AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ರೈತರ ಪಾಲಿಗೆ ಆದಾಯ ಮೂಲವಾದ ತೆಂಗಿನ ಕಾಯಿ ಚಿಪ್ಪು, ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್

2020ರಲ್ಲಿ ರೈತರು ಸರ್ಕಾರದ ಸಹಕಾರದೊಂದಿಗೆ ತೆಂಗು ಸಂಸ್ಕರಣಾ ಘಟವನ್ನ ಸ್ಥಾಪಿಸಿದ್ರು. ಆಗಿನಿಂದ ಕರಟಗಳನ್ನ ಶೇಖರಿಸಿಡಲಾಗಿತ್ತು. ಈ ಚಿಪ್ಪುಗಳನ್ನ ಹಂಗ್ರಹಿಸಿ ಕೆಜಿಗೆ 9 ರೂಪಾಯಿಗಳಂತೆ ಮಾರಾಟ ಮಾಡಲಾಗುತ್ತಿದೆ. ಅರಸೀಕೆರೆ ಹಾಗೂ ನಂಜನಗೂಡಿನ ಉದ್ಯಮಿಗಳಂತೆ ರಾಜ್ಯದ ಬೇರೆ ಭಾಗಗಳಿಂದ ಕರಟಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ.

ಚಾಮರಾಜನಗರ: ರೈತರ ಪಾಲಿಗೆ ಆದಾಯ ಮೂಲವಾದ ತೆಂಗಿನ ಕಾಯಿ ಚಿಪ್ಪು, ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್
ತೆಂಗಿನ ಕಾಯಿ ಚಿಪ್ಪು
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Oct 26, 2023 | 7:23 PM

Share

ಚಾಮರಾಜನಗರ, ಅಕ್ಟೋಬರ್ 26: ರೈತರ ಪಾಲಿಗೆ ಕಲ್ಪವೃಕ್ಷ (Coconut Tree) ದೊಡ್ಡ ಆದಾಯ ಮೂಲವಾಗಿ ಹೊರ ಹೊಮ್ಮಿದೆ. ತಂತ್ರಜ್ಞಾನ ಮುಂದುವರೆಯುತ್ತಿದ್ದಂತೆಯೇ ತೆಂಗಿಯ ಕಾಯಿ ಚಿಪ್ಪುಗಳಿಗೆ (Coconut shell) ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ತೆಂಗಿನ ಕಾಯಿ ಖಾಲಿ ಚಿಪ್ಪುಗಳು ಈಗ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಿಕರಿಯಾಗುತ್ತಿದೆ. ಈ ಚಿಪ್ಪನ್ನು ಖರೀದಿಸಿ ಏನನ್ನು ತಯಾರಿಸುತ್ತಾರೆ? ತೆಂಗಿನ ಚಿಪ್ಪು ಈಗ ರೈತರ ಆದಾಯ ಮೂಲವಾಗಿದ್ದು ಹೇಗೆ ಎಂಬ ವಿವರ ಇಲ್ಲಿದೆ.

ರಾಶಿ ರಾಶಿಯಾಗಿ ಬಿದ್ದಿರುವ ತೆಂಗಿನಕಾಯಿ ಚಿಪ್ಪುಗಳು, ತೆಂಗಿನ ಖಾಲಿ ಚಿಪ್ಪುಗಳನ್ನ ಒಂದೆಡೆ ಡಂಪ್ ಮಾಡುತ್ತಿರುವ ಜನರು, ಈ ಚಿತ್ರಣ ಕಾಣಸಿಗುವುದು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕಾಳನಹುಂಡಿಯಲ್ಲಿ. ಸಾಮಾನ್ಯವಾಗಿ ತೆಂಗಿನ ಕಾಯಿ ಚಿಪ್ಪುಗಳನ್ನ ಬೀದಿಯಲ್ಲಿ ಬಿಸಾಡುವುದೇ ಹೆಚ್ಚು. ಅದೇ ರೀತಿ ಸೌದೆ ಒಲೆಗೂ ಸಹ ಇದನ್ನ ಬಳಸುತ್ತಾರೆ. ಆದ್ರೆ ಈ ಚಿಪ್ಪುಗಳು ಈಗ ರೈತನ ಆದಾಯ ಮೂಲವಾಗಿವೆ. ಚಿಪ್ಪುಗಳನ್ನ ನಂಜನಗೂಡು ಹಾಗೂ ಅರಸೀಕೆರೆಯ ಉದ್ಯಮಿಗಳು ಖರೀದಿಸುತ್ತಿದ್ದಾರೆ. ನಂಜನಗೂಡಿನಲ್ಲಿರುವ ಪ್ರತಿಷ್ಠಿತ ಚಾಕೋಲೆಟ್ ಕಂಪನಿಯು ಈ ತೆಂಗಿನ ಕರಟ ಖರೀದಿಸಿ ಬಾಯ್ಲರ್ ಕಾಯಲು ಬಳಸುತ್ತಿದ್ದಾರೆ.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಥಗಿತ: ಪಾದಯಾತ್ರೆ ಮೂಲಕ ನಡೆದು ಬರುವ ಭಕ್ತರಿಗೆ ಶಾಕ್

2020ರಲ್ಲಿ ರೈತರು ಸರ್ಕಾರದ ಸಹಕಾರದೊಂದಿಗೆ ತೆಂಗು ಸಂಸ್ಕರಣಾ ಘಟವನ್ನ ಸ್ಥಾಪಿಸಿದ್ರು. ಆಗಿನಿಂದ ಕರಟಗಳನ್ನ ಶೇಖರಿಸಿಡಲಾಗಿತ್ತು. ಈ ಚಿಪ್ಪುಗಳನ್ನ ಹಂಗ್ರಹಿಸಿ ಕೆಜಿಗೆ 9 ರೂಪಾಯಿಗಳಂತೆ ಮಾರಾಟ ಮಾಡಲಾಗುತ್ತಿದೆ. ಅರಸೀಕೆರೆ ಹಾಗೂ ನಂಜನಗೂಡಿನ ಉದ್ಯಮಿಗಳಂತೆ ರಾಜ್ಯದ ಬೇರೆ ಭಾಗಗಳಿಂದ ಕರಟಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದ್ದು, ಮತ್ತೆ ರಾಜ್ಯದ ಬೇರೆಡೆಯಲ್ಲಿ ತೆಂಗು ಸಂಸ್ಕರಣಾ ಘಟಕವನ್ನ ಸ್ಥಾಪಿಸಲು ಸರ್ಕಾರ ಯೋಚಿಸುತ್ತಿದೆ. ಈ ತೆಂಗಿನ ಚಿಪ್ಪನ್ನ ದೊಡ್ಡ ದೊಡ್ಡ ಉದ್ಯಮಗಳಲ್ಲಿ ಫ್ಯಾಕ್ಟರಿಯಲ್ಲಿರುವ ಬಾಯ್ಲರ್ ಗಳಿಗೆ ಬೆಂಕಿ ಕಾಯಲು ಬಳಸಿದ್ರೆ ಇನ್ನು ಕೆಲವರು ಈ ಚಿಪ್ಪಿನಿಂದ ಇದ್ದಿಲು ಹಾಗೂ ಸೆಲ್ ಉತ್ಪಾದನೆ ಮಾಡುತ್ತಿದ್ದಾರೆ.

ಒಟ್ಟಾರೆ ತೆಂಗಿನ ಕಾಯಿಗಳ ಚಿಪ್ಪಿಗೂ ಈಗ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದ್ದು ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ