು ಯಲಹಂಕದಲ್ಲಿ ರಾತ್ರಿ 11.33ಕ್ಕೆ ತಲುಪಲ್ಲಿದ್ದು, ರಾತ್ರಿ 11.35ಕ್ಕೆ, ಗೌರಿಬಿದನೂರಿನಲ್ಲಿ 12.27ಕ್ಕೆ/12.28ಕ್ಕೆ, ಹಿಂದೂಪುರಕ್ಕೆ 12.47ಕ್ಕೆ/12.48ಕ್ಕೆ, ಧರ್ಮಾವರಂನಲ್ಲಿ 3.55ಕ್ಕೆ/4ಕ್ಕೆ, ಅನಂತಪುರಕ್ಕೆ 4.38ಕ್ಕೆ 4.38ಕ್ಕೆ ಜಿ. ಬೆಳಗ್ಗೆ 6.05/6.10, ಮಂತ್ರಾಲಯ ರಸ್ತೆ ಬೆಳಿಗ್ಗೆ 7.39/7.40, ರಾಯಚೂರು 8.03/8.05, ಯಾದಗಿರಿ 9.08/9.10, ವಾಡಿ 10.10/10.15, ಶಹಾಬಾದ ಬೆಳಿಗ್ಗೆ 10.43, ಕಲಬುರಗಿ 10.44/10.45/ ಬೆಳಿಗ್ಗೆ 11.10/11.15, ಕಮಲಾಪುರ ಮಧ್ಯಾಹ್ನ 12.04/12.05 ಕ್ಕೆ ಮತ್ತು 12.34 ಕ್ಕೆ ಹುಮನಾಬಾದ್ ತಲುಪಿ 12.35 ಕ್ಕೆ ಹೊರಡುತ್ತದೆ.

ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಮಾಲ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ವಿಡಿಯೋ ವೈರಲ್

ರೈಲು ಸಂಖ್ಯೆ 16578 ಬೀದರ್‌- ಯಶವಂತಪುರ ನಡುವೆ ಪ್ರತಿ ಭಾನುವಾರ ಬೀದರ್‌ನಿಂದ ಮಧ್ಯಾಹ್ನ 2.40 ಕ್ಕೆ ಹೊರಟು ಮರುದಿನ ಮುಂಜಾನೆ 4 ಗಂಟೆಗೆ ಯಶವಂತಪುರ ತಲುಪುತ್ತದೆ. ಈ ರೈಲು ಹುಮನಾಬಾದ್‌ನಲ್ಲಿ ಮಧ್ಯಾಹ್ನ 3.01ಕ್ಕೆ ತಲುಪಲಿದ್ದು ಮತ್ತು ಮಧ್ಯಾಹ್ನ 3.02 ಕ್ಕೆ, ಕಮಲಾಪುರ 3.31 ಕ್ಕೆ / 3.32 ಕ್ಕೆ, ಕಲಬುರಗಿಯಲ್ಲಿ ಸಂಜೆ 5 / 5.05 ಕ್ಕೆ, ಶಹಾಬಾದ 5.30 ಕ್ಕೆ / 5.32 ಕ್ಕೆ, ವಾಡಿ 5.40 ಕ್ಕೆ / 5.45 ಕ್ಕೆ, ಯಾದಗಿರಿ ಸಂಜೆ 6.04/6.05, ರಾಯಚೂರು 7.13/7.15, ಮಂತ್ರಾಲಯ ರಸ್ತೆ ರಾತ್ರಿ 7.39/7.40, ಗುಂತಕಲ್ ರಾತ್ರಿ 9.40/9.45, ಅನಂತಪುರ ರಾತ್ರಿ 10.48/10.50, ಹಿಂದೂಪುರ ರಾತ್ರಿ 10.48/10.50, 1.40ಕ್ಕೆ ಧರ್ಮಾವರಂ. 12.54ಕ್ಕೆ/12.55ಕ್ಕೆ, ಗೌರಿಬಿದನೂರು 1.14ಕ್ಕೆ/1.15ಕ್ಕೆ ಮತ್ತು ಯಲಹಂಕಕ್ಕೆ 2.08ಕ್ಕೆ ತಲುಪಿ 2.10ಕ್ಕೆ ಹೊರಡಲಿದೆ.

ಬೀದರ್‌- ಯಶವಂತಪುರ ಹೊಸ ರೈಲು ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಭಗವಂತ್ ಖೂಬಾ, ಸದ್ಯ ಈ ರೈಲು ವಾರಕ್ಕೊಮ್ಮೆ ಸಂಚರಿಸಲಿದ್ದು, ಮುಂದಿನ ದಿನಗಳಲ್ಲಿ ಪ್ರತಿನಿತ್ಯ ಸಂಚಾರಿಸಲಿವೆ ಎಂದು ಹೇಳಿದ್ದಾರೆ. ಬೀದರ್​-ಹುಬ್ಬಳ್ಳಿ, ಬೀದರ್​- ಬೆಳಗಾವಿ ನಡುವೆ ಹೊಸ ರೈಲು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:22 am, Mon, 30 October 23

Follow Us
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು